ಪಾತ್ರಕ್ಕಾಗಿ ಪಲ್ಲಂಗ: ನಟ-ನಿರ್ದೇಶಕ ಲಾರೆನ್ಸ್ ವಿರುದ್ಧವೂ ಶ್ರೀರೆಡ್ಡಿ ಆರೋಪ!
news18
Updated:July 13, 2018, 11:34 AM IST
news18
Updated: July 13, 2018, 11:34 AM IST
ನ್ಯೂಸ್ 18 ಕನ್ನಡ
ಪಾತ್ರಕ್ಕಾಗಿ ಪಲ್ಲಂಗ ಕುರಿತಂತೆ ದಿನಕ್ಕೊಂದು ಫೇಸ್ಬುಕ್ ಪೋಸ್ಟ್ ಮೂಲಕ ತೆಲುಗು-ತಮಿಳು ಚಿತ್ರರಂಗದ ನಟ, ನಿರ್ದೇಶಕರ ವಿರುದ್ಧ ಆರೋಪಗಳ ಮಳೆಯನ್ನೇ ಸುರಿಸುತ್ತಿದ್ದಾರೆ. ನಿನ್ನೆಯಷ್ಟೆ ತಮಿಳಿನ ನಟ ಶ್ರೀಕಾಂತ್ ಹಾಗೂ ನಿರ್ದೇಶಕ ಮುರುಗದಾಸ್ ಅವರ ವಿರುದ್ಧ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ ಮಾಡುವ ಮೂಲಕ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಮತ್ತೆ ಶ್ರೀರೆಡ್ಡಿ, ನಟ ಹಾಗೂ ನಿರ್ದೇಶಕ ಲಾರೆನ್ಸ್ ಅವರ ವಿರುದ್ಧವೂ ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪ ಮಾಡಿದ್ದಾರೆ. ಹೌದು ನೃತ್ಯ ಸಂಯೋಜಕನಾಗಿ ತೆಲುಗು ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಲಾರೆನ್ಸ್ ಇಂದು ತೆಲುಗು ಹಾಗೂ ತಮಿಳಿನಲ್ಲಿ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸುವ ಮಟ್ಟಕ್ಕೆ ಬೆಳೆದಿದ್ದಾರೆ. 'ಮುನಿ', 'ಮುನಿ 2', 'ಮಾಸ್' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವುದರೊಂದಿಗೆ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.
'ಸ್ನೇಹಿತರ ಮೂಲಕ ಗೋಲ್ಕೊಂಡ ಹೋಟೆಲ್ನಲ್ಲಿ ಲಾರೆನ್ಸ್ ಅವರ ಪರಿಚಯವಾಗಿತ್ತು. ಅಂದು ಅವರು ನನ್ನನ್ನು ಅವರ ರೂಮ್ಗೆ ಕರೆದುಕೊಂಡು ಹೋಗಿದ್ದರು. ಅವರ ಕೋಣೆಯಲ್ಲಿ ರಾಘವೇಂದ್ರ ಸ್ವಾಮಿ ಅವರ ಫೋಟೋ ಹಾಗೂ ರುದ್ರಾಕ್ಷಿ ಮಾಲೆಗಳಿದ್ದವು. ಅದನ್ನು ಕಂಡು ನಾನು ಇವರು ತುಂಬಾ ಸಜ್ಜನ ವ್ಯಕ್ತಿ ಎಂದುಕೊಂಡೆ. ಆದರೆ ಕೆಲ ಸಮಯದ ನಂತರ ಸೊಂಟ ತೋರಿಸುತ್ತಾ ಕನ್ನಡಿಯೊಂದಿಗೆ ರೊಮ್ಯಾನ್ಸ್ ಮಾಡುವಂತೆ ಹೇಳಿದರು. ಕಾರಣ ಕೇಳಿದಕ್ಕೆ ನಿನಗೆ ಸಿನಿಮಾದಲ್ಲಿ ಅವಕಾಶ ಬೇಕಾದರೆ ಅಭಿನಿಯಿಸಿ ತೋರಿಸು ಎಂದರು. ಇದಾದ ಬಳಿಕ ಅವರು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ನಿನಗೆ ಆಫರ್ ಖಚಿತವಾಯಿತು ಎಂದರು. ಅದಕ್ಕಾಗಿ ಅವರೊಂದಿಗೆ ಕೆಲಕಾಲ ಸ್ನೇಹವನ್ನು ಮುಂದುವರಿಸಿದೆ. ಆದರೆ ನಂತರ ಅವರೂ ನನಗೆ ಮೋಸ ಮಾಡಿ ನನ್ನ ಜೀವನದಲ್ಲಿ ಖಳನಾಯಕನಾದರು' ಎಂದು ಶ್ರೀರೆಡ್ಡಿ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಬಡ ಕುಟುಂಬದಿಂದ ಬಂದು ಈ ಮಟ್ಟಕ್ಕೆ ಬೆಳೆದಿರುವ ಲಾರೆನ್ಸ್ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ. ಅಲ್ಲದೆ ಕೊನೆಯುಸಿರೆಳೆದ ತನ್ನ ತಾಯಿಗೆಂದೇ ದೇವಾಲಯವನ್ನು ಕಟ್ಟಿದ್ದು, ಸಾಕಷ್ಟು ಬಡ ಮಕ್ಕಳನ್ನು ದತ್ತು ಪಡೆದು ಪೋಷಿಸುತ್ತಿದ್ದಾರೆ.
ಪಾತ್ರಕ್ಕಾಗಿ ಪಲ್ಲಂಗ ಕುರಿತಂತೆ ದಿನಕ್ಕೊಂದು ಫೇಸ್ಬುಕ್ ಪೋಸ್ಟ್ ಮೂಲಕ ತೆಲುಗು-ತಮಿಳು ಚಿತ್ರರಂಗದ ನಟ, ನಿರ್ದೇಶಕರ ವಿರುದ್ಧ ಆರೋಪಗಳ ಮಳೆಯನ್ನೇ ಸುರಿಸುತ್ತಿದ್ದಾರೆ. ನಿನ್ನೆಯಷ್ಟೆ ತಮಿಳಿನ ನಟ ಶ್ರೀಕಾಂತ್ ಹಾಗೂ ನಿರ್ದೇಶಕ ಮುರುಗದಾಸ್ ಅವರ ವಿರುದ್ಧ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ ಮಾಡುವ ಮೂಲಕ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಮತ್ತೆ ಶ್ರೀರೆಡ್ಡಿ, ನಟ ಹಾಗೂ ನಿರ್ದೇಶಕ ಲಾರೆನ್ಸ್ ಅವರ ವಿರುದ್ಧವೂ ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪ ಮಾಡಿದ್ದಾರೆ. ಹೌದು ನೃತ್ಯ ಸಂಯೋಜಕನಾಗಿ ತೆಲುಗು ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಲಾರೆನ್ಸ್ ಇಂದು ತೆಲುಗು ಹಾಗೂ ತಮಿಳಿನಲ್ಲಿ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸುವ ಮಟ್ಟಕ್ಕೆ ಬೆಳೆದಿದ್ದಾರೆ. 'ಮುನಿ', 'ಮುನಿ 2', 'ಮಾಸ್' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವುದರೊಂದಿಗೆ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.
'ಸ್ನೇಹಿತರ ಮೂಲಕ ಗೋಲ್ಕೊಂಡ ಹೋಟೆಲ್ನಲ್ಲಿ ಲಾರೆನ್ಸ್ ಅವರ ಪರಿಚಯವಾಗಿತ್ತು. ಅಂದು ಅವರು ನನ್ನನ್ನು ಅವರ ರೂಮ್ಗೆ ಕರೆದುಕೊಂಡು ಹೋಗಿದ್ದರು. ಅವರ ಕೋಣೆಯಲ್ಲಿ ರಾಘವೇಂದ್ರ ಸ್ವಾಮಿ ಅವರ ಫೋಟೋ ಹಾಗೂ ರುದ್ರಾಕ್ಷಿ ಮಾಲೆಗಳಿದ್ದವು. ಅದನ್ನು ಕಂಡು ನಾನು ಇವರು ತುಂಬಾ ಸಜ್ಜನ ವ್ಯಕ್ತಿ ಎಂದುಕೊಂಡೆ. ಆದರೆ ಕೆಲ ಸಮಯದ ನಂತರ ಸೊಂಟ ತೋರಿಸುತ್ತಾ ಕನ್ನಡಿಯೊಂದಿಗೆ ರೊಮ್ಯಾನ್ಸ್ ಮಾಡುವಂತೆ ಹೇಳಿದರು. ಕಾರಣ ಕೇಳಿದಕ್ಕೆ ನಿನಗೆ ಸಿನಿಮಾದಲ್ಲಿ ಅವಕಾಶ ಬೇಕಾದರೆ ಅಭಿನಿಯಿಸಿ ತೋರಿಸು ಎಂದರು. ಇದಾದ ಬಳಿಕ ಅವರು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ನಿನಗೆ ಆಫರ್ ಖಚಿತವಾಯಿತು ಎಂದರು. ಅದಕ್ಕಾಗಿ ಅವರೊಂದಿಗೆ ಕೆಲಕಾಲ ಸ್ನೇಹವನ್ನು ಮುಂದುವರಿಸಿದೆ. ಆದರೆ ನಂತರ ಅವರೂ ನನಗೆ ಮೋಸ ಮಾಡಿ ನನ್ನ ಜೀವನದಲ್ಲಿ ಖಳನಾಯಕನಾದರು' ಎಂದು ಶ್ರೀರೆಡ್ಡಿ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಬಡ ಕುಟುಂಬದಿಂದ ಬಂದು ಈ ಮಟ್ಟಕ್ಕೆ ಬೆಳೆದಿರುವ ಲಾರೆನ್ಸ್ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ. ಅಲ್ಲದೆ ಕೊನೆಯುಸಿರೆಳೆದ ತನ್ನ ತಾಯಿಗೆಂದೇ ದೇವಾಲಯವನ್ನು ಕಟ್ಟಿದ್ದು, ಸಾಕಷ್ಟು ಬಡ ಮಕ್ಕಳನ್ನು ದತ್ತು ಪಡೆದು ಪೋಷಿಸುತ್ತಿದ್ದಾರೆ.
Loading...