Health Tips: ವೀಳ್ಯದೆಲೆಯಲ್ಲಿದೆ ಆಯುರ್ವೇದ ಗುಣ, ಜೀರ್ಣಕ್ರಿಯೆಯಷ್ಟೇ ಅಲ್ಲ ಈ ರೋಗಗಳನ್ನು ದೂರ ಮಾಡುತ್ತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿವಿಧ ಮಧುಮೇಹ-ವಿರೋಧಿ ಔಷಧಿಗಳು ದೀರ್ಘಾವಧಿಯಲ್ಲಿ ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತವೆ. ಹೊಸದಾಗಿ ಪತ್ತೆಯಾದ ಟೈಪ್ 2 ಡಯಾಬಿಟಿಸ್ ಮೆಲ್ಲಿಟಸ್ ಹೊಂದಿರುವ ವ್ಯಕ್ತಿಗಳಲ್ಲಿ ಒಣಗಿದ ವೀಳ್ಯದೆಲೆಯ ಪುಡಿಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಮುಂದೆ ಓದಿ ...
  • Share this:

ನಮ್ಮ ದೇಶದಲ್ಲಿನ ಮರಗಳು (Tree) ಮತ್ತು ಗಿಡಗಳ (Plant) ಎಲೆಗಳಲ್ಲಿ ರೋಗ ನಿವಾರಕ ಶಕ್ತಿ ಇದೆ. ಆಯುರ್ವೇದವು (Ayurveda) ಒಂದು ಕಾಲದಲ್ಲಿ ಭಾರತೀಯ ಸಂಸ್ಕೃತಿಯಲ್ಲಿ (Indian Culture) ವೈದ್ಯಕೀಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿತ್ತು ಆಧುನಿಕ ಕಾಲದಲ್ಲಿಯೂ ಅನೇಕ ಮಂದಿ ಆಯುರ್ವೇದ ಔಷಧಿಗಳನ್ನೇ (Medicine)  ಅವಲಂಬಿಸಿದ್ದಾರೆ ಮರಗಳು ಮತ್ತು ಗಿಡಗಳು ಗಂಭೀರ ಕಾಯಿಲೆಗಳನ್ನು ಸಹ ತೊಡೆದುಹಾಕುತ್ತವೆಅಂತಹ ಕೆಲವು ಪ್ರಮುಖ ಗಿಡಗಳಲ್ಲಿ ನಮ್ಮ ಮುಂದೆ ಇರುವ  ವೀಳ್ಯದೆಲೆ  (Betel Leaf)ಕೂಡ ಒಂದು. ವೀಳ್ಯದೆಲೆ ಜೀರ್ಣಕ್ರಿಯೆಯನ್ನು (Digestion) ಸುಧಾರಿಸುತ್ತದೆ. ಸಾಮಾನ್ಯವಾಗಿ ಊಟದ ನಂತರ ವೀಳ್ಯದೆಲೆಯನ್ನು ಸೇವಿಸಲಾಗುತ್ತದೆ. ಏಕೆಂದರೆ ಅವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆಗ್ಯಾಸ್ ಎದೆಯುರಿಯನ್ನೂ (Gastric Problem) ಸಹ ಕಡಿಮೆ ಮಾಡುತ್ತದೆವೀಳ್ಯದೆಲೆ ಜ್ಯೂಸ್​ ಕೂಡ ತುಂಬಾ ಪರಿಣಾಮಕಾರಿಯಾಗಿದೆವೀಳ್ಯದೆಲೆಯ ರಸವು ಹೊಟ್ಟೆಯ ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವೀಳ್ಯೆದೆಕೆಯಿಂದ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಬರುವುದಿಲ್ಲ. ಬದಲಾಗಿ ಮನುಷ್ಯರಲ್ಲಿ ಹೊಟ್ಟೆ ಹಸಿವನ್ನು ಹೆಚ್ಚಿಸುತ್ತದೆ.


ಸಾಂದರ್ಭಿಕ ಚಿತ್ರ


ಮಧುಮೇಹ ವಿರೋಧಿ ಔಷಧಿ ವೀಳ್ಯೆದೆಲೆ


ವಿವಿಧ ಮಧುಮೇಹ-ವಿರೋಧಿ ಔಷಧಿಗಳು ದೀರ್ಘಾವಧಿಯಲ್ಲಿ ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತವೆ. ಹೊಸದಾಗಿ ಪತ್ತೆಯಾದ ಟೈಪ್ 2 ಡಯಾಬಿಟಿಸ್ ಮೆಲ್ಲಿಟಸ್ ಹೊಂದಿರುವ ವ್ಯಕ್ತಿಗಳಲ್ಲಿ ಒಣಗಿದ ವೀಳ್ಯದೆಲೆಯ ಪುಡಿಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.


ವೀಳ್ಯೆದೆಲೆಯಲ್ಲಿದೆ ಬ್ಯಾಕ್ಟೀರಿಯಾ ವಿರೋಧಿ ಗುಣ


  • ವೀಳ್ಯದೆಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ವೀಳ್ಯದೆಲೆಯನ್ನು ಗಾಯಕ್ಕೆ ಹಚ್ಚುವುದರಿಂದ ಗಾಯ ಬೇಗ ವಾಸಿಯಾಗುತ್ತದೆ. ವೀಳ್ಯದೆಲೆಗಳನ್ನು ಬಳಸುವುದರಿಂದ ಸೋಂಕನ್ನು ತಡೆಯಬಹುದು. ಶೀತ ಅಥವಾ ಗಂಟಲಿನ ಸೋಂಕು, ಗಂಟಲು ನೋವು ಮುಂತಾದ ಸಮಸ್ಯೆಗಳಲ್ಲಿ ಇದು ತುಂಬಾ ಔಷಧವಾಗಿದೆ.

  • ಗಂಟಲು ನೋವಿನಂತಹ ಸಮಸ್ಯೆಗಳಿದ್ದ ವೇಳೆ ಐದು ಮಿಲಿಲೀಟರ್ ವೀಳ್ಯದೆಲೆ ಎಸವನ್ನು ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿದರೆ ಶೀಘ್ರವೇ ಪರಿಹಾರ ಸಿಗುತ್ತದೆ.

  • ಮೌತ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ. ವೀಳ್ಯದೆಲೆಯ ರಸವು ಹಲ್ಲು ಮತ್ತು ವಸಡುಗಳಿಗೆ ಪ್ರಯೋಜನಕಾರಿಯಾಗಿದೆ. ವೀಳ್ಯದೆಲೆಯಲ್ಲಿ ಉತ್ಕರ್ಷಣ ನಿರೋಧಕಗಳು ಇದ್ದು ಕ್ಯಾನ್ಸರ್ ನಂತಹ ಮಾರಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

  • ಚರ್ಮಕ್ಕೆ ವೀಳ್ಯೆದೆಲೆ ತುಂಬಾ ಪ್ರಯೋಜನಕಾರಿ. ಅಲರ್ಜಿಗಳು, ದದ್ದುಗಳು, ರಿಂಗ್ವರ್ಮ್ ಅಥವಾ ನರಹುಲಿಗಳ ಸಂದರ್ಭದಲ್ಲಿ ವೀಳ್ಯದೆಲೆಯ ರಸವನ್ನು ಕೆಲವು ದಿನಗಳವರೆಗೆ ಹಚ್ಚುವುದರಿಂದ ಕ್ರಮೇಣ ಸರಿಹೋಗುತ್ತದೆ.


ಸಾಂದರ್ಭಿಕ ಚಿತ್ರ


  • ಮಧುಮೇಹ ನಿಯಂತ್ರಣಕ್ಕೆ ವೀಳ್ಯೆದೆಲೆ ಕೆಲಸ ಮಾಡುತ್ತದೆ. ವೀಳ್ಯದೆಲೆಯಲ್ಲಿ ಮಧುಮೇಹ ನಿವಾರಕ ಗುಣವಿದೆ. ಮಲಬದ್ಧತೆಯಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಪಪ್ಪಾಯಿ ಎಲೆಗಳು ಕೂಡ ತುಂಬಾ ಪರಿಣಾಮಕಾರಿಯಾಗಿದೆ.

  • ಒಂದು ವೀಳ್ಯದೆಲೆಯನ್ನು ಚಿಕ್ಕದಾಗಿ ಕತ್ತರಿಸಿ ರಾತ್ರಿ ಒಂದು ಲೋಟ ನೀರಿನಲ್ಲಿ ನೆನೆಸಿಡಿ. ವೀಳ್ಯದೆಲೆಯ ನೀರನ್ನು ಬೆಳಗ್ಗೆ ಕುಡಿಯುವುದು ಒಳ್ಳೆಯದು.

  • ಬೆಳಗ್ಗೆ ವೀಳ್ಯದೆಲೆಯ ರಸವನ್ನು ನೀರಿನೊಂದಿಗೆ ಬೆರೆಸಿ ಸೇವಿಸುವುದರಿಂದಲೂ ಪ್ರಯೋಜನಗಳನ್ನು ಪಡೆಯಬಹುದು.




ನಮ್ಮ ದೇಶದಲ್ಲಿರುವ ಮರಗಳಿಂದ ಸಾಕಷ್ಟು ಉಪಯೋಗಗಳಿದೆ. ಹಾಗೆಯೇ ವೀಳ್ಯದೆಲೆಯು ನಂಜುನಿರೋಧಕವಾಗಿಯೂ ಕಾರ್ಯನಿರ್ವಹಿಸುತ್ತದೆ. ದೇಹದ ಮೇಲೆ ಎಲ್ಲಿಯಾದರೂ ಕೊಯ್ದುಕೊಂಡ ಗಾಯವಾದರೆ, ಆ ಸ್ಥಳದಲ್ಲಿ ವೀಳ್ಯದೆಲೆಯ ರಸ ಅಥವಾ ಎಲೆಗಳನ್ನು ಬಳಸಬಹುದು. ಇದು ಸೋಂಕು ಅಥವಾ ಸೂಕ್ಷ್ಮಜೀವಿಗಳ ವಿರುದ್ಧ ಕಾರ್ಯನಿರ್ವಹಿಸುತ್ತದೆ. ವೀಳ್ಯದೆಲೆ ಹಸಿವು ಅಥವಾ ಹೊಟ್ಟೆಯ ಸಮಸ್ಯೆಗಳಿಗೆ ಸಹ ಪ್ರಯೋಜನಕಾರಿಯಾಗಿದೆ. ಹೊಟ್ಟೆಯ ಆಮ್ಲೀಯತೆ ಅಥವಾ pH ಮಟ್ಟವು ಸರಿಯಾಗಿಲ್ಲದಿದ್ದರೆ. ದೇಹದಲ್ಲಿ ತೊಂದರೆಗಳು ಉಂಟಾಗುತ್ತವೆ, ಹಸಿವು ಕೆಟ್ಟದು. ಹೀಗಿರುವಾಗ ಸ್ವಲ್ಪ ವೀಳ್ಯದೆಲೆಯನ್ನು ಜಗಿಯುವುದರಿಂದ ಪ್ರಯೋಜನವಾಗುತ್ತದೆ.

Published by:Monika N
First published: