Onion Juice: ಈರುಳ್ಳಿ ರಸ ಬಳಕೆಯಿಂದ ಕೂದಲು ಉದುರುವುದು ಹೆಚ್ಚಾಗುತ್ತಾ, ಕಡಿಮೆ ಆಗುತ್ತಾ?

ಈರುಳ್ಳಿ  ಜ್ಯೂಸ್

ಈರುಳ್ಳಿ ಜ್ಯೂಸ್

ಈರುಳ್ಳಿ ರಸವು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ನೆತ್ತಿಯ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಡಾ. ಮಾನಸಿ ಹೇಳಿದ್ದಾರೆ.

  • Trending Desk
  • 2-MIN READ
  • Last Updated :
  • Share this:

    Hairfall Solution: ಇತ್ತೀಚಿನ ದಿನಗಳಲ್ಲಿ ಬಹುತೇಕರಿಗೆ ಕಾಡುವ ಒಂದು ಸಾಮಾನ್ಯವಾದ ಚಿಂತೆ ಎಂದರೆ ಅದು ಅವರ ತಲೆಯಲ್ಲಿರುವ ಕೂದಲು ಉದುರುವಿಕೆ (Hairfall Problem) ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಕೆಲವೊಂದು ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ತಲೆ ಕೂದಲು ಉದುರುವುದು ಎಂದರೆ ಅವರ ಜನಪ್ರಿಯತೆ ಕಡಿಮೆ ಆದಂತೆ ಅಂತ ಹೇಳಬಹುದು.


    ಪ್ರತಿದಿನ ಜನರು ಈ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಅನೇಕ ರೀತಿಯ ಪರಿಹಾರಗಳನ್ನು ಹುಡುಕುತ್ತಲೇ ಇರುತ್ತಾರೆ. ಇತ್ತೀಚೆಗೆ ಈರುಳ್ಳಿ ರಸ (Onion Juice) ಮತ್ತು ಅದರ ಎಣ್ಣೆಯು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಒಳ್ಳೆಯ ಪರಿಹಾರವಾಗಿದೆ ಎಂದು ಭಾರಿ ಜನಪ್ರಿಯತೆಯನ್ನು ಗಳಿಸಿದೆ.


    ಈರುಳ್ಳಿ ಕೂದಲು ಉದುರುವಿಕೆಯನ್ನು ಹೇಗೆ ಕಡಿಮೆ ಮಾಡುತ್ತದೆ?


    ಆಹಾರದಲ್ಲಿ ಬಳಸುವ ಈರುಳ್ಳಿ ಹೇಗೆ ನಮ್ಮ ಕೂದಲು ಉದುರುವಿಕೆಯನ್ನು ತಡೆಯುತ್ತದೆ ಅಂತ ನೀವು ಪ್ರಶ್ನೆ ಕೇಳಬಹುದು. ಚರ್ಮ ರೋಗ ತಜ್ಞರಾದ ಡಾ. ಆಂಚಲ್ ಪಂತ್ ಅವರ ಪ್ರಕಾರ, ಅದರ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿವಾರಕ ಗುಣಲಕ್ಷಣಗಳಿಂದಾಗಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ನಂಬಲಾಗಿದೆ.


    onion juice to maintain hair and scalp health how to use it actress suggestion
    ಸಾಂದರ್ಭಿಕ ಚಿತ್ರ


    ಕನ್ಸಲ್ಟೆಂಟ್ ಚರ್ಮರೋಗ ತಜ್ಞರಾದ ಡಾ.ಮಾನಸಿ ಶಿರೋಲಿಕರ್ ಅವರ ಪ್ರಕಾರ "ಕೂದಲು ಕೆರಾಟಿನ್ (ಪ್ರೋಟೀನ್) ನಿಂದ ಮಾಡಲ್ಪಟ್ಟಿದೆ, ಅದು ಸಲ್ಫರ್ ಅನ್ನು ಹೊಂದಿರುವುದು ಕಂಡುಬಂದಿದೆ. ಈರುಳ್ಳಿ ರಸದಲ್ಲಿ ಗಂಧಕವೂ ಸಮೃದ್ಧವಾಗಿದೆ. ಕೂದಲು ಮತ್ತು ನೆತ್ತಿಗೆ ಸೇರಿಸಿದಾಗ, ಈರುಳ್ಳಿ ರಸವು ಬಲವಾದ ಮತ್ತು ದಪ್ಪ ಕೂದಲನ್ನು ಬೆಂಬಲಿಸಲು ಹೆಚ್ಚುವರಿ ಗಂಧಕವನ್ನು ಒದಗಿಸುತ್ತದೆ, ಮತ್ತು ಇದರಿಂದಾಗಿ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಬಹುದು."


    ಇದನ್ನೂ ಓದಿ: Winter Hair Care: ಈ ಹೂವುಗಳನ್ನು ಬಳಸಿದ್ರೆ ಕೂದಲು ಉದುರೋದು ನಿಲ್ಲುತ್ತೆ


    ಈರುಳ್ಳಿ ರಸ ಮತ್ತು ಎಣ್ಣೆಯ ಬಗ್ಗೆ ವಿಜ್ಞಾನವು ಏನು ಹೇಳುತ್ತದೆ?


    ಅಲೋಪೆಸಿಯಾ ಅರೆಟಾ ಎಂಬ ನೆತ್ತಿಯ ಮೇಲೆ ವೃತ್ತಾಕಾರದ ಬೋಳು ಮಚ್ಚೆಗಳು ಕಾಣಿಸಿಕೊಳ್ಳುವ ಆಟೋಇಮ್ಯೂನ್ ಸ್ಥಿತಿಯಲ್ಲಿ ಕೂದಲು ಬೆಳವಣಿಗೆಗೆ ಇದು ಕಾರಣವಾಗುತ್ತದೆ ಎಂದು ಸೂಚಿಸುವ ಒಂದು ಲೇಖನವಿದೆ ಎಂದು ಡಾ. ಪಂತ್ ಹೇಳಿದರು. "ಕೂದಲು ಉದುರುವಿಕೆ ಅಥವಾ ಕೂದಲು ತೆಳ್ಳಗಾಗುವಿಕೆಗೆ ಅತ್ಯಂತ ಸಾಮಾನ್ಯ ಕಾರಣವೆಂದರೆ ಆಂಡ್ರೋಜೆನೆಟಿಕ್ ಅಲೋಪೆಸಿಯಾ. ಆಂಡ್ರೋಜೆನೆಟಿಕ್ ಅಲೋಪೆಸಿಯಾದ ಮೇಲೆ ಈರುಳ್ಳಿ ರಸದ ಪರಿಣಾಮಗಳ ಬಗ್ಗೆ ಯಾವುದೇ ವೈಜ್ಞಾನಿಕ ದತ್ತಾಂಶಗಳು ಲಭ್ಯವಿಲ್ಲ."




    ಕೂದಲ ಮರು ಬೆಳವಣಿಗೆಗಾಗಿ ಈರುಳ್ಳಿ ರಸವನ್ನು ವ್ಯಾಪಕವಾಗಿ ಸಂಶೋಧನೆ ಮಾಡಲಾಗಿಲ್ಲ ಎಂದು ಡಾ.ಮಾನಸಿ ಒಪ್ಪಿಕೊಂಡರು. ಈರುಳ್ಳಿ ರಸವನ್ನು ದಿನಕ್ಕೆರಡು ಬಾರಿ ನೆತ್ತಿಗೆ ಹಚ್ಚುವುದರಿಂದ ಕೂದಲು ಮತ್ತೆ ಬೆಳೆಯಲು ಸಹಾಯ ಮಾಡುತ್ತದೆ ಎಂದು ಒಂದು ಸಣ್ಣ ಅಧ್ಯಯನವು ತೋರಿಸಿದೆ. ಸುಮಾರು 74 ಪ್ರತಿಶತದಷ್ಟು ಸ್ಪರ್ಧಿಗಳು 4 ವಾರಗಳ ನಂತರ ಸ್ವಲ್ಪ ಕೂದಲು ಮರು ಬೆಳವಣಿಗೆ ಹೊಂದಿದ್ದರು ಮತ್ತು 6 ವಾರಗಳಲ್ಲಿ ಸುಮಾರು 87 ಪ್ರತಿಶತದಷ್ಟು ಜನರು ಕೂದಲಿನ ಮರು ಬೆಳವಣಿಗೆಯನ್ನು ಅನುಭವಿಸಿದರು. ಭಾಗವಹಿಸುವವರು ಅಲೋಪೆಸಿಯಾ ಅರೆಟಾವನ್ನು ಹೊಂದಿದ್ದರು, ಇದು ಮಚ್ಚೆಯಿಲ್ಲದ ರೀತಿಯ ಕೂದಲು ಉದುರುವಿಕೆಯನ್ನು ಹೊಂದಿತ್ತು.


    "ಸಾಮಾನ್ಯವಾಗಿ, ಹೆಚ್ಚು ಸಾಮಾನ್ಯವಾಗಿ ಕಂಡು ಬರುವ ಕೂದಲು ಉದುರುವಿಕೆಯು ಟೆಲೊಜೆನ್ ಎಫ್ಲುವಿಯಮ್ ಅಥವಾ ಆಂಡ್ರೋಜೆನೆಟಿಕ್ ಅಲೋಪೆಸಿಯಾ ಆಗಿರುತ್ತದೆ. ಈ ರೀತಿಯ ಕೂದಲು ಉದುರುವಿಕೆಯಲ್ಲಿ ಈರುಳ್ಳಿ ರಸ ಹೇಗೆ ಕೆಲಸ ಮಾಡುತ್ತದೆ ಅಂತ ಇನ್ನೂ ಯಾವುದೇ ಅಧ್ಯಯನ ಮಾಡಲಾಗಿಲ್ಲ" ಎಂದು ಡಾ.ಮಾನಸಿ ತಿಳಿಸಿದರು.


    ಈರುಳ್ಳಿ ಸಾರಗಳಿಂದ ಏನಾದರೂ ಪ್ರಯೋಜನವಿದೆಯೇ?


    ಈರುಳ್ಳಿ ಸಾರಗಳನ್ನು ಗಾಯವನ್ನು ಗುಣಪಡಿಸುವಲ್ಲಿ ಅವುಗಳ ಬಳಕೆಯ ಪರವಾಗಿ ಮತ್ತು ವಿರುದ್ಧವಾಗಿ ಪುರಾವೆಗಳೊಂದಿಗೆ ವ್ಯಾಪಕವಾಗಿ ಅಧ್ಯಯನ ಮಾಡಲಾಗಿದೆ. "2 ವಾರಗಳ ಒಳಗೆ ಆರಂಭಿಕ ಗಾಯದ ಮೇಲೆ ಹಚ್ಚಿದಾಗ, ಇದು ಗಾಯ ವಾಸಿಯಾಗುವುದನ್ನು ಸುಧಾರಿಸುತ್ತದೆ" ಎಂದು ವೈದ್ಯರು ಹೇಳಿದ್ದಾರೆ.


    ಈರುಳ್ಳಿ ಸಾರವು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ನೆತ್ತಿಯ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಡಾ. ಮಾನಸಿ ಹೇಳಿದರು. ಆರೋಗ್ಯಕರ ನೆತ್ತಿಯು ಬಲವಾದ ಕಿರುಚೀಲಗಳನ್ನು ಹೊಂದಿರುತ್ತದೆ. ಈರುಳ್ಳಿಯು ರಕ್ತಪರಿಚಲನೆಯನ್ನು ಹೆಚ್ಚಿಸಬಹುದು. ಈರುಳ್ಳಿ ರಸವನ್ನು ಕೂದಲು ಮತ್ತು ನೆತ್ತಿಗೆ ಹಚ್ಚುವುದರಿಂದ ಕೂದಲಿನ ಕಿರುಚೀಲಗಳಿಗೆ ರಕ್ತದ ಪೂರೈಕೆಯನ್ನು ಹೆಚ್ಚಿಸಬಹುದು.


    Onion oil is a proven remedy to boost hair regrowth and prevent hair fall
    ಈರುಳ್ಳಿ ಎಣ್ಣೆ


    ಈರುಳ್ಳಿ ಸಾರವನ್ನು ಬಳಸಬೇಕೆ?


    ತಜ್ಞರನ್ನು ಸಂಪರ್ಕಿಸದೆ ಅದನ್ನು ಬಳಸದಂತೆ ಡಾ. ಪಂತ್ ಸಲಹೆ ನೀಡುತ್ತಾರೆ. "ದುರದೃಷ್ಟವಶಾತ್, ನೆತ್ತಿಯ ಮೇಲೆ ಈರುಳ್ಳಿ ರಸವನ್ನು ಲೇಪಿಸಿದ ನಂತರ ತುರಿಕೆಯಿಂದಾಗಿ ನೆತ್ತಿಯಿಂದ ತುಂಬಾ ಕೂದಲು ಉದುರುವಿಕೆಯವರೆಗೆ ಪ್ರತಿಕೂಲ ಪ್ರತಿಕ್ರಿಯೆಗಳನ್ನು ಹೊಂದಿರುವ ಅನೇಕ ರೋಗಿಗಳನ್ನು ನಾನು ನೋಡಿದ್ದೇನೆ" ಎಂದು ಅವರು ಹೇಳಿದರು.


    "ಚರ್ಮದ ಮೇಲೆ ಈರುಳ್ಳಿ ರಸದ ಸಂಪರ್ಕವು ಅಲರ್ಜಿ ಹೊಂದಿರುವ ಜನರಲ್ಲಿ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ನಿಮಗೆ ಅಲರ್ಜಿ ಇದೆಯೇ ಎಂದು ಪರೀಕ್ಷಿಸಲು ಪ್ಯಾಚ್ ಟೆಸ್ಟ್ ಮಾಡಿ" ಎಂದು ಡಾ ಮಾನಸಿ ಹೇಳಿದರು.

    Published by:Kavya V
    First published: