• ಹೋಂ
  • »
  • ನ್ಯೂಸ್
  • »
  • IPL
  • »
  • Devdutt Padikkal: ದೇವದತ್​ ಪಡಿಕ್ಕಲ್​ ಆ ಒಂದು ಕ್ಯಾಚ್​ ಹಿಡಿದಿದ್ದರೆ ಪಂದ್ಯದ ಗತಿಯೇ ಬದಲಾಗುತ್ತಿತ್ತು….

Devdutt Padikkal: ದೇವದತ್​ ಪಡಿಕ್ಕಲ್​ ಆ ಒಂದು ಕ್ಯಾಚ್​ ಹಿಡಿದಿದ್ದರೆ ಪಂದ್ಯದ ಗತಿಯೇ ಬದಲಾಗುತ್ತಿತ್ತು….

ಕೇನ್ ವಿಲಿಯಮ್ಸನ್ ಅವರ ಕ್ಯಾಚ್ ಹಿಡಿಯುವಲ್ಲಿ ವಿಫಲರಾದ ಆರ್​ಸಿಬಿ ಆಟಗಾರ ದೇವದತ್ ಪಡಿಕ್ಕಲ್.

ಕೇನ್ ವಿಲಿಯಮ್ಸನ್ ಅವರ ಕ್ಯಾಚ್ ಹಿಡಿಯುವಲ್ಲಿ ವಿಫಲರಾದ ಆರ್​ಸಿಬಿ ಆಟಗಾರ ದೇವದತ್ ಪಡಿಕ್ಕಲ್.

ನಾಯಕ ವಿರಾಟ್​ ಕೊಹ್ಲಿ ಕೂಡ ಇದೇ ರೀತಿಯ ಅಭಿಪ್ರಾಯ ಹೊರ ಹಾಕಿದ್ದಾರೆ. ಒಂದೊಮ್ಮೆ ಆ ಕ್ಯಾಚ್​ ಹಿಡಿದ್ದರೆ ಪಂದ್ಯದ ಗತಿ ಬದಲಾಗುವ ಸಾಧ್ಯತೆ ಇತ್ತು ಎಂದು ಹೇಳಿಕೊಂಡಿದ್ದಾರೆ.

  • Share this:

    ಎಲಿಮಿನೇಟರ್​ ಪಂದ್ಯದಲ್ಲಿ ಹೈದರಾಬಾದ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ತಂಡ ಸೋತಿದೆ. ಈ ಮೂಲಕ ಆರ್​ಸಿಬಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅತ್ತ ಹೈದರಬಾದ್​ ಕ್ವಾಲಿಫೈಯರ್​ಗೆ ಆಯ್ಕೆ ಆಗಿದ್ದು, ಡೆಲ್ಲಿ ತಂಡವನ್ನು ಎದುರಿಸಲಿದೆ. ಬ್ಯಾಟಿಂಗ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಆರ್​ಸಿಬಿ ಬೌಲಿಂಗ್​ನಲ್ಲಿ ಮಿಂಚಿತ್ತು. ಫೀಲ್ಡಿಂಗ್​ನಲ್ಲಿ ದೇವದತ್​ ಪಡಿಕ್ಕಲ್​ ಮಾಡಿದ ಆ ಒಂದು ತಪ್ಪು ಆರ್​ಸಿಬಿ ಸೋಲಿಗೆ ಕಾರಣವಾಗಿತ್ತು.


    ಆರಂಭದಲ್ಲೇ ಹೈದರಾಬಾದ್​ ತಂಡ ಮೊಹಮದ್​ ಸಿರಾಜ್​ ಬೌಲಿಂಗ್​ಗೆ ಪ್ರಮುಖ ವಿಕೆಟ್​ ಕಳೆದುಕೊಂಡಿತ್ತು. ಈ ವೇಳೆ ಪಂದ್ಯಕಟ್ಟೋಕೆ ನಿಂತಿದ್ದು ಕೆ. ವಿಲಿಯಮ್ಸನ್​. ನಿಧಾನವಾಗಿ ಬ್ಯಾಟ್​ ಬೀಸಿದ ಅವರು ಆಗೊಂದು, ಈಗೊಂದು ಸಿಕ್ಸ್​ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು.


    2.4 ಓವರ್​ ಬಾಕಿ ಉಳಿದಿರುವಾಗ ವಿಲಿಯಮ್ಸನ್ ಬಾರಿಸಿದ ಶಾಟ್​, ಸಿಕ್ಸ್​ ಹೋಗುವುದರಲ್ಲಿತ್ತು. ಆದರೆ, ದೇವದತ್​ ಇದನ್ನು ತಡೆದಿದ್ದರು. ಬೌಂಡರಿ ಸಮೀಪ ಇದ್ದಿದ್ದರಿಂದ ಹಿಡಿದ ಬೌಲ್​ಅನ್ನು ಹೊರಗೆ ಹಾಕಿದ್ದರು. ಆದರೆ, ಈ ಬಾಲ್​ ಅವರು ಅಂದುಕೊಂಡಿದ್ದಕ್ಕಿಂತಲೂ  ದೂರ ಹೋಗಿ ಬಿದ್ದಿತ್ತು. ಹೀಗಾಗಿ, ಈ ಕ್ಯಾಚ್​ ತಪ್ಪಿ ಹೋಗಿತ್ತು. ಒಂದೊಮ್ಮೆ ಈ ಕ್ಯಾಚ್​ ಹಿಡಿದಿದ್ದರೆ ಆರ್​ಸಿಬಿ ಗೆಲುವಿನ ಲಯಕ್ಕೆ ಬರಬಹುದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.





    ನಾಯಕ ವಿರಾಟ್​ ಕೊಹ್ಲಿ ಕೂಡ ಇದೇ ರೀತಿಯ ಅಭಿಪ್ರಾಯ ಹೊರ ಹಾಕಿದ್ದಾರೆ. ಒಂದೊಮ್ಮೆ ಆ ಕ್ಯಾಚ್​ ಹಿಡಿದ್ದರೆ ಪಂದ್ಯದ ಗತಿ ಬದಲಾಗುವ ಸಾಧ್ಯತೆ ಇತ್ತು ಎಂದು ಹೇಳಿಕೊಂಡಿದ್ದಾರೆ.

    Published by:Rajesh Duggumane
    First published: