• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • VR ಅಂದ್ರೆ Vikrant Rona ಅಲ್ಲ, ವಿ. ರವಿಚಂದ್ರನ್​ ಅಂತೆ! ಸುದೀಪ್​ನ ಅಪ್ಪಿ ಅಳೋದು ಫಿಕ್ಸ್​ ಎಂದ ಕ್ರೇಜಿಸ್ಟಾರ್​​​

VR ಅಂದ್ರೆ Vikrant Rona ಅಲ್ಲ, ವಿ. ರವಿಚಂದ್ರನ್​ ಅಂತೆ! ಸುದೀಪ್​ನ ಅಪ್ಪಿ ಅಳೋದು ಫಿಕ್ಸ್​ ಎಂದ ಕ್ರೇಜಿಸ್ಟಾರ್​​​

ರವಿಚಂದ್ರನ್​, ಕಿಚ್ಚ ಸುದೀಪ್​

ರವಿಚಂದ್ರನ್​, ಕಿಚ್ಚ ಸುದೀಪ್​

ಚಿತ್ರರಂಗದ ದಿಗ್ಗಜರು ಬಂದು ತ್ರಿಡಿಯಲ್ಲಿ ವಿಕ್ರಾಂತ್​ ರೋಣನ ಟ್ರೈಲರ್​ ಕಣ್ಣು ತುಂಬಿಕೊಂಡರು.  ಶಿವಣ್ಣ, ವಿ .ರವಿಚಂದ್ರನ್​, ರಮೇಶ್​ ಅರವಿಂದ್​, ಡಾಲಿ ಧನಂಜಯ್​, ರಿಷಭ್​ ಶೆಟ್ಟಿ, ರಕ್ಷಿತ್​ ಶೆಟ್ಟಿ, ರಾಜ್​ ಬಿ ಶೆಟ್ಟಿ, ಸೃಜನ್​ ಲೋಕೇಶ್​ ಸೇರಿ ಚಿತ್ರರಂಗದ ಹಲವರು ಇಲ್ಲಿ ಹಾಜರಿದ್ದರು

ಮುಂದೆ ಓದಿ ...
  • Share this:

6 ಅಡಿ ಕಟೌಟ್​ ಅಂದ್ರೆ ಥಟ್​ ಅಂತ ಕಣ್ಣು ಮುಂದೆ ಬರುವುದು ಕಿಚ್ಚ ಸುದೀಪ್ (Kiccha Sudeep) ​. 6 ಅಡಿ ಕಟೌಟ್​, ಸ್ಟೈಲಿಶ್​ ಲುಕ್ (Stylish Look)​, ಮುಖದಲ್ಲಿ ಸದಾ ಸ್ಥಾನ ಪಡೆದುಕೊಂಡಿರುವ ಆ ನಗು. ಇದೆಲ್ಲ ಹೇಳುತ್ತಿದ್ದರೆ ಕಿಚ್ಚ ಸುದೀಪ್​ ಆಕೃತಿ ನಮ್ಮ ಮುಂದೆ ಬಂದು ನಿಲ್ಲುತ್ತೆ. ಇನ್ನೂ ತ್ರಿಡಿ (3D) ಯಲ್ಲಿ ಅವರನ್ನು ತೋರಿಸಿದರೆ, ನೋಡುವುದಕ್ಕೆ ಹೇಗಿರಬೇಡ ಎಂದು ನೀವೂ ಊಹೆ ಮಾಡಿಕೊಳ್ಳಿ. ಯೆಸ್​​, ನಾವು ಇಲ್ಲಿ ಮಾತನಾಡುತ್ತಿರುವುದು ಕನ್ನಡ ಚಿತ್ರರಂಗದ ಬಹು ನೀರಿಕ್ಷಿತ ಸಿನಿಮಾ ವಿಕ್ರಾಂತ್​ ರೋಣ (Vikrant Rona) ಬಗ್ಗೆ. ಹೌದು, ಇಂದು ಓರಾಯನ್​ ಮಾಲ್​ನಲ್ಲಿ ಇಂದು ವಿಕ್ರಾಂತ್​ ರೋಣ ಟ್ರೈಲರ್​​ ಲಾಂಚ್ (Vikrant Rona Trailer Launch)​ ಕಾರ್ಯಕ್ರಮ ನಡೀತು. ಚಿತ್ರರಂಗದ ದಿಗ್ಗಜರು ಬಂದು ತ್ರಿಡಿಯಲ್ಲಿ ವಿಕ್ರಾಂತ್​ ರೋಣನ ಟ್ರೈಲರ್​ ಕಣ್ಣು ತುಂಬಿಕೊಂಡರು.  ಶಿವಣ್ಣ (Shivanna) , ವಿ .ರವಿಚಂದ್ರನ್ (V Ravichandran) ​, ರಮೇಶ್​ ಅರವಿಂದ್ (Ramesh Aravind)​, ಡಾಲಿ ಧನಂಜಯ್ (Daali Dhananjay) ​, ರಿಷಭ್​ ಶೆಟ್ಟಿ (Rishab Shetty) , ರಕ್ಷಿತ್​ ಶೆಟ್ಟಿ (Rakshit Shetty) , ರಾಜ್​ ಬಿ ಶೆಟ್ಟಿ (Raj B Shetty) , ಸೃಜನ್​ ಲೋಕೇಶ್ (Srujan Lokesh)​ ಸೇರಿ ಚಿತ್ರರಂಗದ ಹಲವರು ಇಲ್ಲಿ ಹಾಜರಿದ್ದರು.


VR ಅಂದ್ರೆ Vikrant Rona ಅಲ್ಲ, ವಿ. ರವಿಂಚಂದ್ರನ್​ ಅಂತೆ!


ಸಿನಿಮಾದ ಟ್ರೈಲರ್​ ನೋಡಿದ ಬಳಿಕ ಎಲ್ಲರೂ ವೇದಿಕೆ ಮೇಲೆ ಬಂದು ತಮ್ಮ ಅಭಿಪ್ರಾಯ ತಿಳಿಸಿದರು. ಹೀಗೆ ಎಲ್ಲರೂ ಮಾತನಾಡಿದ ಬಳಿಕ ವಿ.ರವಿಚಂದ್ರನ್​ ವೇದಿಕೆ ಮೇಲೆ ಬಂದರು. ವೇದಿಕೆ ಮೇಲೆ ಬರುವಾಗಲೇ ಕಿಚ್ಚ ಸುದೀಪ್​ ಅವರ ಕೈ ಹಿಡಿದುಕೊಂಡು ಮೇಲೆ ಬಂದರು. ಸಿನಿಮಾದ ಟ್ರೈಲರ್​​ನಲ್ಲಿ ಭಯ ಎನ್ನುವ ಪದದ ಬಗ್ಗೆ ಮಾತನಾಡಿದ ರವಿಚಂದ್ರನ್​, 'ಅನುಪ್​ ಭಂಡಾರಿ  ಕಿಚ್ಚ ಸುದೀಪ್​ ವಿ ರವಿಚಂದ್ರನ್​ ಅವರ ಮಗ ರೀ, ಅವನಿಗೆ ಭಯ ಅಂದ್ರೆ ಏನು ಗೊತ್ತಿಲ್ಲ' ಅಂತ ಹೇಳಿದರು.


ನನಗೆ ತಂದೆ ಸ್ಥಾನ ಕೊಡ್ತಾನೆ ಕಿಚ್ಚ ಎಂದ ಕ್ರೇಜಿಸ್ಟಾರ್​!


ಮುಂದುವರೆದು, ರವಿಚಂದ್ರನ್​ ಅವರು 'ವಿ ಆರ್​ ಎಂದರೆ ನಿಮಗೆ ವಿಕ್ರಾಂತ್​ ರೋಣ ಅಂತ ಗೊತ್ತು ವಿಆರ್​ ಅಂದ್ರೆ ವಿ ರವಿಚಂದ್ರನ್​ ಅಂತಾನೂ ನೀವು ತಿಳಿದುಕೊಳ್ಳಬೇಕು. ಪ್ರೇಮಲೋಕ ಸಿನಿಮಾ ನೋಡಿದಾಗ ನಮ್ಮ ತಂದೆ ಬಂದು ನನ್ನ ಬೆನ್ನಿನ ಮೇಲೆ ಒರಗಿ ಅತ್ತಿದ್ದರು. ವಿಕ್ರಾಂತ್ ರೋಣ ಸಿನಿಮಾ ನೋಡಿದ ಮೇಲೆ ನಾನೂ ಕೂಡ ಸುದೀಪ್​ ತಬ್ಬಿಕೊಂಡು ಅಳುತ್ತೇನೆ ಅನ್ನಿಸುತ್ತೆ' ಎಂದು ರವಿಚಂದ್ರನ್​ ಭಾವುಕರಾದರು. 'ವಿಕ್ರಾಂತ್​ ರೋಣ ರಿಲೀಸ್​ ದಿನ ನನಗೆ ತಂದೆ ಸ್ಥಾನ ಬರುತ್ತೆ ಎಂದುಕೊಂಡಿದ್ದೇನೆ' ಎಂದು ಹೇಳಿದರು.


ಇದನ್ನೂ ಓದಿ: ಬೀಸ್ಟ್​ ನಿರ್ಮಾಪಕರು ಕೊಟ್ಟ ಗಿಫ್ಟ್​ ಕಂಡು ಪೂಜಾ ಕಕ್ಕಾಬಿಕ್ಕಿ! ದೌಲತ್ತು ಇಳಿಸಿದ್ದಾರೆ ಬಿಡಿ ಅಂತಿದ್ದಾರೆ ನೆಟ್ಟಿಗರು


'ವಿಕ್ರಾಂತ್​ ರೋಣ ಬೇರೆ ಪ್ರಪಂಕ್ಕೆ ಕರೆದುಕೊಂಡು ಹೋಗುವುದು ಖಚಿತ. ಚಿತ್ರಮಂದಿರಗಳಲ್ಲಿ ವಿಕ್ರಾಂತ್​ ರೋಣ ಕಮಾಲ್​ ಮಾಡುವುದು ಫಿಕ್ಸ್​. ಕನ್ನಡ ಚಿತ್ರರಂಗಕ್ಕೆ ಮೊದಲು ದೃಷ್ಟಿ ತೆಗೆಯಬೇಕು. ಕನಸುಗಾರ ಅಂದರೆ ನಾನೊಬ್ಬನೇ ಅಲ್ಲ. ಈಗ ಎಲ್ಲರೂ ಕನಸುಗಾರರೇ. ಸಿನಿಮಾ ಮಾಡುವ ಕನಸು ಹೊಂದಿದ್ದಾರೆ. ಕೊರೋನಾ ಬಂದಮೇಲೆ ಥಿಯೇಟರ್​ಗೆ ಜನ ಬರಲ್ಲ ಅಂದಿದ್ದರು. ಆದೆಲ್ಲ ಸುಳ್ಳಾಗಿದೆ. ವೆಲ್​ಕಮ್​ ಟು ಕನ್ನಡ ಇಂಡಸ್ಟ್ರಿ. ಜಾಕಲಿನ್​ ನೋಡುವುದಕ್ಕೆ ಚೆನ್ನಾಗಿ ಕಾಣುತ್ತಾರೆ' ಎಂದು ರವಿಚಂದ್ರನ್ ಹೇಳಿದರು.


ಇದನ್ನೂ ಓದಿ: 'ವಿಕ್ರಾಂತ್​ ರೋಣ'ನ ಹೆಸರಲ್ಲಿ ಒಂದಾದ ಸ್ಯಾಂಡಲ್​ವುಡ್, ಒಂದೇ ವೇದಿಕೆಯಲ್ಲಿ ಘಟಾನುಘಟಿಗಳು


ವಿಕ್ರಾಂತ್ ರೋಣ ಟ್ರೈಲರ್​ ಮೆಚ್ಚಿದ ತಾರೆಯರು!


ಸ್ಯಾಂಡಲ್​ವುಡ್​ನ ಘಟಾನುಘಟಿಗಳೆಲ್ಲ ಇಂದು ಓರಾಯನ್​ ಮಾಲ್​ನಲ್ಲಿ ಸೇರಿದ್ದರು. ವಿಕ್ರಾಂತ್​ ರೋಣ ಟ್ರೈಲರ್​ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್​ವುಡ್​ನ ಪ್ರತಿಯೊಬ್ಬರು ಕಿಚ್ಚ ಸುದೀಪ್​ ಅವರನ್ನು ಕೊಂಡಾಡಿದ್ದಾರೆ. ವಿಕ್ರಾಂತ್​ ರೋಣ ಮತ್ತೊಂದು ಮೈಲಿಗಲ್ಲು ಸೃಷ್ಟಿಸುತ್ತೆ ಎಂದು ಎಲ್ಲರೂ ಶುಭ ಹಾರೈಸಿದ್ದಾರೆ.

Published by:Vasudeva M
First published: