• ಹೋಂ
  • »
  • ನ್ಯೂಸ್
  • »
  • IPL
  • »
  • IPL 2020: ಸೂಪರ್ ಓವರ್​ನಲ್ಲಿ ಇಶಾನ್ ಕಿಶನ್​ರನ್ನು ಕಣಕ್ಕಿಳಿಸದಿರುವ ಕಾರಣ ಬಿಚ್ಚಿಟ್ಟ ರೋಹಿತ್ ಶರ್ಮಾ

IPL 2020: ಸೂಪರ್ ಓವರ್​ನಲ್ಲಿ ಇಶಾನ್ ಕಿಶನ್​ರನ್ನು ಕಣಕ್ಕಿಳಿಸದಿರುವ ಕಾರಣ ಬಿಚ್ಚಿಟ್ಟ ರೋಹಿತ್ ಶರ್ಮಾ

Ishan Kishan

Ishan Kishan

Ishan Kishan: ನಿಯಮಿತ ಓವರ್​ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಇಶಾನ್​ರನ್ನು ಮುಂಬೈ ನಾಯಕ ರೋಹಿತ್ ಶರ್ಮಾ ಸೂಪರ್ ಓವರ್​ನಲ್ಲಿ ಕಣಕ್ಕಿಳಿಸಿರಲಿಲ್ಲ. ಪಂದ್ಯದ ಸೋಲಿನೊಂದಿಗೆ ಇದು ಭಾರೀ ಚರ್ಚೆಗೂ ಕಾರಣವಾಗಿತ್ತು.

  • Share this:

ಇಶಾನ್ ಕಿಶನ್...ಪ್ರಸ್ತುತ ಕ್ರಿಕೆಟ್ ಅಂಗಳ ಟಾಪ್ ಟಾಪಿಕ್​ನಲ್ಲಿರುವ ಹೆಸರು. ಕಳೆದ ಕೆಲ ಸೀಸನ್​ಗಳಿಂದಲೂ ಮುಂಬೈ ಇಂಡಿಯನ್ಸ್​ ತಂಡವನ್ನು ಪ್ರತಿನಿಧಿಸುತ್ತಿದ್ದರೂ ಕಿಶನ್ ಸುದ್ದಿಯಾಗಿದ್ದು ಕಡಿಮೆ. ಅಪಾರ ಪ್ರತಿಭೆ ಹೊಂದಿದ್ದರೂ ಸ್ಟಾರ್ ಆಟಗಾರರಿಂದ ತುಂಬಿ ತುಳುಕುತ್ತಿರುವ ಮುಂಬೈ ಬಳಗದಲ್ಲಿ ಅವಕಾಶ ಸಿಗುತ್ತಿರಲಿಲ್ಲ. ಈ ಬಾರಿ ಕೂಡ ಅದೇ ನಡೆದಿತ್ತು. 13ನೇ ಆವೃತ್ತಿಯ ಐಪಿಎಲ್​ನಲ್ಲಿ ಮುಂಬೈ ಆಡಿದ ಮೊದಲೆರಡು ಪಂದ್ಯಗಳಲ್ಲಿ ಚಾನ್ಸ್ ಸಿಗಲಿಲ್ಲ. ಆದರೆ ಎಡಗೈ ಬ್ಯಾಟ್ಸ್​ಮನ್ ಸೌರಭ್ ತಿವಾರಿ ಗಾಯಗೊಂಡ ಹಿನ್ನೆಲೆಯಲ್ಲಿ ರೋಹಿತ್ ಇಶಾನ್​ಗೆ ಮಣೆ ಹಾಕಿದ್ದರು.


ಸಿಕ್ಕಾ ಅವಕಾಶವನ್ನು ಬಳಸಿಕೊಂಡ ಇಶಾನ್ ಕಿಶನ್ ಮುಂಬೈ ಬಳಗಕ್ಕೆ ಅಚ್ಚರಿ ಮೂಡಿಸಿದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಳಯಕ್ಕೆ ನಡುಕ ಹುಟ್ಟಿಸಿದ್ದರು. ಅಂತಹದೊಂದು ಸ್ಪೋಟಕ ಇನಿಂಗ್ಸ್ ಇಶಾನ್ ಆಡಿದ್ದರು. ಕೇವಲ 58 ಎಸೆತಗಳನ್ನು ಎದುರಿಸಿದ್ದ ಯುವ ದಾಂಡಿಗ ಸಿಡಿಸಿದ್ದು 9 ಸಿಕ್ಸರ್ ಹಾಗೂ 2 ಬೌಂಡರಿ. ಈ ಮೂಲಕ ಐಪಿಎಲ್​ನಲ್ಲಿ ಗರಿಷ್ಠ ವೈಯುಕ್ತಿಕ ಮೊತ್ತವಾಗಿ 99 ರನ್​ ದಾಖಲಿಸಿ ಶತಕ ವಂಚಿತರಾದರು. ಆದರೆ ಈ ಯುವ ಬ್ಯಾಟ್ಸ್​ಮನ್​ ಆರ್​ಸಿಬಿಯ ಅನುಭವಿ ಬೌಲಿಂಗ್ ಪಡೆ ಮುಂದೆ ಒಂಟಿಯಾಗಿ ನಿಂತು 9 ಭರ್ಜರಿ ಸಿಕ್ಸರ್ ಬಾರಿಸಿರುವುದು ಅಚ್ಚರಿ ಕಾರಣವಾಗಿತ್ತು. ಆದರೆ ದುರಾದೃಷ್ಟವಶಾತ್ ಮುಂಬೈ ಇಂಡಿಯನ್ಸ್ ಸೂಪರ್ ಓಪರ್​ನಲ್ಲಿ ಸೋಲುವ ಮೂಲಕ ಇಶಾನ್ ಹೋರಾಟ ವ್ಯರ್ಥವಾಯಿತು.


ಆದರೆ ನಿಯಮಿತ ಓವರ್​ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಇಶಾನ್​ರನ್ನು ಮುಂಬೈ ನಾಯಕ ರೋಹಿತ್ ಶರ್ಮಾ ಸೂಪರ್ ಓವರ್​ನಲ್ಲಿ ಕಣಕ್ಕಿಳಿಸಿರಲಿಲ್ಲ. ಪಂದ್ಯದ ಸೋಲಿನೊಂದಿಗೆ ಇದು ಭಾರೀ ಚರ್ಚೆಗೂ ಕಾರಣವಾಗಿತ್ತು. ಈ ಬಗ್ಗೆ ಖದ್ದು ರೋಹಿತ್ ಶರ್ಮಾ ಅವರೇ ಸ್ಪಷ್ಟನೆ ನೀಡಿದ್ದಾರೆ. ಸೂಪರ್ ಓವರ್​ನಲ್ಲಿ ಇಶಾನ್​​ರನ್ನು ಏಕೆ ಬ್ಯಾಟಿಂಗ್​ಗೆ ಕಳುಹಿಸಲಿಲ್ಲ ಎಂಬುದಕ್ಕೆ ಕಾರಣ ತಿಳಿಸಿದ್ದಾರೆ.


ಪಂದ್ಯವು ಟೈ ಆದಾಗ ನಾವು ಇಶಾನ್ ಅವರನ್ನೇ ಕಣಕ್ಕಿಳಿಸಲು ಬಯಸಿದ್ದೆವು. ಆದರೆ ಯುವ ಆಟಗಾರ ತುಂಬಾ ದಣಿದಿದ್ದರು. ಹಾಗೆಯೇ ಮತ್ತೆ ಆರಾಮದಾಯಕವಾಗಿ ಬ್ಯಾಟ್ ಬೀಸಲು ಅವರು ಫ್ರೆಶ್ ಆಗಿ ಕಾಣಿಸಲಿಲ್ಲ. ಹೀಗಾಗಿ ಬಿಟ್ ಹಿಟ್ಟರ್​ ಹಾರ್ದಿಕ್ ಪಾಂಡ್ಯರನ್ನು ಕಣಕ್ಕಿಳಿಸಬೇಕಾಯಿತು ಎಂದು ರೋಹಿತ್ ತಿಳಿಸಿದ್ದಾರೆ.


ನಾವು ಸೂಪರ್ ಓವರ್​ನಲ್ಲಿ 7 ರನ್​ಗಳನ್ನು ಮಾತ್ರ ಗಳಿಸಿದೆವು. ಇದನ್ನು ಸೇವ್ ಮಾಡುವ ಪ್ರಯತ್ನವನ್ನು ಖಂಡಿತ ಮಾಡಿದ್ದೇವೆ. ಆದರೆ ಒಂದು ಅನಿರೀಕ್ಷಿತ ಬೌಂಡರಿಯಿಂದಾಗಿ ಪಂದ್ಯ ಸೋಲಬೇಕಾಯಿತು ಎಂದು ಹಿಟ್​ಮ್ಯಾನ್ ಹೇಳಿದರು. ಇದರ ಹೊರತಾಗಿ ಆರ್​ಸಿಬಿ ನೀಡಿದ್ದ 202 ರನ್​ಗಳ ಟಾರ್ಗೆಟ್​ನ್ನು ಬೆನ್ನತ್ತುತ್ತೇವೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಆದರೆ ಎಲ್ಲರ ಊಹೆಯನ್ನು ತಲೆಕೆಳಗಾಗಿಸಿ ಇಶಾನ್ ಹಾಗೂ ಪೊಲಾರ್ಡ್ ಗುರಿ ಸಮೀಪ ತಲುಪಿಸಿದ್ದರು. ನಿಯಮಿತ ಓವರ್​ನಲ್ಲಿ ನಾವು ಮಾಡಿದ ಕಂಬ್ಯಾಕ್ ಮಾತ್ರ ಅದ್ಭುತವಾಗಿತ್ತು ಎಂದು ರೋಹಿತ್ ಶರ್ಮಾ ತಿಳಿಸಿದರು.




99 ರನ್​ಗಳ ಭರ್ಜರಿ ಬ್ಯಾಟಿಂಗ್​ನೊಂದಿಗೆ ಇಶಾನ್ ಕಿಶನ್ ಮುಂಬೈ ಪಾಳಯದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಸೌರಭ್ ತಿವಾರಿ ಸ್ಥಾನವು ಯುವ ದಾಂಡಿಗ ಒಲಿಯುವುದಂತು ಪಕ್ಕಾ. ಹೀಗಾಗಿ ಮುಂಬರುವ ಪಂದ್ಯಗಳಲ್ಲೂ ಪುಟ್ಟ ಪಟಾಕಿಯಿಂದ ದೊಡ್ಡ ಸದ್ದಂತು ನಿರೀಕ್ಷಿಸಬಹುದು.
POINTS TABLE:



SCHEDULE TIME TABLE:



ORANGE CAP:



PURPLE CAP:



RESULT DATA:



MOST SIXES:



KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್..!

First published: