ಬೆಂಗಳೂರು: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (NLSIU) 25% ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಿಡುವ ಮಸೂದೆಯನ್ನು ಗುರುವಾರ ವಿಧಾನಸಭೆ ಅಂಗೀಕರಿಸಿದೆ.
ಒಬ್ಬ ವಿದ್ಯಾರ್ಥಿ -ತನ್ನ ಮಾತೃಭಾಷೆಯನ್ನು ಲೆಕ್ಕಿಸದೆ ಕರ್ನಾಟಕದಲ್ಲಿ (Karnataka) 10 ವರ್ಷಗಳ ಕಾಲ ಅಧ್ಯಯನ (Study) ಮಾಡಿದವರು ಕೋಟಾಕ್ಕೆ ಅರ್ಹರು ಎಂದು ತಿಳಿಸಿದ್ದಾರೆ.
ಕೌನ್ಸಿಲ್ನಲ್ಲಿ ಮಸೂದೆ ಅಂಗೀಕಾರವಾದ ನಂತರ, ರಾಜ್ಯಪಾಲರು ಅದಕ್ಕೆ ಸಹಿ ಹಾಕುತ್ತಾರೆ. ಎನ್ಎಲ್ಎಸ್ಐಯುನಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಸಿದ್ದರಾಮಯ್ಯ ಸರ್ಕಾರ 50% ಕೋಟಾವನ್ನು ಮೀಸಲಿಟ್ಟಿತ್ತು, ಆದರೆ ರಾಜ್ಯಪಾಲರು ಅದನ್ನು ತಿರಸ್ಕರಿಸಿದ್ದಾರೆ. 50% ಕೋಟಾ ಮೀಸಲಿಡುವುದು ಎಂದರೆ ಬೇಡಿಕೆ ತುಂಬಾ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಕನ್ನಡಿಗ ವಿದ್ಯಾರ್ಥಿಗಳಿಗೆ ಅನ್ಯಾಯ: ಬೈರೇಗೌಡ
ಮಸೂದೆಯಲ್ಲಿ ‘ಕನ್ನಡಿಗರು’ ಎಂಬ ಪದದ ಬದಲು ‘ಕರ್ನಾಟಕದ ವಿದ್ಯಾರ್ಥಿಗಳು’ ಎಂಬ ಪದವನ್ನು ಸರ್ಕಾರ ಏಕೆ ಬಳಸಿದೆ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಯಬೇಕಿದೆ ಎಂದಿದ್ದಾರೆ. “10 ವರ್ಷಗಳ ಕಾಲ ಕರ್ನಾಟಕದಲ್ಲಿ ಅಧ್ಯಯನ ಮಾಡಿದ ಹೊರ ರಾಜ್ಯದ ಯಾವುದೇ ವಿದ್ಯಾರ್ಥಿ ಕೋಟಾಕ್ಕೆ ಅರ್ಹರಾಗಿರುತ್ತಾರೆ ಎಂದು ಹೇಳಿರುವುದು ಸರಿಯಲ್ಲ ಕನ್ನಡಿಗರಿಗೆ ಮಾತ್ರ ಇದು ಸಿಗಬೇಕು ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.
ಇದನ್ನೂ ಓದಿ: AP Inter Exams: 90% ಹಾಜರಾತಿ ಹೊಂದಿದ್ದವರಿಗೆ ಮಾತ್ರ ಪ್ರಾಕ್ಟಿಕಲ್ ಪರೀಕ್ಷೆ ಬರೆಯಲು ಅನುಮತಿ!
ಕರ್ನಾಟಕದ ಕನ್ನಡಿಗ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ
ಇದರಿಂದ ಕರ್ನಾಟಕದ ಕನ್ನಡಿಗ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಬೈರೇಗೌಡ ಹೇಳಿದರು. ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಆ ಸನ್ನಿವೇಶವನ್ನು ನಿಭಾಯಿಸಿ. ಇದು ಪ್ರವೇಶ ಪ್ರಕ್ರಿಯೆಗೆ ಮಾತ್ರ ಎಂದು ತಿಳಿಸಿದರು. ಸಂಸ್ಥೆಯೊಳಗೆ ಕರ್ನಾಟಕದ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಸಮಾನ ಮೀಸಲಾತಿಯನ್ನು ಸರ್ಕಾರ ನೀಡುತ್ತಿರುವ ಬಗ್ಗೆ ಅವರು ಸುಳಿವು ನೀಡಿದರು. ಕರ್ನಾಟಕದ ವಿದ್ಯಾರ್ಥಿಗಳು - ಇತರ ರಾಜ್ಯಗಳಲ್ಲಿನ ತಮ್ಮ ಸಹವರ್ತಿಗಳಂತೆ ಅವರೂ ಸಹ ಲಾ ಕಾಲೇಜುಗಳಿಗೆ ಪ್ರವೇಶ ಪಡೆಯುವ ಹಕ್ಕು ಹೊಂದಿದ್ದಾರೆ ಎಂದು ಹೇಳಿದರು.
ಕಾನೂನು ಕಾಲೇಜುಗಳಲ್ಲಿ ಸ್ಥಳೀಯರಿಗೆ ಕೋಟಾ
ದೇಶದ ಕೆಲವು ಪ್ರಸಿದ್ಧ ಕಾನೂನು ಕಾಲೇಜುಗಳಲ್ಲಿ ಸ್ಥಳೀಯರಿಗೆ ಕೋಟಾವನ್ನು ನೀಡಲಾಗಿದೆ. ಮಧ್ಯಪ್ರದೇಶದ ರಾಷ್ಟ್ರೀಯ ಕಾನೂನು ಸಂಸ್ಥೆ ವಿಶ್ವವಿದ್ಯಾಲಯದಲ್ಲಿ 25%; ಪಂಜಾಬ್ನ ರಾಜೀವ್ ಗಾಂಧಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ 10%; ಅಸ್ಸಾಂನ ರಾಷ್ಟ್ರೀಯ ಕಾನೂನು ಶಾಲೆ ಮತ್ತು ನ್ಯಾಯಾಂಗ ಅಕಾಡೆಮಿ ಮತ್ತು ಆಂಧ್ರಪ್ರದೇಶದ ದಾಮೋದರಂ ಸಂಜೀವಯ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ತಲಾ 30 ಸೀಟುಗಳನ್ನು ಮೀಸಲಿಡಲಾಗಿದೆ.
ಯುಪಿಯ ಡಾ ರಾಮ್ ಮನೋಹರ್ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ 80 ಸೀಟುಗಳು; ಮತ್ತು ತಮಿಳುನಾಡು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ 16 ಸೀಟುಗಳನ್ನು ಮೀಸಲಿಟ್ಟಿದೆ ಎಂದು ಹೇಳಿದ್ಧಾರೆ.
ಕಾನೂನು ವಿಶ್ವವಿದ್ಯಾಲಯದ ಬಗ್ಗೆ ಮಾಹಿತಿ
ಯಾವುದೇ ದೇಶದಲ್ಲಿ ಸ್ವತಂತ್ರವಾಗಿ ಮತ್ತು ಸಬಲರಾಗಿ ಉಳಿಯಲು, ಅಲ್ಲಿನ ನ್ಯಾಯ ವ್ಯವಸ್ಥೆ ಮತ್ತು ಕಾನೂನನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನ್ಯಾಯ ಮತ್ತು ಕಾನೂನಿನ ಶಿಕ್ಷಣಕ್ಕಾಗಿ ಜಗತ್ತಿನಲ್ಲಿ ಹಲವು ವಿಶ್ವವಿದ್ಯಾಲಯಗಳಿವೆ. ಇಂದು ನಾವು QS ಶ್ರೇಯಾಂಕದಿಂದ ನಿರ್ಧರಿಸಲ್ಪಟ್ಟ ವಿಶ್ವದ ಟಾಪ್ 5 ಕಾನೂನು ವಿಶ್ವವಿದ್ಯಾಲಯಗಳು ನಮ್ಮ ಭಾರತದಲ್ಲೇ ಇದೆ.
ಈ ಕಾನೂನು ವಿಶ್ವವಿದ್ಯಾಲಯ ದೇಶದಲ್ಲೇ ನಂಬರ್ 1
1817 ರಲ್ಲಿ ಕೇಂಬ್ರಿಡ್ಜ್ನಲ್ಲಿ ಸ್ಥಾಪಿಸಲಾದ ಹಾರ್ವರ್ಡ್ ವಿಶ್ವವಿದ್ಯಾಲಯವು ವಿಶ್ವದ ಅತ್ಯಂತ ಪ್ರಸಿದ್ಧ ಮತ್ತು ಹಳೆಯ ಕಾನೂನು ವಿಶ್ವವಿದ್ಯಾಲಯವಾಗಿದೆ. ಈ ವಿಶ್ವವಿದ್ಯಾನಿಲಯವು ಕಾನೂನು ಅಧ್ಯಯನಕ್ಕೆ ಉತ್ತಮ ಸೌಲಭ್ಯಗಳು ಮತ್ತು ವಾತಾವರಣವನ್ನು ಒದಗಿಸುತ್ತದೆ. ಇಲ್ಲಿ ನೀವು ಕಾನೂನು ಮತ್ತು ವಿಜ್ಞಾನ, ಕ್ರಿಮಿನಲ್ ಜಸ್ಟೀಸ್, ಕಾನೂನು ಮತ್ತು ವ್ಯವಹಾರ, ತಂತ್ರಜ್ಞಾನ, ಕಾನೂನು ಮತ್ತು ಸಮಾಜ ಇತ್ಯಾದಿಗಳ ಬಗ್ಗೆ ಶಿಕ್ಷಣವನ್ನು ಪಡೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ