ಬಳುಕುವ ಬಳ್ಳಿಯಂತಿದ್ದ ಬಾಲಿವುಡ್ ನಟಿ ಕೃತಿ ಸನೋನ್ ಸಿನಿಮಾವೊಂದಕ್ಕಾಗಿ ಇದೇ ಮೊದಲ ಸಲ ತೂಕ ಹೆಚ್ಚಿಸಿಕೊಂಡ ವಿಷಯ ಗೊತ್ತೇ ಇದೆ. ಹೌದು, ಮಿಮೀ ಸಿನಿಮಾಗಾಗಿ ಕೃತಿ ಸನೋನ್ ಬರೋಬ್ಬರಿ 15 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ಲಕ್ಷ್ಮಣ್ ಉಟೇಕರ್ ಅವರ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ 'ಮಿಮೀ'ಯಲ್ಲಿ ಕೃತಿ ಬಾಡಿಗೆ ತಾಯಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಒಟಿಟಿ ಮೂಲಕ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಾಡಿಗೆ ತಾಯಿಯಾಗಿ ಕೃತಿ ಸನೋನ್ ಅಭಿನಯ ಪ್ರೇಕ್ಷಕರ ಮನ ಮುಟ್ಟಿದೆ. ಇನ್ನು ಸಿನಿಮಾಗಾಗಿ ನಟ-ನಟಿಯರು ತೂಕ ಹೆಚ್ಚಿಸಿಕೊಳ್ಳುವುದು ಹಾಗೂ ಇಳಿಸಿಕೊಳ್ಳುವುದು ಸಾಮಾನ್ಯ. ಈ ಹಿಂದೆ ಭೂಮಿ ಪೆಡ್ನೆಕರ್ ಅವರು ತಮ್ಮ ಚೊಚ್ಚಲ ಸಿನಿಮಾ ದಮ್ ಲಗಾಕೆ ಹೈಶಾ ಸಿನಿಮಾಗಾಗಿ ಸಿಕ್ಕಾಪಟ್ಟೆ ದಪ್ಪಗಾಗಿದ್ದರು. ಬಾಲಿವುಡ್ ಫರ್ಪೆಕ್ಷನಿಸ್ಟ್ ಆಮಿರ್ ಖಾನ್ ಅವರೂ ಸಹ ಈ ಹಿಂದೆ ದಂಗಲ್ ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದರು. ಇನ್ನು ಹೀಗೆ ಹೆಚ್ಚಿಸಿಕೊಂಡ ತೂಕವನ್ನು ಇಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ತೂಕ ಹೆಚ್ಚಿಸಿಕೊಳ್ಳುವಾಗ ಇರುವ ಆಸಕ್ತಿ ಇಳಿಸಿಕೊಳ್ಳುವಾಗ ತುಂಬಾ ಸಲ ಇರುವುದಿಲ್ಲ. ಅದಕ್ಕೆ ಇಂತಹ ಸಾಹಸಕ್ಕೆ ಎಲ್ಲರೂ ಕೈ ಹಾಕುವುದಿಲ್ಲ.
ತೂಕ ಹೆಚ್ಚಿಸಿಕೊಳ್ಳಲು ಕೃತಿ ಸನೋನ್ ಅವರಿಗೆ ಸುಲಭದ ಮಾತಾಗಿರಲಿಲ್ಲ. ಕಾರಣ 15 ಕೆಜಿ ತೂ ಹೆಚ್ಚಿಸಿಕೊಳ್ಳಲು ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರೆ. ಅದಕ್ಕಾಗಿ ಕೃತಿ ಏನೆಲ್ಲ ಮಾಡಿದ್ದರು ಅನ್ನೋದನ್ನು ಒಂದು ವಿಡಿಯೋ ಮೂಲಕ ನೆಟ್ಟಿಗರಿಗೆ ತೋರಿಸಿದ್ದರು. ಮಿಮೀ ಸಿನಿಮಾದ ಚಿತ್ರೀಕರಣ ಆರಂಭವಾದ ನಂತರ ಕೃತಿ ಬರ್ಗರ್, ಚಾಕೊಲೇಟ್, ಚಿಪ್ಸ್, ರಸಗುಲ್ಲಾ ಹೀಗೆ ಎಲ್ಲ ರೀತಿಯ ಕುರುಕುಲು ತಿನಿಸುಗಳನ್ನು ತಿನ್ನುತ್ತಿದ್ದರಂತೆ. ಅದರಲ್ಲೂ ಶೂಟಿಂಗ್ ಸೆಟ್ನಲ್ಲಿ ಕೃತಿ ಅವರಿಗೆ ಇಡೀ ಚಿತ್ರತಂಡ ಈ ಎಲ್ಲ ತಿನಿಸುಗಳನ್ನು ತಿನ್ನಿಸುತ್ತಿದ್ದರಂತೆ. ಕೃತಿ ಸನೋನ್ ತೆರೆ ಮೇಲೆ ನಿಜವಾಗಿಯೂ ಗರ್ಭಿಣಿಂತೆ ಕಾಣಬೇಕೆಂಬ ಉದ್ದೇಶದಿಂದ ಅವರಿಗೆ ದಪ್ಪಗಾಗಲು ಹೇಳಲಾಗಿತ್ತು ಎಂದು ನಿರ್ದೇಶಕರೇ ಹೇಳಿಕೊಂಡಿದ್ದರು.
ಈಗ ಕೃತಿ ಸನೋನ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ 15 ಕೆಜಿ ತೂಕ ಇಳಿಸಿಕೊಂಡ ಜರ್ನಿ ಇದೆ. ತೂಕ ಹೆಚ್ಚಿಸಿಕೊಳ್ಳುವುದು ಒಂದು ರೀತಿಯ ಚಾಲೆಂಜ್ ಆದರೆ, ತೂಕ ಇಳಿಸಿಕೊಳ್ಳುವುದು ಸುಲಭವಾಗಿರಲಿಲ್ಲ ಎಂದೂ ಹೇಳಿಕೊಂಡಿದ್ದಾರೆ.
ಕೊರೋನಾ ಮೊದಲ ಅಲೆ ಆರಂಭವಾದಾಗ ಲಾಕ್ಡೌನ್ ಮಾಡಲಾಗಿತ್ತು. ಇದರಿಂದಾಗಿ ಆಗ ಈ ಸಿನಿಮಾದ ಚಿತ್ರೀಕರಣ ನಿಂತಿತ್ತು. ಆಗ ಇನ್ನೂ ಸಿನಿಮಾದ ಚಿತ್ರೀಕರಣ ಪೂರ್ಣಗೊಳ್ಳದ ಕಾರಣ ಆಗಲೂ ಕೃತಿ ತೂಕ ಇಳಿಸಿಕೊಳ್ಳುವಂತಿಲ್ಲ. ಲಾಕ್ಡೌನ್ ತೆರೆವುಗೊಳ್ಳುತ್ತಿದ್ದಂತೆಯೇ ಶೂಟಿಂಗ್ ಪೂರ್ಣಗೊಳಿಸಿ ಕೃತಿ ತೂಕ ಇಳಿಸಲು ಮುಂದಾದರು.
ಇದನ್ನೂ ಓದಿ: Bigg Boss Kannada 8: ದಿವ್ಯಾ ಉರುಡುಗ ಕೈ ಹಿಡಿಯಲಿಲ್ಲ ಅದೃಷ್ಟ: ಅರವಿಂದ್ ಜತೆಗಿನ ಸ್ನೇಹವೇ ಮುಳುವಾಯಿತಾ..!
ಕೃತಿ ಆಗ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದು ಲಾಕ್ಡೌನ್ನಲ್ಲೂ ಏನೆಲ್ಲ ಸವಿಯುತ್ತಿದ್ದರು ಅಂತ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಆದರೆ ಸಿನಿಮಾ ಶೂಟಿಂಗ್ ಮುಗಿಯುತ್ತಿದ್ದಂತೆಯೇ ತೂಕ ಇಳಿಸೋಕೆ ಆರಂಭಿಸಿದರು. ಈಗ ಕೃತಿ ಮತ್ತೆ ಮೊದಲಿನಂತೆಯೇ ಬಳುಕುವ ಬಳ್ಳಿಯಂತಾಗಿದ್ದಾರೆ.
ಇದನ್ನೂ ಓದಿ: Bigg Boss Kannada 8 Winner: ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಮಂಜು ಪಾವಗಡ: ರನ್ನರ್ ಅಪ್ ಆದ ಅರವಿಂದ್ ಕೆ ಪಿ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ