• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Rajamouli: ವಿಕ್ರಾಂತ್ ರೋಣ ಸಿನಿಮಾ ಇಷ್ಟಪಟ್ಟ ರಾಜಮೌಳಿ, ಈ ಪಾತ್ರ ಅಂದ್ರೆ ಅಚ್ಚುಮೆಚ್ಚಂತೆ

Rajamouli: ವಿಕ್ರಾಂತ್ ರೋಣ ಸಿನಿಮಾ ಇಷ್ಟಪಟ್ಟ ರಾಜಮೌಳಿ, ಈ ಪಾತ್ರ ಅಂದ್ರೆ ಅಚ್ಚುಮೆಚ್ಚಂತೆ

 ಎಸ್ ಎಸ್ ರಾಜಮೌಳಿ

ಎಸ್ ಎಸ್ ರಾಜಮೌಳಿ

Kiccha Sudeep and Vikrant Rona: ಪ್ರಭಾಸ್, ಅಲ್ಲು ಅರ್ಜುನ್, ರಾಮ್ ಚರಣ್, ಜೂನಿಯರ್ ಎನ್‌ಟಿಆರ್ ಮತ್ತು ಯಶ್ ನಂತರ, ಪ್ಯಾನ್-ಇಂಡಿಯನ್ ಪ್ರೇಕ್ಷಕರಿಗೆ ದಕ್ಷಿಣ ಸಿನಿಮಾ ರಂಗದಿಂದ ಕಿಚ್ಚ ಸುದೀಪ್ ಮೋಡಿ ಮಾಡಿದ್ದಾರೆ.

  • Share this:

ಕಿಚ್ಚ ಸುದೀಪ್ (Kiccha Sudeep) ಅಭಿನಯದ ವಿಕ್ರಾಂತ್ ರೋಣ (vikrant Rona) ಚಿತ್ರ ಬಿಡುಗಡೆಯಾಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಭಾನುವಾರ, ಆರ್‌ಆರ್‌ಆರ್ (RRR)  ನಿರ್ದೇಶಕ ಎಸ್‌ಎಸ್ ರಾಜಮೌಳಿ (S S Rajamouli) ಟ್ವಿಟ್ಟರ್‌ನಲ್ಲಿ ನಟ ಕಿಚ್ಚ ಸುದೀಪ್ ಅವರನ್ನು ಹೃತ್ಪೂರ್ವಕ ಅಭಿನಂದಿಸಿದ್ದು, ಮೆಚ್ಚುಗೆ ಮಾತುಗಳನ್ನು ಬರೆದುಕೊಂಡಿದ್ದಾರೆ.  ಈ ಸಿನಿಮಾ ಮತ್ತು ಕಿಚ್ಚನನ್ನ ಹಾಡಿ ಹೊಗಳಿರುವ ರಾಜಮೌಳಿ, ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.


ಕಿಚ್ಚನ ಹಾಡಿ ಹೊಗಳಿದ ನಿರ್ದೇಶಕ


ಎಸ್ ಎಸ್ ರಾಜಮೌಳಿ ಟ್ವೀಟ್ ಮಾಡಿ, "ವಿಕ್ರಾಂತ್ ರೋಣದ ಯಶಸ್ಸಿಗೆ ಅಭಿನಂದನೆಗಳು @KicchaSudeep. ಇಂಥಹ ಸಿನಿಮಾದಲ್ಲಿ  ಹೂಡಿಕೆ ಮಾಡಲು ಧೈರ್ಯ ಮತ್ತು ನಂಬಿಕೆ ಬೇಕು. ನೀವು ಮಾಡಿದ್ದೀರಿ ಮತ್ತು ಅದು ಫಲ ನೀಡಿದೆ. ಪ್ರಿ ಕ್ಲೈಮ್ಯಾಕ್ಸ್, ಚಿತ್ರದ ಪ್ರಮುಖ ಭಾಗ ಅದ್ಭುತವಾಗಿದೆ. ಈ ಸಿನಿಮಾ  ತುಂಬಾ ಚೆನ್ನಾಗಿತ್ತು. ಅದರಲ್ಲೂ ಗುಡ್ಡಿಯ ಗೆಳೆಯ ಭಾಸ್ಕರ್ ಅವರನ್ನು ವಿಶೇಷವಾಗಿ ನೆನಪಿಸಿಕೊಳ್ಳಲೇ ಬೇಕು ಎಂದು ಬರೆದುಕೊಂಡಿದ್ದಾರೆ.


ಕಿಚ್ಚ ಸುದೀಪ್ ಕೂಡ ಇದಕ್ಕೆ ಪ್ರತಿಕ್ರಿಯಿಸಿ, "ಧನ್ಯವಾದಗಳು @ssrajamouli ಸರ್. ನಿಮ್ಮಿಂದ ಈ ಸಾಲುಗಳನ್ನು ಕೇಳಲು ನನಗೆ ತುಂಬಾ ಸಂತೋಷವಾಗಿದೆ ಮತ್ತು ಗೌರಚ ಎನಿಸುತ್ತದೆ. ಭಾಸ್ಕರ್​ ಸೇರಿದಂತೆ ನಮ್ಮೆಲ್ಲರಿಂದ ದೊಡ್ಡ ಧನ್ಯವಾದಗಳು ಎಂದು ಬರೆದು, ರಾಜಮೌಳಿ ಅವರಿಗೆ ಥ್ಯಾಂಕ್ಯೂ ಎಂದಿದ್ದಾರೆ.



ಕಿಚ್ಚ ಸುದೀಪ ಅವರ ಪ್ಯಾನ್-ಇಂಡಿಯಾ ಚಿತ್ರ ವಿಕ್ರಾಂತ್ ರೋಣ ಜುಲೈ 28 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಇದಕ್ಕೂ ಮೊದಲು, ಎಸ್‌ಎಸ್ ರಾಜಮೌಳಿ ವಿಕ್ರಾಂತ್ ರೋಣದ ಸ್ಟಾರ್ ಕಿಚ್ಚ ಸುದೀಪ ಅವರನ್ನು ಹೊಗಳಿ ಈ ಮೊದಲು ವಿಶ್​ ಮಾಡಿ ಟ್ವೀಟ್​ ಮಾಡಿದ್ದರು. "ಸುದೀಪ್ ಯಾವಾಗಲೂ ಪ್ರಯೋಗ ಮತ್ತು ಸವಾಲುಗಳನ್ನು ಎದುರಿಸುವಲ್ಲಿ ಮೊದಲಿಗರಾಗಿರುತ್ತಾರೆ. ಅವರು #ವಿಕ್ರಾಂತ್ ರೋಣದಲ್ಲಿ ಏನು ಮಾಡಿದ್ದಾರೆಂದು ನೋಡಲು ಕಾಯಲು ಸಾಧ್ಯವಿಲ್ಲ. ದೃಶ್ಯಗಳು ಭವ್ಯವಾಗಿ ಕಾಣುತ್ತವೆ. ನಾಳೆ ಬಿಡುಗಡೆಯಾಗಲಿರುವ @KicchaSudeep ಮತ್ತು ಇಡೀ ತಂಡಕ್ಕೆ ನನ್ನ ಶುಭಾಶಯಗಳು" ಎಂದು ಅವರು ವಿಶ್​ ಮಾಡಿದ್ದರು.


ಇದನ್ನೂ ಓದಿ: ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ದೀಪಿಕಾ - ರಣವೀರ್, ಮನೀಶ್ ಮಲ್ಹೋತ್ರ ಫ್ಯಾಷನ್ ಶೋನಲ್ಲಿ ತಾರೆಯರ ಝಲಕ್​


ಎಲ್ಲೆಡೆ ವಿಕ್ರಾಂತ್ ರೋಣನ ಸದ್ದು


ಸಿನಿಮಾ ತಂಡದ ಪ್ರಕಾರ, ವಿಕ್ರಾಂತ್ ರೋಣಾಗಾಗಿ 800 ಕ್ಕೂ ಹೆಚ್ಚು ಕಲಾವಿದರು VFX ಎಫೆಕ್ಟ್​ಗಾಗಿ ಕೆಲಸ ಮಾಡಿದ್ದಾರೆ. ಸಿನಿಮಾದ ದೃಶ್ಯ ಅದ್ಭುತವಾಗಿದ್ದು, ಕ್ಯಾಮೆರಾದ ಹಿಂದೆ ಅದ್ಭುತವಾದ ಕೆಲಸವನ್ನು ಮಾಡಿದ ಅನುಪ್ ಭಂಡಾರಿ ಅವರ ತಂಡದ ಪರಿಶ್ರಮ ಅದ್ಭುತವಾಗಿ ಮೂಡಿ ಬಂದಿದೆ.



ಪ್ರಭಾಸ್, ಅಲ್ಲು ಅರ್ಜುನ್, ರಾಮ್ ಚರಣ್, ಜೂನಿಯರ್ ಎನ್‌ಟಿಆರ್ ಮತ್ತು ಯಶ್ ನಂತರ, ಪ್ಯಾನ್-ಇಂಡಿಯನ್ ಪ್ರೇಕ್ಷಕರಿಗೆ ದಕ್ಷಿಣ ಸಿನಿಮಾ ರಂಗದಿಂದ ಕಿಚ್ಚ ಸುದೀಪ್ ಮೋಡಿ ಮಾಡಿದ್ದಾರೆ. ಸುದೀಪ್ ಅವರ ಮ್ಯಾನರಿಸಂ ಮತ್ತು ನಟನೆ ಎಲ್ಲರಿಗೂ ಇಷ್ಟವಾಗಿದೆ.  ಜಾಕ್ಲೀನ್​  ಫರ್ನಾಂಡಿಸ್ ಮತ್ತು ಕಿಚ್ಚ ಸುದೀಪ್ ಇರುವ ಪಾರ್ಟಿ-ಪಂಪಿಂಗ್ ಹಾಡು ರಾ ರಾ ರಕ್ಕಮ್ಮ ಕೂಡ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಕರೆತರುವಲ್ಲಿ ಪಾತ್ರ ವಹಿಸಿದೆ.


ಇದನ್ನೂ ಓದಿ: Ponniyin Selvan ಸಿನಿಮಾದ ಹಾಡು ರಿಲೀಸ್​ ಮಾಡಲಿದ್ದಾರೆ ಈ ತಾರೆ, ಹೆಚ್ಚಾಗ್ತಿದೆ ಅಭಿಮಾನಿಗಳ ನಿರೀಕ್ಷೆ

top videos


    ಸುನಿಧಿ ಚೌಹಾಣ್ ಮತ್ತು ನಕಾಶ್ ಅಜೀಜ್ ಹಾಡಿರುವ `ರಾ ರಾ ರಕ್ಕಮ್ಮ' ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ್ದು, ಸಿನಿಮಾದ ಬಹುಮುಖ್ಯ ಭಾಗ ಇದು ಎಂದರೆ ತಪ್ಪಲ್ಲ.  ಅನುಪ್ ಭಂಡಾರಿ ನಿರ್ದೇಶನದ ಮತ್ತು ಸಲ್ಮಾನ್ ಖಾನ್ ಫಿಲ್ಮ್ಸ್, ಜೀ ಸ್ಟುಡಿಯೋಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಪ್ರಸ್ತುತಪಡಿಸಿದ ವಿಕ್ರಾಂತ್ ರೋಣ ಸಿನಿಮಾದಲ್ಲಿ ಜಾಕ್ಲೀನ್​ ಫರ್ನಾಂಡಿಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    First published: