ಬಾಲಿವುಡ್ನಲ್ಲಿ ಸ್ವಜನಪಕ್ಷಪಾತದಿಂದಾಗಿ ಈಗಾಗಲೇ ಸಾಕಷ್ಟು ಪ್ರತಿಭೆಗಳು ಅವಕಾಶವಿಲ್ಲದೆ ಬಣ್ಣದ ಲೋಕದಿಂದಲೇ ದೂರ ಹೋಗಿದ್ದಾರೆ ಎನ್ನಲಾಗುತ್ತಿದೆ. ನಟ ಸುಶಾಂತ್ಸಿಂಗ್ ಸಹ ಈ ನೆಪೋಟಿಸಂಗೆ ಬಲಿಯಾಗಿದ್ದಾರೆ ಎಂದು ಸಾಕಷ್ಟು ಸೆಲೆಬ್ರಿಟಿಗಳು ಆರೋಪಿಸುತ್ತಿದ್ದಾರೆ.
ಕಂಗನಾ, ರಣವೀರ್ ಶೌರಿ, ಶೇಖರ್ ಸುಮನ್, ರವೀನಾ ಟಂಡನ್, ಅಭಯ್ ದೇವುಲ್ ಸೇರಿದಂತೆ ಸಾಕಷ್ಟು ಮಂದಿ ನೆಪೋಟಿಸಂ ಬಗ್ಗೆ ಈಗ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ನೆಟ್ಟಿಗರೂ ಸಹ ನೆಪೋಟಿಸಂಗೆ ಕಾರಣವಾಗಿರುವ ಫಿಲ್ಮ್ ಮೇಕರ್ಸ್, ಸ್ಟಾರ್ಗಳು ಹಾಗೂ ಸ್ಟಾರ್ ಕಿಡ್ಸ್ಗಳ ಸಿನಿಮಾಗಳನ್ನು ಬಹಿಷ್ಕರಿಸುವಂತೆ ಅಭಿಯಾನ ಮುಂದುವರೆಸುತ್ತಿದ್ದಾರೆ.
ಸುಶಾಂತ್ ಅಗಲಿದಾಗಿನಿಂದ ನಟಿ ಕಂಗನಾ, ನಟನ ಸಾವಿಗೆ ನ್ಯಾಯಬೇಕೆಂದು ಸಾಕಷ್ಟು ವಿಡಿಯೋಗಳ ಮೂಲಕ ಆಗ್ರಹಿಸುತ್ತಿದ್ದಾರೆ. ಬಾಲಿವುಡ್ನಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತದ ವಿರುದ್ಧ ದನಿ ಎತ್ತುತ್ತಿದ್ದಾರೆ. ಇದರಿಂದಾಗಿ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಈಗ ಕಂಗನಾ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ನಿಂದಾಗಿ ಏನೆಲ್ಲ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಗೊತ್ತಾ ರಾಧಿಕಾ ಪಂಡಿತ್
ಈ ಹಿಂದೆಯೇ ಕಂಗನಾ ಹಾಗೂ ಸೋನಮ್ ಕಪೂರ್, ತಾಪ್ಸಿ, ದೀಪಿಕಾ ನಡುವೆ ಕ್ಯಾಟ್ ಫೈಟ್ ನಡೆದಿದೆ. ಇತ್ತೀಚೆಗಷ್ಟೆ ಕಂಗನಾ ತಾಪ್ಸಿಗೆ ಬಿ-ಗ್ರೇಡ್ ಸಿನಿಮಾದ ನಟಿ ಹಾಗೂ ಅವರ ಯಾವ ಚಿತ್ರಗಳೂ ಹಿಟ್ ಆಗಿಲ್ಲ ಎಂದಿದ್ದರು. ಇದಕ್ಕೆ ತಾಪ್ಸಿ ಸಹ ಟ್ವೀಟ್ ಮಾಡುವ ಮೂಲಕ ಉತ್ತರ ಕೊಟ್ಟಿದ್ದರು.
ಹೀಗಿರುವಾಗಲೇ ಕಂಗನಾ ಮೇಲೆ ನಟಿ ನಗ್ಮಾ ಸಹ ಟ್ವೀಟ್ ವಾರ್ ಆರಂಭಿಸಿದ್ದಾರೆ. ಸುಶಾಂತ್ ಸಿಂಗ್ ಅಗಲಿಕೆಯ ನಂತರ ಇಷ್ಟೆಲ್ಲ ದನಿ ಎತ್ತುತ್ತಿರುವ ಕಂಗನಾ, ಆ ನಟ ಬದುಕಿದ್ದಾಗ ಏಕೆ ಯಾವ ಸಹಾಯವೂ ಮಾಡಲಿಲ್ಲ. ಸುಶಾಂತ್ ಜೊತೆ ಮಾತನಾಡಲೂ ಪ್ರಯತ್ನಿಸಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ ನಗ್ಮಾ.
#Kangnas nepotism pic.twitter.com/3zsRaUSwQ3
ಅಷ್ಟೇಅಲ್ಲ, ಕಂಗನಾರನ್ನು ಬಾಲಿವುಡ್ಗೆ ಪರಿಚಯಿಸಿದ್ದು, ಒಂದು ಕಾಲದಲ್ಲಿ ಅವರ ಬಾಯ್ಫ್ರೆಂಡ್ ಆಗಿದ್ದ ಆದಿತ್ಯ ಪಂಚೋಲಿ. ಆದಿತ್ಯಾರ ಮೂಲಕ ಬಿ-ಟೌನ್ಗೆ ಕಾಲಿಟ್ಟಿದ್ದು ನೆಪೋಟಿಸಂ ಅಲ್ವಾ ಎಂದು ಮತ್ತೆ ಹಳೇ ವಿಷಯವನ್ನು ಕೆದಕಿದ್ದಾರೆ ನಗ್ಮಾ.
ಆದಿತ್ಯ ಪಂಚೋಲಿ ಜೊತೆ ಕಂಗನಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಹಾಗೂ ಅವರ ನಡುವೆ ಬ್ರೇಕ್ಅಪ್ ಆಗಿದ್ದೂ ಆಗ ಸಾಕಷ್ಟು ಸುದ್ದಿಯಾಗಿತ್ತು. ಆದರೆ ಆಗಲೇ ಕಂಗನಾ, ಆದಿತ್ಯ ಚೋಪ್ರಾ ತನ್ನ ಬಾಯ್ಫ್ರೆಂಡ್ ಅಲ್ಲ ಎಂದೂ ಸ್ಪಷ್ಟನೆ ನೀಡಿದ್ದರು. ಈಗಲೂ ಸಹ ನಗ್ಮಾ ಮಾಡಿರುವ ಆರೋಪಗಳಿಗೆ ಒಂದೊಂದಾಗಿ ಉತ್ತರ ಕೊಡುವುದಾಗಿ ಟ್ವೀಟ್ ಮಾಡಿರುವ ಕಂಗನಾ, ಆದಿತ್ಯ ಪಂಚೋಲಿ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ಸ್ಪಷ್ಟನೆ ನೀಡಿದ್ದಾರೆ.
Nagma ji
ಆದಿತ್ಯ ನನ್ನ ಬಾಯ್ಫ್ರೆಂಡ್ ಆಗಿರಲಿಲ್ಲ. ಬದಲಾಗಿ ನನಗೆ ಮಾರ್ಗದರ್ಶಿಯಾಗಿದ್ದರು. ನಂತರದಲ್ಲಿ ಆತನೇ ಪೀಡಕನಾಗಿ ನನ್ನ ಮೇಲೆ ಹಲ್ಲೆ ಮಾಡಲಾರಂಭಿಸಿದ್ದರು. ನಾನು ಸಿನಿಮಾಗಳಿಗೆ ಆಡಿಷನ್ ಕೊಡಲು ಹೋದಾಗಲೆಲ್ಲ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನನ್ನು ಯಾವ ಸಿನಿಮಾ ನಿರ್ದೇಶಕರಿಗೂ ಅವರು ಪರಿಚಯಿಸಲಿಲ್ಲ ಎಂದು ಟ್ವೀಟ್ ಮೂಲಕ ನಗ್ಮಾಗೆ ಪ್ರತಿಕ್ರಿಯೆ ನೀಡಿರುವ ಕಂಗನಾ, ಉತ್ತರಿಸುವುದನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.
ಕೇವಲ ಆದಿತ್ಯ ಪಂಚೋಲಿ ಮಾತ್ರವಲ್ಲದೆ ನಗ್ಮಾ, ಕಂಗನಾರ ಮೊದಲ ಸಿನಿಮಾ, ಮೊದಲ ನಿರ್ದೇಶಕ ಮಹೇಶ್ ಭಟ್ ಹಾಗೂ ಹೃತಿಕ್ ಕಂಗನಾರನ್ನು ರೀಲಾಂಚ್ ಮಾಡಿದ ಕುರಿತಾಗಿಯೂ ಟ್ವೀಟ್ ಮಾಡಿದ್ದಾರೆ. ಮಹೇಶ್ ಭಟ್ ಅವರ ನಿರ್ದೇಶನದಲ್ಲಿ ಗ್ಯಾಂಗ್ಸ್ಟರ್ ಚಿತ್ರದಲ್ಲಿ ಇಮ್ರಾನ್ ಹಾಷ್ಮಿ ಜೊತೆ ನಟಿಸಿದ್ದು ನೆಪೋಟಿಸಂ ಅಲ್ವಾ? ಹೃತಿಕ್ ಜೊತೆ ಕೈಟ್ಸ್ ಸಿನಿಮಾದಲ್ಲಿ ಅಭಿನಯಿಸಿದ್ದು ಸ್ವಜನಪಕ್ಷಪಾತ ಅಲ್ಲವಾ ಎಂದು ವ್ಯಂಗ್ಯ ಮಾಡಿದ್ದಾರೆ.
ಇದನ್ನೂ ಓದಿ:
ಯಾರೂ ಮರೆಯಲಾರದ ಕಾಡಿನ ಹೂವಂತೆ ಬಾಲಿವುಡ್ನ ಈ ಮಾದಕ ನಟಿ..!