ಮಂಗಳೂರು: ಹೇಳಿ ಕೇಳಿ ಈ ಮೂವರು ನಮ್ಮಂತೆ ಸಾಮಾನ್ಯರಲ್ಲ. ಯಾವುದೇ ಅಕ್ಷರವನ್ನ ಸುಲಭವಾಗಿ ಗುರುತಿಸಬಲ್ಲವರಲ್ಲ, ಓದೋಕೆ, ಬರೆಯೋಕಂತೂ ತುಸು ಕಷ್ಟವೇ. ಆದ್ರೆ ಈ ತ್ರಿವಳಿ ಅಣ್ಣ ತಮ್ಮಂದಿರ (Brothers) ಸಾಧನೆ ಮಾತ್ರ ಅಸಾಮಾನ್ಯದ್ದು. ಹಾಗಿದ್ರೆ ದೃಷ್ಟಿ ಕಾಣದಿದ್ದರೂ ಈ ವಿದ್ಯಾರ್ಥಿಗಳು (Students) ಮಾಡಿದ ಸಾಧನೆ ಏನು ಅಂತೀರಾ? (Success Story) ಕೇಳಿದ್ರೆ ನೀವೆಲ್ಲ ಭೇಷ್ ಅಂತೀರಾ ನೋಡಿ.
ಹೌದು, ಈ ತ್ರಿವಳಿಗಳು ದಕ್ಷಿಣ ಕನ್ನಡದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಾಮರ್ಸ್ ವಿದ್ಯಾರ್ಥಿಗಳು. ಜೀವನ್, ಜಿತೇಶ್ ಹಾಗೂ ಜಯೇಶ್ ಈ ಮೂವರು ತ್ರಿವಳಿಗೆ ಶೇಕಡಾ 90 ರಷ್ಟು ದೃಷ್ಟಿಯ ಸಮಸ್ಯೆ ಇದ್ದು, ಕೇವಲ ಹತ್ತು ಪ್ರತಿಶತ ಮಾತ್ರ ನೋಡಬಲ್ಲರು. ಆದ್ರೆ ಇದ್ಯಾವುದೂ ಈ ಮೂವರು ಸಹೋದರರ ಸಾಧನೆಗೆ ಯಾವ ಅಡ್ಡಿಯನ್ನುಂಟು ಮಾಡಿಲ್ಲ.
ಸಿಎ ಮೊದಲ ಹಂತದ ಪರೀಕ್ಷೆಯಲ್ಲಿ ಸಿಕ್ತು ಸಕ್ಸಸ್!
ಯೆಸ್, ಇದೀಗ ಈ ಮೂವರು ಅಣ್ಣ ತಮ್ಮಂದಿರು ಸಿಎ ಮೊದಲ ಹಂತದ ಪರೀಕ್ಷೆಯಲ್ಲಿ ಸಕ್ಸಸ್ ಕಂಡಿದ್ದಾರೆ. ಈ ಮೂಲಕ ಸಿಎ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ರಾಷ್ಟ್ರ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಲು ತಯಾರಾಗಿದ್ದಾರೆ.
ಬಡತನದಲ್ಲಿ ಬೆಳಗಿನ ಪ್ರತಿಭೆಗಳು!
ವಿಶೇಷವೇನೆಂದರೆ ಈ ಮೂರು ವಿದ್ಯಾರ್ಥಿಗಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ಯಾವುದೇ ರೀತಿಯಲ್ಲಿ ಶುಲ್ಕ ವಿಧಿಸುತ್ತಿಲ್ಲ. ಹಾಸ್ಟೆಲ್ನಲ್ಲಿ ಜೊತೆಗೇ ಇದ್ದು ಓದುವ ಇವರು ಬೇರೆ ಯಾವುದೇ ಹೆಚ್ಚುವರಿ ಕೋಚಿಂಗ್ ಪಡೆದಿಲ್ಲ. ಮೂಲತಃ ಮಂಗಳೂರಿನ ಸುರತ್ಕಲ್ ನಿವಾಸಿಯಾಗಿರುವ ಇವರು ಬಡ ಕುಟುಂಬದಿಂದ ಬೆಳೆದು ಬಂದವರು.
ನೋಟ್ಸ್ ಬರೆಯೋದ್ರಲ್ಲೂ ಎತ್ತಿದ ಕೈ!
ಆದರೆ ಈ ವಿದ್ಯಾರ್ಥಿಗಳು ದೃಷ್ಟಿ ಕಳೆದುಕೊಂಡಿದ್ದರೂ ಕೂಡ ಸಾಮಾನ್ಯರಂತೆ ನೋಟ್ಸ್ ಬರೆಯುವುದು ವಿಶೇಷ. ಎಲ್ಲ ವಿದ್ಯಾರ್ಥಿಗಳಂತೆ ಓದಲು, ಬರೆಯಲು ಅಸಾಧ್ಯವಾದರೂ ಕೂಡಾ ತಮ್ಮದೇ ಶೈಲಿಯಲ್ಲಿ ಬರೆಯುವ, ಓದುವ ಇವರ ನೋಟ್ಸ್ಗಳು ಸಾಮಾನ್ಯ ವಿದ್ಯಾರ್ಥಿಗಳಿಗಿಂತ ಉತ್ತಮವಾಗಿವೆ ಎನ್ನುತ್ತಾರೆ ಶಿಕ್ಷಕರು.
ಇದನ್ನೂ ಓದಿ: HDK ಹಾರದ ಹಿಂದಿನ ಕೈ! ಬೃಹತ್ ಅಡಿಕೆ ಮಾಲೆ ತಯಾರಿಸಿದ ಕಲಾವಿದ ಇವರೇ!
ಮೂವರೂ ಕೂಡ ನಾಲ್ಕು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದು, ಮೂವರೂ ಪಿಯುಸಿಯಲ್ಲಿ ಶೇಕಡಾ 90ಕ್ಕೂ ಹೆಚ್ಚು ಅಂಕ ಪಡೆದವರು. ಈ ವರ್ಷದ ಅಂತ್ಯಕ್ಕೆ ನಡೆಯಲಿರುವ ಸಿಎ ಇಂಟರ್ ಮೀಡಿಯೇಟ್ ಪರೀಕ್ಷೆಗೆ ತಯಾರಾಗುತ್ತಿದ್ದಾರೆ.
ಇದನ್ನೂ ಓದಿ: Aghanashini Aarti: ಕಾಶಿಯ ಗಂಗಾರತಿಯಂತೆಯೇ ಕುಮಟಾದಲ್ಲಿ ನಡೆಯಿತು ಅಘನಾಶಿನಿ ಆರತಿ!
ಒಟ್ಟಿನಲ್ಲಿ ಛಲ ಬಿಡದ ಓದು, ಆಳ್ವಾಸ್ನಂತಹ ಸಂಸ್ಥೆಯ ಪ್ರೋತ್ಸಾಹ ಈ ಹುಡುಗರ ಬದುಕಿಗೆ ದಾರಿದೀಪವಾಗಲಿ. ಸಿಎ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಲಿ ಅನ್ನೋ ಹಾರೈಕೆ ನಮ್ಮದು ಕೂಡ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ