ಈ ಸಲವಾದರೂ ಆರ್ಸಿಬಿ ಕಪ್ ಗೆಲ್ಲಲಿ ಎಂಬ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ. ಪ್ಲೇ ಆಫ್ ಹಂತಕ್ಕೆ ಲಗ್ಗೆಯಿಟ್ಟರೂ ಎಲಿಮಿನೀಟರ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ 13ನೇ ಆವೃತ್ತಿಯ ಐಪಿಎಲ್ನಿಂದ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇಷ್ಟಾದರೂ ಅಭಿಮಾನಿಗಳ ಅಭಿಮಾನ ಕಡಿಮೆಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಲ ಕಪ್ ನಮ್ದೆ ಘೋಷವಾಕ್ಯ ಟ್ರೆಂಡ್ ಆಗಿದೆ. ಈ ಮೂಲಕ ಆರ್ಸಿಬಿಗೆ ಬ್ಯಾಟಿಂಗ್-ಬೌಲಿಂಗ್ನಲ್ಲಿ ಶಕ್ತಿ ಇಲ್ಲದಿದ್ದರೂ ಅಭಿಮಾನಿಗಳ ಶಕ್ತಿ ಎಂದೆಂದಿಗೂ ಇದೆ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.
ಆರ್ಸಿಬಿ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೆ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಕ್ರಿಕೆಟಿಗರು ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ಇತ್ತ ಆರ್ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟೂರ್ನಿಯ ಕೆಲ ಅದ್ಭುತ ಕ್ಷಣಗಳ ವಿಡಿಯೋವನ್ನು ಹಂಚಿಕೊಂಡಿದ್ದು ಕಣ್ಣಲ್ಲಿ ನೀರು ತರಿಸುವಂತಿದೆ.
ಯುಎಇಯಿಂದ ತಾಯ್ನಾಡಿಗೆ ತೆರಳುವ ಮುನ್ನ ಇಡೀ ಆರ್ಸಿಬಿ ತಂಡ ಡ್ರೆಸ್ಸಿಂಗ್ ರೂಮ್ನಲ್ಲಿ ಸಮಾಲೋಚನೆ ನಡೆಸಿ ಒಬ್ಬರಿಗೊಬ್ಬರು ತಬ್ಬಿಕೊಂಡು ಬೀಳ್ಕೊಟ್ಟರು.
Devdutt Padikkal: ದೇವದತ್ ಪಡಿಕ್ಕಲ್ ಆ ಒಂದು ಕ್ಯಾಚ್ ಹಿಡಿದಿದ್ದರೆ ಪಂದ್ಯದ ಗತಿಯೇ ಬದಲಾಗುತ್ತಿತ್ತು….
A memorable campaign came to a disappointing end, but the RCB players savour the final moments together in the dressing room before they fly out of Dubai.
PS: After about 80 consecutive days, this is our final 9 AM video for the #IPL#PlayBold #Dream11IPL #WeAreChallengers pic.twitter.com/BfZ5FrHWPH
— Royal Challengers Bangalore (@RCBTweets) November 7, 2020
Together through the highs and lows. It's been a great journey for us as a unit. Yes things did not go our way but proud of the whole group. Thank you to all our fans for your support. Your love makes us stronger. See you all soon. #PlayBold @RCBTweets ❤️ pic.twitter.com/jIULXT0DLz
— Virat Kohli (@imVkohli) November 6, 2020
SRH vs RCB: ಹೈದರಾಬಾದ್-ಆರ್ಸಿಬಿ ನಡುವಣ ಪಂದ್ಯದ ಕೆಲವು ರೋಚಕ ಕ್ಷಣಗಳು ಇಲ್ಲಿವೆ
We made one hell of a game out of it. @RCBTweets
Will we ever win a title? 😭 #IPL2020 #SRHvRCB
— Alexandra Hartley (@AlexHartley93) November 6, 2020
ಸುಲಭ ಟಾರ್ಗೆಟ್ ಬೆನ್ನಟ್ಟಿದ ಎಸ್ಆರ್ಹೆಚ್ ಕೂಡ ಆರಂಭದಲ್ಲಿ ಮುಗ್ಗರಿಸಿತಾದರೂ ನಂತರದಲ್ಲಿ ಕ್ರೀಸ್ ಕಚ್ಚಿ ಆಡಿದ ಕೇನ್ ವಿಲಿಯಮ್ಸನ್ ಭರ್ಜರಿ ಅರ್ಧಶತಕ ಸಿಡಿಸಿ ಜೇಸನ್ ಹೋಲ್ಡರ್ ಜೊತೆಗೂಡಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಈ ಮೂಲಕ ಹೈದರಾಬಾದ್ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಆರ್ಸಿಬಿ ಕಪ್ ಗೆಲ್ಲುವ ಕನಸು ನುಚ್ಚುನೂರಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ