Dakshina Kannada Election News: ಮತ ಹಾಕಲು ಕೇರಳದಿಂದ ಸ್ಕೂಟರ್ ಸವಾರಿ ಮಾಡಿದ ದಂಪತಿ

ಮತದಾನ ಮಾಡಿದ ದಂಪತಿ

ಮತದಾನ ಮಾಡಿದ ದಂಪತಿ

ಸೂರ್ಯೋದಯ ಆಗುವ ಮುನ್ನವೇ ಬೆಳಗಿನ ಜಾವ 5 ಗಂಟೆಗೆ ಕ್ಯಾಲಿಕಟ್​ನಿಂದ ಹೊರಟು ಬಂದ ಈ ದಂಪತಿಯ ಮಧ್ಯಾಹ್ನ 3.35ಕ್ಕೆ ಮತಗಟ್ಟೆ ತಲುಪಿದ್ದಾರೆ.

  • News18 Kannada
  • 2-MIN READ
  • Last Updated :
  • Mangalore, India
  • Share this:

ದಕ್ಷಿಣ ಕನ್ನಡ: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Elections 2023) ಬಿರುಸಿನ ಮತದಾನ ನಡೆಯುತ್ತಿದೆ. ಮತದಾನ ಮಾಡಲೆಂದು ದೇಶದ ಬೇರೆ ಬೇರೆ ರಾಜ್ಯ, ವಿದೇಶಗಳಲ್ಲಿ ನೆಲೆಸಿರುವವರು ತಮ್ಮ ಮತಗಟ್ಟೆ ಇರುವ ಊರುಗಳಿಗೆ ವಾಪಸ್‌ ಆಗಿ ತ ಹಕ್ಕನ್ನು ಚಲಾಯಿಸುತ್ತಿದ್ದಾರೆ. ವಿಶೇಷ ರೈಲು, ಬಸ್‌ ಗಳ ಮೂಲಕ ಅದಾಗಲೇ ಊರು ತಲುಪಿ ಮತ ಚಲಾಯಿಸಿ ಮತ್ತೆ ಕರ್ತವ್ಯದೆಡೆಗೆ ತೆರಳಲು ಮುಂದಾಗಿದ್ದಾರೆ. ಈ ಮಧ್ಯೆ ದಕ್ಷಿಣ ಕನ್ನಡದ (Dakshina Kannada News)  ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೇರಳದ (Kerala) ಕ್ಯಾಲಿಕಟ್​ನಿಂದ ಸ್ಕೂಟಿಯಲ್ಲಿ ಬಂದ ದಂಪತಿಯೋರ್ವರು ಮತ ಚಲಾಯಿಸಿ ಮಾದರಿಯಾಗಿದ್ದಾರೆ.


ಮತದಾನಕ್ಕಾಗಿ ಆಗಮನ
ಮೂಲತಃ ಕಡಬ ತಾಲೂಕಿನ ಕೋಡಿಂಬಾಳದವರಾಗಿರುವ ಗೋಪಾಲಕೃಷ್ಣ ಮತ್ತು ಧನ್ಯಾ ದಂಪತಿ ಕೇರಳದ ಕ್ಯಾಲಿಕಟ್​ನಲ್ಲಿ ನೌಕರಿಯಲ್ಲಿದ್ದಾರೆ. ಮತದಾನ ಮಾಡುವ ಉದ್ದೇಶದಿಂದಲೇ ಅವರು ಸ್ಕೂಟರ್​ನಲ್ಲಿ ಆಗಮಿಸಿ ಕೋಡಿಂಬಾಳದ ಮತಗಟ್ಟೆ ಸಂಖ್ಯೆ 95 ರ ಬೂತ್​ನಲ್ಲಿ ಮತದಾನ ಮಾಡಿ ಗಮನ ಸೆಳೆದರು.


ಇದನ್ನೂ ಓದಿ: Mangaluru News: ಮಂಗಳೂರಿನಲ್ಲಿ ರಕ್ತದ ಅಭಾವ, ದಾನಿಗಳೇ ಮುಂದೆ ಬನ್ನಿ!




270 ಕಿ.ಮೀ. ಜರ್ನಿ
ಸೂರ್ಯೋದಯ ಆಗುವ ಮುನ್ನವೇ ಬೆಳಗಿನ ಜಾವ 5 ಗಂಟೆಗೆ ಕ್ಯಾಲಿಕಟ್​ನಿಂದ ಹೊರಟು ಬಂದ ಈ ದಂಪತಿಯ ಮಧ್ಯಾಹ್ನ 3.35ಕ್ಕೆ ಮತಗಟ್ಟೆ ತಲುಪಿದ್ದಾರೆ. ಬರೋಬ್ಬರಿ 270 ಕಿಲೋ ಮೀಟರ್‌ ಕ್ರಮಿಸಿ ಬಂದ ಇವರು ತಮ್ಮ ಹಕ್ಕನ್ನು ಚಲಾಯಿಸಿ ಅದೇ ಸ್ಕೂಟಿಯಲ್ಲಿ ಬಳಿಕ ನಿರ್ಗಮಿಸಿದ್ದಾರೆ.


ಇದನ್ನೂ ಓದಿ: Karnataka SSLC Results 2023: ಬುದ್ಧಿವಂತ ಜಿಲ್ಲೆಗಳು ಟಾಪರ್ ಆಗಿಲ್ಲವೇಕೆ? ಇಲ್ಲಿದೆ ಕಾರಣ!


ಹೀಗೆ ಗೋಪಾಲಕೃಷ್ಣ ಮತ್ತು ಧನ್ಯಾ ದಂಪತಿ ಬೇರೆ ರಾಜ್ಯದಲ್ಲಿದ್ದರೂ, ಕೆಲಸದ ಒತ್ತಡದ ನಡುವೆಯೂ ಮತ ಚಲಾಯಿಸಿ ಮಾದರಿಯಾದರು.

First published: