ಬಾಲಯ್ಯ ಅವರ ಸಿನಿ ಕೆರಿಯರ್ನಲ್ಲೇ ಈ ಸಿನಿಮಾ ದೊಡ್ಡ ದಾಖಲೆ(Records) ಬರೆದಿದೆ. ಇದೀಗ ಮಹಿಳೆಯೊಬ್ಬರು ಬಾಲಯ್ಯ ಅವರ ಬಗ್ಗೆ ಡೈಲಾಗ್(Dialogue) ಹೊಡೆದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ
ನಂದಮೂರಿ ಬಾಲಕೃಷ್ಣ(Nandamuri Balakrishna) ಅಂದರೆ ಸಾಕು, ಊಹೆಗೂ ನಿಲುಕದ ಫೈಟ್ ಸೀನ್ಸ್(Fight Scene).. ತೊಡೆ ತಟ್ಟಿ ವೇಗದಿಂದ ಬರುತ್ತಿರುವ ರೈಲು ನಿಲ್ಲುಸುವ ತಾಕತ್ತು ಇರುವುದು ಬಾಲಯ್ಯ ಅವರಿಗೆ ಮಾತ್ರ. ಇನ್ನೂ ಇವರ ಡೈಲಾಗ್ಗೆ ಎದುರಲ್ಲಿರುವವರ ಕಿವಿಯಲ್ಲಿ ರಕ್ತ ಬರುವುದು ಕಾಮನ್. ಇವರ ಸಿನಿಮಾ ರಿಲೀಸ್ ಆಯ್ತು ಅಂದರೆ, ಅಲ್ಲಿ ಹಬ್ಬದ ವಾತಾವರಣ, ನಟರಾಜನೇ ನಾಚಿಕೊಳ್ಳುವಂತಹ ನೃತ್ಯ ಮಾಡುವುದು ಅಂದರೆ, ಅದು ಬಾಲಯ್ಯ(Balayya) ಅವರಿಂದ ಮಾತ್ರ ಸಾಧ್ಯ. ಇವರ ಸಿನಿಮಾ ಮನರಂಜನೆಗೆ ಎಂದು ಮೋಸ ಮಾಡಿಲ್ಲ. ಓವರ್ ಬಿಲ್ಡಪ್(Over Buildup) ಫೈಟ್ಸ್, ಡೈಲಾಗ್ಸ್ ಇದ್ರೂ ಸಿನಿಮಾ ರಸಿಕರಿಗೆ ಮಜಾ ಕೊಡುವುದರಲ್ಲಿ ಮೋಸ ಮಾಡುವುದಿಲ್ಲ. ಚಿತ್ರಮಂದಿರಗಳಲ್ಲಿ ಇವರ ಡೈಲಾಗ್ಗಳಿಗಿಂತ, ಇವರ ಅಭಿಮಾನಿಗಳ ಬಾಯಿಯಲ್ಲಿ ‘ಜೈ ಬಾಲಯ್ಯ.. ಜೈ ಜೈ ಬಾಲಯ್ಯ’ ಎಂಬ ಡೈಲಾಗ್ ಸದ್ದು ಕೇಳಿಸಿತ್ತೆ. ಅಷ್ಟರ ಮಟ್ಟಿಗೆ ಮೋಡಿ ಮಾಡಿದ್ದಾರೆ ನಂದಮೂರಿ ಬಾಲಕೃಷ್ಣ. ಇತ್ತೀಚೆಗೆ ತೆರೆಕಂಡ ಇವರ ಅಖಂಡ(Akhanda) ಸಿನಿಮಾ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿತು. ಬಾಲಯ್ಯ ಅವರ ಸಿನಿ ಕೆರಿಯರ್ನಲ್ಲೇ ಈ ಸಿನಿಮಾ ದೊಡ್ಡ ದಾಖಲೆ(Records) ಬರೆದಿದೆ. ಇದೀಗ ಮಹಿಳೆಯೊಬ್ಬರು ಬಾಲಯ್ಯ ಅವರ ಬಗ್ಗೆ ಡೈಲಾಗ್(Dialogue) ಹೊಡೆದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬಾಲಯ್ಯನ ಬಗ್ಗೆ ಹಾಡಿ ಹೊಗಳಿದ ಮಹಿಳೆ!
ಮಹಿಳೆಯೊಬ್ಬರಯ ಕಾರಿನಲ್ಲಿ ಕುಳಿತು ಬಾಲಯ್ಯ ಅವರ ಬಗ್ಗೆ ಮಾತನಾಡಿದ್ದಾರೆ. ಅಖಂಡ ಸಿನಿಮಾಗೆ ಸಿಕ್ಕ ಯಶಸ್ಸಿನ ಬಗ್ಗೆ ಹೇಳಿದ್ದಾರೆ. ಬಾಲಯ್ಯ ಅವರಂತೆ ಡೈಲಾಗ್ ಹೊಡೆದಿದ್ದಾರೆ. ಹೋಮ್ ಲೋನ್ ಕಾರ್ ಲೋನ್ ಬಾಲಯ್ಯ ಸೈಕ್ಲೋನ್, ಕೋಕೋ ಕೋಲಾ ಪೆಪ್ಸಿ.. ಬಾಲಯ್ಯಗಾರು ಸೆಕ್ಸಿ’ ಈ ರೀತಿಯ ಡೈಲಾಗ್ಗಳನ್ನು ಈ ಮಹಿಳೆ ಹೇಳಿದ್ದಾರೆ. ಈ ವಿಡಿಯೋ ಎಲ್ಲಿನದು ಎಂದು ತಿಳಿದುಬಂದಿಲ್ಲ, ಆದರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಬಾಲಯ್ಯನ ಅಭಿಮಾನಿಗಳು ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಕಳೆದ ವರ್ಷ ಟಾಲಿವುಡ್ ಬಾಕ್ಸಾಫೀಸ್ನಲ್ಲಿ ಹೊಸ ಅಧ್ಯಾಯ ಬರೆದ ಸಿನಿಮಾ 'ಅಖಂಡ'. ಲೆಜೆಂಡ್ ಬಾಲಕೃಷ್ಣಗೆ 'ಅಖಂಡ' ಸಿನಿಮಾ ಸೂಪರ್ ಸಕ್ಸಸ್ ತಂದುಕೊಟ್ಟಿತ್ತು. ಬಾಲಕೃಷ್ಣ ಅಬ್ಬರಕ್ಕೆ ಗಲ್ಲಾಪಟ್ಟಿಗೆಯಲ್ಲಿ ಪತರಗುಟ್ಟಿ ಹೋಗಿತ್ತು.ಹೊಸ ದಾಖಲೆಯನ್ನು ಬಾಲಯ್ಯ ಅವರ ಅಖಂಡ ಸಿನಿಮಾ ಕ್ರಿಯೆಟ್ ಮಾಡಿದೆ. 150 ಕೋಟಿ ಕ್ಲಬ್ ಸೇರಿ ಹೊಸ ದಾಖಲೆ ಸೃಷ್ಟಿಸಿದೆ. 150 ಕೋಟಿ ಕ್ಲಬ್ ಸೇರಿದ ಬಾಲಯ್ಯ ಅವರ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಒಂದು ಸಿನಿಮಾ ಸೂಪರ್ ಹಿಟ್ ಆದಾಗ ಅದರ ಸೀಕ್ವೆಲ್ ಬಗ್ಗೆ ಬೇಡಿಕೆ ಹೆಚ್ಚಾಗುತ್ತೆ. ಅದರಂತೆ ಬಾಲಕೃಷ್ಣ ಅಭಿಮಾನಿಗಳು 'ಅಖಂಡ 2' ಬೇಕು ಅಂತ ಒತ್ತಡ ಹೇರಿದ್ದು, ನಿರ್ದೇಶಕ ಬೋಯಪಟ್ಟಿ ಶ್ರೀನು ಪಾಸಿಟಿವ್ ಉತ್ತರ ನೀಡಿದ್ದಾರೆ. ಟಾಲಿವುಡ್ ದಿಗ್ಗಜ ಬಾಲಕೃಷ್ಣ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ದೊಡ್ಡ ಯಶಸ್ಸು ಕಂಡಿರಲಿಲ್ಲ. ಇನ್ನೊಂದು ಕಡೆ ಬೋಯಪಟ್ಟು ಶ್ರೀನು ಕೂಡ ಸೋಲಿನ ಸುಳಿಗೆ ಸಿಕ್ಕು ಒದ್ದಾಡುತ್ತಿದ್ದರು. ಒಂದು ಅದ್ಭುತ ಗೆಲುವಿಗಾಗಿ ಎದುರು ನೋಡುತ್ತಿದ್ದ ಇಬ್ಬರಿಗೂ ಮರುಜನ್ಮ ನೀಡಿದ್ದು 'ಅಖಂಡ'. ಹೀಗಾಗಿ ಈ ಜೋಡಿ ಮತ್ತೆ ಸಿನಿಮಾ ಮಾಡಲಿದ್ದಾರೆ.
Published by:Vasudeva M
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ