• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • 'ಆರ್​ಸಿಬಿ ಮ್ಯಾಚ್ ಗೆಲ್ಲಬಹುದು, ಕಪ್ ಗೆಲ್ಲಾಕಾಗಲ್ಲ..ಆ ನಂಬಿಕೆ..': ಯುವರತ್ನ 'ಪವರ್' ಫುಲ್ ಟೀಸರ್ ಔಟ್

'ಆರ್​ಸಿಬಿ ಮ್ಯಾಚ್ ಗೆಲ್ಲಬಹುದು, ಕಪ್ ಗೆಲ್ಲಾಕಾಗಲ್ಲ..ಆ ನಂಬಿಕೆ..': ಯುವರತ್ನ 'ಪವರ್' ಫುಲ್ ಟೀಸರ್ ಔಟ್

yuvaratna

yuvaratna

'ರಾಜಕುಮಾರ' ಚಿತ್ರದ ಬಳಿಕ ಸಂತೋಷ್ ಆನಂದ್​ರಾಮ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಪುನೀತ್ ಕಾಲೇಜು ಕುಮಾರನಾಗಿ ಬಣ್ಣ ಹಚ್ಚುತ್ತಿದ್ದು, 'ರಾಜರತ್ನ'ನಿಗೆ ಟಕ್ಕರ್ ಕೊಡುವ ಪಾತ್ರದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಇನ್ನು ಮತ್ತೊಂದು ಪ್ರಮುಖ ಪಾತ್ರದಲ್ಲಿ ಅರು ಗೌಡ ಬಣ್ಣಹಚ್ಚಿದ್ದಾರೆ. 

ಮುಂದೆ ಓದಿ ...
  • Share this:

ಸ್ಯಾಂಡಲ್​ವುಡ್​ನಲ್ಲಿ ಸಖತ್ ಸೌಂಡ್ ಮಾಡಿದ್ದ ಯುವರತ್ನ ಇದೀಗ ಮತ್ತೊಮ್ಮೆಎಂಟ್ರಿ ಕೊಟ್ಟಿದೆ. ಅದು ಅಂತಿಂಥ ಎಂಟ್ರಿಯಲ್ಲ..ಖಡಕ್ ಖದರ್ ತುಂಬಿರೋ ಡೈಲಾಗ್​ಗಳೊಂದಿಗಿನ ಎಂಟ್ರಿ ಎಂಬುದಷ್ಟೇ ವಿಶೇಷ. ಹೌದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಯುವರತ್ನ ತಂಢ ಡೈಲಾಗ್ ಟೀಸರ್ ಬಿಡುಗಡೆ ಮಾಡಿದೆ.


ಈ ಹಿಂದೆ ದಸರಾ ಹಬ್ಬದಂದು ಬಿಡುಗಡೆಯಾಗಿದ್ದ ಈ ವಿಡಿಯೋ ತುಣುಕಿನಲ್ಲಿನ ಪವರ್​ ಸ್ಟಾರ್ ಪುನೀತ್ ರಾಜ್​ ಕುಮಾರ್ ಅವರ ಪವರ್​ಫುಲ್ ಎಂಟ್ರಿಯನ್ನು ತೋರಿಸಲಾಗಿತ್ತು. ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದ ಅಪ್ಪು ಎಂಟ್ರಿಯಲ್ಲೇ ಮೋಡಿ ಮಾಡಿದ್ದರು. ಇನ್ನು ಸಂತೋಷ್ ಆನಂದ್​ರಾಮ್ ಅವರ ನಿರ್ದೇಶನ ಮತ್ತೊಮ್ಮೆ ಮನಮೋಹಕವಾಗಿ ಮೂಡಿಬಂದಿದೆ ಎಂಬ ಮಾತುಗಳು ಕೇಳಿ ಬಂದಿತ್ತು.


ಅಲ್ಲದೆ ಈ ದುನಿಯಾದಲ್ಲಿ ಮೂರು ಥರ ಗಂಡಸರು ಇರುತ್ತಾರೆ. ರೂಲ್​ನ ಫಾಲೋ ಮಾಡೋರು. ರೂಲ್​ನ ಬ್ರೇಕ್ ಮಾಡೋರು. ಮೂರನೇ ಅವರು ನನ್ ಥರ ರೂಲ್​ ಮಾಡೋರು ಎಂಬ ಡೈಲಾಗ್ ಝಲಕ್ ನೀಡಲಾಗಿತ್ತು. ಇದೀಗ ಡೈಲಾಗ್ ಟೀಸರನ್ನೇ ಅಭಿಮಾನಿಗಳ ಮುಂದಿಟ್ಟಿರುವ ರಾಜಕುಮಾರ ನಿರ್ದೇಶಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿದ್ದಾರೆ.


ಡಾಲಿ ಧನಂಜಯ್ ಡೇರಿಂಗ್ ಡೈಲಾಗ್​ನೊಂದಿಗೆ ಶುರುವಾಗುವ ಟೀಸರ್ ಅಪ್ಪು ಅಭಿಮಾನಿಗಳಂತು ರಸದೌತಣ ಎನ್ನಬಹುದು. ಗಂಡಸ್ತನ, ಚರ್ಬಿ, ಮೀಟ್ರು, ಮಾರ್ಕೆಟ್ಟು..ಇವೆಲ್ಲ ಇರೋನು ಒಬ್ಬ ಬೇಕು ಎಂಬ ಡೈಲಾಗ್ ಮುಗಿಯುತ್ತಿದ್ದಂತೆ ಅತ್ತ ಅಪ್ಪು ಎಂಟ್ರಿಯಾಗುತ್ತಾನೆ. ಡಾನು, ಸೀಟು..ಕಾಲೇಜು ಸುತ್ತ ನಡೆಯುವ ಕಥೆಯ ಝಲಕ್​ನ್ನು ಟೀಸರ್​ನಲ್ಲಿ ತೆರೆದಿಡಲಾಗಿದೆ.


ಹಾಗೆಯೇ ಖದರ್ ಇಲ್ದ ಕಡೆ ನಮ್ ಹುಡುಗರೇ ಇರಲ್ಲ..ಇನ್ನು ನಾನಿರ್ತೀನಾ ಎಂಬ ಪವರ್ ಫುಲ್ ಡೈಲಾಗ್​ಗಂತು ಅಭಿಮಾನಿಗಳಿಗಾಗಿ ಹೇಳಿಸಿದಂತಿದೆ. ಒಟ್ಟಿನಲ್ಲಿ ಪವರ್ ಸ್ಟಾರ್ ಕಡೆಯಿಂದ ಹುಟ್ಟುಹಬ್ಬಕ್ಕೆ ಪವರ್​ಫುಲ್ ಟೀಸರ್  ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಪವರ್ ಪ್ಯಾಕ್ಡ್ ಟೀಸರನ್ನೇ ನಿರ್ದೇಶಕ ಸಂತೋಷ್ ಆನಂದ್​ರಾಮ್ ನೀಡಿದ್ದಾರೆ.


ಇನ್ನು ಟೀಸರ್​ನಲ್ಲಿ ಆರ್​ಸಿಬಿ ಡೈಲಾಗ್ ಕೂಡ ಇದ್ದು, ಡಾಲಿಯ ಖಡಕ್ ಧ್ವನಿ ಮೂಲಕ ಹೊರಡುವ ಆರ್​ಸಿಬಿ ಮ್ಯಾಚ್ ಗೆಲ್ಬಹುದು, ಕಪ್ ಗೆಲ್ಲಕ್ಕಾಗಲ್ಲ ಎಂಬ ಸಂಭಾಷನೆಗೆ ಕಂಚಿನ ಕಂಠದಲ್ಲಿ ಅಪ್ಪು ನೀಡುವ ಉತ್ತರವನ್ನು ನೀವು ಟೀಸರ್​ನಲ್ಲೇ ಆಸ್ವಾದಿಸಬೇಕು.



ಶಿಕ್ಷಣ ವ್ಯವಸ್ಥೆಯ ಕುರಿತ ಕಥೆ ಯುವರತ್ನದಲ್ಲಿರಲಿದ್ದು, ಪವರ್​ ಸ್ಟಾರ್ ಪುನೀತ್ ಜೊತೆ ಖ್ಯಾತನಟ ಪ್ರಕಾಶ್ ರಾಜ್, ರಾಧಿಕಾ ಶರತ್ ಕುಮಾರ್ ಬಣ್ಣಹಚ್ಚಿದ್ದಾರೆ. ಇನ್ನು ದೂದ್​ಪೇಡ ದಿಗಂತ್ , 'ಇಂತೀ ನಿನ್ನ ಪ್ರೀತಿಯ' ಚಿತ್ರ ಖ್ಯಾತಿಯ ನಟಿ ಸೋನು ಗೌಡ ಪ್ರಮುಖ ಪಾತ್ರದಲ್ಲಿ ಎಂಟ್ರಿ ಕೊಡಲಿದ್ದಾರೆ.


ಹಾಗೆಯೇ ಚಿತ್ರದಲ್ಲಿ ಕಾಲಿವುಡ್​ ನಟಿ ಸಯೇಶಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದರೊಂದಿಗೆ ಸೋನು ಗೌಡರ ಎಂಟ್ರಿಯು ಚಿತ್ರವು ತ್ರಿಕೋನ ಪ್ರೇಮಕಥೆಯನ್ನು ಹೇಳಲಿದೆಯೇ ಎಂಬ ಕುತೂಹಲಕಾರಿ ಪ್ರಶ್ನೆಯನ್ನು ಸಿನಿಪ್ರಿಯರಲ್ಲಿ ಹುಟ್ಟುಹಾಕಿದೆ.


'ರಾಜಕುಮಾರ' ಚಿತ್ರದ ಬಳಿಕ ಸಂತೋಷ್ ಆನಂದ್​ರಾಮ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಪುನೀತ್ ಕಾಲೇಜು ಕುಮಾರನಾಗಿ ಬಣ್ಣ ಹಚ್ಚುತ್ತಿದ್ದು, 'ರಾಜರತ್ನ'ನಿಗೆ ಟಕ್ಕರ್ ಕೊಡುವ ಪಾತ್ರದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಇನ್ನು ಮತ್ತೊಂದು ಪ್ರಮುಖ ಪಾತ್ರದಲ್ಲಿ ಅರು ಗೌಡ ಬಣ್ಣಹಚ್ಚಿದ್ದಾರೆ.

First published: