• ಹೋಂ
  • »
  • ನ್ಯೂಸ್
  • »
  • Jobs
  • »
  • Republic Day GK Questions: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಣರಾಜ್ಯೋತ್ಸವದ ಬಗ್ಗೆ ಕೇಳುವ ಪ್ರಶ್ನೆಗಳು, ಉತ್ತರಗಳು ಇಲ್ಲಿವೆ

Republic Day GK Questions: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಣರಾಜ್ಯೋತ್ಸವದ ಬಗ್ಗೆ ಕೇಳುವ ಪ್ರಶ್ನೆಗಳು, ಉತ್ತರಗಳು ಇಲ್ಲಿವೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಈ ಪ್ರಶ್ನೋತ್ತರ ಸಹಾಯಕವಾಗಲಿದೆ.

  • Share this:

ಇಂದು ದೇಶಾದ್ಯಂತ 74ನೇ ಗಣರಾಜ್ಯೋತ್ಸವದ (Republic Day-2023) ಸಂಭ್ರಮ ಮನೆ ಮಾಡಿದೆ. ಜನವರಿ 26, 1950 ರಂದು ಇಡೀ ದೇಶದಲ್ಲಿ ಸಂವಿಧಾನವು (Constitution) ಜಾರಿಗೆ ಬಂದಿತು. ಇದೇ ದಿನ ಭಾರತವನ್ನು ಪೂರ್ಣ ಗಣರಾಜ್ಯವೆಂದು ಘೋಷಿಸಲಾಯಿತು. ಪ್ರತಿ ವರ್ಷ ಈ ದಿನದಂದು ಇಡೀ ದೇಶವೇ ಸಂಭ್ರಮಿಸುತ್ತದೆ. ಪ್ರತಿ ವರ್ಷ ವಿದೇಶಗಳ ಮುಖ್ಯಸ್ಥರು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಈ ಬಾರಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಮುಖ್ಯ ಅತಿಥಿಯಾಗಿದ್ದಾರೆ.


ಗಣರಾಜ್ಯೋತ್ಸವ ಇತಿಹಾಸದ ಮಹತ್ವದ ಭಾಗವಾಗಿದೆ. ಹೀಗಾಗಿ ಶಾಲಾ-ಕಾಲೇಜು ಶಿಕ್ಷಣದಲ್ಲಿ ಮಾತ್ರವಲ್ಲದೇ ಸಾಮಾನ್ಯಜ್ಞಾನದ ವಿಚಾರಕ್ಕೆ ಬಂದಾಗಲು ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಿರಲಿ ಗಣರಾಜ್ಯೋತ್ಸವದ ಕುರಿತು ಅನೇಕ ಪ್ರಶ್ನೆಗಳು ಪುನಾರಾವರ್ತಿತವಾಗಿವೆ. ಆ ಪ್ರಶ್ನೆಗಳು ಹಾಗೂ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಈ ಪ್ರಶ್ನೋತ್ತರ ಸಹಾಯಕವಾಗಲಿದೆ.


ಪ್ರಶ್ನೆ 1. ಮೊದಲ ಗಣರಾಜ್ಯೋತ್ಸವದಂದು ಭಾರತದ ರಾಷ್ಟ್ರಪತಿ ಯಾರಾಗಿದ್ದರು?


ಉತ್ತರ - ಡಾ. ರಾಜೇಂದ್ರ ಪ್ರಸಾದ್


avoid these mistakes while filling UPSC OMR Sheet kvd
ಸಾಂದರ್ಭಿಕ ಚಿತ್ರ


ಪ್ರಶ್ನೆ 2. ಭಾರತದ ರಾಷ್ಟ್ರಧ್ವಜದಲ್ಲಿ ಎಷ್ಟು ಬಣ್ಣಗಳಿವೆ?


ಉತ್ತರ - 4 ಬಣ್ಣಗಳು


ಪ್ರಶ್ನೆ 3. ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಯಾವ ಪ್ರಶಸ್ತಿಯನ್ನು ನೀಡಲಾಗುತ್ತದೆ?


ಉತ್ತರ - ಶೌರ್ಯ ಪ್ರಶಸ್ತಿಗಳು


ಪ್ರಶ್ನೆ-4. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಿಲಿಟರಿ ಸೆಲ್ಯೂಟ್ ಅನ್ನು ಯಾರಿಗೆ ನೀಡಲಾಗುತ್ತದೆ?


ಉತ್ತರ - ಭಾರತದ ರಾಷ್ಟ್ರಪತಿಗಳಿಗೆ


ಪ್ರಶ್ನೆ-5. "ಭಾರತೀಯ ಸಂವಿಧಾನದ ಪಿತಾಮಹ" ಎಂದು ಯಾರು ಕರೆಯುತ್ತಾರೆ?


ಉತ್ತರ- ಡಾ.ಭೀಮರಾವ್ ಅಂಬೇಡ್ಕರ್


ಪ್ರಶ್ನೆ-6. ರಾಷ್ಟ್ರಧ್ವಜದಲ್ಲಿರುವ ಅಶೋಕ ಚಕ್ರವನ್ನು ಎಲ್ಲಿಂದ ತೆಗೆದುಕೊಳ್ಳಲಾಗಿದೆ?


ಉತ್ತರ - ಅಶೋಕ ಸ್ತಂಭ


NIA Recruitment 2023 apply for various posts
ಸಾಂದರ್ಭಿಕ ಚಿತ್ರ


ಪ್ರಶ್ನೆ-7. ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳಿಗೆ ಎಷ್ಟು ಗನ್ ಸೆಲ್ಯೂಟ್ ನೀಡಲಾಗುತ್ತದೆ?


ಉತ್ತರ - 21 ಗನ್ ಸೆಲ್ಯೂಟ್


ಪ್ರಶ್ನೆ-8. ಭಾರತವು ಗಣರಾಜ್ಯವಾದಾಗ ಪರಮವೀರ ಚಕ್ರವನ್ನು ಯಾವ ಗೌರವಾರ್ಥವಾಗಿ ಪ್ರಾರಂಭಿಸಲಾಯಿತು?


ಉತ್ತರ- ಭಾರತವು ಗಣರಾಜ್ಯವಾದಾಗ ಪರಮವೀರ ಚಕ್ರವು ವಿಕ್ಟೋರಿಯಾ ಕ್ರಾಸ್ ಅನ್ನು ಬದಲಿಸಿತು. ಇದು ಭಾರತದ ಅತ್ಯುನ್ನತ ಮಿಲಿಟರಿ ಪದಕವಾಗಿದೆ.


ಪ್ರಶ್ನೆ-9. 1947 ರ ಭಾರತೀಯ ಸ್ವಾತಂತ್ರ್ಯ ಕಾಯಿದೆಗೆ ರಾಜಮನೆತನದ ಒಪ್ಪಿಗೆಯನ್ನು ಯಾವಾಗ ನೀಡಲಾಯಿತು?


ಉತ್ತರ - ಜುಲೈ 18, 1947 ರಂದು


ಪ್ರಶ್ನೆ-10. 74ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಂದರೆ ಈ ಬಾರಿಯ ಮುಖ್ಯ ಅತಿಥಿ ಯಾರು?


ಉತ್ತರ- ಈ ಬಾರಿ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಮುಖ್ಯ ಅತಿಥಿಯಾಗಿದ್ದಾರೆ.


ಹೆಚ್ಚಿನ ಮಾಹಿತಿ


ಭಾರತದ ಸಂವಿಧಾನವು 26 ಜನವರಿ 1950 ರಂದು ಜಾರಿಗೆ ಬಂದಿತು, ಇದರಿಂದಾಗಿ ದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಯಿತು. ಈ ವರ್ಷ ಭಾರತವು ತನ್ನ 74 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಭಾರತದ ಸಂವಿಧಾನವನ್ನು ರಚಿಸಿದ ಸಮಿತಿಯಲ್ಲಿ ಒಟ್ಟು 7 ಮಂದಿ ಸದಸ್ಯರಿದ್ದರು.




ಸಂವಿಧಾನ ರಚಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರು 64 ವಿಷಯಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಅವರಿಗೆ 9 ಭಾಷೆಗಳ ಜ್ಞಾನವಿತ್ತು. ಒಟ್ಟು 32 ಡಿಗ್ರಿಗಳನ್ನು ಹೊಂದಿದ್ದರು. ಸುಮಾರು 21 ವರ್ಷಗಳ ಕಾಲ ಜಗತ್ತಿನ ಎಲ್ಲ ಧರ್ಮಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿದ್ದರು. ಡಾ.ಭೀಮರಾವ್ ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್​​ 8 ವರ್ಷಗಳ ಅಧ್ಯಯನವನ್ನು ಕೇವಲ 2 ವರ್ಷ, 3 ತಿಂಗಳಲ್ಲಿ ಪೂರ್ಣಗೊಳಿಸಿದ್ದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ 'ಡಾಕ್ಟರ್ ಆಫ್ ಸೈನ್ಸ್' ಎಂಬ ಡಾಕ್ಟರೇಟ್ ಪದವಿಯನ್ನು ಗಳಿಸಿದ ವಿಶ್ವದ ಮೊದಲ ಮತ್ತು ಏಕೈಕ ವ್ಯಕ್ತಿಯಾಗಿದ್ದಾರೆ.

Published by:Kavya V
First published: