• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಏಕರೂಪ ನಾಗರಿಕ ಸಂಹಿತೆ ಎಂದರೇನು? ಮೋದಿ ಸರ್ಕಾರಕ್ಕೆ ಬಿಗ್ ಚಾಲೆಂಜ್ ಆಗಿದ್ದು ಹೇಗೆ?

Explained: ಏಕರೂಪ ನಾಗರಿಕ ಸಂಹಿತೆ ಎಂದರೇನು? ಮೋದಿ ಸರ್ಕಾರಕ್ಕೆ ಬಿಗ್ ಚಾಲೆಂಜ್ ಆಗಿದ್ದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದು ಕೇಂದ್ರ ಸರ್ಕಾರಗಳಿಗೆ ದೊಡ್ಡ ಸವಾಲಾಗಿದೆ. ಈ ಕಾನೂನನ್ನು ಜಾರಿಗೊಳಿಸುವ ಅಪಾಯವನ್ನು ಯಾರೂ ತೆಗೆದುಕೊಂಡಿಲ್ಲ. ಹಾಗಾದರೆ ಈ ಕಾನೂನು ಏನು, ಅದರ ಬಗ್ಗೆ ಏಕೆ ಚರ್ಚೆ ನಡೆಯುತ್ತಿದೆ ಮತ್ತು ಅದನ್ನು ಅನುಷ್ಠಾನಗೊಳಿಸುವಲ್ಲಿನ ಸವಾಲುಗಳೇನು ಇಲ್ಲಿದೆ ವಿವರ...

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

    ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರ ಹೇಳಿಕೆಯು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ (Uniform Civil Code) ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಭಾರತೀಯ ಜನತಾ ಪಕ್ಷ (BJP) ಸರ್ಕಾರಗಳು ಏಕರೂಪ ನಾಗರಿಕ ಸಂಹಿತೆಯ ಮೇಲೆ ಕೆಲಸ ಮಾಡುತ್ತಿವೆ ಎಂದು ಅಮಿತ್ ಶಾ ಹೇಳಿದ್ದಾರೆ. ಕೊಲ್ಲಾಪುರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೋದಿ ಸರ್ಕಾರ ತ್ರಿವಳಿ ತಲಾಖ್ (Triple Talaq) ಅನ್ನು ಕೊನೆಗೊಳಿಸಿ ಮುಸ್ಲಿಂ ಮಹಿಳೆಯರಿಗೆ ಹಕ್ಕುಗಳನ್ನು ನೀಡಿದೆ. ಆರ್ಟಿಕಲ್ 370 ಮತ್ತು 35 ಎ ಅನ್ನು 5 ಆಗಸ್ಟ್ 2019 ರಂದು ಕಿತ್ತುಹಾಕಲಾಯಿತು. ಎರಡು ಗುರಿ, ಇಬ್ಬರು ನಾಯಕರು, ಎರಡು ಕಾನೂನುಗಳು ಒಂದು ದೇಶದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಈಗ ಕೇಂದ್ರ ಸರ್ಕಾರ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಕೆಲಸ ಮಾಡಲಿದೆ ಎಂದು ಅಮಿತ್ ಶಾ ಸ್ಪಷ್ಟವಾಗಿ ಸೂಚಿಸಿದ್ದಾರೆ.


    ಭಾರತೀಯ ಜನತಾ ಪಕ್ಷವು ಒಂದು ದೇಶದಲ್ಲಿ ಎರಡು ಗುರಿ, ಇಬ್ಬರ ನಾಯಕತ್ವ, ಎರಡು ಕಾನೂನುಗಳ ವಿರುದ್ಧ ಯಾವಾಗಲೂ ಧ್ವನಿಯೆತ್ತಿದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು ಎಂದು ಬಲಪಂಥೀಯ ಗುಂಪುಗಳು ಯಾವಾಗಲೂ ಒತ್ತಾಯಿಸುತ್ತಿವೆ. ಜನರು ತಮ್ಮ ಧಾರ್ಮಿಕ ಕಾನೂನುಗಳನ್ನು ಬಿಟ್ಟುಕೊಡಲು ಬಯಸುವುದಿಲ್ಲ, ಅದಕ್ಕಾಗಿಯೇ ಯಾವುದೇ ಸರ್ಕಾರವು ಅದನ್ನು ಜಾರಿಗೆ ತರಲು ಧೈರ್ಯ ಮಾಡಿಲ್ಲ. ಇದು ಬಿಜೆಪಿ ಸರ್ಕಾರದ ಪ್ರಮುಖ ಅಜೆಂಡಾಗಳಲ್ಲಿ ಒಂದಾಗುತ್ತಿದೆ. ಈಗ ಆರ್ಟಿಕಲ್ 370, ತ್ರಿವಳಿ ತಲಾಖ್ ಮತ್ತು ರಾಮಮಂದಿರದಂತೆ ಇದು ಕೂಡ ಬಿಜೆಪಿ ಸರ್ಕಾರದ ಆದ್ಯತೆಯಾಗುತ್ತಿದೆ. ಈ ಕಾನೂನು ಏನು, ಅದರ ಬಗ್ಗೆ ಏಕೆ ಚರ್ಚೆ ನಡೆಯುತ್ತಿದೆ ಮತ್ತು ಅದನ್ನು ಅನುಷ್ಠಾನಗೊಳಿಸುವಲ್ಲಿನ ಸವಾಲುಗಳೇನು ಇಲ್ಲಿದೆ ವಿವರ


    ಇದನ್ನೂ ಓದಿ: Govt Job for Law Graduates: ಕಾನೂನು ಪದವಿ ಪಡೆದವರಿಗೂ ಇದೆ ಭರ್ಜರಿ ಸರ್ಕಾರಿ ಕೆಲಸಗಳು


    ಏಕರೂಪ ನಾಗರಿಕ ಸಂಹಿತೆ ಎಂದರೇನು?


    ಭಾರತೀಯ ಸಂವಿಧಾನದ ಭಾಗ 4 'ರಾಜ್ಯ ನೀತಿಯ ನಿರ್ದೇಶನ ತತ್ವಗಳನ್ನು' ಒಳಗೊಂಡಿದೆ. ಈ ಅಂಶಗಳು ರಾಜ್ಯಗಳಿಗೆ ನಿರ್ದೇಶನವನ್ನು ಮಾತ್ರ ನೀಡುತ್ತವೆ, ಅವುಗಳನ್ನು ಯಾವುದೇ ನ್ಯಾಯಾಲಯದಲ್ಲಿ ಜಾರಿಗೊಳಿಸಲಾಗುವುದಿಲ್ಲ. ರಾಜ್ಯ ನೀತಿಯ ಡೈರೆಕ್ಟಿವ್ ಪ್ರಿನ್ಸಿಪಲ್ಸ್ ರಾಜ್ಯಗಳಿಗೆ ಸಲಹೆಯಂತೆ. ಇದರ ಪ್ರಕಾರ, 'ಕಾನೂನು ರಚಿಸುವಾಗ, ನಿರ್ದೇಶನ ತತ್ವಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಲಾಗಿದೆ. ಸಂವಿಧಾನದ 44 ನೇ ವಿಧಿಯು ನಾಗರಿಕರಿಗೆ ಏಕರೂಪದ ನಾಗರಿಕ ಸಂಹಿತೆ ಇರಬೇಕು ಎಂದು ಹೇಳುತ್ತದೆ.


    BJP government will implement Uniform Civil Code Amit Shah pvn
    ಕೇಂದ್ರ ಗೃಹ ಸಚಿವ ಅಮಿತ್ ಶಾ


    'ರಾಜ್ಯಗಳ, ಭಾರತದ ಇಡೀ ಭೂಪ್ರದೇಶದಾದ್ಯಂತ ಜನರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ರಾಜ್ಯವು ಪ್ರಯತ್ನಿಸುತ್ತದೆ' ಎಂದು ಆರ್ಟಿಕಲ್ 44 ಹೇಳುತ್ತದೆ.


    ಆರ್ಟಿಕಲ್​ ವಿವರವನ್ನು ಗಮನಿಸಿದರೆ, ಇದು ಕೇವಲ ಒಂದು ಸಲಹೆ ಎಂದು ಸ್ಪಷ್ಟವಾಗುತ್ತದೆ. ಧಾರ್ಮಿಕ ಸಂಘಟನೆಗಳು ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸುತ್ತವೆ. ಈ ಕಾನೂನನ್ನು ಜಾರಿಗೆ ತಂದರೆ ತಮ್ಮ ವೈಯಕ್ತಿಕ ಕಾನೂನುಗಳು ಅಪಾಯಕ್ಕೆ ಸಿಲುಕುತ್ತವೆ ಎಂಬುದು ಧಾರ್ಮಿಕ ಸಂಘಟನೆಗಳ ಅಭಿಪ್ರಾಯ. ಹೀಗಾಗಿ ಇಸ್ಲಾಮಿಕ್ ಸಂಘಟನೆಗಳು ಈ ಕಾನೂನನ್ನು ಹೆಚ್ಚು ವಿರೋಧಿಸುತ್ತವೆ.


    ಇದನ್ನೂ ಓದಿ: Love Jihad Law: ರಾಜ್ಯದಲ್ಲಿ ಲವ್ ಜಿಹಾದ್ ತಡೆಗೆ ವಿಶೇಷ ಪೊಲೀಸ್ ದಳ: ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ


    ಏಕರೂಪ ಸಂಹಿತೆಯನ್ನು ಧಾರ್ಮಿಕ ಸಂಘಟನೆಗಳು ಏಕೆ ವಿರೋಧಿಸುತ್ತವೆ?


    ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ಎಲ್ಲಾ ಧರ್ಮದವರೂ ತಮ್ಮ ವೈಯಕ್ತಿಕ ಕಾನೂನನ್ನು ಒಪ್ಪಿಸಬೇಕಾಗುತ್ತದೆ ಎಂದು ಸಾಂವಿಧಾನಿಕ ವಿಷಯಗಳ ಮೇಲೆ ನಿಗಾ ಇಡುವ ವಕೀಲ ಅನುರಾಗ್ ಹೇಳುತ್ತಾರೆ. ಇದೀಗ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಸಮುದಾಯಗಳಿಗೆ ಬೇರೆ ಬೇರೆ ನಿಯಮಗಳಿವೆ.


    ಸಿದ್ಧಾರ್ಥನಗರ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಅಧ್ಯಯನ ಮಾಡುತ್ತಿರುವ ವಿದ್ವಾಂಸ ಮೃತ್ಯುಂಜಯ್ ಶುಕ್ಲಾ, ಮುಸ್ಲಿಮರು ಷರಿಯತ್ ಕಾನೂನುಗಳನ್ನು ಅನುಸರಿಸುತ್ತಾರೆ ಎಂದು ಹೇಳುತ್ತಾರೆ. ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅಪ್ಲಿಕೇಶನ್ ಆಕ್ಟ್, 1937 ಅವರ ವೈಯಕ್ತಿಕ ಕಾನೂನು, ಇದು ಹೆಚ್ಚಾಗಿ ಕುರಾನ್ ಮತ್ತು ಹದೀಸ್ ಅನ್ನು ಆಧರಿಸಿದೆ. ಇಸ್ಲಾಮಿಕ್ ಸಂಘಟನೆಗಳು ತಮ್ಮ ಧಾರ್ಮಿಕ ಕಾನೂನುಗಳಲ್ಲಿ ಯಾವುದೇ ರೀತಿಯ ಕಾನೂನು ಹಸ್ತಕ್ಷೇಪವನ್ನು ಸ್ವೀಕರಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಇದೇ ಕಾರಣದಿಂದ ಅವರು ಏಕರೂಪ ಸಂಹಿತೆಯನ್ನು ನಿರಂತರವಾಗಿ ವಿರೋಧಿಸುತ್ತಾರೆ ಎಂದಿದ್ದಾರೆ.


    ಸುಪ್ರೀಂ ಕೋರ್ಟ್ ವಕೀಲ ವಿಶಾಲ್ ಅರುಣ್ ಮಿಶ್ರಾ ಅವರು ಮುಸ್ಲಿಂ ವಿವಾಹ ವಿಸರ್ಜನಾ ಕಾಯಿದೆ, 1939 ರ ಪ್ರಕಾರ ಮುಸ್ಲಿಂ ಪುರುಷನಿಗೆ ಮೊದಲ ಹೆಂಡತಿಯ ಒಪ್ಪಿಗೆಯಿಲ್ಲದೆ 4 ಬಾರಿ ಮದುವೆಯಾಗಲು ಅವಕಾಶವಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ, ಇತರ ಧರ್ಮಗಳಂತೆ ಬಹುಪತ್ನಿತ್ವವನ್ನು ಆಚರಿಸುವ ಮುಸ್ಲಿಂ ಪುರುಷರಿಗೂ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬಹುದು.


    ಇದನ್ನೂ ಓದಿ: Weird laws: ಹೆಂಡತಿಯ ಹುಟ್ಟುಹಬ್ಬ ಮರೆತರೆ ಗಂಡನಿಗೆ ಐದು ವರ್ಷ ಜೈಲು ಶಿಕ್ಷೆಯಂತೆ! ಅಬ್ಬಾ, ಎಲ್ಲಿ ಈ ಕಾನೂನು?


    ಇನ್ನು ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಆಪ್​ ನಾಯಕ, ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ 'ಬಿಜೆಪಿ ಉದ್ದೇಶ ಕೆಟ್ಟದು, ಚುನಾವಣೆ ನಂತರ ಸಮಿತಿ ಮನೆಗೆ ಹೋಗಲಿದೆ' ಎಂದು ಹೇಳಿದ್ದಾರೆ.


    ಸಿದ್ಧಾರ್ಥನಗರ ವಕೀಲರ ಸಂಘದ ಸದಸ್ಯ, ವಕೀಲ ಆನಂದ್ ಮಿಶ್ರಾ, ‘‘ತ್ರಿವಳಿ ತಲಾಖ್, ಹಲಾಲಾ ಮತ್ತು ಬಹುಪತ್ನಿತ್ವದಂತಹ ಅನಿಷ್ಟ ಪದ್ಧತಿಗಳ ಬಗ್ಗೆ ಸರಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಷರಿಯಾ ಕಾನೂನು ಅವುಗಳನ್ನು ಅನುಮತಿಸುತ್ತದೆ, ಆದರೆ ಈ ಕಾನೂನುಗಳು ಮಾನವ ಹಕ್ಕುಗಳ ದೃಷ್ಟಿಕೋನದಿಂದ ಕೂಡ ತಪ್ಪಾಗಿದೆ. ಅವುಗಳನ್ನು ಕೂಡಲೇ ರದ್ದುಪಡಿಸಬೇಕು. ದೇಶದಲ್ಲಿರುವ ಎಲ್ಲಾ ತಾರತಮ್ಯ ಉಂಟು ಮಾಡುವ ಕಾನೂನುಗಳನ್ನು ರದ್ದುಗೊಳಿಸುವ ಅಗತ್ಯವಿದೆ. ಕೇಂದ್ರ ಸರ್ಕಾರ ಈಗ ತ್ರಿವಳಿ ತಲಾಖ್ ಅಕ್ರಮ ಎಂದು ಘೋಷಿಸಿದೆ. ಸಾಂವಿಧಾನಿಕ ಮತ್ತು ಕಾನೂನು ದೃಷ್ಟಿಯಿಂದ ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ಅದರಲ್ಲಿ ತಪ್ಪೇನಿಲ್ಲ. ಇದು ಈಗಿನ ಕಾಲದ ಬೇಡಿಕೆ ಎಂದಿದ್ದಾರೆ.




    ಏಕರೂಪ ನಾಗರಿಕ ಸಂಹಿತೆ ವೈಯಕ್ತಿಕ ಕಾನೂನುಗಳನ್ನು ಕೊನೆಗೊಳಿಸುತ್ತದೆ


    ವಕೀಲ ಅನುರಾಗ್, 'ಇಸ್ಲಾಂನಲ್ಲಿ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಪುರುಷರಿಗೆ ಹೆಚ್ಚಿನ ಹಕ್ಕುಗಳಿವೆ. ಮಹಿಳೆಯರ ಹಕ್ಕುಗಳು ಬಹಳ ಸೀಮಿತವಾಗಿವೆ. ಇಸ್ಲಾಂನಲ್ಲಿ ಪ್ರೌಢಾವಸ್ಥೆಯ ವಯಸ್ಸು ಮತ್ತು ವಿವಾಹದ ನಿಯಮಗಳು ಇತರ ಧರ್ಮಗಳಿಗಿಂತ ಭಿನ್ನವಾಗಿವೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ, ಮದುವೆ ಮತ್ತು ಭೂಮಿ-ಆಸ್ತಿ ಮತ್ತು ಉಯಿಲಿಗೆ ಸಂಬಂಧಿಸಿದಂತೆ ಒಂದೇ ಕಾನೂನನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಪ್ರಸ್ತುತ, ಧರ್ಮಗಳ ವಿವಿಧ ಕಾನೂನುಗಳಿವೆ, ಅದರ ಪ್ರಕಾರ ನ್ಯಾಯಾಲಯಗಳಲ್ಲಿ ಪ್ರಕರಣಗಳು ನಡೆಯುತ್ತಿವೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ವೈಯಕ್ತಿಕ ಕಾನೂನುಗಳು ಕೊನೆಗೊಳ್ಳುತ್ತವೆ ಎಂದಿದ್ದಾರೆ.


    ಏಕರೂಪ ನಾಗರಿಕ ಸಂಹಿತೆ ಎಂದರೇನು?


    ಏಕರೂಪ ನಾಗರಿಕ ಸಂಹಿತೆಯು ಜಾತ್ಯತೀತ ಕಾನೂನಾಗಿದ್ದು, ಅದರ ಅನುಷ್ಠಾನದ ನಂತರ ಎಲ್ಲಾ ಧರ್ಮಗಳ ವೈಯಕ್ತಿಕ ಕಾನೂನುಗಳು ಕೊನೆಗೊಳ್ಳುತ್ತವೆ. ಇದೀಗ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳು ವಿಭಿನ್ನ ಧಾರ್ಮಿಕ ಕಾನೂನುಗಳನ್ನು ಹೊಂದಿವೆ. ಹಿಂದೂ ಕಾನೂನು ಬುದ್ಧ, ಜೈನ ಮತ್ತು ಸಿಖ್ ಧರ್ಮಗಳ ಅನುಯಾಯಿಗಳಿಗೂ ಅನ್ವಯಿಸುತ್ತದೆ. ವಿಲ್ ಮತ್ತು ಮದುವೆಯಂತಹ ವಿಷಯಗಳಲ್ಲಿ ಈ ಕಾನೂನುಗಳನ್ನು ಪಾಲಿಸಬೇಕು. ವಿಚ್ಛೇದನ ಮತ್ತು ನಂತರದ ನಿರ್ವಹಣೆಗೆ ಸಂಬಂಧಿಸಿದ ನಿಯಮಗಳನ್ನು ವೈಯಕ್ತಿಕ ಕಾನೂನಿನ ಮೂಲಕ ನಿರ್ಧರಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ಈ ಎಲ್ಲ ವೈಯಕ್ತಿಕ ಕಾನೂನುಗಳು ಕೊನೆಗೊಳ್ಳಲಿವೆ ಹಾಗೂ ನಾಗರಿಕರು ಏಕರೂಪ ನಾಗರಿಕ ಸಂಹಿತೆ ಪಾಲಿಸಬೇಕಾಗುತ್ತದೆ.


    ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸರ್ಕಾರಗಳು ಏಕೆ ಹೆದರುತ್ತಿವೆ?


    ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದು ಸುಲಭವಲ್ಲ. ಇದರ ಹಿಂದಿನ ಕಾರಣ ರಾಜಕೀಯದಾಟ. ಧಾರ್ಮಿಕ ಸಂಘಟನೆಗಳೂ ಇದರ ವಿರುದ್ಧ ನಿಂತಿವೆ. ಹಿಂದೂ ಸಂಘಟನೆಗಳು ತಮ್ಮ ವೈಯಕ್ತಿಕ ಕಾನೂನನ್ನು ಬಿಟ್ಟುಕೊಟ್ಟಿವೆ. ಆದರೆ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಚರ್ಚೆಯಾದಾಗಲೆಲ್ಲಾ ಇಸ್ಲಾಮಿಕ್ ಸಂಘಟನೆಗಳು ಅದರ ವಿರುದ್ಧ ನಿಲ್ಲುತ್ತವೆ.


    ಇದನ್ನೂ ಓದಿ: Corporate Law: ಕಾನೂನು ಕ್ಷೇತ್ರದಲ್ಲಿ ಕಾರ್ಪೊರೇಟ್ ಲಾ ವೃತ್ತಿ ಆಯ್ಕೆ ಬೆಸ್ಟ್; 5 ಕಾರಣಗಳು ಇಲ್ಲಿವೆ


    ಷರಿಯಾ ಕಾನೂನು ಮತ್ತು ಏಕರೂಪ ನಾಗರಿಕ ಸಂಹಿತೆ


    ಷರಿಯತ್ ಕಾನೂನುಗಳ ಬಗ್ಗೆ ಮುಸ್ಲಿಂ ಸಮಾಜವು ತುಂಬಾ ಮತಾಂಧವಾಗಿದೆ ಎಂದು ವಕೀಲ ಅನುರಾಗ್ ಹೇಳುತ್ತಾರೆ. ಇಸ್ಲಾಮಿಕ್ ಸಂಘಟನೆಗಳು ಇದನ್ನು ಹೆಚ್ಚು ವಿರೋಧಿಸಲು ಇದು ಕಾರಣವಾಗಿದೆ. ಪೌರತ್ವ ಕಾನೂನು ಮತ್ತು ಎನ್‌ಆರ್‌ಸಿ ವಿರುದ್ಧ ದೇಶವು ಹಿಂಸಾತ್ಮಕ ಪ್ರತಿಭಟನೆಗಳನ್ನು ಕಂಡಿದೆ. ಸರ್ಕಾರಗಳು ಪ್ರತಿಭಟನೆಗೆ ಹೆದರುತ್ತಿವೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಯನ್ನು ದೇಶದ ಜನತೆ ಇನ್ನೂ ಮರೆತಿಲ್ಲ. ಧಾರ್ಮಿಕ ಸಂಘಟನೆಗಳು ಇದನ್ನು ವೈಯಕ್ತಿಕ ಕಾನೂನುಗಳ ಮೇಲಿನ ದಾಳಿ ಎಂದು ನೋಡುತ್ತವೆ. ಗಲಾಟೆ ತಪ್ಪಿಸಲು ಸರ್ಕಾರಗಳು ಈ ವಿಷಯವನ್ನು ಮುಟ್ಟುವುದಿಲ್ಲ.




    ಏಕರೂಪ ನಾಗರಿಕ ಸಂಹಿತೆಯ ಕಲ್ಪನೆಯು ಯಾವ ರಾಜ್ಯಗಳಲ್ಲಿ ನಡೆಯುತ್ತಿದೆ?


    ಗೋವಾದಲ್ಲಿ ಏಕರೂಪ ನಾಗರಿಕ ಸಂಹಿತೆ ಅನ್ವಯಿಸುತ್ತದೆ. ಇತ್ತೀಚೆಗೆ ಗುಜರಾತ್ ಸರ್ಕಾರ ಏಕರೂಪ ನಾಗರಿಕ ಸಂಹಿತೆಗಾಗಿ ಸಮಿತಿಯನ್ನು ರಚಿಸಿದೆ. ಅಸ್ಸಾಂ ಸರ್ಕಾರ ಇದನ್ನು ಜಾರಿಗೆ ತರಲು ಯೋಚಿಸುತ್ತಿದೆ. ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯ ಕರಡನ್ನು ಸಿದ್ಧಪಡಿಸಲಾಗಿದೆ. ಕರ್ನಾಟಕ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಪರಿಗಣನೆಯಲ್ಲಿದೆ. ಹೀಗಿರುವಾಗ ಅಮಿತ್ ಶಾ ಅವರ ಈ ಹೇಳಿಕೆಯಿಂದ ಈಗ ಕೇಂದ್ರ ಸರ್ಕಾರ ಈ ಬಗ್ಗೆಯೂ ಕಾನೂನು ರಚಿಸಬಹುದು ಎಂಬ ಸೂಚನೆಗಳು ವ್ಯಕ್ತವಾಗುತ್ತಿವೆ.

    Published by:Precilla Olivia Dias
    First published: