ಮುಂಬೈ ತಂಡದ ಆಲ್ರೌಂಡರ್ ಕ್ರುನಾಲ್ ಪಾಂಡ್ಯಗೆ ಸಂಕಷ್ಟವೊಂದು ಎದುರಾಗಿದೆ. ಐಪಿಎಲ್ನಲ್ಲಿ ಕಪ್ ಎತ್ತಿ ಭಾರತಕ್ಕೆ ವಾಪಾಸಾದ ಅವರಿಗೆ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಶಾಕ್ ನೀಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಷ್ಟಕ್ಕೂ ಕ್ರುನಾಲ್ರನ್ನು ವಿಚಾರಣೆ ನಡೆಸಲು ಕಾರಣವೇನು? ಅದಕ್ಕೆ ಇಲ್ಲಿದೆ ಉತ್ತರ.
ಮಂಗಳವಾರವಷ್ಟೇ ಐಪಿಎಲ್ ಪೂರ್ಣಗೊಂಡಿತ್ತು. ಮುಂಬೈ ಇಂಡಿಯನ್ಸ್ ಸತತ ಎರಡನೇ ಬಾರಿಗೆ ಕಪ್ ಎತ್ತಿತ್ತು. ಇದೇ ಖುಷಿಗೆ ಕ್ರುನಾಲ್ ಪಾಂಡ್ಯ ವಜ್ರದಿಂದ ಮಾಡಲಾದ ಆಡೆಮರ್ಸ್ ಪಿಗುಯೆಟ್ ಕಂಪೆನಿಯ ಎರಡು ವಾಚ್ ಹಾಗೂ ರೊಲೆಕ್ಸ್ ಕಂಪೆನಿಯ ಎರಡು ವಾಚ್ಅನ್ನು ಖರೀದಿಸಿ ತಂದಿದ್ದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಈ ಬಗ್ಗೆ ಅಧಿಕಾರಿಗಳಿಗೆ ಕ್ರುನಾಲ್ ಮಾಹಿತಿ ನೀಡಿಲ್ಲ. ಹೀಗಾಗಿ ವಶಕ್ಕೆ ಪಡೆದು, 3 ಗಂಟೆ ವಿಚಾರಣೆ ನಡೆಸಲಾಗಿದೆ.
Cricketer Krunal Pandya stopped by Directorate of Revenue Intelligence (DRI) at the Mumbai International Airport over suspicion of being in possession of undisclosed gold and other valuables, while returning from UAE: DRI sources pic.twitter.com/9Yk82coBgz
— ANI (@ANI) November 12, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ