• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಒಬಿಸಿ ಪಟ್ಟಿಯಲ್ಲಿ ಬದಲಾವಣೆ ನಡೆಸಲು ಕಾರಣವೇನು? ಮಸೂದೆ ಅಂಗೀಕಾರವಾದರೆ ನಡೆಯುವ ಬದಲಾವಣೆಗಳೇನು?

Explained: ಒಬಿಸಿ ಪಟ್ಟಿಯಲ್ಲಿ ಬದಲಾವಣೆ ನಡೆಸಲು ಕಾರಣವೇನು? ಮಸೂದೆ ಅಂಗೀಕಾರವಾದರೆ ನಡೆಯುವ ಬದಲಾವಣೆಗಳೇನು?

ಸಂಸತ್ ಭವನ

ಸಂಸತ್ ಭವನ

ಸಂವಿಧಾನದ 102ನೇ ತಿದ್ದುಪಡಿಯ ಕೆಲವು ನಿಬಂಧನೆಗಳನ್ನು ಸ್ಪಷ್ಟಪಡಿಸಲು ಈ ಮಸೂದೆ ತರಲಾಗಿದೆ. ಮಸೂದೆ ಅಂಗೀಕಾರವಾದ ನಂತರ ಹಿಂದುಳಿದ ಜಾತಿಗಳನ್ನು ಪಟ್ಟಿ ಮಾಡುವ ಹಕ್ಕನ್ನು ರಾಜ್ಯಗಳು ಪಡೆಯುತ್ತವೆ

  • Share this:

ಮೀಸಲಾತಿಗಾಗಿ ಒಬಿಸಿ ಪಟ್ಟಿಯನ್ನು ತಯಾರಿಸುವ ಹಕ್ಕನ್ನು ರಾಜ್ಯಗಳಿಗೆ ನೀಡುವ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಯಿತು. ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಇದಕ್ಕೆ ಅನುಮೋದನೆ ನೀಡಿತ್ತು. ಇದರೊಂದಿಗೆ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ OBC ಪಟ್ಟಿಯನ್ನು ತಯಾರಿಸಲು ಸಾಧ್ಯವಾಗುತ್ತದೆ.ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ 127ನೇ ಸಂವಿಧಾನ ತಿದ್ದುಪಡಿ ವಿಧೇಯಕ ಮಂಡಿಸಿದರು. ಈ ಬದಲಾವಣೆಯ ಅಗತ್ಯವೇನಿತ್ತು? ಮಸೂದೆ ಅಂಗೀಕಾರವಾದರೆ ಏನು ಬದಲಾಗುತ್ತದೆ? ಹೊಸ ಮಸೂದೆಯ ಪರಿಣಾಮ ಏನು? ಒಬಿಸಿ ಮೀಸಲಾತಿಗಾಗಿ 50% ಮಿತಿ ತೆಗೆದುಹಾಕಲು ವಿರೋಧ ಪಕ್ಷದ ನಾಯಕರು ಏಕೆ ಒತ್ತಾಯಿಸುತ್ತಿದ್ದಾರೆ? ತಿಳಿದುಕೊಳ್ಳೋಣ..


ಈ ಬದಲಾವಣೆಯ ಅಗತ್ಯವೇನಿತ್ತು?


ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನ್ವಯ ರಾಜ್ಯಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ಮತ್ತು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜನರಿಗೆ ಪ್ರವೇಶ ನೀಡಲು ಯಾವುದೇ ಹಕ್ಕಿಲ್ಲ ಎಂದು ಹೇಳಲಾಗಿದೆ. ಇದಕ್ಕಾಗಿ ನ್ಯಾಯಾಧೀಶರು ಸಂವಿಧಾನದ 102ನೇ ತಿದ್ದುಪಡಿ ಉಲ್ಲೇಖಿಸಿದ್ದಾರೆ. ಅದೇ ನಿರ್ಧಾರದಲ್ಲಿ, ಮಹಾರಾಷ್ಟ್ರದಲ್ಲಿ ಮರಾಠರನ್ನು ಒಬಿಸಿಗೆ ಸೇರಿಸುವ ಮೂಲಕ ಅವರಿಗೆ ಮೀಸಲಾತಿ ನೀಡುವ ನಿರ್ಧಾರವನ್ನು ಸುಪ್ರೀಂಕೋರ್ಟ್ ತಡೆಹಿಡಿದಿತ್ತು.


ಇದನ್ನೂ ಓದಿ:ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್​​ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬೆಂಗಳೂರು ಚಲೋ

ಹೊಸ ಮಸೂದೆಯಲ್ಲಿ ಏನಿದೆ?


ಸಂವಿಧಾನದ 102ನೇ ತಿದ್ದುಪಡಿಯ ಕೆಲವು ನಿಬಂಧನೆಗಳನ್ನು ಸ್ಪಷ್ಟಪಡಿಸಲು ಈ ಮಸೂದೆ ತರಲಾಗಿದೆ. ಮಸೂದೆ ಅಂಗೀಕಾರವಾದ ನಂತರ ಹಿಂದುಳಿದ ಜಾತಿಗಳನ್ನು ಪಟ್ಟಿ ಮಾಡುವ ಹಕ್ಕನ್ನು ರಾಜ್ಯಗಳು ಪಡೆಯುತ್ತವೆ. ಮಸೂದೆ ಅಂಗೀಕಾರವಾದ ನಂತರ ಕೇಂದ್ರ/ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಒಬಿಸಿಗಳ ಪ್ರತ್ಯೇಕ ಪಟ್ಟಿಗಳನ್ನು ಮಾಡುತ್ತವೆ.


ಮಸೂದೆ ಅಂಗೀಕಾರವಾದ ನಂತರ ಏನು ಬದಲಾವಣೆಯಾಗುತ್ತದೆ?


ಈ ಮಸೂದೆ ಅಂಗೀಕಾರವಾದ ತಕ್ಷಣ, ರಾಜ್ಯ ಸರ್ಕಾರಗಳು ಒಬಿಸಿ ಕೋಟಾದಲ್ಲಿ ವಿವಿಧ ಜಾತಿಗಳನ್ನು ಪರಿಗಣಿಸಲು ಸಾಧ್ಯವಾಗುತ್ತದೆ. ಹರಿಯಾಣದಲ್ಲಿ ಜಾಟರು, ರಾಜಸ್ಥಾನದಲ್ಲಿ ಗುಜ್ಜರುಗಳು, ಮಹಾರಾಷ್ಟ್ರದಲ್ಲಿ ಮರಾಠರು, ಗುಜರಾತಿನಲ್ಲಿ ಪಟೇಲರು, ಕರ್ನಾಟಕದಲ್ಲಿ ಲಿಂಗಾಯತರಿಗೆ ದಾರಿ ಸುಗಮವಾಗಬಹುದು.


ಇದನ್ನೂ ಓದಿ:ಅಪರಾಧ ಹಿನ್ನೆಲೆಯ ಅಭ್ಯರ್ಥಿಯ ವಿವರವನ್ನು 48 ಗಂಟೆಯೊಳಗೆ ಪ್ರಕಟಿಸಬೇಕು: ಸುಪ್ರೀಂ ಕೋರ್ಟ್

ರಾಜ್ಯ ಸರಕಾರಗಳ ಮೀಸಲಾತಿಯ ನಿರ್ಧಾರ ತಡೆಯಲು ಸುಪ್ರೀಂ ಕೋರ್ಟ್‌ಗೆ ಸಾಧ್ಯವಾಗುವುದಿಲ್ಲವೇ?


ಮಸೂದೆ ಅಂಗೀಕರಿಸಿದಾಗ ಹೊಸ ಜಾತಿಗಳನ್ನು ಸೇರ್ಪಡೆಗೊಳಿಸಲು OBCಗೆ ಅಧಿಕಾರ ಸಿಗುತ್ತದೆ. ಇಂದಿರಾ ಸಾಹ್ನಿ ಪ್ರಕರಣದ ನಿರ್ಧಾರದ ಪ್ರಕಾರ, ಯಾರಾದರೂ 50% ಮಿತಿ ಮೀರಿ ಮೀಸಲಾತಿ ನೀಡಿದರೆ, ಸುಪ್ರೀಂಕೋರ್ಟ್ ಅದನ್ನು ನಿಷೇಧಿಸಬಹುದು. ಈ ಕಾರಣಕ್ಕಾಗಿ ಹಲವು ರಾಜ್ಯಗಳು ಈ ಮಿತಿ ರದ್ದುಗೊಳಿಸುವಂತೆ ಒತ್ತಾಯಿಸುತ್ತಿವೆ.




ಈ ಮಸೂದೆಯ ಹಿಂದಿರುವ ರಾಜನೀತಿ ಏನು?


ಪ್ರತಿಪಕ್ಷಗಳು ಬಹಳ ಹಿಂದಿನಿಂದಲೂ ಜಾತಿ ಗಣತಿಗೆ ಒತ್ತಾಯಿಸುತ್ತಿವೆ. ಈ ಮಸೂದೆಯ ಮೂಲಕ, ಕೇಂದ್ರ ಸರ್ಕಾರ ಹಿಂದುಳಿದ ಜಾತಿಗಳನ್ನು ತಲುಪಲು ಪ್ರಯತ್ನಿಸಿದೆ. ಮಸೂದೆ ಅಂಗೀಕರಿಸಿದ ನಂತರ, ಹರಿಯಾಣ, ಗುಜರಾತ್, ಕರ್ನಾಟಕದಂತಹ ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರಗಳು ಜಾಟ್, ಪಟೇಲ್ ಮತ್ತು ಲಿಂಗಾಯತ ಜಾತಿಗಳನ್ನು ಒಬಿಸಿಗೆ ಸೇರಿಸುವ ಮೂಲಕ ಚುನಾವಣಾ ಲಾಭ ಪಡೆಯಲು ಬಯಸುತ್ತವೆ. ಮೀಸಲಾತಿ ನೀಡುವುದರಿಂದ ರಾಜಕೀಯ ಪಕ್ಷಗಳಲ್ಲಿ ಜಾತಿಯಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ.


top videos
    First published: