ಮೊನ್ನೆ (ಸೆ. 28) ಶಾರ್ಜಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಡೆಲ್ಲಿ ತಂಡದ ಆರ್ ಅಶ್ವಿನ್ ಮತ್ತು ಕೆಕೆಆರ್ ತಂಡದ ನಾಯಕ ಇಯಾನ್ ಮಾರ್ಗನ್ ಮಧ್ಯೆ ವಾಗ್ಯುದ್ಧವಾದ ಘಟನೆಯಾಗಿತ್ತು. ಆ ಮಾತಿನ ಸಮರಕ್ಕೆ ಕಾರಣ ಏನೆಂದು ಮರುದಿನ ಕೆಕೆಆರ್ ಆಟಗಾರ ದಿನೇಶ್ ಕಾರ್ತಿಕ್ ವಿವರಿಸಿ ತಿಳಿಸಿದ್ದರು. ಇದೀಗ ಆರ್ ಅಶ್ವಿನ್ ಅವರೇ ಇಂದು ಖುದ್ದಾಗಿ ಈ ಬಗ್ಗೆ ಮೌನ ಮುರಿದಿದ್ಧಾರೆ. ತನ್ನ ಆಟಕ್ಕೆ ಕಳಂಕ ಎಂದು ಇಯಾನ್ ಮಾರ್ಗನ್ ಮಾಡಿರುವ ಹೀಯಾಳಿಕೆಗೆ ಅಶ್ವಿನ್ ತಿರುಗೇಟು ಕೊಟ್ಟಿದ್ಧಾರೆ. ಈ ಬಗ್ಗೆ ಸರಣಿ ಟ್ವೀಟ್ಗಳನ್ನ ಮಾಡಿರುವ ಅಶ್ವಿನ್ ತಮ್ಮ ಅಂದಿನ ವರ್ತನೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಘಟನೆ ಆಗಿದ್ದೇನು?: ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡುವಾಗ ಕ್ರೀಸ್ನಲ್ಲಿ ಆರ್ ಅಶ್ವಿನ್ ಮತ್ತು ನಾಯಕ ರಿಷಭ್ ಪಂತ್ ಇದ್ದರು. ಒಂದು ರನ್ ಓಡಿದ ಬಳಿಕ ಫೀಲ್ಡರ್ ಎಸೆದ ಚೆಂಡು ರಿಷಭ್ ಪಂತ್ ಅವರ ದೇಹಕ್ಕೆ ತಾಗಿ ಬೇರೆಡೆ ಹೋಯಿತು. ಆಗ ಅಶ್ವಿನ್ ಅವರು ಇನ್ನೊಂದು ರನ್ಗಾಗಿ ಓಡಲು ಶುರು ಮಾಡಿದ್ದರು. ಆ ವೇಳೆ, ಕೆಕೆಆರ್ ಕ್ಯಾಪ್ಟನ್ ಇಯಾನ್ ಮಾರ್ಗನ್ ಅವರು ಅಶ್ವಿನ್ ಅವರಿಗೆ ನೀವು ಕ್ರೀಡೆಗೆ ಕಳಂಕ ಇದ್ದ ಹಾಗೆ (You are disgraceful) ಎಂದು ಟೀಕಿಸಿದ್ದರು. ಇದಕ್ಕೆ ಅಶ್ವಿನ್ ಅವರೂ ಖಾರವಾಗಿ ಅಂದೇ ಪ್ರತಿಕ್ರಿಯಿಸಿದ್ದರು. ಟಿಮ್ ಸೌಥಿ ಕೂಡ ಅಶ್ವಿನ್ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲೇ ಇದ್ದ ಕೆಕೆಆರ್ ತಂಡದ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದ್ದರು.
ಆಟದ ನಿಯಮದ ಪ್ರಕಾರ ಆರ್ ಅಶ್ವಿನ್ ಅವರು ಆ ರೀತಿಯ ಓವರ್ ಥ್ರೋಗೆ ಹೆಚ್ಚುವರಿ ರನ್ ತೆಗೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಕ್ರಿಕೆಟ್ನಲ್ಲಿ ಕೆಲವೊಂದು ಅಂಶಗಳು ಅಘೋಷಿತವಾಗಿಯೇ ಪಾಲನೆಯಾಗುತ್ತವೆ. ಫೀಲ್ಡರ್ ಎಸೆದ ಚೆಂಡು ಬ್ಯಾಟ್ಸ್ಮನ್ಗೆ ತಾಗಿ ಹೋದರೆ ಬ್ಯಾಟ್ಸ್ಮನ್ಗಳು ಹೆಚ್ಚುವರಿ ರನ್ಗೆ ಓಡುವುದಿಲ್ಲ. ಆ ರೀತಿ ದೇಹ ತಾಗಿ ಚಿಮ್ಮಿದ ಚೆಂಡು ಬೌಂಡರಿ ಗೆರೆ ಮುಟ್ಟಿದರೆ ಅದು ಫೋರ್ ಎಂದು ಅಂಪೈರ್ ಡಿಕ್ಲೇರ್ ಮಾಡುತ್ತಾರೆಯೇ ಹೊರತು ಬ್ಯಾಟರ್ಗಳು ಹೆಚ್ಚುವರಿ ರನ್ಗೆ ಪ್ರಯತ್ನಿಸುವುದೇ ಇಲ್ಲ. ಆದರೆ, ಇಲ್ಲಿ ಆರ್ ಅಶ್ವಿನ್ ಅವರು ಇಂಥ ಸಂದರ್ಭದಲ್ಲಿ ಹೆಚ್ಚುವರಿ ರನ್ ಓಡಲು ಪ್ರಯತ್ನಿಸಿದ್ದು ಇಂಗ್ಲೆಂಡ್ ಕ್ರಿಕೆಟಿಗ ಇಯಾನ್ ಮಾರ್ಗನ್ ಅವರನ್ನ ಕೆರಳಿಸಿದೆ.
ಇದಕ್ಕೆ ಸರಣಿ ಟ್ವೀಟ್ಗಳ ಮೂಲಕ ಆರ್ ಅಶ್ವಿನ್ ಖುದ್ದಾಗಿ ಸ್ಪಷ್ಟೀಕರಣ ನೀಡಿದ್ಧಾರೆ. “ಫೀಲ್ಡರ್ ಥ್ರೋ ಎಸೆಯುವುದನ್ನು ನೋಡಿದ ಕ್ಷಣದಲ್ಲಿ ನಾನು ರನ್ ಓಡಲು ತಿರುಗಿದೆ. ಆ ಬಾಲು ರಿಷಭ್ ಅವರಿಗೆ ತಾಗಿತು ಎಂದು ನನಗೆ ಗೊತ್ತಿಲ್ಲ. ಒಂದು ವೇಳೆ ನಾನು ನೋಡಿದ್ದರೆ ರನ್ಗೆ ಓಡುತ್ತಿದ್ದೆನಾ? ಖಂಡಿತ ಆಗಲೂ ನಾನು ಓಡಿರುತ್ತಿದ್ದೆ. ಮಾರ್ಗನ್ ಹೇಳಿದ ಹಾಗೆ ನಾನು ಕಳಂಕಿತನಾ? ಖಂಡಿತಾ ಇಲ್ಲ” ಎಂದು ಮೊದಲ ಟ್ವೀಟ್ನಲ್ಲೇ ತಮ್ಮ ನಿಲುವನ್ನು ಅಶ್ವಿನ್ ಸ್ಪಷ್ಟಪಡಿಸಿದ್ದಾರೆ.
“ನಾನು ಅಂದು ಜಗಳ ಮಾಡಿದೆನಾ? ಇಲ್ಲ, ನನ್ನ ಹಕ್ಕಿಗಾಗಿ ನಿಂತಿದ್ದೆ. ಹೀಗೆ ಮಾಡಬೇಕೆಂದು ನನ್ನ ಗುರುಗಳು ಮತ್ತು ಪೋಷಕರು ನನಗೆ ಹೇಳಿಕೊಟ್ಟಿದ್ದಾರೆ. ನೀವು ಕೂಡ ನಿಮ್ಮ ಮಕ್ಕಳಿಗೆ ಇದನ್ನೇ ಹೇಳಿಕೊಡಿ” ಎಂದು ಅಶ್ವಿನ್ ತಿಳಿಹೇಳಿದ್ಧಾರೆ.
1. I turned to run the moment I saw the fielder throw and dint know the ball had hit Rishabh.
2. Will I run if I see it!?
Of course I will and I am allowed to.
3. Am I a disgrace like Morgan said I was?
Of course NOT.
— Mask up and take your vaccine🙏🙏🇮🇳 (@ashwinravi99) September 30, 2021
4. Did I fight?
No, I stood up for myself and that’s what my teachers and parents taught me to do and pls teach your children to stand up for themselves.
In Morgan or Southee’s world of cricket they can choose and stick to what they believe is right or wrong but do not have the
— Mask up and take your vaccine🙏🙏🇮🇳 (@ashwinravi99) September 30, 2021
right to take a moral high ground and use words that are derogatory.
What’s even more surprising is the fact that people are discussing this and also trying to talk about who is the good and bad person here!
To all the ‘Cricket is a gentleman’s game’ fans in the house’:⬇️⬇️⬇️
— Mask up and take your vaccine🙏🙏🇮🇳 (@ashwinravi99) September 30, 2021
There are millions of cricketers with several thought processes that play this great game to make it their careers, teach them that an extra run taken due to a poor throw aimed to get you out can make your career and an extra yard stolen by the non striker can break your career
— Mask up and take your vaccine🙏🙏🇮🇳 (@ashwinravi99) September 30, 2021
Do not confuse them by telling them that you will be termed a good person if you refuse the run or warn the non striker, because all these people who are terming you good or bad have already made a living or they are doing what it takes to be successful elsewhere.
— Mask up and take your vaccine🙏🙏🇮🇳 (@ashwinravi99) September 30, 2021
Give your heart and soul on the field and play within the rules of the game and shake your hands once the game is over.
The above is the only ‘spirit of the game’ I understand.
— Mask up and take your vaccine🙏🙏🇮🇳 (@ashwinravi99) September 30, 2021
“ಮಾರ್ಗನ್ ಅಥವಾ ಸೌಥೀ ಅವರು ತಮ್ಮ ಕ್ರಿಕೆಟ್ ಜಗತ್ತಿನಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಹೇಗೆ ಬೇಕಾದರೂ ನಿರ್ಣಯಿಸಿಕೊಳ್ಳಲಿ. ಆದರೆ, ಇದೇ ನೈತಿಕತೆ ಎಂದು ನಿರ್ಧರಿಸಿ, ನಿಂದನಾತ್ಮಕ ಪದ ಬಳಕೆ ಮಾಡುವ ಹಕ್ಕು ಹೊಂದಿರುವುದಿಲ್ಲ.
”ಜನರು ಈ ಘಟನೆಯನ್ನ ಚರ್ಚಿಸುತ್ತಿರುವುದು, ಹಾಗೂ ಯಾರು ಒಳ್ಳೆಯ ವ್ಯಕ್ತಿ ಯಾರು ಕೆಟ್ಟ ವ್ಯಕ್ತಿ ಎಂದು ಅಭಿಪ್ರಾಯಗಳನ್ನ ನೀಡುತ್ತಿರುವುದು ಇನ್ನೂ ಅಚ್ಚರಿ ಮೂಡಿಸಿದೆ.
“ಕ್ರಿಕೆಟ್ ಜೆಂಟಲ್ಮ್ಯಾನ್ ಗೇಮ್ ಎಂದು ನಂಬುವವರಿಗೆ ಈ ವಿಚಾರಗಳನ್ನ ತಿಳಿಸುತ್ತೇನೆ: ಈ ಆಟದ ಮೂಲಕ ತಮ್ಮ ವೃತ್ತಿಜೀವನ ನಡೆಸುತ್ತಿರುವ ವಿವಿಧ ವಿಚಾರಗಳಿರುವ ಕೋಟ್ಯಂತರ ಕ್ರಿಕೆಟಿಗರು ನಮ್ಮಲ್ಲಿದ್ದಾರೆ. ಕೆಟ್ಟ ಓವರ್ ಥ್ರೋನಿಂದ ಒಂದು ಹೆಚ್ಚುವರಿ ರನ್ ತೆಗೆದುಕೊಂಡರೆ ಅದು ಅವರ ವೃತ್ತಿಜೀವನಕ್ಕೆ ಅನುಕೂಲವಾಗುತ್ತದೆ. ನಾನ್-ಸ್ಟ್ರೈಕರ್ ಕ್ರೀಸ್ನಿಂದ ಹೊರಗೆ ಬಂದರೆ ಒಬ್ಬ ಬೌಲರ್ನ ವೃತ್ತಿಜೀವನಕ್ಕೇ ಮಾರಕವಾಗಬಹುದು ಎಂಬುದನ್ನ ಆಟಗಾರರಿಗೆ ತಿಳಿಸಿಕೊಡಿ. ನೀವು ರನ್ ಓಡಲು ನಿರಾಕರಿಸಿದರೆ ಅಥವಾ ನಾನ್-ಸ್ಟ್ರೈಕರ್ಗೆ ಕೇವಲ ವಾರ್ನ್ ಮಾತ್ರ ಮಾಡಿದರೆ ನೀವು ಒಳ್ಳೆಯ ವ್ಯಕ್ತಿ ಆಗುತ್ತೀರಿ ಎಂದು ಹೇಳಿ ಅವರನ್ನ ಗೊಂದಲಕ್ಕೀಡು ಮಾಡಬೇಡಿ. ನೀವು ಒಳ್ಳೆಯವರೋ ಕೆಟ್ಟವರೋ ಎಂದು ಬಣ್ಣಿಸುವ ಜನರು ಈಗಾಗಲೇ ಸಾಕಷ್ಟು ಸಂಪಾದನೆ ಮಾಡಿಕೊಂಡಿದ್ದಾರೆ.
ಮೈದಾನದಲ್ಲಿ ನಿಮ್ಮ ತನು ಮನವನ್ನು ಧಾರೆ ಎರೆದು, ಆಟದ ನಿಯಮಗಳ ಪ್ರಕಾರವೇ ಆಡಿ. ಆಟ ಮುಗಿದ ಮೇಲೆ ಹಸ್ತಲಾಘವ ಮಾಡಿ. ಇದೇ ಗೇಮ್ ಸ್ಪಿರಿಟ್ ಎಂಬುದು ನನಗೆ ಗೊತ್ತಿರುವ ಸತ್ಯ” ಎಂದು ಆರ್ ಅಶ್ವಿನ್ ಮಾರ್ಮಿಕವಾಗಿ ಹೇಳಿದ್ಧಾರೆ.
ಆರ್ ಅಶ್ವಿನ್ ಅವರು ಈ ಹಿಂದೆಯೂ ಇಂಥ ಕೆಲ ಘಟನೆಗಳಲ್ಲಿ ಕೆಲ ಟೀಕಾಕಾರರ ದಾಳಿಗೆ ತುತ್ತಾಗಿದ್ದಿದೆ. ಬೌಲಿಂಗ್ ಮಾಡುವಾಗ ನಾನ್ ಸ್ಟ್ರೈಕಿಂಗ್ ಎಂಡ್ನಲ್ಲಿದ್ದ ಬ್ಯಾಟ್ಸ್ಮನ್ ಕ್ರೀಸ್ನಿಂದ ಹೊರಗೆ ಬಂದಾಗ ಆರ್ ಅಶ್ವಿನ್ ಬೇಲ್ ಎಗರಿಸಿ ಔಟ್ ಮಾಡಿದ್ದಿದೆ. ಮೇಲೆ ಹೇಳಿದ ಓವರ್ ಥ್ರೋ ರೀತಿಯಲ್ಲೇ ನಾನ್ ಸ್ಟ್ರೈಕರ್ ರನೌಟ್ ಕೂಡ ಆಟಗಾರರಲ್ಲಿ ಅಘೋಷಿತವಾಗಿ ನಿಷಿದ್ಧವಿದೆ. ನಿಯಮದ ಪ್ರಕಾರ ಆ ರೀತಿ ನಾನ್ ಸ್ಟ್ರೈಕರ್ ಬ್ಯಾಟರ್ ಅನ್ನು ಔಟ್ ಮಾಡಬಹುದು. ಅಶ್ವಿನ್ ಆ ಕೆಲಸ ಮಾಡಿದ್ದಕ್ಕೆ ಸಾಕಷ್ಟು ಟೀಕೆಗಳನ್ನ ಕೇಳಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ