Dakshina Kannada: ತೆಂಗಿನ ನೀರಿನಲ್ಲಿ ಉರಿದ ಆರತಿ! ಕರಾವಳಿಯ ಪ್ರಮುಖ ದೇಗುಲದಲ್ಲಿ ವಿಸ್ಮಯ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ತೆಂಗಿನಕಾಯಿ ನೀರು ಪಕ್ಕದಲ್ಲಿ ಆರತಿ ತಟ್ಟೆಗೆ ಬಿದ್ದಾಗ ದೀಪ ನಂದುವ ಬದಲು ಪ್ರಖರ ಬೆಳಕಾಗಿ ಪ್ರಜ್ವಲಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗಳನ್ನು ಹುಟ್ಟುಹಾಕಿದೆ.

  • Share this:

    ಪುತ್ತೂರು:  ಕರಾವಳಿಯ ದೇವಸ್ಥಾನವೊಂದರಲ್ಲಿ ನಡೆದ ವಿಡಿಯೋವೊಂದು ಭಾರೀ ವೈರಲ್ ಆಗ್ತಿದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ಪುತ್ತೂರಿನ (Puttur Temple) ಪಡುಮಲೆ ಗ್ರಾಮದ ದೇವಾಲಯ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ಸಾನಿಧ್ಯದ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದೇ ದೇವಸ್ಥಾನದಲ್ಲಿ ನಡೆದ ಘಟನೆಯೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Viral Video) ಹರಿದಾಡಿ ಕೌತುಕಕ್ಕೆ ಕಾರಣವಾಗಿದೆ.


    ಪಡುಮಲೆ ಕೂವೆ ಶಾಸ್ತಾರ ದೇವರ ಮೂಲ ರಾಜರಾಜೇಶ್ವರಿ ಕ್ಷೇತ್ರವಾಗಿದ್ದು ಅಭಿವೃದ್ಧಿ ಕಾಮಗಾರಿಗಾಗಿ ತೆಂಗಿನಕಾಯಿ ಒಡೆಯುವ ಕಾರ್ಯ ನಡೆಯುತ್ತಿತ್ತು. ಮದಕದಲ್ಲಿ ದೇವಿ ಸಾನಿಧ್ಯದ ಗುಡಿ ನಿರ್ಮಾಣಕ್ಕೆ ಸಾನಿಧ್ಯದ ಬಳಕೆಗೆ ಪೂರಕವಾಗಿ ಬಾವಿ ತೋಡಲು ನಿರ್ಧರಿಸಿ, ಅರ್ಚಕರು ಪ್ರಾರ್ಥನೆ ಸಲ್ಲಿಸಿ ತೆಂಗಿನಕಾಯಿ ಒಡೆಯುವ ಸಂದರ್ಭದಲ್ಲಿ ತೆಂಗಿನ ನೀರು ಚಿಮ್ಮಿದೆ.


    ತೆಂಗಿನ ನೀರಿನಲ್ಲಿ ಉರಿದ ಆರತಿ!
    ತೆಂಗಿನಕಾಯಿ ನೀರು ಪಕ್ಕದಲ್ಲಿ ಆರತಿ ತಟ್ಟೆಗೆ ಬಿದ್ದಾಗ ದೀಪ ನಂದುವ ಬದಲು ಪ್ರಖರ ಬೆಳಕಾಗಿ ಪ್ರಜ್ವಲಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗಳನ್ನು ಹುಟ್ಟುಹಾಕಿದೆ.


    ವೇಗವಾಗಿ ನಡೆಯುತ್ತಿದೆ ಅಭಿವೃದ್ಧಿ ಕಾರ್ಯ
    ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರಿಗೆ ಮೂಲವಾಗಿ ರಾಜರಾಜೇಶ್ವರಿ ದೇವಿ ಎಂಬುದು ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿದೆ. ಈ ದೇವಿಯ ಸ್ಥಾನ ದೇವಾಲಯದಿಂದ ಕೆಲವು ಕಿಲೋ ಮೀಟರ್ ಅಂತರದಲ್ಲಿ ಪಡುಮಲೆ ಕ್ಷೇತ್ರದ ಮದಕ ಎಂಬಲ್ಲಿದೆ. ದೇವಾಲಯದ ಪಶ್ಚಿಮ ದಿಕ್ಕಿನಲ್ಲಿ ದೇವರಿಗೆ ಅಭಿಮುಖವಾಗಿ ಮದಕದಲ್ಲಿ ರಾಜರಾಜೇಶ್ವರಿ ಗುಡಿಯನ್ನು ಅಭಿವೃದ್ಧಿಪಡಿಸಲು ಸುಮಾರು 8 ಲಕ್ಷದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ.


    ವೈರಲ್ ಆಗ್ತಿದೆ ವಿಡಿಯೋ
    ಮದಕದಲ್ಲಿ ದೇವಿ ಸಾನಿಧ್ಯದ ಗುಡಿ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಸಾನಿಧ್ಯದ ಬಳಕೆಗೆ ಪೂರಕವಾಗಿ ಬಾವಿ ತೋಡಲು ನಿರ್ಧರಿಸಿ, ಅರ್ಚಕರು ಪ್ರಾರ್ಥನೆ ಸಲ್ಲಿಸಿ ತೆಂಗಿನಕಾಯಿ ಒಡೆಯುವ ಸಂದರ್ಭದಲ್ಲಿ ತೆಂಗಿನ ನೀರು ಚಿಮ್ಮಿ ಪಕ್ಕದಲ್ಲಿ ಆರತಿ ತಟ್ಟೆಗೆ ಬಿದ್ದಾಗ ದೀಪ ನಂದುವ ಬದಲು ಪ್ರಖರ ಬೆಳಕಾಗಿ ಪ್ರಜ್ವಲಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗಳನ್ನು ಹುಟ್ಟುಹಾಕಿದೆ.


    ಮದಕದ ಇತಿಹಾಸ
    ಮದಕ ಪ್ರದೇಶ ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ -ಚೆನ್ನಯರಿಗೆ ಸಂಬಂಧಿಸಿದ ಪುರಾಣಗಳಲ್ಲೂ ಉಲ್ಲೇಖಿಸಲ್ಪಟ್ಟಿದೆ. ಇಲ್ಲಿನ ತೀರ್ಥಕಲ್ಲಿನ ಇತಿಹಾಸ, ಮದಕ ಕೆರೆಯು ಕೋಟಿ-ಚೆನ್ನಯ್ಯರ ತಾಯಿ ಸುವರ್ಣ ಕೇದಗೆ, ಮಾತೆ ರಾಜರಾಜೇಶ್ವರಿಯು ಮೊಟ್ಟೆಯ ರೂಪ ತಾಳಿ ವಿಪ್ರರಿಗೆ ಸಿಕ್ಕಿದ ಜಲಾಶ್ರಯವೆಂದು ಇತಿಹಾಸವಿದೆ. ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲೂ ಮದಕದಿಂದ ನೀರು ತಂದು ಶುದ್ದೀಕರಣ ಮಾಡಬೇಕೆಂದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ. ದೇವಾಲಯಕ್ಕೆ ಸಂಬಂಧಿಸಿದ ನಾಗನ ಕಲ್ಲು ಸೇರಿದಂತೆ ದೇವರ ವಿಗ್ರಹಗಳನ್ನು ಮದಕದಲ್ಲೇ ಜಲಸ್ತಂಭನ ಮಾಡಲಾಗಿದೆ.


    ಇದನ್ನೂ ಓದಿ: Dakshina Kannada: ಇವ್ರಿಗೆ ಮೆಸ್ಕಾಂ ಬೇಡ, ಕರೆಂಟ್ ಬಿಲ್​ ಕೂಡಾ ಬರಲ್ಲ; ತೋಟದಲ್ಲೇ ತಯಾರಾಗುತ್ತೆ ವಿದ್ಯುತ್!




    ದೇವಿ ಸಾನಿಧ್ಯದಲ್ಲಿ ತೆರೆಯಲಾದ ಬಾವಿಯಲ್ಲಿ 6 ಅಡಿಯಲ್ಲಿ ನೀರು ಇದೆ. ಬಾವಿಯ ಕೆಲಸವನ್ನು ಕರ ಸೇವಕರೇ ಮಾಡಿದ್ದಾರೆ. ಸುಮಾರು 4 ಅಡಿಯಲ್ಲಿ ನೀರು ಲಭಿಸಿದ್ದು, 6 ಅಡಿಯಲ್ಲಿ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ದೇವಿಯ ಸಾನಿಧ್ಯಕ್ಕೆ ಹಾಗೂ ವಿಷ್ಣುಮೂರ್ತಿ ದೇವಾಲಯದಲ್ಲಿ ಈ ಬಾವಿಯ ನೀರು ಬಳಕೆಯಾಗಲಿದೆ.


    ಇದನ್ನೂ ಓದಿ: Success Story: ಜೇನು ಸಾಕಿ ಸಕ್ಸಸ್ ಆದ ಕರಾವಳಿ ಯುವಕ, ಇವರ ಸಾಧನೆ ಕೇಳಿದ್ರೆ ಹುಬ್ಬೇರಿಸ್ತೀರ!


    ಎಲ್ಲವೂ ಅನುಕೂಲಕರ
    ದೇವಾಲಯದ ಪುನರ್ ನಿರ್ಮಾಣ ಹಲವು ವರ್ಷಗಳ ಕನಸಾಗಿತ್ತು. ಇದೀಗ ಕೊನೆಗೂ ಅಭೂತಪೂರ್ವವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಕೆಲಸ ಆರಂಭಿಸಿದ ಬಳಿಕದಲ್ಲಿ ಎಲ್ಲವೂ ಅನುಕೂಲಕರವಾಗಿ ಶುಭ ಸೂಚಕದಂತೆ ನಡೆಯುತ್ತಿವೆ ಅಂತಾರೆ ಗ್ರಾಮಸ್ಥರು.

    Published by:ಗುರುಗಣೇಶ ಡಬ್ಗುಳಿ
    First published: