ರಾಜ್ಯ ವಿಧಾನಸಭಾ ಚುನಾವಣಾ (Karnataka assembly election) ಕಣ ರಂಗೇರುತ್ತಿದೆ. ಅದರಲ್ಲೂ ಕೆಲವು ಕ್ಷೇತ್ರಗಳು ಈಗಾಗಲೇ ದೇಶದ ಗಮನವನ್ನೂ ಸೆಳೆಯುತ್ತಿದೆ. ಈ ಪೈಕಿ ಶಿವಮೊಗ್ಗ (Shivamogga) ಜಿಲ್ಲೆಯ ಶಿಕಾರಿಪುರ ವಿಧಾನಸಭಾ ಕ್ಷೇತ್ರ (Shikaripura assembly constituency) ಕೂಡ ಒಂದು. ಬಿಜೆಪಿ (BJP) ಹಿರಿಯ ನಾಯಕ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಪ್ರತಿನಿಧಿಸುತ್ತಿದ್ದ ಕ್ಷೇತ್ರ ಶಿಕಾರಿಪುರ. ಇದೀಗ ಅವರ ಬದಲಾಗಿ ಬಿಜೆಪಿಯಿಂದ ಅವರ ಪುತ್ರ ಬಿ.ವೈ. ವಿಜಯೇಂದ್ರ (BY Vijayendra) ಸ್ಪರ್ಧೆ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡುತ್ತಿರುವ ವಿಜಯೇಂದ್ರ ಬಗ್ಗೆ ಬಿಜೆಪಿಯಲ್ಲಿ ಭಾರೀ ನಿರೀಕ್ಷೆಯಿದೆ. ಬಿಎಸ್ವೈ ಸಿಎಂ ಆಗಿದ್ದಾಗ ‘ಸೂಪರ್ ಸಿಎಂ’ (Super CM) ಅಂತಾನೇ ಕರೆಸಿಕೊಳ್ಳುತ್ತಿದ್ದ ವಿಜಯೇಂದ್ರ, ಇದೀಗ ಶಿಕಾರಿಪುರ ಗೆದ್ದು ವಿಧಾನಸಭೆ ಪ್ರವೇಶಿಸೋದಕ್ಕೆ ಸಜ್ಜಾಗಿದ್ದಾರೆ.
ಬಿಎಸ್ವೈ ಪುತ್ರ ಬಿವೈ ವಿಜಯೇಂದ್ರ
ಬಿವೈ ವಿಜಯೇಂದ್ರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಮೈತ್ರಾದೇವಿ ದಂಪತಿಯ ದ್ವಿತೀಯ ಪುತ್ರ. ಇವರಿಗೆ ಸಹೋದರಿಯರು ಇದ್ದಾರೆ. ಸಂಸದ ಬಿ.ವೈ. ರಾಘವೇಂದ್ರ ಇವರ ಸಹೋದರ. ಶಿಕಾರಿಪುರದಲ್ಲಿ ಆಗಸ್ಟ್ 6, 1973ರಲ್ಲಿ ಜನಿಸಿದರು. ಸದ್ಯ 49ರ ಹರೆಯರ ವಿಜಯೇಂದ್ರ ರಾಜ್ಯ ಬಿಜೆಪಿಯಲ್ಲಿ ಪ್ರಭಾವಿ ನಾಯಕರಾಗಿ ಬೆಳೆದಿದ್ದಾರೆ.
ವಿಜಯೇಂದ್ರ ವಿದ್ಯಾರ್ಹತೆ
1988-89ರಲ್ಲಿ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಸಂಸ್ಥೆಯಿಂದ ಎಸ್ಎಸ್ಎಲ್ಸಿ ಪಾಸಾದ ವಿಜಯೇಂದ್ರ 1990-91ರಲ್ಲಿ ಶಿವಮೊಗ್ಗ ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಓದಿದರು. ಬಳಿಕ 1994ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಬಿಬಿಎಂ ಪದವಿ ಪಡೆದರು.
ಇದನ್ನೂ ಓದಿ: Yediyurappa-Eshwarappa: ಯಡಿಯೂರಪ್ಪ, ಈಶ್ವರಪ್ಪ ನೇಪಥ್ಯ; ಶಿವಮೊಗ್ಗ ರಾಜಕೀಯದಲ್ಲಿ ಹೊಸ ತಲೆಮಾರಿನ ಅಧಿಪತ್ಯ!
ಬಿಜೆಪಿಯಲ್ಲಿ ಮಹತ್ವದ ಸ್ಥಾನಮಾನ
ಬಿಜೆಪಿಯ ಪ್ರಮುಖ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರು ಈ ಹಿಂದೆ ಕರ್ನಾಟಕ ಘಟಕದ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಶಿಕಾರಿಪುರ ಮೂಲದ ಈ ನಾಯಕನನ್ನು 2020 ರಲ್ಲಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಕರ್ನಾಟಕ ಚುನಾವಣೆಗಾಗಿ ಬಿಜೆಪಿಯ 25 ಸದಸ್ಯರ ಚುನಾವಣಾ ಸಮಿತಿಗೆ ವಿಜಯೇಂದ್ರ ಅವರನ್ನು ಇತ್ತೀಚೆಗೆ ನೇಮಿಸಲಾಯಿತು. ಇದೀಗ ಶಿಕಾರಿಪುರ ಬಿಜೆಪಿ ಅಭ್ಯರ್ಥಿಯಾಗಿ ಗಮನ ಸೆಳೆಯುತ್ತಿದ್ದಾರೆ.
ಉಪ ಚುನಾವಣೆಯಲ್ಲಿ ಮಹತ್ವದ ಜವಾಬ್ದಾರಿ
2019ರ ವಿಧಾನಸಭಾ ಉಪಚುನಾವಣೆಯಲ್ಲಿ 15 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದ್ದರಿಂದ, ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ವಿಜಯೇಂದ್ರ ಪ್ರಮುಖ ವಿಜೇತರಲ್ಲಿ ಒಬ್ಬರಾದರು. ಈ ವೇಳೆ ಬಿಜೆಪಿ ಗೆಲುವಿನಲ್ಲಿ ವಿಜಯೇಂದ್ರ ಪಾತ್ರ ಮಹತ್ವದ್ದಾಗಿತ್ತು.
ಬಿ.ವೈ. ವಿಜಯೇಂದ್ರ ರಾಜಕೀಯ ಹಾದಿ
ಯಡಿಯೂರಪ್ಪನವರ ಶಿಕಾರಿಪುರ ಪರಂಪರೆ ಮುಂದುವರೆಸುತ್ತಾರಾ?
ಹೇಳಿ ಕೇಳಿ ಶಿಕಾರಿಪುರ ಎನ್ನುವುದು ಬಿಎಸ್ ಯಡಿಯೂರಪ್ಪನವರ ಭದ್ರಕೋಟೆಯಂತಾಗಿದೆ. 1983 ರಿಂದ ಬಿಜೆಪಿ ಸತತವಾಗಿ ಗೆದ್ದಿರುವ ಕರ್ನಾಟಕದ ಏಕೈಕ ವಿಧಾನಸಭಾ ಕ್ಷೇತ್ರ ಶಿಕಾರಿಪುರವಾಗಿದೆ. 1983 ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಯಡಿಯೂರಪ್ಪ ನಿರಂತರವಾಗಿ ಸ್ಥಾನವನ್ನು ಗೆಲ್ಲುತ್ತಿದ್ದಾರೆ. ಕಳೆದ ನಾಲ್ಕು ದಶಕಗಳಲ್ಲಿ ಯಡಿಯೂರಪ್ಪನವರು 1999ರಲ್ಲಿ ಒಮ್ಮೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಎದುರು ತಮ್ಮ ಭದ್ರಕೋಟೆಯನ್ನು ಕಳೆದುಕೊಂಡಿದ್ದರು. ಆದಾಗ್ಯೂ, ಅವರು 20214 ರಲ್ಲಿ ಬಿಜೆಪಿಗೆ ಮರಳಿದರು ಮತ್ತು 2018 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಶಿಕಾರಿಪುರದಿಂದ ಸ್ಪರ್ಧಿಸಿದರು. ಆಗ ಕಾಂಗ್ರೆಸ್ ಮುಖಂಡ ಗೋಣಿ ಮಾಲತೇಶ ಅವರನ್ನು ಸೋಲಿಸಿ ಕ್ಷೇತ್ರದಲ್ಲಿ ಗೆಲ್ಲುವಲ್ಲಿ ಯಶಸ್ವಿಯಾದರು. ಇದೀಗ ಇದೇ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧಿಸುತ್ತಿದ್ದು, ಅದೇ ಮಾಲತೇಶ್ರನ್ನು ಎದುರಿಸಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ