• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Vijayendra Prasad: 2 ಕೋಟಿಗೆ ಒಂದೇ ಒಂದು ರೂಪಾಯಿ ಕಡಿಮೆಯಾದರೂ ಸಿನಿಮಾ ಕಥೆ ಕೊಡಲ್ಲ; ಹೀಗಂದಿದ್ದರಂತೆ ರಾಜಮೌಳಿ ತಂದೆ!

Vijayendra Prasad: 2 ಕೋಟಿಗೆ ಒಂದೇ ಒಂದು ರೂಪಾಯಿ ಕಡಿಮೆಯಾದರೂ ಸಿನಿಮಾ ಕಥೆ ಕೊಡಲ್ಲ; ಹೀಗಂದಿದ್ದರಂತೆ ರಾಜಮೌಳಿ ತಂದೆ!

ವಿಜಯೇಂದ್ರ ಪ್ರಸಾದ್​, ಎಸ್​ಎಸ್ ರಾಜಮೌಳಿ

ವಿಜಯೇಂದ್ರ ಪ್ರಸಾದ್​, ಎಸ್​ಎಸ್ ರಾಜಮೌಳಿ

2 ಕೋಟಿಗೆ ಒಂದೇ ಒಂದು ರೂಪಾಯಿ ಕಡಿಮೆಯಾದರೂ ಸಿನಿಮಾ ಕಥೆ ಕೊಡಲ್ಲ; ಹೀಗಂದಿದ್ದರಂತೆ ರಾಜಮೌಳಿ ತಂದೆ! ಏನಿದು ರೋಚಕ 'ಕಥೆ'?

  • Share this:

ಖ್ಯಾತ ನಿರ್ದೇಶಕ ಎಸ್​​ಎಸ್​ ರಾಜಮೌಳಿ (S. S. Rajamouli) ಅವರ ತಂದೆ ವಿಜಯೇಂದ್ರ ಪ್ರಸಾದ್ (V. Vijayendra Prasad)​ ಅವರು ಅನೇಕ ಹಿಟ್​​ ಸಿನಿಮಾಗಳಿಗೆ (Cinema) ಕಥೆಯನ್ನು ನೀಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಿಂದಿ, ತೆಲುಗು ಮಾತ್ರವಲ್ಲದೆ ಭಾರತದ ಬಹುತೇಕ ಭಾಷೆಗಳಲ್ಲಿ ಅವರು ಕಥೆಗಳನ್ನು ನೀಡಿರುವ ಸಿನಿಮಾಗಳು ಬಿಗ್​ಹಿಟ್​​ ಪಡೆದುಕೊಂಡಿವೆ. ಅದರಲ್ಲೂ ಭಾರತೀಯ ಸಿನಿಮಾವನ್ನು (Indian Cinema) ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದ ಬಾಹುಬಲಿ ಸಿನಿಮಾಗೂ ವಿಜಯೇಂದ್ರ ಪ್ರಸಾದ್ ಅವರೇ ಕಥೆ ನೀಡಿದ್ದರು. ಈ ಸಿನಿಮಾದೊಂದಿಗೆ ಬಾಲಿವುಡ್​​ನಿಂದಲೂ ಕೂಡ ಅವರ ಕಥೆಗಳಿಗೆ (Cinema Story) ಬೇಡಿಕೆ ಶುರುವಾಗಿತ್ತು. ತೆಲುಗು ಚಿತ್ರರಂಗದಲ್ಲಿ ಹಲವು ಸ್ಟಾರ್ ಹೀರೋಗಳು ಅವರು ನೀಡಿದ್ದ ಕಥೆಗಳೊಂದಿಗೆ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಕಥೆಗಳ ವಿಚಾರದಲ್ಲಿ ವಿಜಯೇಂದ್ರ ಪ್ರಸಾದ್ ಅವರು ಕಮರ್ಷಿಲ್ (Commercial Street)​ ಆಗಿಯೇ ನಡೆದುಕೊಳ್ಳುತ್ತಾರೆ ಎಂಬ ಮಾತು ಟಾಲಿವುಡ್​ (Tollywood) ನಲ್ಲಿ ಕೇಳಿ ಬರುತ್ತದೆ.


ಬಾಹುಬಲಿ ಸಿನಿಮಾ ಸಮಯದಲ್ಲಿ ಅವರು ಬಾಲಿವುಡ್​​ನ ಭಜರಂಗಿ ಭಾಯಿಜಾನ್ ಸಿನಿಮಾಗೆ ಕಥೆ ಹೇಳಿದ್ದರು. ಇದಕ್ಕೂ ಮುನ್ನ ಈ ಕಥೆಯನ್ನು ಆಮಿರ್​ ಖಾನ್ ಅವರಿಗೆ ಹೇಳಿದ್ದರು. ಆದರೆ ಅವರು ಕಥೆಯನ್ನು ರಿಜೆಕ್ಟ್ ಮಾಡಿದ್ದರು. ಇದರೊಂದಿಗೆ ಭಜರಂಗಿ ಭಾಯಿಜಾನ್ ಕಥೆ ಸಲ್ಮಾನ್ ಖಾನ್​ ಬಳಿ ಹೋಗಿತ್ತು. ಮೊದಲು ಸಿನಿಮಾ ಕಥೆ ಕೇಳಿದ್ದ ಸಲ್ಮಾನ್ ಖಾನ್ ಸಿನಿಮಾ ಮಾಡಲು ಒಪ್ಪಿಗೆ ಸೂಚಿಸಿ ನಿರ್ಮಾಪಕರೊಂದಿಗೆ ಮಾತನಾಡಲು ಹೇಳಿದ್ದರಂತೆ. ಇದರಂತೆ ನಿರ್ಮಾಪಕರೊಬ್ಬರಿಗೆ ಕಥೆ ಕೇಳಿದ ಸಂದರ್ಭದಲ್ಲಿ ಅವರು 20 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದರಂತೆ.


ಭಜರಂಗಿ ಭಾಯಿಜಾನ್


ಇದನ್ನೂ ಓದಿ: Pavitra Lokesh: ತಂದೆಯಂತೆ ಆಗಬಾರದೆಂದು ಎಷ್ಟೇ ಪ್ರಯತ್ನಿಸಿದರೂ ಪವಿತ್ರಾ ಲೋಕೇಶ್​ಗೆ ಸಾಧ್ಯವಾಗಲೇ ಇಲ್ಲ


ನಿರ್ಮಾಪಕರ ಆಫರ್ ರಿಜೆಕ್ಟ್​ ಮಾಡಿದ್ದ ವಿಜಯೇಂದ್ರ ಪ್ರಸಾದ್ ಅವರು, ಇದು 100 ಕೋಟಿ ರೂಪಾಯಿ ಕಲೆಕ್ಟ್​ ಮಾಡುವ ಸಿನಿಮಾದ ಕಥೆ. ಈ ಕಥೆಗೆ ಎರಡು ಕೋಟಿ ರೂಪಾಯಿಗೆ ಒಂದು ರೂಪಾಯಿ ಕಡಿಮೆ ಆದರೂ ಕಥೆ ಕೊಡುವುದಿಲ್ಲ ಎಂದು ಹೇಳಿದ್ದರಂತೆ.


ಈ ವಿಚಾರ ಸಲ್ಮಾನ್​ ಖಾನ್​ ಅವರಿಗೆ ತಿಳಿದು ಅವರು ಬೇರೆ ನಿರ್ಮಾಪಕರನ್ನು ಕಳುಹಿಸಿದ್ದರಂತೆ. ಈ ನಿರ್ಮಾಪಕರಿಗೆ ಕಥೆ ಇಷ್ಟ ಆಗುವುದರೊಂದಿಗೆ ಕೂಡಲೇ ಎರಡು ಕೋಟಿ ರೂಪಾಯಿ ಕೊಟ್ಟು ಕಥೆಯ ಹಕ್ಕುಗಳನ್ನು ಪಡೆದುಕೊಂಡಿದ್ದರಂತೆ.




ಇನ್ನು, 2015ರಲ್ಲಿ ತೆರೆಕಂಡಿದ್ದ ಭಜರಂಗಿ ಭಾಯಿಜಾನ್​ ಸಿನಿಮಾ ಬಾಕ್ಸ್ ಆಫೀಸ್​​ ಎದುರು ದಾಖಲೆಗಳನ್ನು ನಿರ್ಮಿಸಿತ್ತು. ಈ ಸಿನಿಮಾ ಸಲ್ಮಾನ್ ಖಾನ್​ ಅವರಿಗೆ ಚಿತ್ರರಂಗದಲ್ಲಿ ಪುನರ್​ಜನ್ಮ ನೀಡಿತ್ತು ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸೋತು ಸುಣ್ಣವಾಗಿದ್ದ ಸಲ್ಮಾನ್​ ಖಾನ್​ಗೆ ಈ ಸಿನಿಮಾ ಮತ್ತೆ ಲೈಫ್​ ನೀಡಿತ್ತು.


ಇದನ್ನೂ ಓದಿ: Shraddha: ಸ್ಟ್ಯಾಂಡಪ್ ಕಾಮಿಡಿಯನ್ ನೋಡಿ 'ಅಯ್ಯೋ' ಎಂದು ಕರೆದ ಪ್ರಧಾನಿ ಮೋದಿ, ಖುಷಿಯಲ್ಲಿ 'ಅಯ್ಯಯೋ' ಎಂದ ಶ್ರದ್ಧಾ!


ಸಲ್ಮಾನ್ ಖಾನ್


ಭಜರಂಗಿ ಭಾಯಿಜಾನ್-2 ಸಿನಿಮಾ ಮಾಡುವುದಾಗಿ ಈ ಹಿಂದೆಯೇ ಸಲ್ಮಾನ್ ಖಾನ್​ ಘೋಷಣೆ ಮಾಡಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿಜಯೇಂದ್ರ ಪ್ರಸಾದ್ ಅವರು, ಭಜರಂಗಿ ಭಾಯಿಜಾನ್ ಸೀಕ್ವೆಲ್​​ಗೆ ನಾನೇ ಕಥೆ ಬರೆಯಬೇಕು. ಈ ಕುರಿತ ಪ್ರತಿಕ್ರಿಯೆ ಆರಂಭವಾಗಿದೆ ಎಂದಿದ್ದರು. ಇನ್ನು, ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಕೂಡ ಸಲ್ಮಾನ್​ ಖಾನ್​ ಸಾಥ್ ನೀಡ್ತಿದ್ದಾರೆ. ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ಇತ್ತೀಚೆಗೆ ನಡೆದಿದ್ದ ಪೂಜಾ ಹೆಗ್ಡೆ ಸಹೋದರನ ಮದುವೆಯಲ್ಲೂ ಸಲ್ಮಾನ್ ಖಾನ್ ಭಾಗಿಯಾಗಿದ್ದರು.

Published by:Sumanth SN
First published: