ಇತ್ತೀಚಿನ ದಿನಗಳಲ್ಲಿ ಗರ್ಭಧಾರಣೆ (Pregnancy) ಸವಾಲಿನ ಸಂಗತಿಯಾದಂತಾಗಿದೆ. ಯಾಕಂದ್ರೆ ಎಷ್ಟೋ ಜನ ಮಹಿಳೆಯರು (Women’s) ತಾಯ್ತನ ಹೊಂದಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪರಿಸರದ ಅಂಶಗಳು, ತಿನ್ನುವ ಆಹಾರ (Food), ಜೀವನಶೈಲಿ (Lifestyle) ಹಾಗೂ ಇತರೆ ಕೆಲವು ಅಂಶಗಳಿಂದಾಗಿ ತುಂಬಾ ಮಹಿಳೆಯರು ತಾಯಿಯಾಗಲು ಕಷ್ಟ ಪಡುವಂತಾಗಿದೆ. ಎಷ್ಟೋ ಜನರು ಫರ್ಟಿಲಿಟಿ ಸೆಂಟರ್ ಗಳಿಗೆ ಅಲೆದಾಡುವಂತಾಗಿದೆ. ಇನ್ನು ಕೆಲವರು ಬಾಡಿಗೆ ತಾಯ್ತನ ಹೊಂದುವ ಅನಿವಾರ್ಯತೆ ಎದುರಾಗಿದೆ. ಇನ್ನು ಕೆಲವರು ದೇವರಿಗೆ ನಾನಾ ರೀತಿಯ ಹರಕೆ ಹೊರುತ್ತಿದ್ದಾರೆ. ಒಂದು ಮಗುವಾದ್ರೆ ಸಾಕಪ್ಪ ಎಂದುಕೊಳ್ಳುವ ಸ್ಥಿತಿ ಇಂದಿನದ್ದು. ಗರ್ಭಧಾರಣೆ ಬಗ್ಗೆ ಡಾ. ರೇಷ್ಮಾ ಅವರು ಕೆಲವು ಸಂಗತಿಗಳ ಬಗ್ಗೆ ಹೇಳಿದ್ದಾರೆ. ಅವುಗಳನ್ನು ಇಲ್ಲಿ ನೋಡೋಣ.
ಗರ್ಭಧಾರಣೆ ಬಗ್ಗೆ ವೈದ್ಯರು ಹೇಳೋದೇನು?
ಗರ್ಭಧಾರಣೆ ಬಗ್ಗೆ ಡಾ. ರೇಷ್ಮಾ ಅವರು ಕೆಲವು ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಅವರು ಆಯುರ್ವೇದವನ್ನು ಉಲ್ಲೇಖಿಸಿ, ಗರ್ಭಧಾರಣೆಯ ಬಗ್ಗೆ ವಿವರಣೆ ನೀಡಿದ್ದಾರೆ.
ಡಾ. ರೇಷ್ಮಾ ಅವರು ಹೇಳುವ ಪ್ರಕಾರ, ಗರ್ಭಧಾರಣೆಯು ಪೂರ್ವ ಯೋಜಿತವಾಗಿರಬೇಕೇ ಹೊರತು ಆಕಸ್ಮಿಕವಾಗಿರಬಾರದು ಎನ್ನುತ್ತಾರೆ. ಯಾಕಂದ್ರೆ ಗರ್ಭಧಾರಣೆಗೂ ಮೊದಲು ದಂಪತಿಯ ದೇಹ ಮತ್ತು ಮನಸ್ಸನ್ನು ಮೊದಲೇ ಸಿದ್ಧಪಡಿಸಬೇಕು ಅಂತಾರೆ ರೇಷ್ಮಾ.
ಆರೋಗ್ಯಕರ ಗರ್ಭಧಾರಣೆಗೆ ದೇಹದ ತ್ರಿದೋಷ ಸಮತೋಲನದಲ್ಲಿರಬೇಕು
ಆಯುರ್ವೇದವು ದೇಹದಲ್ಲಿ ಹುಟ್ಟುವ ಹಲವು ಕಾಯಿಲೆಗಳಿಗೆ ತ್ರಿದೋಷಗಳೇ ಕಾರಣ ಅನ್ನುತ್ತದೆ. ಹಾಗಾಗಿ ತ್ರಿದೋಷಗಳು ಸಮತೋಲನದಲ್ಲಿರಬೇಕು. ಅಂದಾಗ ವ್ಯಕ್ತಿ ಆರೋಗ್ಯ ಹೊಂದಲು ಸಾಧ್ಯ. ಅದರಲ್ಲೂ ಆರೋಗ್ಯಕರ ಗರ್ಭಧಾರಣೆಗೆ ದೇಹದ ತ್ರಿದೋಷಗಳಾದ ವಾತ, ಪಿತ್ತ ಮತ್ತು ಕಫ ಸಮತೋಲನದಲ್ಲಿರಬೇಕಾಗುತ್ತದೆ ಎಂದು ಹೇಳುತ್ತದೆ ಆಯುರ್ವೇದ.
ಆದರೆ ಇಂದಿನ ದಿನಗಳಲ್ಲಿ ಜನರ ಕೆಲಸದ ಮಾದರಿ ಮತ್ತು ಜೀವನಶೈಲಿ, ಹಾಗೂ ಆಹಾರ ಪದ್ಧತಿಯಿಂದಾಗಿ ಅನೇಕ ದಂಪತಿಗಳು ನೈಸರ್ಗಿಕವಾಗಿ ಗರ್ಭಧರಿಸಲು ಸಾಧ್ಯವಾಗದೇ, ಕಷ್ಟ ಪಡುತ್ತಿದ್ದಾರೆ. ಜೊತೆಗೆ ಮಕ್ಕಳು ಆಗುವುದಿಲ್ಲವೇ ಎಂಬ ಆತಂಕಕ್ಕೂ ಒಳಗಾಗಿದ್ದಾರೆ.
ಈ ರೀತಿಯ ಆಲೋಚನೆಯು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇದರ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟು, ನಮ್ಮ ಜೀವನಶೈಲಿಯಲ್ಲಿ ಕೆಲವು ಉತ್ತಮ ಬದಲಾವಣೆ ಮಾಡಿಕೊಳ್ಳಬೇಕು ಅಂತಾರೆ ವೈದ್ಯರು.
ಗರ್ಭಧಾರಣೆಗೆ ಜೀವನಶೈಲಿಯಲ್ಲಿ ಉತ್ತಮ ಬದಲಾವಣೆ ತಂದುಕೊಳ್ಳಿ
ನೀವು ಗರ್ಭಧಾರಣೆ ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿದ್ದರೆ ಮೊದಲು ನಿಮ್ಮ ದೈನಂದಿನ ದಿನಚರಿ, ಕೆಟ್ಟ ಆಹಾರ ಮತ್ತು ಮನಸ್ಥಿತಿಯನ್ನು ಬದಲಾಯಿಸಿ. ಉತ್ತಮ ದಿನಚರಿ, ಜೀವನಶೈಲಿ, ಆಹಾರ ಪದ್ಧತಿ ಫಾಲೋ ಮಾಡಿ.
ಇದು ನಿಮ್ಮ ದೇಹದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆ ಮಾಡುತ್ತದೆ. ಇದು ತ್ರಿದೋಷಗಳನ್ನು ಸಮತೋಲನಗೊಳಿಸುತ್ತದೆ. ಜೊತೆಗೆ ನೈಸರ್ಗಿಕ ಪರಿಕಲ್ಪನೆಯ ಸಾಧ್ಯತೆಯನ್ನೂ ಹೆಚ್ಚು ಮಾಡುತ್ತದೆ.
ಗರ್ಭಧಾರಣೆಗೆ ವೈದ್ಯರ ಕೆಲವು ಟಿಪ್ಸ್ ಹೀಗಿದೆ
ಗರ್ಭಧಾರಣೆಗೆ ಯೋಜಿಸುತ್ತಿರುವವರು ಮೊದಲು ಶಾಂತತೆ ಕಾಯ್ದುಕೊಳ್ಳಿ. ಧನಾತ್ಮಕ ಆಲೋಚನೆ ಮಾಡಿ. ಮತ್ತು ಸಂತೋಷವಾಗಿರಿ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧ, ಬಾಂಧವ್ಯ ಕಾಪಾಡಿಕೊಳ್ಳಿ.
ಪ್ರಾಚೀನ ಆಯುರ್ವೇದ ಸಾಹಿತ್ಯದಲ್ಲಿ ‘ಸೌಮನಸ್ಯಂ ಗರ್ಭಧರಣಂ ಶ್ರೇಷ್ಠಂ’ ಎಂದು ಹೇಳಲಾಗಿದೆ. ಇದರರ್ಥ ಗರ್ಭಧಾರಣೆಗೆ ಯೋಜಿಸುತ್ತಿರುವ ದಂಪತಿಯು ಶಾಂತ ಮನಸ್ಸಿನವರಾಗಿರಬೇಕು. ಶಾಂತಿ ಮತ್ತು ಸಂತೋಷವು ಗರ್ಭಧಾರಣೆಗೆ ಅಗತ್ಯವಾಗಿದೆ.
ದೈಹಿಕವಾಗಿ ಯಾವಾಗಲೂ ಸಕ್ರಿಯವಾಗಿರಬೇಕು. ಶ್ರೋಣಿಯ ವ್ಯಾಯಾಮಗಳ ಮೇಲೆ ಗಮನ ಕೇಂದ್ರೀಕರಿಸಿ. ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನ ಮಾಡಿ.
ಶ್ರೋಣಿಯ ಯೋಗವು ಸಂತಾನೋತ್ಪತ್ತಿ ಅಂಗಗಳತ್ತ ರಕ್ತ ಪರಿಚಲನೆ ಸುಧಾರಿಸುತ್ತದೆ. ಮತ್ತು ಆರೋಗ್ಯಕರ ಮೊಟ್ಟೆ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಪ್ರಾಣಾಯಾಮ ಮತ್ತು ಧ್ಯಾನವು ಗರ್ಭಿಣಿಯಾಗಲು ಬಯಸುವವರಿಗೆ ಮನಸ್ಸನ್ನು ವಿಶ್ರಾಂತಿಗೊಳಿಸಲು ಸಹಕಾರಿ.
ಇನ್ನು ಮುಖ್ಯವಾಗಿ ಬೇಗ ಮಲಗಿ ಮತ್ತು ಸೂರ್ಯೋದಯಕ್ಕೆ ಮೊದಲು ಏಳುವ ರೂಢಿ ಮಾಡಿಕೊಳ್ಳಿ. ಇದು ತ್ರಿದೋಷಗಳು ಮತ್ತು ಹಾರ್ಮೋನುಗಳ ಸಮತೋಲನಕ್ಕೆ ಸಹಕಾರಿ.
ನಿದ್ರೆಯ ಸಮಯ ಮತ್ತು ಎಚ್ಚರಗೊಳ್ಳುವ ಸಮಯದ ಬಗ್ಗೆ ಗಮನಹರಿಸಿ. ಇದು ಚಯಾಪಚಯ ಸರಿಯಾಗಿರಿಸುತ್ತದೆ. ಉತ್ತಮ ಆರೋಗ್ಯ ಪಡೆಯಲು ರಾತ್ರಿ 10 ಗಂಟೆಗೆ ಮಲಗಿ, ಬೆಳಗ್ಗೆ 6 ಗಂಟೆಗೆ ಎದ್ದೇಳಿ.
ಮನೆಯಲ್ಲೇ ಆಹಾರ ತಯಾರಿಸಿ ಸೇವಿಸಿ. ಸರಳ ಮತ್ತು ಸುಲಭವಾಗಿ ಜೀರ್ಣವಾಗುವ ಪದಾರ್ಥ ಸೇವಿಸಿ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್, ಟ್ರಾನ್ಸ್ಫ್ಯಾಟ್, ಆಳವಾದ ಕರಿದ ಆಹಾರ ಸೇವನೆ ತಪ್ಪಿಸಿ. ಆಹಾರ ಸೇವನೆಗೆ ಸ್ಥಿರವಾದ ಸಮಯ ಕಾಯ್ದುಕೊಳ್ಳಿ.
ಇದನ್ನೂ ಓದಿ: ಇಂದು ವಿಶ್ವ ಕ್ಯಾನ್ಸರ್ ದಿನ, ಈ ಲಕ್ಷಣಗಳಿದ್ದರೆ ಕೂಡಲೇ ವೈದ್ಯರ ಬಳಿ ಹೋಗಿ!
ಅಧಿಕ ತೂಕ, ಸ್ಥೂಲಕಾಯ, ಬೊಜ್ಜು ಹೊಂದಿದ್ದರೆ ಮೊದಲು ತೂಕ ಇಳಿಸಿ. ಆರೋಗ್ಯಕರ ಮಗು ಹೊಂದಲು ತಾಯಿ ಆರೋಗ್ಯ ಮುಖ್ಯ. ಮಗು ಹೊಂದಲು ಯೋಜನೆ ಹಾಕಿಕೊಳ್ಳುವ 6 ತಿಂಗಳ ಮೊದಲು ಧೂಮಪಾನ, ಮದ್ಯಪಾನ ಮತ್ತು ಕೆಫೀನ್ ಸೇವನೆ ತಪ್ಪಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ