ಯುವ ಸಂಗಮ (Yuva Sangam) ಎಂಬುದು ಸಾಂಸ್ಕೃತಿಕ ಮತ್ತು ಶೈಕ್ಷಣಿಕ (Education) ಪ್ರಯತ್ನವಾದ ಏಕ್ ಭಾರತ್ ಶ್ರೇಷ್ಠ ಭಾರತ್ ಅಡಿಯಲ್ಲಿ ನಡೆಯುವ ಕಾರ್ಯಕ್ರಮವಾಗಿದೆ. ಇದರಲ್ಲಿ ವಿದ್ಯಾರ್ಥಿಗಳು (Students) ಭಾಗಿಯಾಗುತ್ತಾರೆ. ಸರ್ಕಾರದ ಮಹತ್ವಾಕಾಂಕ್ಷೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರಯತ್ನದ ಎರಡನೇ ಹಂತದ ಭಾಗವಾಗಿ ಪಶ್ಚಿಮ ಬಂಗಾಳದ ವಿವಿಧ ಉನ್ನತ ಶಿಕ್ಷಣ (Higher Education) ಸಂಸ್ಥೆಗಳಾದ ಎನ್ಐಟಿ ದುರ್ಗಾಪುರ, ಕಂಡಿ ರಾಜ್ ಕಾಲೇಜು, ಜೂನಿಯರ್ ಎಕ್ಸಿಕ್ಯೂಟಿವ್ ಎಂಜಿನಿಯರಿಂಗ್ ಸಂಸ್ಥೆ ಇತ್ಯಾದಿಗಳಿಂದ 45 ವಿದ್ಯಾರ್ಥಿಗಳ ನಿಯೋಗವು ಮೇ 16 ರಂದು ಪುದುಚೇರಿಗೆ ಹೊರಟಿದೆ.
NIT ದುರ್ಗಾಪುರದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಧ್ವಜಾರೋಹಣ ಮಾಡಲಾಯಿತು ಮತ್ತು ಮೇ 19 ರಂದು ಪುದುಚೇರಿಗೆ ವಿದ್ಯಾರ್ಥಿಗಳು ತಲುಪಲಿದ್ದಾರೆ. ಅವರ ಪ್ರವಾಸವು ಮೇ 24 ರಂದು ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: Summer Holidays Reduced: ಹತ್ತು ದಿನ ಮುಂಚಿತವಾಗಿ ಆರಂಭವಾಗಲಿದೆ ಕಾಲೇಜ್!
ಈ ವಿದ್ಯಾರ್ಥಿಗಳ ಜೊತೆಗೆ ನಾಲ್ವರು ಅಧ್ಯಾಪಕರು ಸಹ ಇದ್ದಾರೆ.ಎನ್ಐಟಿ ದುರ್ಗಾಪುರದ ಆವರಣದಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕ ಇಂದ್ರಜಿತ್ ಬಸಕ್ ಮಾತನಾಡಿ, “ರಾಷ್ಟ್ರೀಯ ಏಕೀಕರಣವನ್ನು ನಿರ್ಮಿಸಲು ಮತ್ತು ಭಾರತದ ವೈವಿಧ್ಯತೆ ಮತ್ತು ಸಾಮರ್ಥ್ಯಕ್ಕೆ ವಿದ್ಯಾರ್ಥಿಗಳ ಮನಸ್ಸನ್ನು ತೆರೆಯಲು ಇದು ಸರ್ಕಾರದ ಹೊಸ ಯೋಜನೆಯಾಗಿದೆ ಎಂದಿದ್ದಾರೆ. ಅವರು ವಿವಿಧ ಸಂಸ್ಕೃತಿಗಳ ಬಗ್ಗೆ ಕಲಿಯುವುದರಿಂದ ಮತ್ತು ಭಾರತದ ವೈವಿಧ್ಯತೆ ಮತ್ತು ಏಕತೆಯ ಬಗ್ಗೆ ಗೌರವವನ್ನು ಬೆಳೆಸುವುದರಿಂದ ನಮ್ಮ ದೇಶದ ಸಂಸ್ಕ್ರತಿ ಇನ್ನಷ್ಟು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.
ತರಂಗಂಬಾಡಿ ಓಝೋನ್ ಬೀಚ್, ಕಾರೈಕಲ್ ಪ್ರವಾಸ ಮತ್ತು ಶಾಪಿಂಗ್, ಎಂಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್, ಪೂಂಪುಹಾರ್ ಬೀಚ್, ಚಿದಂಬರಂ ನಟರಾಜರ ದೇವಸ್ಥಾನ, ಅರವಿಂದ ಆಶ್ರಮ, ಗವರ್ನರ್ ಪ್ಯಾಲೇಸ್, ಆರೋವಿಲ್, ನಾಗೂರ್ ಮತ್ತು ವೆಲ್ಲಂಕಣಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗುತ್ತದೆ. ಗ್ರೇಟ್ ಲಿವಿಂಗ್ ಚೋಳ ದೇವಾಲಯಗಳು, ಕುಂಭಕೋಣಂ, ದಾರಾಸುರಂ ಮತ್ತು ತಂಜಾವೂರಿಗೆ ಭೇಟಿ ನೀಡಲಾಗುತ್ತದೆ. ಈ ಪ್ರವಾಸದಲ್ಲಿ ಭಾರತ ಎಷ್ಟು ಶ್ರೀಮಂತವಾಗಿತ್ತು ಈಗಲೂ ಎಷ್ಟೊಂದು ಉತ್ತಮ ಚರಿತ್ರೆಯನ್ನು ಭಾರತ ಹೊಂದಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನಗಾಣಲು ಸಹಾಯವಾಗುತ್ತದೆ.
ವಿವಿಧ ರಾಜ್ಯಗಳ ನಡುವೆ ಸಾಂಸ್ಕೃತಿಕ ಸಂಪರ್ಕವನ್ನು ಹೆಚ್ಚಿಸಲು ಯೋಜನೆ
ಶಿಕ್ಷಣ ಸಚಿವಾಲಯದ ಈ ಯೋಜನೆ “ಏಕ್ ಭಾರತ್ ಶ್ರೇಷ್ಠ ಭಾರತ್” ಅಡಿಯಲ್ಲಿ “ಯುವ ಸಂಗಮ” ಯುವ ವಿನಿಮಯ ಕಾರ್ಯಕ್ರಮವು ಜನರ-ಜನರ ಸಂಪರ್ಕವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ವಿಶೇಷವಾಗಿ ವಿವಿಧ ರಾಜ್ಯಗಳ ಯುವಕರ ನಡುವೆ ಮತ್ತು ಅವರಿಗೆ ಭಾರತದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪರಿಚಯಿಸುತ್ತದೆ. . ಭಾರತದ ವಿವಿಧ ರಾಜ್ಯಗಳ ನಡುವೆ ಸಾಂಸ್ಕೃತಿಕ ಸಂಪರ್ಕವನ್ನು ಸೃಷ್ಟಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆಯನ್ನು ರೂಪಿಸಿದ್ದಾರೆ.
ಯುವ ಸಂಗಮ್ನ ಮೊದಲ ಹಂತವು 1,200 ಯುವಕರ ಅಗಾಧ ಭಾಗವಹಿಸುವಿಕೆಯನ್ನು ಹೊಂದಿತ್ತು
ಇದು ಕೇವಲ ಅಪಾರ ಪ್ರತಿಭೆ, ಜಾಗತಿಕ ಜ್ಞಾನ ಮತ್ತು ಸೃಜನಶೀಲತೆ ಮತ್ತು ನಾವೀನ್ಯತೆಯ ಮನೋಭಾವವನ್ನು ಒಳಗೊಂಡಿರುವ ಯುವಕರನ್ನು ಒಗ್ಗೂಡಿಸುವ ಪ್ರಯತ್ನವಾಗಿದೆ. ಆದರೆ ಇದು ದೇಶದ ಮಾನವೀಯ ತತ್ತ್ವಶಾಸ್ತ್ರವನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಮೌಲ್ಯಗಳನ್ನು ಮರುಪರಿಶೀಲಿಸುತ್ತದೆ. ಈ ವರ್ಷದ ಫೆಬ್ರವರಿಯಲ್ಲಿ ಇದನ್ನು ಪ್ರಾರಂಭಿಸಲಾಯಿತು ಮತ್ತು ಯುವ ಸಂಗಮ್ನ ಮೊದಲ ಹಂತವು 1,200 ಯುವಕರ ಅಗಾಧ ಭಾಗವಹಿಸುವಿಕೆಯನ್ನು ಹೊಂದಿತ್ತು, ಮೊದಲ ಬ್ಯಾಚ್ ಈಶಾನ್ಯ ಭಾರತಕ್ಕೆ ಭೇಟಿ ನೀಡಿತು. ಇಷ್ಟೊಂದು ಪ್ರಮಾಣದ ಯುವಜನತೆ ಈ ಯಾತ್ರೆಯಲ್ಲಿ ಭಾಗಿಯಾಗಿದ್ದು ಎಲ್ಲರಲ್ಲೂ ಸಂತಸ ತಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ