ದೇಶದಲ್ಲಿ ಶಾಲೆಗಳನ್ನು ಪುನಃ ತೆರೆಯುವಿಕೆಯ ಕುರಿತು ಕೆಲವು ರಾಜ್ಯಗಳಲ್ಲಿ ಈಗಗಾಲೇ ಚರ್ಚೆಗಳು ಪ್ರಾರಂಭವಾಗಿವೆ. ಒಂದು ಸಂಪೂರ್ಣ ವರ್ಷ ಸಾಂಕ್ರಾಮಿಕ ರೋಗದಿಂದ ಶಾಲೆಗಳನ್ನು ಮುಚ್ಚಲಾಗಿತ್ತು. ನಂತರ ನಿಧಾನಗತಿಯಲ್ಲಿ ಶಾಲೆಗಳು ಪ್ರಾರಂಭಗೊಳ್ಳುತ್ತಿದ್ದವು. ಆದರೆ, ಎರಡನೇ ಅಲೆಯಿಂದಾಗಿ ದೇಶದ ಶಾಲೆಗಳನ್ನು ಮತ್ತೆ ಮುಚ್ಚಲಾಯಿತು. ಈಗ ಎರಡನೇ ಅಲೆಯಿಂದ ಚೇತರಿಸಿಕೊಂಡಿರುವ ರಾಜ್ಯಗಳು ಈಗಾಲೇ, ಹಿರಿಯ ತರಗತಿಗಳಿಗೆ ಶಾಲೆಗಳನ್ನು ಮತ್ತೆ ತೆರೆಯಲು ಪ್ರಾರಂಭಿಸಿವೆ. ಆದರೆ ಅನೇಕ ರಾಜ್ಯಗಳು ಜಾಗರೂಕರಾಗಿ ಶಾಲೆಗಳನ್ನು ಪುನಃ ತೆರೆಯಲು ನಿರಾಕರಿಸಿವೆ. ಇದು ಶಾಲೆಗಳನ್ನು ಮತ್ತೆ ತೆರೆಯಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಶಾಲೆಗಳು ಮತ್ತೆ ತೆರೆಯುವಂತೆ ದೇಶಾದ್ಯಂತದ ತಜ್ಞರು, ಶಿಕ್ಷಣ ತಜ್ಞರು, ವೈದ್ಯರು ಮತ್ತು ಪೋಷಕರು ರಾಜ್ಯ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ. ಶಾಲೆಗಳ ಪುನರಾರಂಭಕ್ಕೆ ಆದ್ಯತೆ ನೀಡುವಂತೆ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ. ಮತ್ತೊಂದೆಡೆ, ಶಾಲೆಗಳು ಪುನಃ ತೆರೆಯುವ ಕುರಿತು ಪೋಷಕರು, ಶಿಕ್ಷಕರು, ವೈದ್ಯರು ಮತ್ತು ನೀತಿ ನಿರೂಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಲೆಗಳಪುನಃತೆರೆಯುವಿಕೆಗೆಮುಖ್ಯಕಾರಣ-ಮಾನಸಿಕಆರೋಗ್ಯಸಮಸ್ಯೆಗಳಹೆಚ್ಚಳ,ಕಲಿಕೆಯನಷ್ಟ
ಭಾರತೀಯ ತಂತ್ರಜ್ಞಾನ ಸಂಸ್ಥೆ ದೆಹಲಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮುಂಬೈ, ಮತ್ತು ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ವೈದ್ಯರು ಮತ್ತು ವಕೀಲರು ಸೇರಿದಂತೆ 50ಕ್ಕೂ ಹೆಚ್ಚು ತಜ್ಞರು ರಾಜ್ಯ ಸರ್ಕಾರಗಳನ್ನು ದಿಗ್ಭ್ರಮೆಗೊಳಿಸುವ ರೀತಿಯಲ್ಲಿ ಪುನಃ ತೆರೆಯುವಂತೆ ಒತ್ತಾಯಿಸಿದ್ದಾರೆ. "ಶೂನ್ಯ-ಪ್ರಕರಣದ ಸನ್ನಿವೇಶ" ಎಂದಿಗೂ ಸಾಧ್ಯವಾಗುವುದಿಲ್ಲ ಮತ್ತು ಕೋವಿಡ್ ಅಸ್ತಿತ್ವದಲ್ಲಿರುತ್ತದೆ. ಆದ್ದರಿಂದ ಹೆಚ್ಚುವರಿ ಕ್ರಮಗಳೊಂದಿಗೆ ಶಾಲೆಗಳನ್ನು ಪುನಃ ತೆರೆಯುವಂತೆ ತಜ್ಞರು ಒತ್ತಾಯಿಸಿದ್ದಾರೆ. ಸ್ಪಷ್ಟ ಕಲಿಕಾ ನ್ಯೂನತೆಗಳ ಜೊತೆಗೆ, ಮಕ್ಕಳಲ್ಲಿ ಮಾನಸಿಕ ಒತ್ತಡ, ಸಾಮಾಜಿಕ ಕೌಶಲ್ಯಗಳು ಕಡಿಮೆಯಾಗುತ್ತಿರುವುದರಿಂದ ಮತ್ತು ಇಂದಿನ ಪೀಳಿಗೆಯ ಮಕ್ಕಳ ಆತ್ಮವಿಶ್ವಾಸದ ಕೊರತೆಯ ಸಮಸ್ಯೆಗಳನ್ನು ಹೊಂದಿರುವ ಕಾರಣ ಶಾಲೆಗಳ ಪುನಃ ತೆರೆಯುವಿಕೆಯು ಒಂದು ಉತ್ತಮ ಪರಿಹಾರ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲಾ ಸುರಕ್ಷತಾ ಪ್ರೋಟೋಕಾಲ್ಗಳನ್ನು ಹೊಂದಿರುವ ಶಾಲೆಗಳನ್ನು ಪುನಃ ತೆರೆಯುವುದನ್ನು ವೈಜ್ಞಾನಿಕ ಪುರಾವೆಗಳು ಬೆಂಬಲಿಸುತ್ತವೆ. "ನಾವು ಈಗಾಗಲೇ ಹಲವಾರು ರಾಜ್ಯಗಳಲ್ಲಿ ಹಲವರು ಶಾಲೆಯನ್ನೇ ತೊರೆದಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಡವರು ಮಾತ್ರವಲ್ಲ ಎಲ್ಲಾ ವರ್ಗದವರು ಗೊಂದಲ ಸ್ಥಿತಿಯಲ್ಲಿದ್ದಾರೆ, ಶ್ರೀಮಂತ ಮಕ್ಕಳು ಸಹ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿದ್ದಾರೆ ಎಂದು ವರದಿಗಳ ಮೂಲಕ ತಿಳಿದುಬಂದಿದೆ.
ಪೂರ್ವ - ಶಿಶುವಿಹಾರ ಮತ್ತು ಪ್ರಾಥಮಿಕ ಶಾಲೆಗಳನ್ನು ಮೊದಲು ತೆರೆಯಲು ಸಲಹೆಗಾರರು ಪ್ರಸ್ತಾಪಿಸಿದ್ದಾರೆ. ನಂತರ ಮಾಧ್ಯಮಿಕ ಶಾಲೆಗಳನ್ನು ತೆರೆಯಲು ಅಲೋಜಿಸಿದ್ದಾರೆ. ಶಾಲಾ ಅಧ್ಯಾಪಕರು ಮತ್ತು ಸಿಬ್ಬಂದಿಗೆ ಲಸಿಕೆಗಳನ್ನು ಒದಗಿಸಲು ಆದ್ಯತೆ ನೀಡಲು ಮತ್ತು ಸಣ್ಣ ಗುಂಪುಗಳ ವಿದ್ಯಾರ್ಥಿಗಳು ವಾರಕ್ಕೆ ಒಂದು ಅಥವಾ ಎರಡು ಬಾರಿ ಶಾಲೆಗೆ ಹೋಗಲು ಅವಕಾಶ ಮಾಡಿಕೊಡಲು ಶಿಫಾರಸು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಪೋಷಕರು,ನೀತಿನಿರೂಪಕರುಶಾಲೆಗಳನ್ನುಮತ್ತೆತೆರೆಯುವಬಗ್ಗೆಜಾಗರೂಕರಾಗಿದ್ದಾರೆ
ಮತ್ತೊಂದೆಡೆ, ಪೋಷಕರು ಮತ್ತು ಕೆಲವು ವೈದ್ಯರು ಕೂಡ ತರಾತುರಿಯಲ್ಲಿ ಪುನಃ ತೆರೆಯುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. 13 ಮತ್ತು 7 ವರ್ಷದ ಮಗುವಿನ ತಾಯಿ ಎಂ.ಎಸ್.ಮಮತಾ ಸಿಂಗ್ರವರು ಶಾಲೆ ಪುನಃ ತೆರೆಯುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ತನಗೆ ವಿಶ್ವಾಸವಿಲ್ಲ ಎಂದು ಹೇಳಿದರು ಹಾಗೂ ಗುರಗಾಂವ್ನಲ್ಲಿನ ಪ್ರಕರಣಗಳು ಶೀಘ್ರವಾಗಿ ಕಡಿಮೆಯಾಗುತ್ತಿವೆ. ಆದರೆ ನಮಗೆ ಖಚಿತವಿಲ್ಲ. ಶಾಲೆಯು ನಿಯಮಿತವಾಗಿ ಸೋಂಕುರಹಿತವಾಗುತ್ತದೆಯೇ? ವಿದ್ಯಾರ್ಥಿಗಳು ಸಾರ್ವಕಾಲಿಕವಾಗಿ ಮಾಸ್ಕ್ ಧರಿಸುತ್ತಾರೆಯೇ ಎಂದು ಯಾರು ಪರಿಶೀಲಿಸುತ್ತಾರೆ? ಇದು ಸೋಂಕಿನ ಅಪಾಯವನ್ನು ಹೆಚ್ಚಿಸುವುದಿಲ್ಲವೇ? ನಂತರ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು..! " ಈ ರೀತಿಯ ಗೊಂದಲಗಳಿಂದ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ವಿವಿಧ ನಗರಗಳ ಪೋಷಕರು ಇದೇ ರೀತಿಯ ಆಲೋಚನೆಗಳನ್ನು ಹೊಂದಿದ್ದಾರೆ, ಏಕೆಂದರೆ ಮೂರನೇ ಅಲೆಯ ಭಯವು ಅವರ ಮೇಲೆ ಒತ್ತಡ ಹೇರುತ್ತಲೇ ಇದೆ.
ಕೆಲವು ವೈದ್ಯರು ಮತ್ತು ಮಕ್ಕಳ ವೈದ್ಯರೂ ಸಹ ಪುನಃ ತೆರೆಯುವುದನ್ನು ವಿರೋಧಿಸಿದ್ದಾರೆ. ಭಾರತವನ್ನು ಇತರ ದೇಶಗಳೊಂದಿಗೆ ಹೋಲಿಸದಂತೆ ಜನರನ್ನು ಒತ್ತಾಯಿಸಿದ್ದಾರೆ. ಮಹಾರಾಷ್ಟ್ರದ ಪೀಡಿಯಾಟ್ರಿಕ್ ಕೋವಿಡ್ ಕಾರ್ಯ ಸಮೂಹದ ಸದಸ್ಯ ವಿಜಯ್ ಯೆವಾಲೆ ಎಚ್ಚರಿಕೆಯಿಂದ ಮುಂದುವರಿಯಲು ಸಲಹೆ ನೀಡಿದ್ದಾರೆ.
"ವಿದ್ಯಾರ್ಥಿಗಳು ಪ್ರಸ್ತುತ ಎದುರಿಸುತ್ತಿರುವ ಎಲ್ಲಾ ಶೈಕ್ಷಣಿಕ ಮತ್ತು ಅಭಿವೃದ್ಧಿ ನಷ್ಟಗಳನ್ನು ನಾವು ಒಪ್ಪುತ್ತಿದ್ದರೂ, ಸರ್ಕಾರಕ್ಕೂ ಸಹ, ಶಾಲೆಯನ್ನು ಪುನಃ ತೆರೆಯುವುದು ಕಷ್ಟದ ಕರೆ" ಎಂದು ವಿಜಯ್ ತಿಳಿಸಿದ್ದಾರೆ. ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ನಂತಹ ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳು ಈಗಾಗಲೇ ಪ್ರತಿರಕ್ಷೆಯನ್ನು ಸಾಧಿಸಿವೆ, ಆದರೆ ಭಾರತ ಇನ್ನೂ ನಿರ್ಣಾಯಕ ಅಡ್ಡಹಾದಿಯಲ್ಲಿದೆ ಎಂದು ವಿಜಯ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ