ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಈ ವರ್ಷದ ಮೊದಲ ಐಪಿಎಲ್ ಪಂದ್ಯವನ್ನು ಎದುರಿಸುತ್ತಿದೆ. ಕನ್ನಡಿಗರಿಗಂತೂ ಈ ಕ್ಷಣವನ್ನು ನೋಡಲು ಕಾದು ಕುಳಿತಿದ್ದಾರೆ. ತಮ್ಮ ನೆಚ್ಚಿನ ತಂಡವಾದ ಆರ್ಸಿಬಿಯನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಹಪಹಪಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಿಂದ ಹಿಡಿದು ಎಲ್ಲೆಂದರಲ್ಲಿ ಬೆಂಗಳೂರಿಗರು ಆರ್ಸಿಬಿ ಬಗ್ಗೆ ಬರೆದು ಹಾಕುತ್ತಿದ್ದಾರೆ. ಇದೀಗ ಸ್ಯಾಂಡಲ್ವುಡ್ ನಟ ಬಾದ್ಶಾ ಕಿಚ್ಚ ಸುದೀಪ್ ಕೂಡ ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದು ಹಾಕಿದ್ದಾರೆ.
ಕನ್ನಡಿಗರಿಗೆ ಆರ್ಸಿಬಿ ತಂಡದ ಮೇಲೆ ಎಲ್ಲಿಲ್ಲದ ಪ್ರೀತಿ.ಈ ವರೆಗೆ ಯಾವುದೇ ಪಂದ್ಯದಲ್ಲೂ ಕಪ್ ಗೆಲ್ಲದಿದ್ದರು. ತಂಡ ಈ ಬಾರಿಯಾದರು ಕಪ್ ಗೆಲ್ಲುತ್ತದೆ ಎನ್ನುತ್ತಾ ತಂಡಕ್ಕೆ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಕೂಡ ಆರ್ಸಿಬಿ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಅದರಂತೆ ನಟ ಕಿಚ್ಚ ಸುದೀಪ್ ತಂಡಕ್ಕೆ ಶುಭಾಶಯ ಕೋರುವ ಮೂಲಕಇಂದಿನ ಪಂದ್ಯದ ಕಾತುರತೆ ವ್ಯಕ್ತಪಡಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಕಿಚ್ಚ, ‘ದಿನಗಳು ಮತ್ತೆ ಬಂದಿದೆ. ಹೊಸ ಸೀಸನ್ ಮತ್ತು ಹೊಸ ಆರಂಭ. ಅದ್ಭುತ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದೇನೆ. ಶುಭಾಶಯಗಳು’. ಎಂದು ಬರೆದುಕೊಂಡಿದ್ದಾರೆ.
Here comes the day ,,
Its a new season and a new beginning.
Looking forward to a fantastic match.
Bst wshs @RCBTweets @imVkohli. pic.twitter.com/xMLzzjmrEt
— Kichcha Sudeepa (@KicchaSudeep) September 21, 2020
ಇನ್ನು ನಿರ್ದೇಶಕ ಸಿಂಪಲ್ ಸುನಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ಬಗ್ಗೆ ಆಗಾಗ ಬರೆದು ಹಾಕುತ್ತಿರುತ್ತಾರೆ. ತನ್ನ ನೆಚ್ಚಿನ ತಂಡದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ