ಎಷ್ಟೋ ಬಾರಿ ಕೆಲವು ಶಾಲೆಗಳಲ್ಲಿ (School) ಓದಿದ ಮಕ್ಕಳಲ್ಲಿ ಆತ್ಮವಿಶ್ವಾಸ (Self Confidents) ಮತ್ತು ನಾಯಕತ್ವದ (Leader) ಗುಣಗಳು ಓದಿನ ಜೊತೆಗೆ ಬಂದಿರುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುವ 5-6 ಸೆಲೆಬ್ರಿಟಿಗಳು (Celebrities) ಒಂದೇ ಶಾಲೆಯಲ್ಲಿ ಓದಿದ್ದಾರೆ ಎಂದರೆ ಅದು ತುಂಬಾನೇ ವಿಶೇಷವಾದ ಶಾಲೆಯೇ (School) ಆಗಿರುತ್ತದೆ. ನಾವು ಮಾತನಾಡುತ್ತಾ ಇರುವುದು ಹೈದರಾಬಾದಿನಲ್ಲಿರುವ ಹೈದರಾಬಾದ್ ಪಬ್ಲಿಕ್ ಸ್ಕೂಲ್ (ಎಚ್ಪಿಎಸ್) ಬಗ್ಗೆ ಅಂತ ಬಹುತೇಕರಿಗೆ ಈಗಾಗಲೇ ಗೊತ್ತಾಗಿರುತ್ತದೆ.
ಹೌದು, ವಿಶ್ವಬ್ಯಾಂಕ್ ಮುಖ್ಯಸ್ಥರಾಗಿ ಅಜಯ್ ಬಂಗಾ ಅವರ ನಾಮನಿರ್ದೇಶನವು 63 ವರ್ಷದ ಭಾರತೀಯ-ಅಮೆರಿಕನ್ ಅನ್ನು ಮತ್ತೊಮ್ಮೆ ಸಾರ್ವಜನಿಕರ ಗಮನಕ್ಕೆ ತಂದಿದೆ.
ಸತ್ಯ ನಡೆಲ್ಲ ಮತ್ತು ಅಜಯ್ ಬಂಗಾ ಓದಿದ್ದು ಎಚ್ಪಿಎಸ್ ಶಾಲೆಯಲ್ಲಿ
ಮಾಸ್ಟರ್ ಕಾರ್ಡ್ ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ವಿಶ್ವದ ಕೆಲವು ದೊಡ್ಡ ಕಂಪನಿಗಳಲ್ಲಿ ಭಾರತೀಯ ಮೂಲದ ನಾಯಕರ ಸುದೀರ್ಘ ಪಟ್ಟಿಯಲ್ಲಿ ಒಬ್ಬರಾದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲ ಮತ್ತು ಅಡೋಬ್ ಸಿಇಒ ಶಾಂತನು ನಾರಾಯಣ್ ಇವರೆಲ್ಲರೂ ಹೈದರಾಬಾದ್ ಪಬ್ಲಿಕ್ ಶಾಲೆಯ ಹಳೆಯ ವಿದ್ಯಾರ್ಥಿಗಳು.
ಇವರಷ್ಟೇ ಅಲ್ಲದೆ, ಫೇರ್ಫಾಕ್ಸ್ ಫೈನಾನ್ಶಿಯಲ್ ಸಿಇಒ ಪ್ರೇಮ್ ವತ್ಸಾ, ಹಿರಿಯ ರಾಜತಾಂತ್ರಿಕ ಸೈಯದ್ ಅಕ್ಬರುದ್ದೀನ್, ಬಿಯರ್ ಉದ್ಯಮಿ ಕರಣ್ ಬಿಲಿಮೋರಿಯಾ, ವಿಪ್ರೋ ಮಾಜಿ ಸಿಇಒ ಟಿ.ಕೆ.ಕುರಿಯನ್ ಮತ್ತು ತೆಲುಗು ಚಿತ್ರರಂಗದ ನಟ ರಾಮ್ ಚರಣ್ ಸಹ ಇದೇ ಶಾಲೆಯ ಹಳೆಯ ವಿದ್ಯಾರ್ಥಿಗಳಂತೆ.
ವಿಭಿನ್ನವಾಗಿ ಯೋಚಿಸಲು ಪ್ರೇರೇಪಿಸುತ್ತಂತೆ ಈ ಶಾಲೆ
ಈ ಶಾಲೆಯು ಮೊದಲಿನಿಂದಲೂ ವಿದ್ಯಾರ್ಥಿಗಳಿಗೆ ಪಠ್ಯೆತರ ಚಟುವಟಿಕೆಗಳನ್ನು ತೊಡಗಿಸಿಕೊಳ್ಳಲು ಮತ್ತು ವಿಭಿನ್ನವಾಗಿ ಯೋಚಿಸುವುದಕ್ಕೆ ಮತ್ತು ತಮ್ಮ ಕೆಲಸದಿಂದ ಸೃಜನಶೀಲವಾಗಿರಲು ಕಲಿಸುತ್ತದೆ ಎಂದು ಎಚ್ಪಿಎಸ್ ಆಡಳಿತ ಮಂಡಳಿಯ ಸದಸ್ಯ ಮರ್ರಿ ಆದಿತ್ಯ ರೆಡ್ಡಿ 2017 ರ ಸಂದರ್ಶನದಲ್ಲಿ ಮುಂಬೈ ಮಿರರ್ ಗೆ ತಿಳಿಸಿದರು.
“ಇದುವರೆಗೂ ಈ ಶಾಲೆಯಲ್ಲಿ ಓದಿದವರಲ್ಲಿ ಆತ್ಮವಿಶ್ವಾಸದ ಕೊರತೆ ಎಂದಿಗೂ ಕಂಡುಬಂದಿಲ್ಲ" ಎಂದು ಹೈದರಾಬಾದ್ ಪಬ್ಲಿಕ್ ಶಾಲೆಯ ರಾಮನಾಥಪುರ ಶಾಖೆಯ ಮುಖ್ಯಸ್ಥ ನರಸಿಂಹ ರೆಡ್ಡಿ ಹೇಳಿದ್ದಾರೆ.
"ಒಂದನೇ ತರಗತಿಯಿಂದಲೇ ರಂಗ ಚಟುವಟಿಕೆಗಳಲ್ಲಿ ಭಾಗವಹಿಸಲು, ಧೈರ್ಯ ಮತ್ತು ಆತ್ಮವಿಶ್ವಾಸದಿಂದಿರಲು ಮತ್ತು ಕ್ರೀಡೆ, ಆಟಗಳು ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ಇತರರೊಂದಿಗೆ ಬೆರೆಯಲು ನಾವು ಅವರನ್ನು ಪ್ರೋತ್ಸಾಹಿಸುತ್ತೇವೆ" ಎಂದು ಅವರು ಹೇಳಿದರು, ಶಾಲೆಯಲ್ಲಿ ಕಲಿಕೆಯು ಪಠ್ಯಪುಸ್ತಕಗಳಿಗೆ ಸೀಮಿತವಾಗಿಲ್ಲ ಎಂದು ಸಹ ಹೇಳಿದರು.
ಮಾಜಿ ಪ್ರಾಂಶುಪಾಲರು ಏನ್ ಹೇಳ್ತಾರೆ ಶಾಲೆಯ ಬಗ್ಗೆ?
"ನಮಗೆ ಮಗುವಿನ ಸರ್ವಾಂಗೀಣ ಬೆಳವಣಿಗೆ ಬಹಳ ಮುಖ್ಯವಾಗುತ್ತದೆ, ನಾವು ಶಿಕ್ಷಣ, ಕ್ರೀಡೆ, ಸಹಪಠ್ಯ ಚಟುವಟಿಕೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ. ನಾವು ಶಾಲೆಯಲ್ಲಿ ಕೃಷಿ ಮತ್ತು ಉದ್ಯಮಶೀಲತೆಯನ್ನು ಪರಿಚಯಿಸಿದ್ದೇವೆ.
ಮಗುವು ಪ್ರತಿಯೊಂದು ಕ್ಷೇತ್ರದಲ್ಲೂ ಸಮಗ್ರ ಅಭಿವೃದ್ಧಿಯನ್ನು ಹೊಂದಿರುವುದು ಬಹಳ ಮುಖ್ಯ" ಎಂದು ಹೈದರಾಬಾದ್ ಪಬ್ಲಿಕ್ ಶಾಲೆಯ ಮಾಜಿ ಪ್ರಾಂಶುಪಾಲ ಡಾ.ಸ್ಕಂದ್ ಬಾಲಿ ಅವರು ತಮ್ಮ 2020 ರ ಸಂದರ್ಶನವೊಂದರಲ್ಲಿ ತಿಳಿಸಿದರು.
ಇದನ್ನೂ ಓದಿ:School Holiday: ಶಾಂತಿ ಕಾಪಾಡಲು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಹೈದರಾಬಾದ್ ಪಬ್ಲಿಕ್ ಸ್ಕೂಲ್ ಅನ್ನು 1923 ರಲ್ಲಿ ಹೈದರಾಬಾದ್ ನ ಏಳನೇ ನಿಜಾಮರು ಜಾಗೀರ್ದಾರ್ ಕಾಲೇಜ್ ಎಂದು ಸ್ಥಾಪಿಸಿದರು. ಮೂಲತಃ ಶ್ರೀಮಂತರು ಮತ್ತು ಗಣ್ಯರಿಗೆ ಶಿಕ್ಷಣ ಸಂಸ್ಥೆಯಾಗಿ ಉದ್ದೇಶಿಸಲಾಗಿದ್ದ ಇದನ್ನು 1950 ರಲ್ಲಿ ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಪಡಿಸಿದ ನಂತರ ಹೈದರಾಬಾದ್ ಪಬ್ಲಿಕ್ ಸ್ಕೂಲ್ ಎಂದು ಮರುನಾಮಕರಣ ಮಾಡಲಾಯಿತು.
ಲೋಕಸಭಾ ಸಂಸದ ಅಸಾದುದ್ದೀನ್ ಒವೈಸಿ, ನಟರಾದ ಅಕ್ಕಿನೇನಿ ನಾಗಾರ್ಜುನ, ವಿವೇಕ್ ಒಬೆರಾಯ್ ಮತ್ತು ರಾಣಾ ದಗ್ಗುಬಾಟಿ, ಆಂಧ್ರಪ್ರದೇಶದ ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ, ವಿಶ್ವ ಸುಂದರಿ ಡಯಾನಾ ಹೇಡನ್ ಮತ್ತು ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಸಹ ಇದೇ ಶಾಲೆಯಲ್ಲಿ ಓದಿದವರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ