ಪ್ರತಿದಿನ ಹೊಸ ದಿನ.. ಒಂದೊಂದು ದಿನವೂ ಒಬೊಬ್ಬರ ಪಾಲಿಗೆ ಇತಿಹಾಸದಲ್ಲಿ (History) ಅಚ್ಚಳಿಯದ ನೆನಪನ್ನು ಸೃಷ್ಟಿಸುತ್ತವೆ. ವಿಶ್ವ ಇತಿಹಾಸದಲ್ಲಿ ಪ್ರತಿದಿನಕ್ಕೂ ಅದರದ್ದೇ ಆದ ಒಂದು (Today In History) ನೆನಪು, ಮೌಲ್ಯ, ದಿನ ಎಲ್ಲವೂ ಇರುತ್ತದೆ. ಮಹಾತ್ಮರು ಹುಟ್ಟಿದ ದಿನವಾಗಿರಬಹುದು, ಅವರು ಐಕ್ಯವಾಗಿರಬಹುದು, ಇಲ್ಲ ಇನ್ಯಾವುದೋ ಸಾಧನೆ ಮಾಡಿದ ದಿನವಾಗಿರಬಹುದು. ಹೀಗೆ ಪ್ರತಿ ದಿನವೂ ಒಂದಲ್ಲ ಒಂದು ನೆನಪನ್ನು ಮರುಕಳಿಸುತ್ತದೆ.
ಹಾಗಾದರೆ ವಿಶ್ವ ಇತಿಹಾಸದಲ್ಲಿ ಫೆಬ್ರವರಿ 15 ರಂದು ಏನೆಲ್ಲಾ ನಡೆದಿದೆ. ಯಾವ ಕಾರಣಕ್ಕೆ ನಾವು ಈ ದಿನವನ್ನು ನೆನಪಿಸಿಕೊಳ್ಳಬಹುದು ಎಂಬುದನ್ನು ವಿವರವಾಗಿ ನೋಡೋಣ.
ಇದನ್ನೂ ಓದಿ: Today In History: ಫೆ 14 ಪ್ರೇಮಿಗಳ ದಿನವಷ್ಟೇ ಅಲ್ಲ, ಇನ್ನೂ ಇದೆ ಹತ್ತಾರು ಮಹತ್ವದ ಘಟನೆಗಳು! ಇಲ್ಲಿದೆ ಈ ದಿನದ ವಿಶೇಷ
ಜನ್ಮ ವಾರ್ಷಿಕೋತ್ಸವ
ಮೊದಲಿಗೆ ಭಾರತೀಯ ಇತಿಹಾಸದಲ್ಲಿ ಫೆಬ್ರವರಿ 15 ರಂದು ಜನಿಸಿದ ಮಹಾತ್ಮರ ಬಗ್ಗೆ ತಿಳಿಯೋಣ.
ರಾಧಾ ಕೃಷ್ಣ ಚೌಧರಿ (15 ಫೆಬ್ರವರಿ 1921 - 15 ಮಾರ್ಚ್ 1985)
ಬಿಹಾರದ ಪ್ರಸಿದ್ಧ ಬರಹಗಾರರಲ್ಲಿ ಒಬ್ಬರಾದ ರಾಧಾ ಕೃಷ್ಣ ಚೌಧರಿ ಇತಿಹಾಸಕಾರ ಮತ್ತು ಚಿಂತಕರು ಹೌದು. ಚೌಧರಿಯವರು ಬಿಹಾರದ ಐತಿಹಾಸಿಕ ಮತ್ತು ಪುರಾತತ್ವ ಅಧ್ಯಯನ ಹಾಗೂ ಮೈಥಿಲಿ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಅವರು ಬಿಹಾರದ ಇತಿಹಾಸದಲ್ಲಿ ಅನೇಕ ಮೂಲ ಪ್ರಬಂಧಗಳನ್ನು ಸಹ ಬರೆದು ಪ್ರಕಟಿಸಿದರು.
ನರೇಶ್ ಮೆಹ್ತಾ (15 ಫೆಬ್ರವರಿ 1922 - 22 ನವೆಂಬರ್ 2000)
ಬ್ರಿಟಿಷ್ ಭಾರತದ ಶಾಜಾಪುರದಲ್ಲಿ ಜನಿಸಿದ ನರೇಶ್ ಮೆಹ್ತಾ ಪ್ರಸಿದ್ಧ ಹಿಂದಿ ಕವಿ ಮತ್ತು ಜ್ಞಾನಪೀಠ ಪ್ರಶಸ್ತಿ ಪಡೆದ ಉನ್ನತ ಬರಹಗಾರರಲ್ಲಿ ಒಬ್ಬರು. ಅವರು ಆಧುನಿಕ ಕಾವ್ಯಕ್ಕೆ ಹೊಸ ಸೊಗಸಿನೊಂದಿಗೆ ಹೊಸ ಆಯಾಮ ನೀಡಿದವರಲ್ಲಿ ಪ್ರಮುಖರು. ನರೇಶ್ ಮೆಹ್ತಾ ಅವರು ಇಂದೋರ್ನಿಂದ ಪ್ರಕಟವಾದ ‘ಚೌತಾ ಸಂಸಾರ್’ ಹಿಂದಿ ದಿನಪತ್ರಿಕೆಯನ್ನೂ ಸಂಪಾದಿಸಿದ್ದಾರೆ.
ಕೆ ಜಿ ಸುಬ್ರಹ್ಮಣ್ಯಂ (15 ಫೆಬ್ರವರಿ 1924 - 29 ಜೂನ್ 2016)
ಕೆ ಜಿ ಸುಬ್ರಹ್ಮಣ್ಯಂ ಒಬ್ಬ ಭಾರತೀಯ ಶಿಲ್ಪಿ ಮತ್ತು ಮ್ಯೂರಲಿಸ್ಟ್. ಭಾರತೀಯ ಆಧುನಿಕ ಕಲೆಯ ಪ್ರವರ್ತಕರಲ್ಲಿ ಸುಬ್ರಹ್ಮಣ್ಯಂ ಅಗ್ರಗಣ್ಯ ಸ್ಥಾನ ಹೊಂದಿದವರು.
ರಾಧಾವಲ್ಲಭ ತ್ರಿಪಾಠಿ
15 ಫೆಬ್ರವರಿ 1949 ರಂದು ಮಧ್ಯಪ್ರದೇಶದ ರಾಜ್ಗಢದಲ್ಲಿ ಜನಿಸಿದ ರಾಧಾವಲ್ಲಭ ತ್ರಿಪಾಠಿ ಸಂಸ್ಕೃತ ಭಾಷೆಯ ಪ್ರಖ್ಯಾತ ಸಾಹಿತಿ. ಹಲವು ಕಾವ್ಯ, ಸಂಕಲನಗಳನ್ನು ರಚಿಸಿದ್ದಾರೆ.
ಇವರ ‘ಸಂಧಾನಂ’ ಕವನ ಸಂಕಲನಕ್ಕಾಗಿ 1994 ರಲ್ಲಿ ‘ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ನೀಡಲಾಯಿತು. ರಾಧಾ ವಲ್ಲಭ ತ್ರಿಪಾಠಿ ಸಂಸ್ಕೃತಕ್ಕೆ ಆಧುನಿಕತೆಯ ಸಂಸ್ಕೃತಿಯನ್ನು ನೀಡಿದ ವಿದ್ವಾಂಸ ಮತ್ತು ಹಿಂದಿಯ ಸಮೃದ್ಧ ಬರಹಗಾರ ಮತ್ತು ಕಥೆಗಾರರಲ್ಲಿ ಪ್ರಮುಖರು.
ಇದನ್ನೂ ಓದಿ: Valentine’s Day: ಇತಿಹಾಸದಲ್ಲೇ ಪ್ರಸಿದ್ಧವಾದ 10 ಶ್ರೇಷ್ಠ ಪ್ರೇಮಕಥೆಗಳಿವು!
ಸಂಸ್ಮರಣೆ
ಭಾರತೀಯ ಇತಿಹಾಸದಲ್ಲಿ ಫೆಬ್ರವರಿ 15 ಅನ್ನು ಈ ಕೆಳಗಿನ ವ್ಯಕ್ತಿಗಳ ಮರಣದ ದಿನವನ್ನಾಗಿ ಆಚರಿಸಲಾಗುತ್ತದೆ:
ಗಾಲಿಬ್ ಅಲಿಯಾಸ್ ಮಿರ್ಜಾ ಅಸಾದುಲ್ಲಾ ಬೇಗ್ ಖಾನ್ (27 ಡಿಸೆಂಬರ್ 1797 - 15 ಫೆಬ್ರವರಿ 1869)
ಮಿರ್ಜಾ ಗಾಲಿಬ್ ಎಂದೇ ಖ್ಯಾತನಾಮ ಪಡೆದಿರುವ ಇವರು ಸಾರ್ವಕಾಲಿಕ ಶ್ರೇಷ್ಠ ಉರ್ದು-ಪರ್ಷಿಯನ್ ಕವಿ. ಭಾರತೀಯ ಭಾಷೆಯಲ್ಲಿ ಪರ್ಷಿಯನ್ ಕಾವ್ಯದ ಹರಿವನ್ನು ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಆಗ ಪ್ರಕಟವಾಗದ ಗಾಲಿಬ್ ಬರೆದ ಪತ್ರಗಳೂ ಉರ್ದು ಬರವಣಿಗೆಯ ಪ್ರಮುಖ ದಾಖಲೆಗಳೆಂದು ಪರಿಗಣಿಸಲಾಗಿದೆ. ಗಾಲಿಬ್ ಭಾರತ ಮತ್ತು ಪಾಕಿಸ್ತಾನದ ಪ್ರಮುಖ ಕವಿ.
ದಬೀರ್-ಉಲ್-ಮುಲ್ಕ್ ಮತ್ತು ನಜ್ಮ್-ಉದ್-ದೌಲಾ ಎಂಬ ಬಿರುದನ್ನು ಸಹ ಪಡೆದಿದ್ದರು. ಗಾಲಿಬ್ ನವಾಬಿ ಕುಟುಂಬಕ್ಕೆ ಸೇರಿದ್ದರು ಮತ್ತು ಮೊಘಲ್ ಆಸ್ಥಾನದಲ್ಲಿ ಉನ್ನತ ಸ್ಥಾನಮಾನವನ್ನು ಪಡೆದಿದ್ದರು. ಅವರು ಫೆಬ್ರವರಿ 15, 1869 ರಂದು ನಿಧನ ಹೊಂದಿದರು.
ಸುಭದ್ರಾ ಕುಮಾರಿ ಚೌಹಾಣ್ (16 ಆಗಸ್ಟ್ 1904 - 15 ಫೆಬ್ರವರಿ 1948)
ಸುಭದ್ರಾ ಕುಮಾರಿ ಚೌಹಾಣ್ ಪ್ರಸಿದ್ಧ ಹಿಂದಿ ಕವಯಿತ್ರಿ ಮತ್ತು ಲೇಖಕಿ. ಇವರ ಸಾಹಿತ್ಯ ಬದುಕಿನಲ್ಲಿ 'ಝಾನ್ಸಿ ಕಿ ರಾಣಿ' ಕವಿತೆ ಇವರಿಗೆ ಹೆಚ್ಚು ಪ್ರಸಿದ್ಧಿಯನ್ನು ನೀಡಿತು.
ಲೇಖಕಿಯಾದ ಇವರು ಅನೇಕ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಸೆರೆಮನೆ ವಾಸವನ್ನು ಅನುಭವಿಸಿದ್ದಾರೆ. ಸೆರೆಮನೆಯಲ್ಲಿ ಅನುಭವಿಸಿದ ಎಲ್ಲಾ ನೋವು, ಅನುಭವಗಳನ್ನು ಇವರ ಪುಸ್ತಕದಲ್ಲಿ ಕಾಣಬಹುದು. ಸುಭದ್ರಾ ಕುಮಾರಿ ಫೆಬ್ರವರಿ 15, 1948 ರಂದು ನಿಧನರಾದರು
ಭಾರತೀಯ ಮತ್ತು ವಿಶ್ವ ಇತಿಹಾಸದಲ್ಲಿ ಫೆಬ್ರವರಿ 15 ರಂದು ನಡೆದ ಪ್ರಮುಖ ಘಟನೆಗಳು
ಪ್ರತಿದಿನವೂ ಒಂದಲ್ಲ ಒಂದು ಕಾರಣಗಳಿಗೆ ವಿಶೇಷವೇ ಆಗಿರುತ್ತದೆ. ಆದರೆ ಆಯಾ ದಿನ ನಡೆದ ಘಟನೆಗಳನ್ನು ದಾಖಲಿಸಿದರೆ ಅದು ಮುಂದಿನ ಪೀಳಿಗೆಯ ಜನರಿಗೆ ತಿಳಿಯಲು ಸಹಕಾರಿಯಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ