Tamannaah: ತಮನ್ನಾ ತಂದೆ, ತಾಯಿಗೆ ಕೊರೊನಾ; ಆತಂಕದಲ್ಲಿ ಮಿಲ್ಕಿ ಬ್ಯೂಟಿ!

ತಮನ್ನಾ

ತಮನ್ನಾ

ಈ ಕುರಿತು ಖುದ್ದು ತಮನ್ನಾ ಭಾಟಿಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಸದ್ಯ ತಂದೆ, ತಾಯಿ ಇಬ್ಬರ ಆರೋಗ್ಯದಲ್ಲೂ ಸುಧಾರಣೆ ಕಂಡುಬಂದಿದ್ದು, ಆದಷ್ಟು ಬೇಗ ಗುಣಮುಖರಾಗಲಿದ್ದಾರೆ ಎಂದು ಭರವಸೆಯನ್ನೂ ತಮನ್ನಾ ವ್ಯಕ್ತಪಡಿಸಿದ್ದಾರೆ.

  • Share this:

ಕಳೆದ ಐದು ತಿಂಗಳಿನಿಂದ ಈ ಕೊರೋನಾ ಕಂಟಕ ಇಡಿ ವಿಶ್ವವನ್ನೇ ಹೈರಾಣಾಗಿಸಿದೆ. ಕೋಟ್ಯಂತರ ಜನರಿಗೆ ಸೋಂಕು ತಗುಲಿದ್ದು, ಲಕ್ಷಾಂತರ ಮಂದಿ ಈಗಾಗಲೇ ಬಲಿಯಾಗಿದ್ದಾರೆ. ಭಾರತದಲ್ಲೂ ಸೋಂಕಿತರ ಸಂಖ್ಯೆ 30 ಲಕ್ಷ ದಾಟಿದೆ. ಇನ್ನು ಈ ಕಣ್ಣಿಗೆ ಕಾಣದ ವೈರಸ್​ಗೆ ಹಲವು ಸೆಲೆಬ್ರಿಟಿಗಳೂ ಸಂಕಷ್ಟಕ್ಕೀಡಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ಬಿಗ್ಬಿ ಅಮಿತಾಭ್ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಹಾಗೂ ಅವರ ಮಗಳಾದ ಆರಾಧ್ಯ ಬಚ್ಚನ್ಗೂ ಕೊರೊನಾ ಸೋಂಕು ತಗುಲಿತ್ತು. ಕೆಲ ದಿನಗಳ ಕಾಲ ಚಿಕಿತ್ಸೆ ಪಡೆದು ಬಿಗ್ಬಿ ಕುಟುಂಬದ ಅಷ್ಟೂ ಮಂದಿ ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದರು. ಅದರ ಬೆನ್ನಲ್ಲೇ ಖ್ಯಾತ ನಟಿ ತಮ್ಮನ್ನಾ ಭಾಟಿಯಾ ಕುಟುಂಬಕ್ಕೂ ಕೊರೊನಾ ಕಂಟಕ ಎದುರಾಗಿದೆ.


ಹೌದು, ಕೆಜಿಎಫ್ ಚಿತ್ರದಲ್ಲಿ ರಾಕಿಭಾಯ್ ಯಶ್ ಜೊತೆ ಜೋಕೆ ನಾನು ಬಳ್ಳಿಯ ಮಿಂಚು ಅಂತ ಮಾದಕವಾಗಿ ಹಾಡಿ ಕುಣಿದಿದ್ದ ಮಿಲ್ಕಿ ಬ್ಯೂಟಿ ತಮನ್ನಾ ಕುಟುಂಬಕ್ಕೆ ಸಿಡಿಲಿನಂತ ಸುದ್ದಿ ನಡುಗುವಂತೆ ಮಾಡಿದೆ. ಹೌದು, ತಮನ್ನಾರ ಪೋಷಕರಾದ ಸಂತೋಷ್ ಭಾಟಿಯಾ ಹಾಗೂ ರಜನಿ ಭಾಟಿಯಾ ಇಬ್ಬರಿಗೂ ಕೊರೊನಾ ಸೋಂಕು ತಗುಲಿದೆ. ಅಪ್ಪ, ಅಮ್ಮ ಇಬ್ಬರಿಗೂ ಕೆಲ ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾದ ಕಾರಣ, ಕೊವಿಡ್ 19 ಪರೀಕ್ಷೆ ಮಾಡಿಸಲಾಗಿತ್ತು. ಇಬ್ಬರ ರಿಪೋರ್ಟ್ ಕೂಡ ಪಾಸಿಟಿವ್ ಬಂದ ಕಾರಣ ತಮನ್ನಾ ಮತ್ತವರ ಕುಟುಂಬದವರೂ ಸೇರಿದಂತೆ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಟೆಸ್ಟ್ ಮಾಡಿಸಲಾಗಿದೆ. ಆದರೆ ಎಲ್ಲರ ರಿಪೋರ್ಟ್ ಕೂಡ ನೆಗಟಿವ್ ಬಂದಿದೆ.




ಈ ಕುರಿತು ಖುದ್ದು ತಮನ್ನಾ ಭಾಟಿಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಸದ್ಯ ತಂದೆ, ತಾಯಿ ಇಬ್ಬರ ಆರೋಗ್ಯದಲ್ಲೂ ಸುಧಾರಣೆ ಕಂಡುಬಂದಿದ್ದು, ಆದಷ್ಟು ಬೇಗ ಗುಣಮುಖರಾಗಲಿದ್ದಾರೆ ಎಂದು ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ ತಮನ್ನಾ.


ಇನ್ನು ಸಿನಿಮಾ ವಿಷಯಕ್ಕೆ ಬರುವುದಾದರೆ ಪ್ರತಿ ವರ್ಷ ಕನಿಷ್ಠ 3ರಿಂದ 6 ಸಿನಿಮಾಗಳಲ್ಲಿ ಮಿಂಚುತ್ತಿದ್ದ ತಮನ್ನಾ, ಈ ವರ್ಷ ಕೇವಲ ಒಂದು ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರಷ್ಟೇ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜೊತೆ ಸರಿಲೇರು ನೀಕೆವ್ವರು ಚಿತ್ರದ ಹಾಡೊಂದರಲ್ಲಿ ಸ್ಟೆಪ್ಸ್ ಹಾಕಿದ್ದರು ತಮನ್ನಾ. ಆ ಬಳಿಕ ಮಾರ್ಚ್ನಿಂದ ಆಗಸ್ಟ್​ವರೆಗೂ ಥಿಯೇಟರ್​ಗಳು ಮತ್ತು ಮಲ್ಟಿಪ್ಲೆಕ್ಸ್​​ಗಳಿಗೆ ಬೀಗ ಬಿದ್ದ ಕಾರಣ, ಬೇರಾವ ಸಿನಿಮಾ ಕೂಡ ತೆರೆಗೆ ಬಂದಿಲ್ಲ. ಆದರೆ ದಟ್ ಈಸ್ ಮಹಾಲಕ್ಷ್ಮೀ ಹಾಗೂ ಸೀಟಿಮಾರ್ ಎಂಬ ಎರಡು ತೆಲುಗು ಸಿನಿಮಾಗಳು ಹಾಗೂ ಬೋಲೆ ಚೂಡಿಯಾ ಎಂಬ ಒಂದು ಬಾಲಿವುಡ್ ಸಿನಿಮಾಗಳು ಅವರ ಕೈಯಲ್ಲಿವೆ.

Published by:Rajesh Duggumane
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು