ತೈಲ (Oil) ಮತ್ತು ಮಸಾಲೆ ಪದಾರ್ಥಗಳನ್ನು (Masala Ingredients) ಭಾರತೀಯ (Indian) ಪಾಕ ಪದ್ಧತಿಯಲ್ಲಿ (Recipe) ಬಳಕೆ ಮಾಡುವ ರೂಢಿ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ. ಮಸಾಲೆ ಪದಾರ್ಥವಿಲ್ಲದೆ ಭಾರತೀಯ ಅಡುಗೆ ಪೂರ್ಣವಾಗುವುದಿಲ್ಲ. ಸಾಂಬಾರ್, ಪಲ್ಯ, ಸಿಹಿ ತಿಂಡಿ ತಿನಿಸು ಸೇರಿದಂತೆ ಹಲವು ಆಹಾರ ಪದಾರ್ಥಗಳಲ್ಲಿ ಎಣ್ಣೆ ಮತ್ತು ಮಸಾಲೆ ಪದಾರ್ಥಗಳನ್ನು ಬಳಸುತ್ತಾರೆ. ಮತ್ತು ಮಸಾಲೆ ಪದಾರ್ಥಗಳನ್ನು ಬಹಿರಂಗವಾಗಿ, ಯಾವುದೇ ತೊಂದರೆ ಇಲ್ಲದೆ ಬಳಕೆ ಮಾಡುವುದು ರೂಢಿಯಲ್ಲಿದೆ. ನಿಶ್ಚಿಂತೆಯಾಗಿ ಮಸಾಲಾ ಪದಾರ್ಥಗಳ ಸೇವನೆ ಮಾಡುವುದು ಇದೆ. ನಾವು ಬಳಸುವ ಮಸಾಲೆ ಪದಾರ್ಥಗಳಲ್ಲಿ ಔಷಧೀಯ ಗುಣವೂ ಅಡಗಿದೆ. ಕೆಲವು ಪದಾರ್ಥಗಳನ್ನು ನಾವು ದೇಹದ ಸಮಸ್ಯೆಗಳಿಗೆ ನಿವಾರಕಗಳಾಗಿ ಬಳಕೆ ಮಾಡುತ್ತೇವೆ.
ನಮ್ಮಲ್ಲಿ ಹಲವರು ಕರುಳಿನ ಅನಾರೋಗ್ಯಕ್ಕೆ ತುತ್ತಾಗುವುದು ಸಹಜವಾಗಿದೆ. ನಾಲಿಗೆಯ ರುಚಿ ದೇಹಕ್ಕೆ ಕಹಿ ಎಂಬ ಮಾತಿದೆ. ಗ್ಯಾಸ್, ಹೊಟ್ಟೆಯಲ್ಲಿ ಉರಿ, ಆಮ್ಲೀಯತೆ, ಮಲಬದ್ಧತೆ ಮುಂತಾದ ಜೀರ್ಣಕಾರಿ ಕಾಯಿಲೆಗಳಿಗೆ ಮನುಷ್ಯ ತುತ್ತಾಗುತ್ತಾನೆ.
ನಿಮ್ಮ ಆಹಾರದಿಂದ ಎಣ್ಣೆ, ಮಸಾಲೆ ಸೇವನೆ ಹೊರಗಿಡಬೇಕೆ
ಮದುವೆ ಮತ್ತು ಬೇಸಿಗೆ ಕಾಲದಲ್ಲಿ ಈ ಸಮಸ್ಯೆ ಹೆಚ್ಚು ಉಲ್ಬಣಗೊಳ್ಳುತ್ತದೆ. ಹಾಗಾದರೆ ನೀವು ತಿನ್ನುವ ಆಹಾರ ಎಷ್ಟು ಆರೋಗ್ಯಕರವಾಗಿದೆ. ನಿಮ್ಮ ಆಹಾರದಿಂದ ಎಣ್ಣೆ ಮಸಾಲೆ ಸೇವನೆ ಬಿಡಬೇಕೆ? ಏನು ಮಾಡಬೇಕು ಎಂಬುದು ಹೀಗಿದೆ.
ಇದನ್ನೂ ಓದಿ: ಬಾದಾಮಿ ತಿಂದು ಸಿಪ್ಪೆ ಎಸೆಯೋ ಮುನ್ನ ಅದರ ಪ್ರಯೋಜನ ತಿಳಿಯಿರಿ!
ವಾಸ್ತವವಾಗಿ, ಕೆಲವು ಮನೆಮದ್ದು ಫಾಲೋ ಮಾಡುವ ಮೂಲಕ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮ್ಮನ್ನು ನೀವು ದೂರವಿಟ್ಟುಕೊಳ್ಳಬಹುದು. ಎಣ್ಣೆ ಮಸಾಲೆ ತಿಂದ ನಂತರ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಆಗುವ ಹಾನಿ ತಪ್ಪಿಸಲು, ಸರಿಪಡಿಸಲು ಮತ್ತು ಭಾರವಾದ ಊಟವನ್ನು ಒಮ್ಮೆಲೇ ಸೇವಿಸುವ ಬದಲು ಎರಡು ಬಾರಿ ಸೇವಿಸಿ. ಇದು ಕರುಳಿಗೆ ಸರಿಯಾದ ಪ್ರಮಾಣದ ಶಕ್ತಿ ಒದಸುತ್ತದೆ.
ಊಟದ ನಂತರ ಬೆಚ್ಚಗಿನ ನೀರು ಕುಡಿಯಿರಿ
ನಿಮ್ಮ ನೆಚ್ಚಿನ ಮಸಾಲೆಯುಕ್ತ ಆಹಾರ ಸೇವಿಸಿದ ನಂತರ ಬೆಳಿಗ್ಗೆ ಮಲಬದ್ಧತೆ ಸಮಸ್ಯೆಯಿಂದ ದೂರವಿರಲು ಊಟದ ನಂತರ ಬೆಚ್ಚಗಿನ ನೀರನ್ನು ಕುಡಿಯಿರಿ. ಲಘು ಬೆಚ್ಚಗಿನ ನೀರು ಜೀರ್ಣಕ್ರಿಯೆಯನ್ನು ವೇಗವಾಗಿ ಮತ್ತು ಸುಲಭಗೊಳಿಸುತ್ತದೆ.
ಹಸಿರು ಚಹಾ ಕುಡಿಯಿರಿ
ಊಟದ ನಂತರ ಚಹಾ ಅಥವಾ ಕಾಫಿಯ ಬದಲಿಗೆ ಗ್ರೀನ್ ಚಹಾ ಸೇವಿಸುವುದು ಪ್ರಯೋಜನಕಾರಿಯಾಗಿದೆ. ಇದು ಫ್ಲೇವನಾಯ್ಡ್ಗಳಲ್ಲಿ ಸಮೃದ್ಧವಾಗಿದೆ, ಇದು ಜೀರ್ಣಾಂಗ ವ್ಯವಸ್ಥೆಯಲ್ಲಿ ಆಕ್ಸಿಡೇಟಿವ್ ಲೋಡ್ ಅನ್ನು ಸಮತೋಲನಗೊಳಿಸಲು ಉತ್ಕರ್ಷಣ ನಿರೋಧಕವಾಗಿದೆ.
ಮೊಸರು ಆಮ್ಲೀಯತೆಯಲ್ಲಿ ಪ್ರಯೋಜನಕಾರಿ
ಆಯುರ್ವೇದವು ಊಟದ ನಂತರ ಮೊಸರು ತಿನ್ನಲು ಶಿಫಾರಸು ಮಾಡುತ್ತದೆ. ಮೊಸರಿನೊಂದಿಗೆ ಹುರಿದ ಜೀರಿಗೆ ಜೀರ್ಣಾಂಗ ವ್ಯವಸ್ಥೆ ಹೆಚ್ಚಿಸುತ್ತದೆ. ಮೊಸರಿನಲ್ಲಿ ಇರುವ ಪ್ರೋಬಯಾಟಿಕ್ಸ್ ಲ್ಯಾಕ್ಟೋಬಾಸಿಲಸ್ ಬ್ಯಾಕ್ಟೀರಿಯಾ ಆಮ್ಲೀಯತೆ ಕಡಿಮೆ ಮಾಡುತ್ತದೆ ಮತ್ತು ಆಹಾರದಿಂದ ಕರುಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಫೈಬರ್ ಹೊಟ್ಟೆ ಸ್ವಚ್ಛಗೊಳಿಸುತ್ತದೆ
ಹೆಚ್ಚು ಕರಿದ ಆಹಾರದ ಸೇವನೆ ಲಘು ಮತ್ತು ಫೈಬರ್-ಭರಿತ ಆಹಾರವನ್ನು ಹೊಟ್ಟೆಯ ಆರೋಗ್ಯಕ್ಕೆ ಉತ್ತಮ. ಫೈಬರ್ ಭರಿತ ಆಹಾರ ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ. ಮತ್ತು ಹೆಚ್ಚು ಎಣ್ಣೆ ಪದಾರ್ಥ ತಿಂದ ನಂತರ ಜೀರ್ಣಾಂಗವ್ಯೂಹದ ಹಾನಿ ನಿಯಂತ್ರಿಸುತ್ತದೆ. ಈ ಸಂದರ್ಭದಲ್ಲಿ, ನೀವು ಓಟ್ ಮೀಲ್ ಅಥವಾ ಓಟ್ಸ್ ಸೇವಿಸಬಹುದು.
ಒಣ ಹಣ್ಣು ಸೇವಿಸಿ
ಒಣ ಹಣ್ಣುಗಳಾದ ಗೋಡಂಬಿ, ಬಾದಾಮಿ, ಪಿಸ್ತಾ, ಕಡಲೆಕಾಯಿ, ಒಣದ್ರಾಕ್ಷಿ, ಒಣಗಿದ ಏಪ್ರಿಕಾಟ್, ಖರ್ಜೂರ, ವೀಳ್ಯದೆಲೆ ಸಾಕಷ್ಟು ಫೈಬರ್ ಹೊಂದಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಇದನ್ನೂ ಓದಿ: ನೀವು ಬಳಸುವ ಟೂತ್ ಪೇಸ್ಟ್ ನಿಮ್ಮ ಹಲ್ಲುಗಳಿಗೆ ಎಷ್ಟು ಉತ್ತಮ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
ಅಜ್ವೈನ್ ಪ್ರಯೋಜನ
ನೀರು ತಿಂದ ನಂತರ ಗ್ಯಾಸ್, ಅಜೀರ್ಣ, ಅಸಿಡಿಟಿಗೆ ಅಜ್ವೈನ್ ಸಾಮಾನ್ಯವಾಗಿ ಬಳಸುವ ಮನೆಮದ್ದು. ಇದರ ರುಚಿ ತಣ್ಣಗಿರುತ್ತದೆ. ಒಂದು ಚಮಚ ಸೊಪ್ಪನ್ನು ಉಗುರುಬೆಚ್ಚನೆಯ ನೀರಿನೊಂದಿಗೆ ಸೇವಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಕಡಿಮೆ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ