• ಹೋಂ
  • »
  • ನ್ಯೂಸ್
  • »
  • ಗದಗ
  • »
  • Siddaramaiah Fan: ಸಿದ್ದರಾಮಯ್ಯ ಸಿಎಂ ಆಗ್ಲಿ ಎಂದು ಅಭಿಮಾನಿಯ ದೀಡ್ ನಮಸ್ಕಾರ!

Siddaramaiah Fan: ಸಿದ್ದರಾಮಯ್ಯ ಸಿಎಂ ಆಗ್ಲಿ ಎಂದು ಅಭಿಮಾನಿಯ ದೀಡ್ ನಮಸ್ಕಾರ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

1 ಕ್ವಿಂಟಲ್ ಭಾರದ ಅಕ್ಕಿ ಮೂಟ್ಟೆ ಹೊತ್ತು ಸುಮಾರು ಅರ್ಧ ಕಿಲೋಮೀಟರ್​ಗೂ ದೂರ ಹೆಚ್ಚು ದೀಡ್ ನಮಸ್ಕಾರ ಹಾಕಿದ್ದಾರೆ ಹನುಮಂತಪ್ಪ ಜಟ್ಟಿ.

  • News18 Kannada
  • 3-MIN READ
  • Last Updated :
  • Gadag, India
  • Share this:

ಗದಗ: ಮೈಮೇಲೆ ಚೀಲ ಹೊತ್ತಿರೋ ಆಸಾಮಿ, ಭಾರದ ಚೀಲ ಹೊತ್ತೇ ಮುಂದೆ ಮುಂದೆ ನಡೆಯುತ್ತಿರುವ ಈ ವ್ಯಕ್ತಿ ಸಿದ್ದರಾಮಯ್ಯನವ್ರ ಅಭಿಮಾನಿ! ಎಲೆಕ್ಷನ್ ಹತ್ತರಿ ಬರ್ತಿದೆ, ನಮ್ ಸಿದ್ಧರಾಮಯ್ಯ (Siddaramaiah) ಸಾಹೇಬ್ರೇ ಸಿಎಂ ಆಗ್ಬೇಕು ಎಂದು ಈ ಅಭಿಮಾನಿ (Siddaramaiah Fan) ಮಾಡಿದ ಸಾಹಸವಿದು!




ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಹನುಮಂತಪ್ಪ ಜಟ್ಟಿ ಎಂಬುವವರೇ ಮಾಜಿ ಸಿಎಂ ಸಿದ್ದರಾಮಯ್ಯನವರು ಸಿಎಂ ಆಗ್ಬೇಕು ಎಂದು ಸಾಹಸ ಮಾಡಿದ ವ್ಯಕ್ತಿ.




1 ಕ್ವಿಂಟಲ್ ಭಾರದ ಅಕ್ಕಿ ಮೂಟೆ ಹೊತ್ತ ಅಭಿಮಾನಿ
1 ಕ್ವಿಂಟಲ್ ಭಾರದ ಅಕ್ಕಿ ಮೂಟ್ಟೆ ಹೊತ್ತು ಸುಮಾರು ಅರ್ಧ ಕಿಲೋಮೀಟರ್​ಗೂ ದೂರ ಹೆಚ್ಚು ದೀಡ್ ನಮಸ್ಕಾರ ಹಾಕಿದ್ದಾರೆ ಹನುಮಂತಪ್ಪ ಜಟ್ಟಿ. ಲಕ್ಕುಂಡಿಯ ವಿರುಪಾಕ್ಷೇಶ್ವರ ದೇವಸ್ಥಾನದಿಂದ ಮಾರುತೇಶ್ವರ ದೇವಸ್ಥಾನದವರೆಗೆ ದೀಡ್ ನಮಸ್ಕಾರ ಹಾಕುವ ಮೂಲಕ ಇಡೀ ಊರವರ ಗಮನ ಸೆಳೆದಿದ್ದಾರೆ ಇವರು.




ಹರಕೆ ಫಲಿಸುತ್ತಾ?
ಹೀಗೆ ದೀಡ್ ನಮಸ್ಕಾರ ಹಾಕುವ ಮೂಲಕ ಸಿದ್ದರಾಮಯ್ಯ ಸಿಎಂ ಆಗಬೇಕು, ನರಗುಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್ ಯಾವಗಲ್ ಶಾಸಕರಾಗಬೇಕೆಂದು ಹರಕೆ ಹೊತ್ತಿದ್ದಾರೆ.


top videos



    ಜಟ್ಟಿ ಹನುಮಂತಪ್ಪ ಅವರ ದೀಡ್ ನಮಸ್ಕಾರ ಹರಕೆ ಎಷ್ಟರಮಟ್ಟಿಗೆ ಫಲಿಸುತ್ತೆ ಅನ್ನೋದಕ್ಕೆ ಕಾದು ನೋಡಬೇಕಷ್ಟೇ!

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು