• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • vijay sethupathi: ಮುತ್ತಯ್ಯ ಮುರಳೀಧರನ್​ ಜೀವನಾಧಾರಿತ '800' ಸಿನಿಮಾದಿಂದ ಹೊರ ನಡೆದ ವಿಜಯ್​ ಸೇತುಪತಿ

vijay sethupathi: ಮುತ್ತಯ್ಯ ಮುರಳೀಧರನ್​ ಜೀವನಾಧಾರಿತ '800' ಸಿನಿಮಾದಿಂದ ಹೊರ ನಡೆದ ವಿಜಯ್​ ಸೇತುಪತಿ

ವಿಜಯ್​ ಸೇತುಪತಿ

ವಿಜಯ್​ ಸೇತುಪತಿ

vijay sethupathi: ಸೇತುಪತಿ ವಿರುದ್ಧ ವ್ಯಕ್ತವಾಗುತ್ತಿದ್ದ ಟೀಕೆಗಳನ್ನು ಗಮನಿಸಿದ ಮುತ್ತಯ್ಯ ಮುರಳೀಧರನ್​, ಭವಿಷ್ಯದಲ್ಲಿ ಸೇತುಪತಿ ತೊಂದರೆಗೆ ಒಳಗಾಗಬಾರದು ಎಂಬ ದೃಷ್ಟಿಕೋನದಿಂದ ಚಿತ್ರದಿಂದ ಹೊರ ನಡೆಯುವಂತೆ ಅದ್ಭುತ ನಟನಿಗೆ ಮನವಿ ಮಾಡಿದ್ದರು

  • Share this:

ಮುತ್ತಯ್ಯ ಮುರಳೀಧರನ್​ ಜೀವನಾಧಾರಿತ ಚಿತ್ರವಾದ '800' ಸಿನಿಮಾದಿಂದ ನಟ ವಿಜಯ್​ ಸೇತುಪತಿ ಹೊರ ನಡೆದಿದ್ದಾರೆ. ಶ್ರೇಷ್ಠ ಬೌಲರ್​ ಆಗಿದ್ದ  ಮುತ್ತಯ್ಯ ಮುರಳೀಧರನ್​ ಪಾತ್ರಕ್ಕೆ ಬಣ್ಣ ಹಚ್ಚಲು ಮುಂದಾಗಿದ್ದ ಸೇತುಪತಿ ವಿರುದ್ಧ ತಮಿಳುನಾಡಿನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದಾಗಿ ಚಿತ್ರದಿಂದ ಹೊರನಡೆಯುವಂತೆ ಮುತ್ತಯ್ಯ ಮುರಳೀಧರನ್​ ಅವರೇ ವಿಜಯ್​ ಸೇತುಪತಿಗೆ ಟ್ವೀಟರ್​ನಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಅವರು, ಧನ್ಯವಾದ… ನಮಸ್ಕಾರ ಎಂದಿದ್ದಾರೆ. ನಟ ವಿಜಯ್​ ಸೇತುಪತಿ ಚಿತ್ರದಿಂದ ಹೊರ ನಡೆದಿರುವ ಬಗ್ಗೆ ಸೇತುಪತಿ ಪ್ರಚಾರಕ ಕೂಡ ದೃಢಪಡಿಸಿದ್ದಾರೆ.


ವಿಜಯ್​ ಸೇತುಪತಿ ಈ ಸಿನಿಮಾದಲ್ಲಿ ಭಾಗಿಯಾದಗಿನಿಂದ ತಮಿಳುನಾಡಿನಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಒಬ್ಬ ತಮಿಳು ನಟರಾಗಿ ಅವರ ಸಮುದಾಯದ ಭಾವನೆಗೆ ಧಕ್ಕೆ ತರುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿತ್ತು. ಅಲ್ಲದೇ #ShameonVijaySethupathi ಎಂಬ ಹ್ಯಾಷ್​ಟ್ಯಾಗ್​ ಮೂಲಕ ಸೇತುಪತಿ ವಿರುದ್ಧ ತಮಿಳಿಗರು ಆಕ್ರೋಶ ವ್ಯಕ್ತಪಡಿಸಿದ್ದರು.



ಸೇತುಪತಿ ವಿರುದ್ಧ ವ್ಯಕ್ತವಾಗುತ್ತಿದ್ದ ಟೀಕೆಗಳನ್ನು ಗಮನಿಸಿದ ಮುತ್ತಯ್ಯ ಮುರಳೀಧರನ್​, ಭವಿಷ್ಯದಲ್ಲಿ ಸೇತುಪತಿ ತೊಂದರೆಗೆ ಒಳಗಾಗಬಾರದು ಎಂಬ ದೃಷ್ಟಿಕೋನದಿಂದ ಚಿತ್ರದಿಂದ ಹೊರ ನಡೆಯುವಂತೆ ಅದ್ಭುತ ನಟನಿಗೆ ಮನವಿ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಅವರು, ಧನ್ಯವಾದ, ನಮಸ್ಕಾರ ಎಂದಿದ್ದಾರೆ.


ವಿಜಯ್​ ಸೇತುಪತಿಗೆ ಮುತ್ತಯ್ಯ ಮುರಳೀಧರನ್​ ಪಾತ್ರ ಮಾಡದಂತೆ ದ್ರಾವಿಡ ಸಂಘ ಒತ್ತಾಯಿಸಿದ್ದಾರೆ. ಭಾರತೀಯ ಮೂಲದ ಶ್ರೀಲಂಕಾ ದೇಶದ ಪ್ರಜೆಯಾಗಿರುವ ಮುತ್ತಯ್ಯ ಅವರು ಸಿಂಹಳವನ್ನು ಬೆಂಬಲಿಸಿದವರು. ವಿಶ್ವಾದಾದ್ಯಂತ ತಮಿಳು ಅಭಿಮಾನಿಯನ್ನು ಹೊಂದಿರುವ ವಿಜಯ್​ ಸೇತುಪತಿ ಈ ಚಿತ್ರ ಮಾಡಿದರೆ ತಮಿಳರ ಭಾವನೆಗೆ ವಿರುದ್ಧವಾಗುತ್ತದೆ ಈ ಹಿನ್ನಲೆಯಲ್ಲಿ ಮಾಡಬಾರದು ಎಂಬ ಕೂಗು ಕೇಳಿಬಂದಿತು.



ವಿಜಯ್​ ಸೇತುಪತಿ ಪ್ರತಿಭಾನ್ವಿತ ನಟನಾಗಿದ್ದು, ಮುಖಾಭಿನಯ ಪ್ರದರ್ಶಿಸುವಲ್ಲಿ ಅವರು ಅದ್ಬುತ ಪ್ರತಿಭೆ. ಅವರ ಮೇಲೆ ನನಗೆ ನಂಬಿಕೆ ಇದೆ. ಈ ಪಾತ್ರಕ್ಕೆ ಅವರು ನ್ಯಾಯ ಒದಗಿಸುವವರು ಎಂದು ಈ ಹಿಂದೆ ಮುತ್ತಯ್ಯ ಮುರುಳೀಧರನ್​ ತಿಳಿಸಿದ್ದರು.


ಕಳೆದ ವಾರವಷ್ಟೇ ಚಿತ್ರದ  ಮೊದಲ ಪೋಸ್ಟರ್​  ಬಿಡುಗಡೆಯಾಗಿತ್ತು. ಈ ಮೋಷನ್​ ಪೋಸ್ಟರ್ ಥೇಟ್ ಮುತ್ತಯ್ಯ​ ಮುರಳೀಧರನ್​ ರಂತೆ ಕಾಣುತ್ತಿದ್ದ ಅವರ ಈ ಲುಕ್​ ಬೆರಗು ಮೂಡಿಸಿತ್ತು. ಅವರ  ಫೋಟೊಗೆ ಪ್ರಶಂಸೆಗಳು ವ್ಯಕ್ತವಾಗಿದ್ದವು. ಇನ್ನು ಈ ಮೋಷನ್​ ಪೋಸ್ಟರ್​ನಲ್ಲಿರುವುದು ವಿಜಯ್​ ಸೇತುಪತಿ ಕ್ಯಾರಿಕ್ಯಚರ್​ ಆಗಿತ್ತು. ಮುರಳೀಧರನ್​ ಅವರ ಚಿತ್ರವನ್ನು ಮಾರ್ಫ್​ ಮಾಡಿ ನಟನನ್ನು ಹೋಲುವಂತೆ ಮಾಡಲಾಗಿತ್ತು.   ಸಂಪೂರ್ಣ ಅನಿಮೇಟೆಡ್​ ಗ್ರಾಫಿಕ್ಸ್​ ಬಳಸಿ ಒಂದು ನಿಮಿಷದ ಮೋಷನ್​ ಪೋಸ್ಟರ್​ ನಲ್ಲಿ ಯುದ್ಧದಿಂದ ಹಾನಿಗೊಳಗಾದ  ದೇಶದಲ್ಲಿ ಕ್ರಿಕೆಟಿಗನೊಬ್ಬ ಹುಟ್ಟಿದ ಕಥೆಯನ್ನು ಇದರಲ್ಲಿ ತೋರಿಸಲಾಗಿತ್ತು.

top videos
    First published: