ಹಾವೇರಿ: ಅತ್ತ ಇತ್ತ ಶ್ವೇತ ಶಿಲೆಯ ಮಹಾನ್ ಪುರುಷರ ವಿಗ್ರಹ. ಮಧ್ಯೆ ಆಶೀರ್ವದಿಸೋ ಭಂಗಿಯಲ್ಲಿ ಕಾಣೋ ನಂದಿ. ಇದು ನಾಡಿನ ಸೌಹಾರ್ದತೆಯ (Communal Harmony) ಪ್ರತೀಕ, ಭಾವೈಕ್ಯತೆಯ ತಾಣ. ಹಾಗಿದ್ರೆ ಯಾರಿವರು? ಈ ಕ್ಷೇತ್ರ ಇರೋದಾದ್ರೂ ಎಲ್ಲಿ ಅಂತೀರ? ಈ ಸ್ಟೋರಿ ನೋಡಿ.
ಗುರು ಶಿಷ್ಯರ ಭಾವೈಕ್ಯತೆ
ಅಂಗುಷ್ಟವಿಲ್ಲದ ಪಾದುಕೆಗಳು, ಏಕತಂತಿಯ ತಂಬೂರಿ, ಬಾಗಿದ ಬೆತ್ತದ ನಡುವೆ ಇರುವ ಇಬ್ಬರು ಮಹಾ ಪುರುಷರು. ಇದು ಸಂತ ಶಿಶುನಾಳ ಶರೀಫರ ಜನ್ಮಸ್ಥಳ ಹಾವೇರಿ ಜಿಲ್ಲೆಯ ಶಿಗ್ಗಾವ್ನಲ್ಲಿ ಕಂಡು ಬರುವ ತಾಣ. ಇಲ್ಲಿ ಇಂದಿಗೂ ನಾಡಿಗೆ ಭಾವೈಕ್ಯತೆ ಸಾರಿದ ಸಂತ ಶಿಶುನಾಳ ಶರೀಫರ ಹಾಗೂ ಅವರ ಗುರು ಗೋವಿಂದ ಭಟ್ಟರ ಗದ್ದುಗೆಯನ್ನ ಜೊತೆಯಾಗಿ ಕಾಣಬಹುದಾಗಿದೆ.
ಇದನ್ನೂ ಓದಿ: Dog Blood Donation: ಜಿಮ್ಮಿಗೆ ರಕ್ತ ನೀಡಿದ ಜಿಪ್ಪಿ! ಇದು ಹೃದಯಸ್ಪರ್ಶಿ ನಾಯಿ ಕಥೆ!
ಭಾವೈಕ್ಯತೆಗೆ ಮಾದರಿ
ಇಲ್ಲಿ ಒಂದು ಕಡೆ ಹಣ್ಣುಕಾಯಿ ಸೇವೆ ನಡೆಯುತ್ತಿದ್ದರೆ, ಇನ್ನೊಂದೆಡೆ ಸಕ್ಕರೆ ಸೇವೆ ನಡೆಯುತ್ತೆ. ಹೀಗೆ ಗುರು ಶಿಷ್ಯರ ಸಂಬಂಧ ಸಾರುವ ಜೊತೆಗೆ, ಭಾವೈಕ್ಯತೆಯನ್ನೂ ಪ್ರತಿಪಾದಿಸುತ್ತಿದೆ.
ಇದನ್ನೂ ಓದಿ: Haveri: 1 ಕೋಟಿ 38 ಲಕ್ಷ ಬಹುಮಾನಕ್ಕೆ 800 ಪೈಲ್ವಾನರ ರಣರೋಚಕ ಕಾದಾಟ!
ಹೀಗಾಗಿ ಹಿಂದೂ ಮುಸ್ಲಿಮರು ಈ ಕ್ಷೇತ್ರಕ್ಕೆ ಬಂದು ಮನಶ್ಶಾಂತಿ ಪಡೆಯುತ್ತಾರೆ. ತಮ್ಮ ಸೇವೆ ಅರ್ಪಿಸುವ ಮೂಲಕ ಪುನೀತರಾಗ್ತಾರೆ. ಹೀಗೆ ಹಿಂದೂ ಮುಸ್ಲಿಂ ಭಾವೈಕ್ಯತೆಯ ಈ ತಾಣ ನಿಜಕ್ಕೂ ನಾಡಿಗೆ ಮಾದರಿಯೆನಿಸಿಕೊಂಡಿದೆ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ