ಕನ್ನಡದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ 8ನೇ ಸೀಸನ್ನ ವಾರಂತ್ಯದ ಕಾರ್ಯಕ್ರಮಕ್ಕೆ ಈ ವಾರವೂ ನಟ ಸುದೀಪ್ ಸಾರಥ್ಯವಿಲ್ಲ. ಕಳೆದ ವಾರದ ಕಾರ್ಯಕ್ರಮದಲ್ಲಿ ಕಿಚ್ಚನನ್ನು ಮಿಸ್ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಈ ವಾರವೂ ಗುಡ್ನ್ಯೂಸ್ ಸಿಕ್ಕಿಲ್ಲ. ಈ ಬಾರಿಯೂ ‘ವಾರದ ಕಥೆ ಕಿಚ್ಚನ ಜೊತೆ’ ಇರೋದಿಲ್ಲ. ಈ ಬಗ್ಗೆ ಕಿಚ್ಚ ಸುದೀಪ್ ಅವರೇ ಟ್ವೀಟ್ ಮೂಲಕ ತಿಳಿಸಿದ್ದಾರೆ. ಈ ವಾರವೂ ಬಿಗ್ಬಾಸ್ ನಡೆಸಿಕೊಡಲು ನನಗೆ ಸಾಧ್ಯವಾಗುತ್ತಿಲ್ಲ. ವೈದ್ಯರು ಮತ್ತಷ್ಟು ವಿಶ್ರಾಂತಿಗೆ ಸೂಚಿಸಿರುವುದರಿಂದ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ಸ್ಯಾಂಡಲ್ವುಡ್ ‘ರನ್ನ’ ಕಳೆದ ವಾರವೂ ವೀಕೆಂಡ್ ಕಾರ್ಯಕ್ರಮದ ನಿರೂಪಣೆಯಿಂದ ದೂರ ಉಳಿಸಿದ್ದರು. ಅನಾರೋಗ್ಯ ಕಾಡುತ್ತಿದ್ದು, ಗಂಟೆಗಳ ಕಾಲ ಶೂಟಿಂಗ್ನಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಕಳೆದ ವಾರ ಸುದೀಪ್ ಅವರು ಇಲ್ಲದೆಯೇ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿತ್ತು. ಗಾಯಕ ವಿಶ್ವನಾಥ್ ದೊಡ್ಡ ಮನೆಯಿಂದ ಹೊರ ಬಂದಿದ್ದರು. ಈ ವಾರ ಮತ್ತೆ ಸುದೀಪ್ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ. ನನಗೆ ಮತ್ತಷ್ಟು ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಕಾರ್ಯಕ್ರಮದ ಚಿತ್ರೀಕರಣವನ್ನು ರದ್ದು ಮಾಡಲಾಗಿದೆ. ಇದಕ್ಕೆ ಬೆಂಬಲವಾಗಿ ನಿಂತಿರುವ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
Wil b missing this weekend episodes of BB. A bit more rest needed bfr I can manage hours of shoot on stage n do justice to all contestants. It's a difficult decision to make n I thank @ColorsKannada for canceling shoot n makin it easier.
Mch luv to all you frnzz fo ur prayers 🙏🏼
ಸುಮಾರು 8 ವರ್ಷಗಳಿಂದ ಕನ್ನಡದ ಬಿಗ್ಬಾಸ್ ನಿರೂಪಣೆ ನಡೆಸಿಕೊಂಡು ಬರುತ್ತಿರುವ ಸುದೀಪ್ ಅವರು ಮೊದಲ ಬಾರಿಗೆ ಕಳೆದ ವಾರ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಸತತ 2 ವಾರಗಳಿಂದ ಅನಾರೋಗ್ಯದ ಕಾರಣದಿಂದ ಸುದೀಪ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದ್ದು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಕಿಚ್ಚನನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಯಾದ್ರೂ ಯಾವುದು ಎಂಬ ದುಗುಡ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಇನ್ನು ಬಿಗ್ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಕಳೆದ ವಾರ ಸುದೀಪ್ ಕಾರ್ಯಕ್ರಮ ನಡೆಸಿಕೊಡುವುದಿಲ್ಲ ಎಂದು ತಿಳಿದಾಗ ಬೇಸರಗೊಂಡಿದ್ದರು. ಅವರಿಗಾಗಿ ಅಡುಗೆ ಮಾಡಿ, ಪ್ರೀತಿಯಿಂದ ಪತ್ರವೊಂದನ್ನು ಬರೆದು ಕಳುಹಿಸಿದ್ದರು. ಇದಕ್ಕೆ ಕಿಚ್ಚ ಸುದೀಪ್ ಅವರು ಆಡಿಯೋ ಮೂಲಕ ಧನ್ಯವಾದ ತಿಳಿಸಿದ್ದರು. ಆಡಿಯೋದಲ್ಲಿ ಸುದೀಪ್ ಅವರ ಧ್ವನಿ ಬಳಲಿದ್ದು ಅವರ ಫ್ಯಾನ್ಸ್ಗೆ ಆತಂಕ ತಂದೊಡ್ಡಿತ್ತು. ರಾಜ್ಯದ ಹಲವೆಡೆ ಸುದೀಪ್ ಅವರು ಬೇಗನೇ ಗುಣಮುಖರಾಗಲೆಂದು ಅಭಿಮಾನಿಗಳು ದೇಗುಲಗಳಿಗೆ ಪೂಜೆ ಸಲ್ಲಿಸಿದ್ದರು. ಟ್ವಿಟ್ಟರ್ ಮೂಲಕವೇ ಇದಕ್ಕೆಲ್ಲಾ ಸುದೀಪ್ ಸ್ಪಂದಿಸಿದ್ದರು.
ಕಿಚ್ಚನಿಗಾಗಿ ಮನೆಯವರಿಂದ ಪ್ರೀತಿಯ ಕೈತುತ್ತು! @KicchaSudeep
ಕಳೆದ ವಾರ ಸುದೀಪ್ ಬದಲು ಬೇರೊಬ್ಬ ಸ್ಟಾರ್ ನಟ ಕಾರ್ಯಕ್ರಮದ ನಿರೂಪಣೆ ಹೊಣೆ ಹೊರುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಕಲರ್ಸ್ ಕನ್ನಡ ವಾಹಿನಿ ಅವೆಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿತ್ತು. ಕಿಚ್ಚನ ಜಾಗಕ್ಕೆ ಬೇರೆ ಯಾರನ್ನೂ ತರದೆ, ಕ್ರಿಯೇಟಿವ್ ಆಗಿ ಬಿಗ್ಬಾಸ್ ಎಲಿಮಿನೇಷನ್ನ ಚಿತ್ರೀಕರಿಸಿತ್ತು. ಈ ವಾರವೂ ಮತ್ತೆ ಸುದೀಪ್ ಜಾಗಕ್ಕೆ ಬೇರೆಯಾರಾದರೂ ಬರುತ್ತಾರಾ ಎಂಬ ಮಾತುಗಳು ಕೇಳಿ ಬರುತ್ತಿದೆ. ಕಳೆದ ವಾರದಂತೆ ಈ ವಾರದ ಕಾರ್ಯಕ್ರಮವನ್ನು ಸುದೀಪ್ ಇಲ್ಲದೆಯೇ ವಿಭಿನ್ನವಾಗಿ ರೂಪಿಸುತ್ತಾರಾ ಕಾದು ನೋಡಬೇಕು. ಇನ್ನು ಕನ್ನಡ ಚಿತ್ರರಂಗದ ಮೇರು ನಟ ಕಿಚ್ಚ ಸುದೀಪ್ ಆದಷ್ಟು ಬೇಗ ಗುಣಮುಖರಾಗಿ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲಿ ಅನ್ನೋದು ಎಲ್ಲರ ಆಶಯ. Get well soon sudeep..
Published by:Kavya V
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ