ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಮಕ್ಕಳ ಜೊತೆ ಮಕ್ಕಳಾಗಿ ಬಿಡುತ್ತಾರೆ. ಅವರು ಮಕ್ಕಳೊಂದಿಗೆ ಇರುವ ವಿಡಿಯೋ ಅಥವಾ ಫೋಟೋ ನೋಡಿದರೆ ಸಾಕು. ಎಷ್ಟೇ ಹಠ ಮಾಡುವ ಮಕ್ಕಳಿದ್ದರೂ ಅವರನ್ನು ತಮ್ಮ ಮಾತುಗಳಿಂದಲೇ ನೈಸ್ ಮಾಡಿ ಬಿಡುತ್ತಾರೆ. ಈ ಹಿಂದೆಯೂ ತಮ್ಮ ಮಕ್ಕಳ ಜೊತೆಗಿನ ವಿಡಿಯೋ ಹಾಗೂ ಕ್ರೇಜಿ ಫೋಟೋಗಳನ್ನು ಶ್ರೀಮುರಳಿ ಹಾಗೂ ವಿದ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈಗಲೂ ಸಹ ಶ್ರೀ ಮುರಳಿ ಅವರ ಒಂದು ಕ್ಯೂಟ್ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಶೂಟಿಂಗ್ ಸೆಟ್ನಲ್ಲಿರುವ ಮಗುವಿನ ಜೊತೆ ಮುರಳಿ ತಮಾಷೆ ಮಾಡುತ್ತಾ ಆಟವಾಡುತ್ತಿದ್ದಾರೆ.
ನಿರ್ದೇಶಕ ಮಹೇಶ್ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ಮದಗಜ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾದ ಚಿತರೀಕರಣದ ಸೆಟ್ನಲ್ಲಿ ದುಶ್ಯಂತ್ ಎಂಬ ಮಗು ಜತೆ ತಮಾಷೆ ಮಾತಾಡುತ್ತಾ ಶ್ರೀಮುರಳಿ ಸಖತ್ತಾಗಿ ಆಟವಾಗಿದ್ದಾರೆ.
ಮದಗಜ ಚಿತ್ರದ ಶೂಟಿಂಗ್ ಸೆಟ್ನಲ್ಲಿ ಮಗುವಿನ ಜತೆ ಶ್ರೀಮುರಳಿ ಆಟವಾಡಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಶ್ರೀಮುರಳಿ ಅವರು ಬಿಸ್ಕೆಟ್ ಕೊಟ್ಟು ಮಗುವಿನ ಬಳಿ ಚಿಪ್ಸ್ ಕೇಳುತ್ತಿದ್ದಾರೆ. ಮೊದಲಿಗೆ ಕೊಡುವುದಿಲ್ಲ ಎನ್ನುವ ಆ ಮಗು, ನಂತರ ಶ್ರೀಮುರಳಿ ಅವರ ಮಾತು ಕೇಳಿ ಅವರಿಗೆ ಚಿಪ್ಸ್ ತಿನ್ನಿಸುತ್ತೆ. ನಂತರ ಮುರಳಿ ಮಗುವಿನ ಜೊತೆ ಮಾತನಾಡುತ್ತಾ ಅದರ ಕಾಲು ಒತ್ತುತ್ತಾರೆ. ಮಕ್ಕಳ ಮುಂದೆ ತಾನೊಬ್ಬ ಸ್ಟಾರ್ ಎನ್ನುವುದನ್ನೂ ಮರೆತ ನಟನ ವರ್ತನೆಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Weight Loss: ಹೊಸ ಸಿನಿಮಾಗಾಗಿ 15 ಕೆಜಿ ತೂಕ ಇಳಿಸಿಕೊಂಡ ನಟ ಸಿಂಬು
ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಆಶಿಕಾ ರಂಗನಾಥ್ ಅಭಿನಯದ ಮದಗಜ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಿದೆ. ಕೊರೋನಾ ಎರಡನೇ ಅಲೆಯಿಂದಾಗಿ ಆಗಿದ್ದ ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಚಿತ್ರತಂಡ ಶೂಟಿಂಗ್ ಆರಂಭಿಸಿದೆ. ಅಯೋಗ್ಯ ಚಿತ್ರದ ನಿರ್ದೇಶಕ ಮಹೇಶ್ ನಿರ್ದೇಶನದ ಹಾಗೂ ಉಮಾಪತಿ ನಿರ್ಮಾಣದ ಸಿನಿಮಾ ಮದಗಜ ಚಿತ್ರೀಕರಣ ಜ.22ರಿಂದ ಆರಂಭವಾಗಿದೆ. ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಿರುವ ಬಗ್ಗೆ ನಿರ್ದೇಶಕ ಮಹೇಶ್ ಅವರೇ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ರಾಷ್ಟ್ರಗೀತೆ ಹಾಡುವಾಗ ಸುದೀಪ್ ಮಾಡಿದ ತಪ್ಪು ಹುಡುಕಿ ಬುದ್ಧಿ ಹೇಳಿದ ನೆಟ್ಟಿಗ: ಕಿಚ್ಚನ ಪ್ರತಿಕ್ರಿಯೆ ಹೀಗಿದೆ..!
ಶ್ರೀಮುರಳಿ ಹಾಗೂ ಆಶಿಕಾ ರಂಗನಾಥ್ ಅಭಿನಯದ ಮದಗಜ ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ಅದ್ದೂರಿ ಸೆಟ್ ನಿರ್ಮಿಸಲಾಗಿತ್ತು. ಹಾಡಿನ ಚಿತ್ರೀಕರಣಕ್ಕೆಂದು ವಿಭಿನ್ನವಾದ ಮೂರು ಸೆಟ್ಗಳನ್ನು ನಿರ್ಮಿಸಲಾಗಿದೆ ಎಚ್ಎಂಟಿ ಮೈದಾನದಲ್ಲಿ ನಿರ್ಮಿಸಿದ್ದು, ಅಲ್ಲಿ ಸಿನಿಮಾದ ಟೈಟಲ್ ಟ್ರ್ಯಾಕ್ ಶೂಟಿಂಗ್ ಆರಂಭವಾಗಿತ್ತು. ಈ ಹಾಡು ಸಿನಿಮಾದ ಹೆಸರಿನಂತೆಯೇ ಆನೆಗಳ ಥೀಮ್ ಮೇಲೆ ಮಾಡಲಾಗುತ್ತಿದೆ.ಈ ಸಿನಿಮಾದಲ್ಲಿ ಟಾಲಿವುಡ್ ನಟ ಜಗಪತಿ ಬಾಬು ಅವರೂ ನಟಿಸಿದ್ದಾರೆ.ಈ ಸಿನಿಮಾದಲ್ಲಿ ಶ್ರೀಮುರಳಿ ಸಖತ್ ರಗಡ್ ಹಾಗೂ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.ಟೈಟಲ್ ಟ್ರ್ಯಾಕ್ ಶೂಟಿಂಗ್ ನಂತರ ಮೈಸೂರಿನ ಸುತ್ತಮುತ್ತ ಮತ್ತೊಂದು ಹಾಡಿನ ಚಿತ್ರೀಕಣರ ನಡೆಯಲಿದೆಯಂತೆ.ಕಡೆಯದಾಗಿ ಮೇಕೆದಾಟುವಿನಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯಲಿದೆ.
ಇದನ್ನೂ ಓದಿ: Pawan Kalyan: ಭೀಮ್ಲಾ ನಾಯಕ್ ಪಂಚೆ ಎತ್ತಿ ಕಟ್ಟುವ ಸ್ಟೈಲ್ಗೆ ಅಭಿಮಾನಿಗಳು ಫಿದಾ..!
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ