• ಹೋಂ
  • »
  • ನ್ಯೂಸ್
  • »
  • Explained
  • »
  • Budget 2023 Highlights: 'ನಿರ್ಮಲ' ಲೆಕ್ಕಾಚಾರದಲ್ಲಿ ಸಿಕ್ಕಿದ್ದೇನು? ಯಾರಿಗೆ ಸಿಹಿ, ಯಾರಿಗೆ ಕಹಿ? ಇಲ್ಲಿವೆ ಬಜೆಟ್ ಹೈಲೈಟ್ಸ್

Budget 2023 Highlights: 'ನಿರ್ಮಲ' ಲೆಕ್ಕಾಚಾರದಲ್ಲಿ ಸಿಕ್ಕಿದ್ದೇನು? ಯಾರಿಗೆ ಸಿಹಿ, ಯಾರಿಗೆ ಕಹಿ? ಇಲ್ಲಿವೆ ಬಜೆಟ್ ಹೈಲೈಟ್ಸ್

ಕೇಂದ್ರ ಬಜೆಟ್ ಮುಖ್ಯಾಂಶಗಳು

ಕೇಂದ್ರ ಬಜೆಟ್ ಮುಖ್ಯಾಂಶಗಳು

‘ನಿರ್ಮಲ ಲೆಕ್ಕಾಚಾರ’ದಲ್ಲಿ ಯಾವ ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಅನುದಾನ ಸಿಕ್ಕಿದೆ? ಯಾವ ವಸ್ತುಗಳ ಬೆಲೆ ಏರಿದೆ? ಯಾವ ವಸ್ತುಗಳ ಬೆಲೆ ಇಳಿಕೆಯಾಗಿದೆ? ಯಾರಿಗೆ ಸಿಹಿ, ಯಾರಿಗೆ ಕಹಿ? ಈ ಎಲ್ಲಾ ಮಾಹಿತಿ ಇಲ್ಲಿದೆ ಓದಿ…

  • Share this:

ಬಹು ನಿರೀಕ್ಷಿತ ಕೇಂದ್ರ ಸರ್ಕಾರದ 2023-24ನೇ ಸಾಲಿನ ಬಜೆಟ್ (Union Budget 2023-24) ಮಂಡನೆಯಾಗಿದೆ. ಬರೋಬ್ಬರಿ 45 ಲಕ್ಷ ಕೋಟಿ ರೂಪಾಯಿಗಳ ಆಯವ್ಯಯ ಮಂಡನೆಯಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Union Finance Minister Nirmala Sitharaman) ಸತತ 5ನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಕೃಷಿ, ಕೈಗಾರಿಕೆ, ರಕ್ಷಣೆ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಭರಪೂರ ಕೊಡುಗೆ ಘೋಷಿಸಲಾಗಿದೆ. ಇತ್ತ ಕರ್ನಾಟಕಕ್ಕೂ (Karnataka) ಪಾಲು ನೀಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ (Upper Bhadra Project) 5,300 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಹಾಗಾದ್ರೆ ‘ನಿರ್ಮಲ ಲೆಕ್ಕಾಚಾರ’ದಲ್ಲಿ ಯಾವ ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಅನುದಾನ ಸಿಕ್ಕಿದೆ? ಯಾವ ವಸ್ತುಗಳ ಬೆಲೆ ಏರಿದೆ? ಯಾವ ವಸ್ತುಗಳ ಬೆಲೆ ಇಳಿಕೆಯಾಗಿದೆ? ಯಾರಿಗೆ ಸಿಹಿ, ಯಾರಿಗೆ ಕಹಿ? ಈ ಎಲ್ಲಾ ಮಾಹಿತಿ ಇಲ್ಲಿದೆ ಓದಿ…  


45 ಲಕ್ಷ ಕೋಟಿಯ ಬಜೆಟ್


2022-23ನೇ ಸಾಲಿನಲ್ಲಿ 39,44,909 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಲಾಗಿತ್ತು. ಆದರೆ ಈ ಬಾರಿ ಬಜೆಟ್ ಗಾತ್ರದಲ್ಲಿ ಏರಿಕೆಯಾಗಿದೆ. 2023-24ನೇ ಸಾಲಿನಲ್ಲಿ ಒಟ್ಟು 45 ಲಕ್ಷ ಕೋಟಿಯ ಬಜೆಟ್ ಘೋಷಿಸಲಾಗಿದೆ. ಸಾಲವನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳು 27.2 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ ಹಾಗೂ ಒಟ್ಟು ವೆಚ್ಚ ರೂ 45 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಈ ಪೈಕಿ ನಿವ್ವಳ ತೆರಿಗೆ ಸ್ವೀಕೃತಿಗಳು 23.3 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ವಿತ್ತೀಯ ಕೊರತೆಯು ಜಿಡಿಪಿಯ ಶೇಕಡಾ 5.9 ಎಂದು ಅಂದಾಜಿಸಲಾಗಿದೆ.


ತೆರಿಗೆ ಭಾರ ಇಳಿಸಿದ ಬಜೆಟ್


ಆದಾಯ ತೆರಿಗೆ (Income Tax) ಮಿತಿಯನ್ನು 5 ಲಕ್ಷ ರೂಪಾಯಿಯಿಂದ 7 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.  ಸೆಕ್ಷನ್ 87ಎ ಅಡಿಯಲ್ಲಿ 5 ರಿಂದ 7 ಲಕ್ಷ ರೂಪಾಯಿ ತೆರಿಗೆ ಮಿತಿ ಏರಿಕೆ ಮಾಡಲಾಗಿದೆ. ಸಂಬಳ (Salary) ಪಡೆಯುವ ವರ್ಗ ಇದೀಗ 7 ಲಕ್ಷ ರೂಪಾಯಿವರೆಗೆ ಯಾವುದೇ ಆದಾಯ ತೆರಿಗೆ ಪಾವತಿಸುವಂತಿಲ್ಲ. ಇದೀಗ 3 ಲಕ್ಷ ರೂಪಾಯಿ ವರೆಗೆ ವೈಯುಕ್ತಿಕ ತೆರಿಗೆದಾರರು ಯಾವುದೇ ತೆರಿಗೆ ಪಾವತಿ ಮಾಡುವಂತಿಲ್ಲ. 3 ರಿಂದ 6 ಲಕ್ಷ ರೂಪಾಯಿ ಆದಾಯ ಹೊಂದಿದ ವೈಯುಕ್ತಿಕ ತೆರಿಗೆದಾರರು ಶೇಕಡ 5 ರಷ್ಟು ತೆರಿಗೆ ಪಾವತಿ ಮಾಡಬೇಕು. '2019-20ರಲ್ಲಿ ಹೊಸ ಟ್ಯಾಕ್ಸ್​ ರಿಜಿಮ್​ ಅನ್ನು ವಿತ್ತ ಸಚಿವೆ ಘೋಷಿಸಿದ್ದರು. 0 ಯಿಂದ 2.5 ಲಕ್ಷದವರೆಗೆ ಯಾವುದೇ ತೆರಿಗೆ ಕಟ್ಟಿವಂತಿಲ್ಲ. 2.5 ಲಕ್ಷದಿಂದ 5 ಲಕ್ಷದವರೆಗೆ 5%, ಇದಾದ ಬಳಿಕ ಎರಡುವರೆ ಲಕ್ಷ ಹೆಚ್ಚಾದಂತೆ 5 % ಟ್ಯಾಕ್ಸ್​ ಸೇರುತ್ತಾ ಹೋಗಿತ್ತು. 5 ಲಕ್ಷದವರೆಗೆ ಈ ಹಿಂದೆ ರಿಬೆಟ್​ ಇತ್ತು. ಈಗ 7 ಲಕ್ಷದವರೆಗೆ ಹೆಚ್ಚಿಸಲಾಗಿದೆ.


ಹೊಸ ಟ್ಯಾಕ್ಸ್​​ ಸ್ಲ್ಯಾಬ್ಏನಿದೆ?

₹ 0-3 ಲಕ್ಷಯಾವುದೇ ತೆರಿಗೆ ಇಲ್ಲ
₹ 3-6 ಲಕ್ಷ5 %
₹ 6-9 ಲಕ್ಷ10 %
₹ 9-12 ಲಕ್ಷ15 %
₹ 12-15 ಲಕ್ಷ20 %
₹ 15 ಲಕ್ಷಕ್ಕಿಂತ ಹೆಚ್ಚು30 %


ರೈಲ್ವೆ ಇಲಾಖೆಗೆ ಸಿಂಹಪಾಲು


ಈ ಬಾರಿ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ರೈಲ್ವೇಗೆ 2.4 ಲಕ್ಷ ಕೋಟಿ ರೂಪಾಯಿಗಳ ಅನುದಾನ ಘೋಷಿಸಲಾಗಿದೆ. ಇದು ಬಜೆಟ್ ಇತಿಹಾಸದಲ್ಲೇ ನೀಡಲಾಗಿರುವ ಅತೀ ಹೆಚ್ಚಿನ ಅನುದಾನವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 4 ಪಟ್ಟು ಹೆಚ್ಚು ಹಾಗೂ 2013-14ರ ಕಾಂಗ್ರೆಸ್​ ಸರ್ಕಾರದ ಬಜೆಟ್​ಗೆ ಹೋಲಿಸಿದರೆ  9 ಪಟ್ಟು ಹೆಚ್ಚಾಗಿದೆ ಅಂತ ಹೇಳಲಾಗುತ್ತಿದೆ.


ಇದನ್ನೂ ಓದಿ:  Income Tax Slabs: ನಿರ್ಮಲಾ ಸೀತಾರಾಮನ್ ಇಳಿಸಿದ್ರು ಟ್ಯಾಕ್ಸ್ ಭಾರ, ಜನಸಾಮಾನ್ಯರು ಮಾಡೋದು ಹೇಗೆ ತೆರಿಗೆ ಲೆಕ್ಕಾಚಾರ?


ಯಾವ ಇಲಾಖೆಗೆ ಎಷ್ಟು ಅನುದಾನ?


  • ರೈಲ್ವೇ ಇಲಾಖೆ – 2.4 ಲಕ್ಷ ಕೋಟಿ

  • ಉತ್ಪಾದನಾ ವಲಯ - 1.94 ಲಕ್ಷ ಕೋಟಿ ರೂಪಾಯಿ ಅನುದಾನ

  • ಮೀನುಗಾರಿಕೆ - 2 ಸಾವಿರ ಕೋಟಿ

  • ಸಂಶೋಧನಾ ವಲಯ - 50 ಸಾವಿರ ಕೋಟಿ

  • ರಕ್ಷಣಾ ಇಲಾಖೆ – 5.92 ಲಕ್ಷ ಲಕ್ಷ ಕೋಟಿ

  • ಗೃಹ ಇಲಾಖೆ - 1.66 ಸಾವಿರ ಕೋಟಿ

  • ಕೃಷಿ ಕ್ಷೇತ್ರ -- 1.72 ಲಕ್ಷ ಕೋಟಿ


 ಬಜೆಟ್ ಹೈಲೈಟ್ಸ್

  • ಕೃಷಿ ಸಾಲದ ಗುರಿ 20 ಲಕ್ಷ ಕೋಟಿ ರೂಪಾಯಿಗೆ ಏರಿಕೆ

  • 50 ಹೆಚ್ಚುವರಿ ವಿಮಾನ ನಿಲ್ದಾಣಗಳು, ಹೆಲಿಪೋರ್ಟ್‌ಗಳು

  • ಪ್ರವಾಸೋದ್ಯಮಕ್ಕೆ ಚಾಲೆಂಜ್ ಮೋಡ್ ಮೂಲಕ 50 ಸ್ಥಳಗಳನ್ನು ಆಯ್ಕೆ

  • ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ಎರಡು ವರ್ಷಗಳವರೆಗೆ ಲಭ್ಯವಾಗುವಂತೆ ಮಾಡಲಾಗುತ್ತದೆ.

  • 2 ಲಕ್ಷದವರೆಗಿನ ಠೇವಣಿಗಳನ್ನು ಶೇಕಡಾ 7.5 ಬಡ್ಡಿದರದಲ್ಲಿ ನೀಡಲಾಗುತ್ತದೆ.

  • ಹಿರಿಯ ನಾಗರಿಕರ ಉಳಿತಾಯ ಯೋಜನೆ ಠೇವಣಿ ಮಿತಿ 15 ಲಕ್ಷದಿಂದ 30 ಲಕ್ಷಕ್ಕೆ ಏರಿಕೆ

  • ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಳ

  • ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಶೇ 66ರಷ್ಟು ಹೆಚ್ಚಳವಾಗಿದ್ದು, 79,000 ಕೋಟಿ ರೂ. ಅನುದಾನ

  • ಬಂಡವಾಳ ಹೂಡಿಕೆಯ ವೆಚ್ಚವನ್ನು 33 ಪ್ರತಿಶತದಿಂದ 10 ಲಕ್ಷ ಕೋಟಿಗೆ ಹೆಚ್ಚಳ

  • ಇದು 2024 ರ ಆರ್ಥಿಕ ವರ್ಷದಲ್ಲಿ GDP ಯ 3.3 ಪರ್ಸೆಂಟ್ ಆಗಿರುತ್ತದೆ

  • ಕೇಂದ್ರದ ಪರಿಣಾಮಕಾರಿ ಬಂಡವಾಳ ವೆಚ್ಚ - 13.7 ಲಕ್ಷ ಕೋಟಿ ರೂ

  • ಪ್ರಮುಖ ಸ್ಥಳಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳು

  • 2047 ರ ವೇಳೆಗೆ ರಕ್ತಹೀನತೆಯನ್ನು ತೊಡೆದುಹಾಕಲು ಯೋಜನೆ

  • ಆದಿವಾಸಿಗಳಿಗೆ ಸುರಕ್ಷಿತ ವಸತಿ, ನೈರ್ಮಲ್ಯ, ಕುಡಿಯುವ ನೀರು ಮತ್ತು ವಿದ್ಯುತ್‌ಗಾಗಿ ಮುಂದಿನ ಮೂರು ವರ್ಷಗಳಲ್ಲಿ 15,000 ಕೋಟಿ ರೂ. ಮೀಸಲು

  • ಮ್ಯಾನ್ ಹೋಲ್ ಮುಕ್ತ ಭಾರತದ ನಿರ್ಮಾಣ

  • ಮ್ಯಾನ್‌ಹೋಲ್‌ನಿಂದ ಮೆಷಿನ್-ಹೋಲ್ ಮೋಡ್‌ಗೆ ಬದಲಾವಣೆ

  • ಎಲ್ಲಾ ನಗರಗಳು ಮತ್ತು ಪಟ್ಟಣಗಳನ್ನು ಶೇಕಡಾ 100ರಷ್ಟು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳ ಪರಿವರ್ತನೆಗೆ ಸಕ್ರಿಯಗೊಳಿಸಲಾಗುತ್ತದೆ.

  • ಏಕಲವ್ಯ ಮಾದರಿ ವಸತಿ ಶಾಲೆಗಳು - 38,800 ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು

  • ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಉತ್ತೇಜನಕ್ಕೆ 'ಮೇಕ್ AI ಇನ್ ಇಂಡಿಯಾ' ಯೋಜನೆ

  • ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ AI ಗಾಗಿ ಶ್ರೇಷ್ಠತೆಗಾಗಿ ಮೂರು ಕೇಂದ್ರಗಳನ್ನು ಸ್ಥಾಪನೆ

  • 63,000 ಕ್ರೆಡಿಟ್ ಸೊಸೈಟಿಗಳ ಗಣಕೀಕರಣಕ್ಕೆ 2,516 ಕೋಟಿ ರೂಪಾಯಿ

  • ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ 5g ಸೇವೆಗಳನ್ನು ಬಳಸಿಕೊಂಡು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು 100 ಲ್ಯಾಬ್‌ಗಳ ಸ್ಥಾಪನೆ

  • ನಿವ್ವಳ-ಶೂನ್ಯ ಹೊರಸೂಸುವಿಕೆ ಗುರಿಗಳಿಗೆ ಶಕ್ತಿ ಪರಿವರ್ತನೆಗಾಗಿ ರೂ 35,000 ಕೋಟಿ

  • ಪಳೆಯುಳಿಕೆ ಇಂಧನದ ಮೇಲೆ ಕಡಿಮೆ ಅವಲಂಬನೆಗಾಗಿ ಗ್ರೀನ್ ಹೈಡ್ರೋಜನ್ ಮಿಷನ್

  • 4000 MWh ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಗಳನ್ನು ಬೆಂಬಲಿಸಲಾಗುತ್ತದೆ

  • 30 ಸ್ಕಿಲ್ ಇಂಡಿಯಾ ಅಂತರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು

  • ನೈಸರ್ಗಿಕ ಕೃಷಿಗೆ ಉತ್ತೇಜನ- ಒಂದು ಕೋಟಿ ರೈತರಿಗೆ ನೆರವು


 ಯಾವ ವಸ್ತುಗಳ ಬೆಲೆ ಇಳಿಕೆ?


- ಮೊಬೈಲ್ ಫೋನ್ ಚಾರ್ಜರ್​
- ಎಲ್ಇಡಿ ಟಿವಿ
- ಸೈಕಲ್
- ಕ್ಯಾಮೆರಾ ಲೆನ್ಸ್​
- ಇ ವಾಹನಗಳ ಬ್ಯಾಟರಿ


- ಬಟ್ಟೆಗಳು


- ಪಾಲಿಶ್ ಮಾಡಿದ ವಜ್ರ


- ಬಟ್ಟೆ
- ಮೊಬೈಲ್ ಫೋನ್
- ಆಟಿಕೆ
- ಮೊಬೈಲ್ ಕ್ಯಾಮೆರಾ ಲೆನ್ಸ್
- ವಿದ್ಯುತ್ ವಾಹನಗಳು
- ವಜ್ರದ ಆಭರಣಗಳು
- ಜೈವಿಕ ಅನಿಲಕ್ಕೆ ಸಂಬಂಧಿಸಿದ ವಿಷಯಗಳು
- ಲಿಥಿಯಂ ಜೀವಕೋಶಗಳು
- ಸೈಕಲ್




 ಬಜೆಟ್‌ನಲ್ಲಿ ದುಬಾರಿಯಾದ ವಸ್ತುಗಳು


  • ಸಿಗರೇಟ್

  • ಮದ್ಯ

  • ಛತ್ರಿ

  • ಪ್ಲಾಟಿನಂ

  • ವಜ್ರ

  • ಅಡಿಗೆ ಚಿಮಣಿ

  • ಎಕ್ಸ್-ರೇ ಯಂತ್ರ

  • ಆಮದು ಮಾಡಿದ ಬೆಳ್ಳಿ ವಸ್ತುಗಳು

  • ಬಂಗಾರ

  • ಸಿಗರೇಟ್​

  • ತಂಬಾಕು ಉತ್ಪನ್ನ

  • ಆಮದು ಮಾಡಿಕೊಂಡ ರಬ್ಬರ್

  • ಬ್ರಾಂಡೆಡ್​ ಬಟ್ಟೆಗಳು

  • ಹೆಡ್‌ಫೋನ್‌ಗಳು ಮತ್ತು ಇಯರ್‌ಫೋನ್‌ಗಳು

  • ಸ್ಮಾರ್ಟ್ ಮೀಟರ್

  • ಸೌರ ಮಾಡ್ಯೂಲ್ಗಳು

  • ಎಲೆಕ್ಟ್ರಾನಿಕ್ ಆಟಿಕೆಗಳ ಭಾಗಗಳು


ಈ ಬಾರಿ ಕರ್ನಾಟಕಕ್ಕೆ ಸಿಕ್ಕಿದ್ದೇನು?


ಈ ಬಾರಿ ಕರ್ನಾಟಕದಲ್ಲಿ ವಿಧಾನಸಭಾ ಎಲೆಕ್ಷನ್ ಇದೆ. ಹೀಗಾಗಿ ಕೇಂದ್ರದ ಬಜೆಟ್‌ನಲ್ಲಿ ರಾಜ್ಯಕ್ಕೆ ಸಿಂಹಪಾಲು ಸಿಗುವ ನಿರೀಕ್ಷೆ ಇತ್ತು. ಆದರೆ ನಿರಾಶೆ ಮೂಡಿಸದೇ ಕರ್ನಾಟಕಕ್ಕೆ ಬಂಪರ್ ನೀಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗಾಗಿ 5300 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು