ಹನುಮ ಭಕ್ತರೊಬ್ಬರು 101 ಕೆಜಿಯ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ (Anjanadri Temple) ಸಾಹಸ ಮೆರೆದಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಪ್ರಸಿದ್ಧ ಅಂಜನಾದ್ರಿ ದೇವಸ್ಥಾನದಲ್ಲಿ ರಾಮ ನವಮಿಯ ದಿನ (Ram Navami) 46 ವರ್ಷದ ವ್ಯಕ್ತಿ ರಾಯಪ್ಪ ದಪೇದಾರ್ ಎಂಬ ಭಕ್ತರೇ ಈ ಸಾಹಸ ಮೆರೆದ ವ್ಯಕ್ತಿ.
ವೈರಲ್ ಆಗ್ತಿದೆ ಈ ವಿಡಿಯೋ
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಹುನ್ನೂರು ಗ್ರಾಮದ ರಾಯಪ್ಪ ಅವರ ಈ ಸಾಹಸ ಇದೀಗ ಭಾರೀ ವೈರಲ್ ಆಗ್ತಿದೆ. 1 ಗಂಟೆ 10 ನಿಮಿಷದಲ್ಲಿ 101 ಕೆಜಿಯ ಜೋಳದ ಚೀಲ ಹೊತ್ತು 575 ಮೆಟ್ಟಿಲು ಏರಿದ್ದಾರೆ ರಾಯಪ್ಪ.
ಇದನ್ನೂ ಓದಿ: Karnataka Budget 2023: ಅಯೋಧ್ಯೆಯಂತೆ ಆಗಲಿದೆಯಂತೆ ಅಂಜನಾದ್ರಿ! ಹಳೆ ಘೋಷಣೆಗೆ ಮರುಜೀವ!
ಇದನ್ನೂ ಓದಿ: Koppal Voters: 100 ವರ್ಷ ಮೀರಿದ 212 ಮತದಾರರು! ಈ ಹಿರಿಯರ ಮಾತನ್ನು ನೀವೂ ಕೇಳಿ!
ಹನುಮ ಜನ್ಮಭೂಮಿ ಎಂದೇ ಖ್ಯಾತಿ ಪಡೆದಿರೋ ಆಂಜನಾದ್ರಿಯಲ್ಲಿ ರಾಮ ನವಮಿಯಂದು ರಾಯಪ್ಪ ಅವರು ಮಾಡಿರುವ ಈ ಸಾಹಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ