James: ಇದಪ್ಪಾ ಅಭಿಮಾನ ಅಂದ್ರೆ.. ಅಪ್ಪು ಹುಟ್ಟುಹಬ್ಬಕ್ಕೆ 2 ದಿನ ರಜೆ ಕೊಟ್ಟ​ ಕಾಲೇಜ್​!

2 ರಜೆ ಕೊಟ್ಟ ಕಾಲೇಜ್​

2 ರಜೆ ಕೊಟ್ಟ ಕಾಲೇಜ್​

ಡಾ.ಅಂಬೇಡ್ಕರ್​ ಇನ್​ಸ್ಟಿಟ್ಯೂಷನ್​ ಆಫ್​ ಟೆಕ್ನಾಲಜಿ ವಿಟಿಯು, ಬೆಳಗಾವಿ ಕಾಲೇಜಿನ ಲೆಟರ್​ವೊಂದು ಸಖತ್​​ ವೈರಲ್​ ಆಗುತ್ತಿದೆ. ಕಾಲೇಜಿನ ಫಸ್ಟ್​ ಸೆಮಿಸ್ಟರ್​​ ಹಾಗೂ ಮೂರನೇ ಸೆಮಿಸ್ಟರ್​ ವಿದ್ಯಾರ್ಥಿಗಳಿಗೆ ಮಾರ್ಚ್​ 17 ಹಾಗೂ ಮಾರ್ಚ್​ 18ರಂದು ಕಾಲೇಜಿಗೆ ರಜೆ ನೀಡಲಾಗಿದೆ.

  • Share this:

‘ಜೇಮ್ಸ್’(James) ಸಿನಿಮಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್(Response) ಪಡೆದುಕೊಳ್ಳುತ್ತಿದೆ. ಇವತ್ತು ಹಬ್ಬ(Festival)ದಂತೆ ಜೇಮ್ಸ್ ಸಿನಿಮಾವನ್ನು ಅಭಿಮಾನಿಗಳು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ 5 ಗಂಟೆಯಿಂದಲೆ. ‘ಜೇಮ್ಸ್’ ಸಿನಿಮಾದ ಶೋಗಳು ಆರಂಭವಾಗಿವೆ. ಇಂದು ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ಹುಟ್ಟುಹಬ್ಬ. ಹೀಗಾಗಿ ಅಪ್ಪು ಅವರ ಕೊನೆಯ ಸಿನಿಮಾ ಜೇಮ್ಸ್​ (James) ಸಿನಿಮಾ ರಿಲೀಸ್​. ಮುಂಜಾನೆಯಿಂದಲೇ ಅಪ್ಪು ಅಭಿಮಾನಿಗಳು ಜೇಮ್ಸ್​ ದರ್ಶನ ಪಡೆಯುತ್ತಿದ್ದಾರೆ. ಬೆಳ್ಳಿ ತೆರೆಯಲ್ಲಿ ಕಡೆಯ ಬಾರಿಗೆ ಅಪ್ಪು ಅವರನ್ನು ಕಂಡ ಅಭಿಮಾನಿಗಳು ಎದೆ ಬಡಿದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಅಪ್ಪು ಕೆರಿಯರ್​​ನಲ್ಲೇ ಈ ಪುನೀತ್​ ರಾಜ್​ಕುಮಾರ್​ ಅವರ ಬೆಸ್ಟ್​ ಪರ್ಫಾಮೆನ್ಸ್ ​(Best Performance) ಅಂದರೆ ತಪ್ಪಾಗಲಾರದು. ಈ ಸಿನಿಮಾ ನೋಡಲು ನಿನ್ನೆ ಅಪ್ಪು ಅಭಿಮಾನಿಯೊಬ್ಬ ತನ್ನಕಂಪನಿಗೆ ರಜೆ ಕೋರಿ ಪತ್ರ ಬರೆದಿದ್ದರು. ಆ ಫೋಟೋ ಸಖತ್​ ವೈರಲ್ ಆಗಿತ್ತು.


ಅಪ್ಪು ಹುಟ್ಟುಹಬ್ಬಕ್ಕೆ 2 ದಿನ ರಜೆ ಕೊಟ್ಟ ಅಂಬೇಡ್ಕರ್​ ಕಾಲೇಜ್


ಹೌದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.​ ಡಾ.ಅಂಬೇಡ್ಕರ್​ ಇನ್​ಸ್ಟಿಟ್ಯೂಶನ್​ ಆಫ್​ ಟೆಕ್ನಾಲಜಿ ವಿಟಿಯು, ಬೆಳಗಾವಿ ಕಾಲೇಜಿನ ಲೆಟರ್​ವೊಂದು ಸಖತ್​​ ವೈರಲ್​ ಆಗುತ್ತಿದೆ. ಕಾಲೇಜಿನ ಫಸ್ಟ್​ ಸೆಮಿಸ್ಟರ್​​ ಹಾಗೂ ಮೂರನೇ ಸೆಮಿಸ್ಟರ್​ ವಿದ್ಯಾರ್ಥಿಗಳಿಗೆ ಮಾರ್ಚ್​ 17 ಹಾಗೂ ಮಾರ್ಚ್​ 18ರಂದು ಕಾಲೇಜಿಗೆ ರಜೆ ನೀಡಲಾಗಿದೆ. ಈ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ತಮಿಳು ಕಬಾಲಿ ಸಿನಿಮಾ ರಿಲೀಸ್ ಆದ ಟೈಮ್​ನಲ್ಲಿ ಎಲ್ಲರೂ ರಜನಿಕಾಂತ್​ ಸಿನಿಮಾ ನೋಡಲು ರಜೆ ಕೋರಿ ಪತ್ರ ಬರೆದಿದ್ದರು. ಆದರೆ, ಅಪ್ಪು ಚಿತ್ರದಿಂದ ಸ್ಯಾಂಡಲ್​ವುಡ್​ಗೂ ಈ ಟ್ರೆಂಡ್​ ಬಂದಿದೆ.



ಮೌಂಟ್ ಎವರೆಸ್ಟ್​​ ಮೇಲೆ ಅಪ್ಪು ಬರ್ತಡೇ


ಇಂದು ಪುನೀತ್ ರಾಜ್​ಕುಮಾರ್ ಅವರ ಜನ್ಮದಿನವಾಗಿರುವ ಹಿನ್ನಲೆ ಬೆಂಗಳೂರಿನ ಮೂವರು ಪುನೀತ್ ಅಭಿಮಾನಿಗಳು ಮೌಂಟ್ ಎವರೆಸ್ಟ್​ನ ಬೇಸ್​ ಕ್ಯಾಂಪ್ ಬಳಿ ಅಪ್ಪು ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಮೌಂಟ್ ಎವರೆಸ್ಟ್​​ ಕೇಕ್​ ಕತ್ತರಿಸಿ ಅಪ್ಪುಗೆ ಜೈಕಾರ್ ಕೂಗಿ ವಿಶೇಷವಾಗಿ ಜನ್ಮದಿನವನ್ನು ಆಚರಿಸಿದ್ದಾರೆ. ಅಲ್ಲದೇ ಇಂದು ಜೇಮ್ಸ್ ಚಿತ್ರ ಬಿಡುಗಡೆಯಾಗುತ್ತಿದ್ದು, ಎಲ್ಲರೂ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾವನ್ನು ನೋಡಿ ಹಬ್ಬದಂತೆ ಆಚರಿಸಿ ಎಂದು ಅಪ್ಪು ಅಭಿಮಾನಿಗಳಿಗೆ ಸಂದೇಶವನ್ನೂ ಕಳುಹಿಸಿದ್ದಾರೆ.


ಇದನ್ನೂ ಓದಿ: Puneeth Rajkumar ನಮ್​ ಜೊತೆ ಇಲ್ಲ ಅಂತ ಅದೊಂದು ಜೀವಕ್ಕೆ ಗೊತ್ತೇ ಇಲ್ಲ.. `ಜೇಮ್ಸ್​’ಗೆ ವಿಶ್​ ಮಾಡಿದ ಸೋದರತ್ತೆ ನಾಗಮ್ಮ!


ಜೇಮ್ಸ್​ಗೆ ವಿಶ್​ ಮಾಡಿದ ಸೋದರತ್ತೆ ನಾಗಮ್ಮ!


ಡಾ.ರಾಜ್‌ಕುಮಾರ್‌ ಅವರ ಸಹೋದರಿ ನಾಗಮ್ಮ, ಪುನೀತ್‌ ರಾಜ್‌ಕುಮಾರ್‌ ಅವರ ಸೋದರ ಅತ್ತೆ. ಇವರಿಗೆ ಪುನೀತ್‌ರಾಜ್‌ಕುಮಾರ್‌ ನಿಧನ ಹೊಂದಿರುವ ವಿಚಾರ ಇನ್ನೂ ಕೂಡ ತಿಳಿಸಿಲ್ಲ. ಕುಟುಂಬಸ್ಥರು ಕೂಡ ಉದ್ದೇಶ ಪೂರ್ವಕವಾಗಿ ಈ ವಿಚಾರವನ್ನು ಅವರಿಂದ ಮುಚ್ಚಿಟ್ಟಿದ್ದಾರೆ. ಅವರಿಂದ ಈ ವಿಚಾರವನ್ನು ಮುಚ್ಚಿಡಲು ಮುಖ್ಯ ಕಾರಣ ಎಂದರೆ ಅವರಿಗೆ ವಯಸ್ಸಾಗಿದೆ. ಜೊತೆಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪುನೀತ್ ನಿಧನದ ವಿಚಾರ ತಿಳಿದರೆ ಅವರಿಗೆ ತಡೆದುಕೊಳ್ಳುವ ಶಕ್ತಿ ಇಲ್ಲ. ಆದರೆ, ಅಪ್ಪು ಬಗ್ಗೆ ಏನು ಗೊತ್ತಿರುದ ನಾಗಮ್ಮ ‘ಜೇಮ್ಸ್​’ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ.





ಲೈಫ್​ ಬಾಯ್​ ಸೋಪಿನಲ್ಲಿ ಅರಳಿದ ‘ಜೇಮ್ಸ್​’


ಮಂಗಳೂರಿನಲ್ಲೊಬ್ಬ ಅಪ್ಪಟ ಅಪ್ಪು ಅಭಿಮಾನಿಯೊಬ್ಬರು ಲೈಫ್ ಬಾಯ್ ಸೋಪ್​​ನಲ್ಲಿ ಪುನೀತ್ ರಾಜ್‍ಕುಮಾರ್ ಅವರ ಚಿತ್ರ ರಚಿಸಿ ತಮ್ಮ ಅಭಿಮಾನವನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿನ ಗಣೇಶಪುರ ನಿವಾಸಿಯಾದ ಕಲಾವಿದ ದೇವಿಕಿರಣ್ ಸೋಪ್​ನಲ್ಲಿ ಅಪ್ಪು ಚಿತ್ರ ಬಿಡಿಸಿದ್ದಾರೆ. ಕೇವಲ ಎರಡು ಗಂಟೆಗಳಲ್ಲಿ ಸೋಪ್ ಅನ್ನು ಗುಂಡು ಪಿನ್ ಮೂಲಕ ಕೊರೆದು ಪುನೀತ್ ರಾಜ್‍ಕುಮಾರ್ ಅವರ ಚಿತ್ರ ಅರಳಿಸಿದ್ದಾರೆ.


Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು