DBoss Darshan: ರಾಜಮೌಳಿಯ ಮಹಾಭಾರತದಲ್ಲಿ ದುರ್ಯೋಧನನಾಗ್ತಾರ ಡಿಬಾಸ್: ಲಂಕಾಧಿಪತಿಯಾಗ್ತಾರಾ ಕೌರವಾಧಿಪತಿ ದರ್ಶನ್ ?
DBoss Darshan: ಕುರುಕ್ಷೇತ್ರದಲ್ಲಿ ದರ್ಶನ್ ದುರ್ಯೋಧನನಾಗಿ ತೋರಿರುವ ದರ್ಪ, ಗತ್ತು ಈಗ ದಾಸನಿಗೆ ಅವಕಾಶಗಳ ಸುರಿಮಳೆಯನ್ನೇ ಸುರಿಸುವಂತಿದೆ. ಅದಕ್ಕೆ ಈಗ ಮತ್ತೊಂದು ದೊಡ್ಡ ಪಾತ್ರ ದಾಸನಿಗಾಗಿ ಕಾಯುತ್ತಿದೆ.

ದುರ್ಯೋಧನನಾಗಿ ದರ್ಶನ್
- News18
- Last Updated: August 13, 2019, 4:31 PM IST
'ಕುರುಕ್ಷೇತ್ರ'ದಲ್ಲಿ ದರ್ಶನ್ ದುರ್ಯೋಧನನಾಗಿ ತೋರಿರುವ ದರ್ಪ, ಗತ್ತು ಈಗ ದಾಸನಿಗೆ ಅವಕಾಶಗಳ ಸುರಿಮಳೆಯನ್ನೇ ಸುರಿಸುವಂತಿದೆ. ಅದಕ್ಕೆ ಈಗ ಮತ್ತೊಂದು ದೊಡ್ಡ ಪಾತ್ರ ದಾಸನಿಗಾಗಿ ಕಾಯುತ್ತಿದೆ.

ಡಿಬಾಸ್ ಅಭಿಮಾನಿಗಳ ಟ್ವೀಟ್
ಇದನ್ನೂ ಓದಿ: ಟ್ವಿಟರ್ನಲ್ಲಿ ದರ್ಶನ್ರನ್ನು ಅನ್ಫಾಲೋ ಮಾಡಿದ ಹೆಂಡತಿ ವಿಜಯಲಕ್ಷ್ಮಿ..!
ಹೀಗಿರುವಾಗ ದುರ್ಯೋಧನನಂತಹ ಪಾತ್ರ ಮಾಡಿ ಸೈ ಎನಿಸಿಕೊಳ್ಳುವುದು ಸಾಮಾನ್ಯ ಅಲ್ಲ. ಈಗ ದರ್ಶನ್ ದುರ್ಯೋಧನನಾಗಿ ಚಿತ್ರಮಂದಿರದಲ್ಲಿ ಅಬ್ಬರಿಸುತ್ತಿರೋದು ನೋಡಿ ಅದಾಗಲೇ ಮತ್ತೆರೆಡು ಮಹಾನ್ ಪಾತ್ರಗಳನ್ನು ದರ್ಶನ್ ಮಾಡಬೇಕು ಅಂತ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ
D-BOSS as ravana fest for boss fans 😍✌ To see completely in negative shade😎😇#DBoss #ChallengingStarDarshan
FollowUs👉 @CSDFC_Mangalore@DasaDarshan @Dcompany171 @AICSDF @CSDSK1 @DTEAM7999 pic.twitter.com/VR2FzsVbjr
— Darshan's DieHardFans Club (@Darshan_DHFC) May 3, 2018
#allu_aravindh garu if at all you produce #Ramayana movie through @GeethaArts please cast @dasadarshan as #Ravana. If u need more clarity why I'm telling you this please watch #kurukshethra movie. Darshan sir is sizzling as #Dhuryodhana. Oly he can pull it off a negative shade.
— Dhanush (@Im_dhanushg) August 9, 2019
It's a tragedy.Out of context quote?Further tragedy RSS Chief talks of pluralism , Secularism. RSS also welcomed SC judgement on #Sabarimala. When RKM will observe Ravana Jayanthi, as Ravana was a foremost devotee of Shiva & had His Darshan also( as d celebrate Xmas).
— P V Natarajan (@pvnatarajan) January 14, 2019
ನಿರ್ದೇಶಕ ರಾಜಮೌಳಿ ಅವರ ಕನಸಿನ ಕೂಸಾಗಿರುವ 'ಮಹಾಭಾರತ' ಸಿನಿಮಾ ಕೆಲಸ ಆರಂಭವಾದರೆ, ಅದರಲ್ಲಿ ದರ್ಶನ್ ಅವರೇ ದುರ್ಯೋಧನನ ಪಾತ್ರ ಮಾಡಬೇಕು. ಅಷ್ಟೇ ಅಲ್ಲ ಬಾಲಿವುಡ್ನಲ್ಲಿ ಈಗಾಗಲೇ ಕೆಲಸ ಆರಂಭಿಸಿರುವ 'ರಾಮಾಯಣ' ಚಿತ್ರದಲ್ಲೂ ದಚ್ಚು ರಾವಣನಾಗಿ ಅಭಿನಯಿಸಬೇಕು ಎಂಬುದು ಡಿಬಾಸ್ ಅಭಿಮಾನಿಗಳ ಆಗ್ರಹ.
ರಾಮಾಯಣದ ಮಹಾವೀರ... ಲಂಕೆಯ ಒಡೆಯ... ರಾಕ್ಷಸರ ರಾಜ ರಾವಣನ ಪಾತ್ರವನ್ನು ದರ್ಶನ್ ಮಾಡಬೇಕು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸುತ್ತಿದ್ದಾರೆ.
ಗೀತಾ ಆರ್ಟ್ಸ್ ಈಗಾಗಲೇ 'ರಾಮಾಯಣ'ವನ್ನು ತೆರೆಯ ಮೇಲೆ ತರುವ ಯೋಜನೆ ಹಾಕಿಕೊಂಡಿದೆ. ಬಾಲಿವುಡ್ನಲ್ಲಿ ನಿರ್ಮಾಣಗೊಳ್ಳಲಿರುವ ಈ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶಿಸಲಿದ್ದಾರೆ. 500 ಕೋಟಿ ಬಜೆಟ್ನಲ್ಲಿ ಸಿದ್ಧಗೊಳ್ಳಲಿರುವ ಈ ರಾಮಾಯಣವನ್ನು ತೆಲುಗು ಹಾಗೂ ತಮಿಳಿನಲ್ಲೂ ಡಬ್ ಮಾಡುವ ಯೋಜನೆ ಇದೆ.
ಇದನ್ನೂ ಓದಿ: ಸುದೀಪ್ ಖಾರವಾಗಿ ಬರೆದ ಟ್ವೀಟ್ ಯಾವ ಸ್ಟಾರ್ ನಟನಿಗೆ ಗೊತ್ತಾ..?
3ಡಿಯಲ್ಲಿ ಮೂರು ಭಾಷೆಗಳಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾದಲ್ಲಿ ದರ್ಶನ್ ರಾವಣನಾಗೋದು ಸೂಕ್ತ ಅಂತ ಒತ್ತಾಯ ಮಾಡ್ತಿದ್ದಾರೆ ದರ್ಶನ್ ಅಭಿಮಾನಿಗಳು. ಆದರೆ ಈ ಬಗ್ಗೆ ಸಿನಿಮಾದ ನಿರ್ಮಾಪಕರು ಅಥವಾ ನಿರ್ದೇಶಕರು ಇನ್ನೂ ಮಾತನಾಡಿಲ್ಲ. ಒಟ್ಟಾರೆ 2020ರಲ್ಲಿ ಆರಂಭವಾಗಲಿರೋ ಈ ಬಿಗ್ಬಜೆಟ್ ರಾಮಾಯಣದಲ್ಲಿ ದರ್ಶನ್ ಲಂಕಾಧಿಪತಿಯಾಗ್ತಾರ ಅಥವಾ ಇಲ್ಲವಾ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
Kim Kardashian: ಪಡ್ಡೆಗಳ ನಿದ್ದೆಗೆಡಿಸಿದೆ ಅಮೆರಿಕದ ಟಾಪ್ ರಿಯಾಲಿಟಿ ಸ್ಟಾರ್ ಕಿಮ್ ಕರ್ದಾಷಿಯನ್ರ ಹಾಟ್ ಚಿತ್ರಗಳು..!