• ಹೋಂ
  • »
  • ನ್ಯೂಸ್
  • »
  • IPL
  • »
  • IPL 2021: ಇದೆಂಥಾ ನಿರ್ಧಾರ...ಮನೀಷ್ ಪಾಂಡೆ ಪರ ಬ್ಯಾಟ್ ಬೀಸಿದ ಡೇವಿಡ್ ವಾರ್ನರ್..!

IPL 2021: ಇದೆಂಥಾ ನಿರ್ಧಾರ...ಮನೀಷ್ ಪಾಂಡೆ ಪರ ಬ್ಯಾಟ್ ಬೀಸಿದ ಡೇವಿಡ್ ವಾರ್ನರ್..!

David Warner,Manish Pandey

David Warner,Manish Pandey

ಎಡಗೈ ದಾಂಡಿಗ ವಿರಾಟ್ ಸಿಂಗ್ ಡೆಲ್ಲಿ ವಿರುದ್ದದ ಪಂದ್ಯದಲ್ಲಿ 14 ಎಸೆತಗಳಲ್ಲಿ ಕೇವಲ 4 ರನ್ ಮಾತ್ರ ಗಳಿಸಿದ್ದರು. ಇದುವೇ ತಂಡದ ಸೋಲಿಗೆ ಕಾರಣವಾಯಿತು.

  • Share this:

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡವು ಸತತ ಸೋಲುಗಳಿಂದ ಕಂಗೆಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಆಡಿದ ಕೊನೆಯ ಪಂದ್ಯದಲ್ಲಿ ಎಸ್​ಆರ್​ಹೆಚ್​ ಸೂಪರ್ ಓವರ್​ನಲ್ಲಿ ಸೋಲನುಭವಿಸಿತು. ಇದಕ್ಕೂ ಮುನ್ನ ಡೆಲ್ಲಿ ನೀಡಿದ 160 ರನ್​ಗಳ ಟಾರ್ಗೆಟ್​​ನ್ನು ಬೆನ್ನತ್ತಿದ ಹೈದರಾಬಾದ್​ಗೆ ಮಧ್ಯಮ ಕ್ರಮಾಂಕ ಮತ್ತೆ ಕೈಕೊಟ್ಟಿತ್ತು. ಇದಾಗ್ಯೂ ಏಕಾಂಗಿ ಹೋರಾಟ ನಡೆಸಿದ ಕೇನ್ ವಿಲಿಯಮ್ಸನ್ ಪಂದ್ಯವನ್ನು ಸೂಪರ್​ ಓವರ್​ಗೆ ತಂದು ನಿಲ್ಲಿಸಿದ್ದರು.


ಸೂಪರ್ ಓವರ್​ನಲ್ಲಿ ಸೋತ ಬಳಿಕ ಮಾತನಾಡಿದ ವಾರ್ನರ್, ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆಗೆ ಅವಕಾಶ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯ್ಕೆಗಾರರು ಪಾಂಡೆಯನ್ನು ತಂಡದಿಂದ ಹೊರಗಿಡುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದ ತಂಡದ ಮಧ್ಯಮ ಕ್ರಮಾಂಕದ ಮೇಲೆ ಪರಿಣಾಮ ಬೀರಿದೆ ಎಂದು ಪರೋಕ್ಷವಾಗಿ ವಾರ್ನರ್ ತಿಳಿಸಿದ್ದಾರೆ.


ಮೊದಲೆರಡು ಪಂದ್ಯಗಳಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದಕ್ಕಾಗಿ ಮನೀಷ್ ಪಾಂಡೆಯನ್ನು ತಂಡದಿಂದ ಕೈ ಬಿಡಲಾಗಿತ್ತು. ಅವರ ಬದಲಿಗೆ ಸ್ಥಾನ ಪಡೆದ ಎಡಗೈ ದಾಂಡಿಗ ವಿರಾಟ್ ಸಿಂಗ್ ಡೆಲ್ಲಿ ವಿರುದ್ದದ ಪಂದ್ಯದಲ್ಲಿ 14 ಎಸೆತಗಳಲ್ಲಿ ಕೇವಲ 4 ರನ್ ಮಾತ್ರ ಗಳಿಸಿದ್ದರು. ಇದುವೇ ತಂಡದ ಸೋಲಿಗೆ ಕಾರಣವಾಯಿತು.


ಈ ವಿಷಯವನ್ನು ಪ್ರಸ್ತಾಪಿಸದೇ ಮಾತನಾಡಿದ ವಾರ್ನರ್, ತಂಡದಲ್ಲಿನ ಬದಲಾವಣೆ ಆಯ್ಕೆಗಾರರ ನಿರ್ಧಾರ. ಆದರೆ ಕೆಲವೊಂದು ಕಠಿಣ ನಿರ್ಧಾರವಾಗಿದೆ ಎಂಬುದು ನನ್ನ ಅಭಿಪ್ರಾಯ. ವಿರಾಟ್ ಸಿಂಗ್ ವೈಫಲ್ಯವನ್ನು ನಾನು ದೂಷಿಸುತ್ತಿಲ್ಲ. ಆತ ಉತ್ತಮ ಆಟಗಾರ. ಈ ಪಿಚ್​ನಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟಕರವಾಗಿತ್ತು. ಅವರು ಮಧ್ಯದ ಓವರ್​ಗಳಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು ಎಂದು ವಾರ್ನರ್ ತಿಳಿಸಿದ್ದಾರೆ.


ಈ ಮೂಲಕ ಮಧ್ಯಮ ಕ್ರಮಾಂಕದ ಅನುಭವಿ ಆಟಗಾರ ಮನೀಷ್ ಪಾಂಡೆಯನ್ನು ಕೈಬಿಟ್ಟು ಆಯ್ಕೆಗಾರರು ಮಾಡಿದ ಪ್ರಯೋಗವು ತಂಡದ ಮೇಲೆ ಪರಿಣಾಮ ಬೀರಿದೆ ಎಂದು ಡೇವಿಡ್ ವಾರ್ನರ್ ಪರೋಕ್ಷವಾಗಿ ತಿಳಿಸಿದ್ದಾರೆ. 2008 ರಿಂದ ಐಪಿಎಲ್‌ನ ಭಾಗವಾಗಿರುವ ಪಾಂಡೆ, 149 ಪಂದ್ಯಗಳಿಂದ 3369 ರನ್ ಕಲೆಹಾಕಿದ್ದಾರೆ. ಆದರೆ ಪಾಂಡೆಗೆ ಇದೇ ಮೊದಲ ಬಾರಿ ಎಸ್​ಆರ್​ಹೆಚ್ ತಂಡದಲ್ಲಿ ಬೆಂಚ್ ಕಾಯುವಂತಹ ಪರಿಸ್ಥಿತಿ ಎದುರಾಗಿದೆ.

top videos
    First published: