• ಹೋಂ
  • »
  • ನ್ಯೂಸ್
  • »
  • Jobs
  • »
  • UPSC ಕ್ಲಿಯರ್ ಮಾಡಿದ ಅನಾಥ ಯುವಕ - ಸಾಧನೆಗೆ ಸಂದರ್ಭ ಅಡ್ಡಿಯಲ್ಲ!

UPSC ಕ್ಲಿಯರ್ ಮಾಡಿದ ಅನಾಥ ಯುವಕ - ಸಾಧನೆಗೆ ಸಂದರ್ಭ ಅಡ್ಡಿಯಲ್ಲ!

ಯುಪಿಎಸ್​ಸಿ ಪಾಸಾದ ಮನೋಜ್​ ಕುಮಾರ್​

ಯುಪಿಎಸ್​ಸಿ ಪಾಸಾದ ಮನೋಜ್​ ಕುಮಾರ್​

ತಂದೆಯ ಅಕಾಲಿಕ ಮರಣದಿಂದ ಬಾಲ್ಯದಿಂದಲೇ ಅನಾಥ ಆಶ್ರಮದಲ್ಲಿ ಬೆಳೆದ ಮನೋಜ್​ ಕುಮಾರ್​ ಇದೀಗ ಯುಪಿಎಸ್​ಸಿ ಪರೀಕ್ಷೆ ಬರೆದು 478ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

  • Share this:

ಯುಪಿಎಸ್​ಸಿ (UPSC) ಪಾಸಾಗೋದಂದ್ರೆ ಸುಲಭದ ಮಾತಲ್ಲ. ಅದಕ್ಕೆ ಶ್ರಮನೂ ಅಷ್ಟೇ ಇರಬೇಕಾಗುತ್ತದೆ. ಆದರೆ ಇಲ್ಲೊಬ್ಬರು ಅನಾಥಾಶ್ರಮದಲ್ಲೇ ಬೆಳೆದು ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿ ಪಾಸಾಗಿದ್ದಾರೆ ನೋಡಿ. ತಂದೆಯ ಅಕಾಲಿಕ ಮರಣದ ನಂತರ ಬಾಲ್ಯದಿಂದಲೇ ಅನಾಥಾಲಯದಲ್ಲಿ ಬೆಳೆದ ಇವರು ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿ ಎಕ್ಸಾಂನಲ್ಲಿ 478ನೇ ರ್ಯಾಂಕ್ (Rank) ಗಳಿಸಿದ್ದಾರೆ.


ಹೌದು ಕೋಲಾರ ಜಿಲ್ಲೆಯ ಮುಳಬಾಗಿಲಿನ ಶ್ರೀಲಕ್ಷ್ಮಿ ವೆಂಕಟೇಶ್ವರ ಆರ್ಫನ್ ಎಜುಕೇಷನಲ್​ ಚಾರಿಟೇಬಲ್​ ಟ್ರಸ್ಟ್​ ಅನಾಥಾಶ್ರಮದಲ್ಲಿರುವ ಮನೋಜ್​ ಕುಮಾರ್​ ಎಂಬುವವರು ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿ ಎಕ್ಸಾಂನಲ್ಲಿ ಈ ಸಾಧನೆ ಮಾಡಿದ್ದಾರೆ.


ಅನಾಥ ಆಶ್ರಮದಲ್ಲಿ ಬೆಳೆದ ಮನೋಜ್ ಕುಮಾರ್​


ಹೌದು, ಮನೋಜ್ ಕುಮಾರ್​ ಅವರ ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯವರು. ಆದರೆ ಕಾರಣಾಂತರಗಳಿಂದ ತಂದೆಯ ಅಕಾಲಿಕ ಮರಣದಿಂದ ಮನೋಜ್​ ಅವರು ಅನಾಥ ಆಶ್ರಮ ಸೇರಬೇಕಾಯಿತು. ಇದಕ್ಕಾಗಿ ಮನೋಜ್​ ಕುಮಾರ್​ ಬಾಲ್ಯದಿಂದಲೇ ಅನಾಥ ಆಶ್ರಮದಲ್ಲೇ ಬೆಳೆದು, ಅಲ್ಲಿದ್ದ ಇತರ ಅನಾಥ ಮಕ್ಕಳ ಜೊತೆ ಆಟವಾಡಿಕೊಂಡು ಟ್ರಸ್ಟ್​ನ ಹೆಮ್ಮೆಯ ಹುಡುಗ ಎಂದೆನಿಸಿಕೊಂಡಿದ್ದಾರೆ. ಇನ್ನು ಮನೋಜ್​ ಅವರಿಗೆ ಟ್ರಸ್ಟ್​ನ ಸಂಸ್ಥಾಪಕಿ ಚಿನ್ಮಯಿ ಅವರೇ ಸಾಧನೆಗೆ ಸ್ಪೂರ್ತಿ ಮತ್ತು ಆಸರೆಯಂತೆ.


ಇದನ್ನೂ ಓದಿChikkamagaluru: 90 ಮಕ್ಕಳು ಓದುತ್ತಿರುವ ಈ ಸರ್ಕಾರಿ ಶಾಲೆಗೆ ಟಾರ್ಪಲ್ ಗೋಡೆ


ಮನೋಜ್ ಅವರ ವಿದ್ಯಾಭ್ಯಾಸ


ಯುಪಿಎಸ್​ಸಿ ಪರೀಕ್ಷೆಯಲ್ಲಿ ಕನ್ನಡ ಮತ್ತು ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ವಿಷಯವನ್ನು ಆಯ್ಕೆ ಮಾಡಿಕೊಂಡ ಮನೋಜ್ ಕುಮಾರ್ ಅವರು ಮುಳಬಾಗಿಲು ನಗರದಲ್ಲಿ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಓದಿ, ನಂತರ ಪಿಯುಸಿಯಲ್ಲಿ ಸೈನ್ಸ್​ ಆಯ್ಕೆ ಮಾಡಿ ಕೋಲಾರದಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಅದಾದ ಬಳಿಕ ಡಿಗ್ರಿಯಲ್ಲಿ ಬಿಸಿಎ ಪದವಿಯನ್ನು ಆಯ್ಕೆ ಮಾಡಿಕೊಂಡು ಬೆಂಗಳೂರಿನಲ್ಲಿ ಪೂರೈಸಿದರು. ಅದೇ ರೀತಿ ಹೈದರಾಬಾದ್​ನ ಲಾ ಎಕ್ಸಲೆನ್ಸ್​ ತರಬೇಷತಿ ಪಡೆದು, ಮುಳಬಾಗಿಲಿನ ನಗರಸಭೆಯಲ್ಲಿ ತಾಂತ್ರಿಕ ಅಪರೇಟರ್​ ಉದ್ಯೋಗ ಪಡೆದುಕೊಂಡರು.


ಸಾಧನೆಯ ಬಗ್ಗೆ ಮನೋಜ್ ಹೇಳಿದ್ದೇನು?


ಇನ್ನು ಈ ಬಗ್ಗೆ ಮನೋಜ್​ ಕುಮಾರ್​ ಅವರು ‘ಮುಳಬಾಗಿಲು ನಗರಸಭೆಯಲ್ಲಿ ತಾಂತ್ರಿಕ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೆ. ಕೋವಿಡ್​ ಸಮಯದಲ್ಲಿ ಯುಪಿಎಸ್​​ಸಿ ಪರೀಕ್ಷೆ ಬರೆಯಬೇಕೆಂದು ನಿರ್ಧರಿಸಿದೆ. ನನ್ನ ಕನಸು ಐಎಎಸ್​ ಅಧಿಕಾರಿಯಾಗಬೇಕೆಂಬುದು. ಆದ್ದರಿಂದ ಯುಪಿಎಸ್​​ಸಿ ಪರೀಕ್ಷೆಯ ತಯಾರಿಗಾಗಿ ಕೋಚಿಂಗ್ ಸೆಂಟರ್​​ಗೂ ಸೇರಿದೆ. ಆದರೆ ಈಗ ಬಂದಿರುವಂತಹ ರ‍್ಯಾಂಕ್ ಕಡಿಮೆಯಾಗಿದೆ. ಆದ್ದರಿಂದ ಮತ್ತೆ ಯುಪಿಎಸ್​ಸಿ ಪರೀಕ್ಷೆ ಬರೆದು ರ‍್ಯಾಂಕ್ ಸುಧಾರಿಸಿಕೊಳ್ಳುತ್ತೇನೆ‘ ಎಂದು ಪ್ರಜಾವಾಣಿಗೆ ತಿಳಿಸಿದ್ದಾರೆ.


ಯುಪಿಎಸ್​ಸಿ ಪಾಸಾದ ಮನೋಜ್​ ಕುಮಾರ್​


ಸಾಧನೆಗೆ ಚಿನ್ಮಯಿ ಅವರೇ ಸ್ಪೂರ್ತಿಯಂತೆ


ಇನ್ನು ಮನೋಜ್​ ಅವರು ಮುಳಬಾಗಿಲಿನ ಶ್ರೀಲಕ್ಷ್ಮಿ ವೆಂಕಟೇಶ್ವರ ಆರ್ಫನ್ ಎಜುಕೇಷನಲ್​ ಚಾರಿಟೇಬಲ್​ ಟ್ರಸ್ಟ್​ ಅನಾಥಾಶ್ರಮದಲ್ಲಿದ್ದರು. ಹಾಗಾಗಿ ಇಲ್ಲಿನ ಸಂಸ್ಥಾಪಕಿ ಚಿನ್ಮಯಿ ಅವರೇ ಇವರಿಗೆ ಸ್ಪೂರ್ತಿಯಂತೆ. ಇನ್ನು ಈ ಸಂದರ್ಭದಲ್ಲಿ ನಾನು ಓದಲು ಅವರೇ ಸಹಕಾರ ನೀಡಿದ್ದಾರೆ. ಹಾಗೆಯೇ ಯುಪಿಎಸ್​ಸಿ ಪರೀಕ್ಷೆ ಬರೆಯಲು ಇವರೇ ಪ್ರೇರಣೆ ತುಂಬಿದವರು ಎಂದಿದ್ದಾರೆ.


ಯುಪಿಎಸ್​ಸಿ ಪರೀಕ್ಷೆ ಬಗ್ಗೆ ಏನಂದ್ರು?


‘ಯುಪಿಎಸ್​​ಸಿ ಪರೀಕ್ಷೆ ಬರೆಯಲು ಬಹಳ ಕಷ್ಟ ಎಂದು ಹೆಚ್ಚಿನವರು ಹೇಳುತ್ತಾರೆ. ಆದ್ರೆ ಶ್ರಮಹಾಕಿ ಓದಿದ್ರೆ ಯಾವುದೂ ಕಷ್ಟವಲ್ಲ, ಆಸಕ್ತಿವಹಿಸಿ ಶೇ.100ರಷ್ಟು ಶ್ರಮ ಹಾಕಿದ್ರೆ ಯುಪಿಎಸ್​ಸಿ ಪರೀಕ್ಷೆ ಸುಲಭದಲ್ಲಿ ಪಾಸ್ ಮಾಡಬಹುದು‘ ಎಂದು ಹೇಳುತ್ತಾರೆ ಮನೋಜ್.




ಸಂಸ್ಥಾಪಕಿ ಚಿನ್ಮಯಿ ಅವರ ಮನೋಜ್ ಬಗ್ಗೆ ಅಭಿಪ್ರಾಯ


‘ಮನೋಜ್ ಯಾವುದೇ ಕಾರಣಕ್ಕೂ ಅನಾಥನಲ್ಲ. ಅವನನ್ನು ನಾನೇ ಸ್ವತಃ ದತ್ತು ತೆಗೆದುಕೊಂಡಿದ್ದೇನೆ. ಆತನನ್ನು ನನ್ನ ಸ್ವಂತ ಮಗನೆಂದೇ ಭಾವಿಸಿದ್ದೇನೆ. ಮನೋಜ್​ನ ಈ ಸಾಧನೆಯಿಂದ ನಾನಂತೂ ಬಹಳಷ್ಟು ಸಂತೋಷಗೊಂಡಿದ್ದೇನೆ‘ ಎಂದುಚಿನ್ಮಯಿ ಹೇಳುತ್ತಾರೆ.


ಶ್ರೀಲಕ್ಷ್ಮಿ ವೆಂಕಟೇಶ್ವರ ಆರ್ಫನ್ ಎಜುಕೇಷನಲ್​ ಚಾರಿಟೇಬಲ್​ ಟ್ರಸ್ಟ್


2010ರಲ್ಲಿ ಪ್ರಾರಂಭವಾದ ಈ ಟ್ರಸ್ಟ್​ ಇದುವರೆಗೆ ಸುಮಾರು 500ರಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ, ಅನಾಥ ಮಕ್ಕಳಿಗೆ, ಡಿಪ್ಲೊಮೊ, ಬಿ.ಕಾಂ, ಎಸ್​ಎಸ್​ಎಲ್​ಸಿ, ಸ್ನಾತ್ತಕೋತ್ತರ ಪದವಿಗಳಲ್ಲಿ ಶಿಕ್ಷಣ ಒದಗಿಸಿದ್ದಾರೆ.

top videos
    First published: