• ಹೋಂ
  • »
  • ನ್ಯೂಸ್
  • »
  • IPL
  • »
  • Andre Russel - ಅಂಡ್ರೆ ರಸೆಲ್ ಯಾಕೆ ಆರ್​ಸಿಬಿ ಬ್ಯಾಟುಗಾರನ ರನೌಟ್ ಮಾಡಲಿಲ್ಲ? ಕ್ರಿಕೆಟ್ ಪ್ರಿಯರಿಗೆ ಶಾಕ್

Andre Russel - ಅಂಡ್ರೆ ರಸೆಲ್ ಯಾಕೆ ಆರ್​ಸಿಬಿ ಬ್ಯಾಟುಗಾರನ ರನೌಟ್ ಮಾಡಲಿಲ್ಲ? ಕ್ರಿಕೆಟ್ ಪ್ರಿಯರಿಗೆ ಶಾಕ್

ಜೇಮೀಸನ್ ಅವರನ್ನ ರನೌಟ್ ಮಾಡುವ ಅವಕಾಶ ಕೈಚೆಲ್ಲಿದ ಆಂಡ್ರೆ ರಸೆಲ್

ಜೇಮೀಸನ್ ಅವರನ್ನ ರನೌಟ್ ಮಾಡುವ ಅವಕಾಶ ಕೈಚೆಲ್ಲಿದ ಆಂಡ್ರೆ ರಸೆಲ್

ಆರ್​ಸಿಬಿಯ ಇನ್ನಿಂಗ್ಸ್​ನ ಕೊನೆಯ ಓವರ್​ನಲ್ಲಿ ಬೌಲಿಂಗ್ ಮಾಡುತ್ತಿದ್ದ ಆಂಡ್ರೆ ರಸೆಲ್ ಅವರು ಕೈಲ್ ಜೇಮೀಸನ್ ಅವರನ್ನ ರನ್ ಔಟ್ ಮಾಡುವ ಅವಕಾಶ ಇದ್ದರೂ ಸುಮ್ಮನಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಮೀಮ್ಗಳಿಗೆ ಕಾರಣವಾಗಿದೆ.

  • Cricketnext
  • 2-MIN READ
  • Last Updated :
  • Share this:

ಚೆನ್ನೈ: ನಿನ್ನೆ ಆರ್​ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ಹಲವು ಘಟನೆಗಳು ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದವು. ಗ್ಲೆನ್ ಮ್ಯಾಕ್ಸ್​ವೆಲ್ ಅವರ ಪ್ರಚಂಡ ಆಟ; ಎಬಿ ಡೀವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್, ಹರ್ಷಲ್ ಪಟೇಲ್ ಅವರ ಮಾರಕ ಬೌಲಿಂಗ್ ಬೆಂಗಳೂರಿಗರಿಗೆ ಖುಷಿ ಕೊಟ್ಟರೆ, ಆಂಡ್ರೆ ರಸೆಲ್ ಅವರ ಒಂದು ವರ್ತನೆ ಎರಡೂ ತಂಡದವರಿಗೆ ಶಾಕ್ ಕೊಟ್ಟಿತು. ಬೆಂಗಳೂರಿನ ಬೃಹತ್ ಮೊತ್ತ ಚೇಸ್ ಮಾಡುವಾಗ ಕೋಲ್ಕತಾ ನೈಟ್ ರೈಡರ್ಸ್ ತಂಡದ ಕೊನೆಯ ಆಸೆಯಾಗಿದ್ದವು ರಸೆಲ್. ಆರ್​ಸಿಬಿ ಬೌಲರ್ ಯುಜವೇಂದ್ರ ಚಹಲ್ ಅವರ ಒಂದು ಓವರ್​ನಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದಿದ್ದ ರಸೆಲ್ ಕೆಲ ಹೊತ್ತು ಕೆಕೆಆರ್ ಗೆಲುವಿನ ಆಶಾಕಿರಣ ಎನಿಸಿದ್ದರು. ಆದರೆ, ಅಂತಿಮವಾಗಿ ಅವರಿಂದ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಾಗಲಿಲ್ಲ. ಅಂಥ ಘಳಿಗೆಯಲ್ಲೂ ಅವರು ಒಂದು ರನ್ ಓಡಿ ಹರ್ಭಜನ್ ಸಿಂಗ್​ಗೆ ಬ್ಯಾಟಿಂಗ್ ಮಾಡುವ ಅವಕಾಶ ಕೊಡುವ ಆಸಕ್ತಿ ತೋರಲಿಲ್ಲ. ಅದು ಒಂದು ಅಚ್ಚರಿ ಮೂಡಿಸಿದರೆ, ಇನ್ನೂ ಹೆಚ್ಚಿನ ಅಚ್ಚರಿ ಕೊಟ್ಟಿದ್ದು ಮೊದಲಾರ್ಧದಲ್ಲಿ ಅವರು ಬೌಲಿಂಗ್ ಮಾಡುವಾಗ.


ಆರ್​ಸಿಬಿ ಬ್ಯಾಟಿಂಗ್​ನ ಕೊನೆಯ ಓವರ್ ಬೌಲ್ ಮಾಡಿದ್ದ ರಸೆಲ್. ಬಿಡುಬೀಸಾಗಿ ಬ್ಯಾಟಿಂಗ್ ಮಾಡುತ್ತಿದ್ದ ಎಬಿ ಡೀವಿಲಿಯರ್ಸ್ ಅವರು ಆ ಓವರ್​ನ ಮೊದಲ ನಾಲ್ಕು ಎಸೆತಗಳಿಂದ 17 ರನ್ ಚಚ್ಚಿದ್ದರು. ಐದನೇ ಎಸೆತದಲ್ಲಿ ರಸೆಲ್ ಪರ್ಫೆಕ್ಟ್ ಯಾರ್ಕರ್ ಹಾಕಿದರು. ಆ ಚೆಂಡನ್ನು ಎಬಿಡಿ ಹಾಗೂಹೀಗೂ ಟಚ್ ಮಾಡಿ ರಸೆಲ್​ಗೆ ಮರಳಿಸಿದ್ದರು. ಈ ವೇಳೆ, ಇನ್ನೊಂದು ಬದಿಯಲ್ಲಿದ್ದ ಕೈಲ್ ಜೇಮೀಸನ್ ಅವರು ಪಿಚ್​ನ ಅರ್ಧಭಾಗಕ್ಕೆ ಓಡಿಬಂದಿದ್ದರು. ರಸೆಲ್ ಬಹಳ ಸುಲಭವಾಗಿ ಜೇಮೀಸನ್ ಅವರನ್ನ ರನ್ ಔಟ್ ಮಾಡಬಹುದಿತ್ತು. ಎಬಿಡಿ ಬ್ಯಾಟಿಂಗ್ ಚೆಂಡು ಸೀದಾ ತನ್ನ ಕೈಗೆ ಬಂದಿದ್ದರೂ, ಬ್ಯಾಟ್ಸ್​ಮನ್ ಮಾರು ದೂರ ಇದ್ದರೂ ಆಂಡ್ರೆ ರಸೆಲ್ ಮಾತ್ರ ಜೇಮೀಸನ್ ಅವರನ್ನ ಪೆವಿಲಿಯನ್​ಗೆ ಮರಳಿಸಲು ಆಸಕ್ತಿ ತೋರಲಿಲ್ಲ. ಇದು ಜೇಮೀಸನ್​ಗೂ ಶಾಕ್ ಕೊಟ್ಟಿತ್ತು. ಬ್ಯಾಟ್ ಮಾಡುತ್ತಿದ್ದ ಎಬಿಡಿಗೂ ಅಚ್ಚರಿ ಮೂಡಿಸಿತ್ತು. ಪೆವಿಲಿಯನ್​ನಲ್ಲಿ ಕೂತು ಪಂದ್ಯ ನೋಡುತ್ತಿದ್ದ ಆರ್​ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯೂ ಬೆರಗಾಗಿ ಶಾಕ್​ನಲ್ಲಿದ್ದರು.


ಇದನ್ನೂ ಓದಿ: RCB vs KKR: ಕೊಹ್ಲಿ ಪಡೆಯ ಭರ್ಜರಿ ಪ್ರದರ್ಶನ: ಆರ್​ಸಿಬಿಗೆ ಹ್ಯಾಟ್ರಿಕ್ ಗೆಲುವು



ಆಂಡ್ರೆ ರಸೆಲ್ ಬಹಳ ಸಿಂಪಲ್ಲಾಗಿ ನಡೆದುಹೋಗೇ ಬೇಲ್ ಉರುಳಿಸಿದ್ದರೆ ಜೇಮೀಸನ್ ಔಟ್ ಆಗಿಬಿಡುತ್ತಿದ್ದರು. ಆದರೂ ರಸೆಲ್ ಯಾಕೆ ಆ ಕೆಲಸ ಮಾಡಲಿಲ್ಲ? ಇದಕ್ಕೆ ಒಂದೇ ಉತ್ತರ, ಪ್ರಾಯಶಃ ರಸೆಲ್ ಅವರು ಬಹಳ ಪ್ರಾಕ್ಟಿಕಲ್ ಆಗಿ ಆಲೋಚಿಸಿದ್ದಿರಬಹುದು. ಆಗ ಜೇಮೀಸನ್ ಅವರನ್ನ ರನೌಟ್ ಮಾಡಿದ್ದರೆ ಆರ್​ಸಿಬಿ ಸ್ಕೋರ್ ಬೋರ್ಡ್ ಬದಲಿಸಲು ಸಾಧ್ಯವಿರಲಿಲ್ಲ. ಯಾಕೆಂದರೆ ಕೊನೆಯ ಚೆಂಡನ್ನು ಎದುರಿಸುವುದು ಎಬಿ ಡೀವಿಲಿಯರ್ಸ್ ಅವರೆಯೇ ಎಂಬುದು ನಿಶ್ಚಿತವಾಗಿತ್ತು. ಹೀಗಾಗಿಯೇ ಜೇಮಿಸನ್ ಅವರನ್ನ ರನೌಟ್ ಮಾಡಿ ಸಮಯ ವ್ಯರ್ಥ ಮಾಡುವ ಇರಾದೆ ರಸೆಲ್ ಅವರಿಗೆ ಇರಲಿಲ್ಲ.







ಇದೇನೇ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ ಆಂಡ್ರೆ ರಸೆಲ್ ಬಗ್ಗೆ ಥರಹೇವಾರಿ ಮೀಮ್​ಗಳು ನಡೆದಿವೆ. ರಸೆಲ್ ಅವರು ನಿದ್ರಾಮಂಪರಿನಲ್ಲಿದ್ದರು. ಅವರಿಗೆ ವಿಶ್ರಾಂತಿಯ ಅಗತ್ಯ ಇದೆ ಎಂದು ಕೆಲವರು ಲೇವಡಿ ಮಾಡಿದ್ದರು.

top videos


    ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ನಿನ್ನೆ ನಡೆದ ಆ ಪಂದ್ಯದಲ್ಲಿ ಆರ್​ಸಿಬಿ ತಂಡ 38 ರನ್​ಗಳಿಂದ ಜಯಭೇರಿ ಭಾರಿಸಿತು. ಬೆಂಗಳೂರು ಗಳಿಸಿದ 204 ರನ್​ಗಳ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಕೆಕೆಆರ್ 166 ರನ್ ಮಾತ್ರ ಗಳಿಸಲು ಶಕ್ಯವಾಯಿತು. ಆರ್​ಸಿಬಿಗೆ ಇದು ಹ್ಯಾಟ್ರಿಕ್ ಗೆಲುವಾದರೆ, ಕೆಕೆಆರ್​ಗೆ ಇದು ಮೂರು ಪಂದ್ಯಗಳಲ್ಲಿ ಎರಡನೇ ಸೋಲಾಗಿದೆ.

    First published: