• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Badshah: 'ತು ಕಬ್ ಮರೇಗಾ' ಎಂದು ಕೇಳಿದ ನೆಟ್ಟಿಗನಿಗೆ ಖಡಕ್ ಆಗಿ ಉತ್ತರಿಸಿದ ಬಾಲಿವುಡ್ ಬಾದ್​ಶಾ

Badshah: 'ತು ಕಬ್ ಮರೇಗಾ' ಎಂದು ಕೇಳಿದ ನೆಟ್ಟಿಗನಿಗೆ ಖಡಕ್ ಆಗಿ ಉತ್ತರಿಸಿದ ಬಾಲಿವುಡ್ ಬಾದ್​ಶಾ

ಬಾದ್​ಶಾ

ಬಾದ್​ಶಾ

ಬಾಲಿವುಡ್​ ನ ಖ್ಯಾತ ಗಾಯಕ ಮತ್ತು ರಾಫರ್ ಬಾದ್​ಶಾ (Badshah) ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪೋಟೋ ಒಂದನ್ನು ಹಂಚಿಕೊಂಡಿದ್ದು, ಸೆಲೆಬ್ರೆಟಿಗಳ ಜೀವನದಲ್ಲಿ ಕೆಲವೊಮ್ಮೆ ಹೀಗೂ ಆಗುತ್ತದೆ ಎಂಬ ಸಂದೇಶವನ್ನು ಬರೆದುಕೊಂಡಿದ್ದಾರೆ.

  • Share this:

ಕೆಕೆ ಎಂದೇ ಖ್ಯಾತರಾಗಿರುವ ಬಾಲಿವುಡ್‌ನ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರು (Singer KK Death) 53 ನೇ ವಯಸ್ಸಿನಲ್ಲಿ ಸಂಗೀತ ಕಾರ್ಯಕ್ರಮವೊಂದರ ಬಳಿಕ ಹೃದಯಾಘಾತದಿಂದ ಕೋಲ್ಕತ್ತಾದಲ್ಲಿ ನಿಧನರಾಗಿದ್ದಾರೆ. ಇದನ್ನೂ ಮುನ್ನ ಪಂಜಾಬ್​ ನ ರಾಫರ್ ಸಿಧು ಮುಸೇವಾಲಾ (Sidhu Moose Wala) ಅವರನ್ನು ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಬ್ ಬಾಲಿವುಡ್ (Bollywood) ಸ್ಟಾರ್ ರಾಫರ್ ಮತ್ತು ಗಾಯಕ ಅವರು ತಮ್ಮ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ. ಹೌದು, ಬಾಲಿವುಡ್​ ನ ಖ್ಯಾತ ಗಾಯಕ ಮತ್ತು ರಾಫರ್ ಬಾದ್​ಶಾ (Badshah) ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪೋಟೋ ಒಂದನ್ನು ಹಂಚಿಕೊಂಡಿದ್ದು, ಸೆಲೆಬ್ರೆಟಿಗಳ ಜೀವನದಲ್ಲಿ ಕೆಲವೊಮ್ಮೆ ಹೀಗೂ ಆಗುತ್ತದೆ ಎಂಬ ಸಂದೇಶವನ್ನು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಬಾದ್​ ಶಾ ಅವರು ಹೀಗೆಕೆ ಹೇಳುತ್ತಿದ್ದಾರೆ ಎಂದು ಕೇಳಿದರೆ ಇಲ್ಲಿದೆ ನೋಡಿ ಬಾದ್ ಶಾ ಬರೆದ ವಿವರಗಳು.


ಕೆಲವರು ನಾವು ಸಾಯಬೇಕೆಂದು ಪ್ರಾರ್ಥಿಸುತ್ತಾರೆ ಎಂದ ಬಾದ್​​ಶಾ:


ಹೌದು, ಬಾದ್​ ಶಾ ತಮ್ಮ ಇನ್ಸ್ಟಾಗ್ರಾಂ ಗೆ ಓರ್ವ ವ್ಯಕ್ತಿ ಸಂದೇಶ ಕಳಿಸಿದ್ದನ್ನು ಪೋಸ್ಟ್ ಮಾಡಿದ್ದಾರೆ ಜೊತೆಗೆ ತಮ್ಮ ಅನಿಸಿಕೆಯನ್ನೂ ಅದರೊಂದಿಗೆ ಸೇರಿಸಿದ್ದು, ಇದೀಗ ಈ ಪೋಟೋ ಎಲ್ಲಡೆ ವೈರಲ್ ಆಗುತ್ತಿದೆ. ಬಾದ್​ಶಾ ಅವರಿಗೆ ಓರ್ವ ವ್ಯಕ್ತಿ ಇನ್ಸ್ಟಾಗ್ರಾಂ ನಲ್ಲಿ "ತು ಕಬ್ ಮರೇಗಾ..." ಎಂಬ ನಿಂದನೀಯ ಸಂದೇಶವನ್ನು ಕಳುಹಿಸಿದ್ದಾರೆ. ನೀವು ಸಾಯುವುದು ಯಾವಾಗ ಎಂದು ಕೇಳಿರುವ ಈ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು, ಕೆಲ ಮಾತುಗಳನ್ನು ಬರೆದುಕೊಂಡಿದ್ದಾರೆ.


ಬಾದ್​ಶಾ ಹಂಚಿಕೊಂಡ ಪೋಸ್ಟ್


ಅದರಂತೆ, ‘ನಾವು ದಿನನಿತ್ಯದ ಆಧಾರದ ಮೇಲೆ ಯಾವ ರೀತಿಯ ದ್ವೇಷವನ್ನು ಎದುರಿಸುತ್ತೇವೆ ಎಂಬ ಕಲ್ಪನೆಯನ್ನು ನಿಮಗೆ ನೀಡಲು ಈ ಪೋಸ್ಟ್ ಹಾಕಬೇಕಾಯಿತು. ನೀವು ನೋಡುವುದು ಭ್ರಮೆ, ನೀವು ಕೇಳುವುದು ಸುಳ್ಳು, ಕೆಲವರು ನಿಮ್ಮನ್ನು ಭೇಟಿಯಾಗಲು ಸಾಯುತ್ತಾರೆ, ಕೆಲವರು ನೀವು ಸಾಯಬೇಕೆಂದು ಪ್ರಾರ್ಥಿಸುತ್ತಾರೆ‘ ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Singer KK Death: ಕೆಕೆ ಸಾವಿಗೆ ಅವ್ರೇ ಕಾರಣನಾ? ಕೊನೆ ಉಸಿರು ಹೋಗೋ ಮುನ್ನ ಸೂಚನೆ ಕೊಟ್ಟಿದ್ರಂತೆ ಲೆಜೆಂಡ್​ ಸಿಂಗರ್​!


ಖ್ಯಾತ ಗಾಯಕನನ್ನು ಕಳೆದುಕೊಂಡ ಬಾಲಿವುಡ್:


ಇನ್ನು, ಕೆಕೆ ಎಂದೇ ಖ್ಯಾತರಾಗಿರುವ ಬಾಲಿವುಡ್‌ನ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರು 53ನೇ ವಯಸ್ಸಿನಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿರುವಾಗಲೇ ಹೃದಯಾಘಾತದಿಂದ ಕೋಲ್ಕತ್ತಾದಲ್ಲಿ ನಿಧನರಾದರು. ಈ ಸುದ್ದಿ ಬಾಲಿವುಡ್​ ಮಂದಿಗೆ ಸಾಕ್ ನೀಡಿದಂತಾಗಿದ್ದು, ಉತ್ತಮ ಗಾಯಕನ ನಿಧನ ಬಾಲಿವುಡ್​ಗೆ ತುಂಬಲಾರದ ನಷ್ಟವಾಗಿದೆ.ಭಾರತೀಯ ಚಲನಚಿತ್ರೋದ್ಯಮದ ಬಹುಮುಖ ಗಾಯಕರಲ್ಲಿ ಒಬ್ಬರಾದ ಕೆಕೆ ಅವರು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಬೆಂಗಾಲಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.


ಇದನ್ನೂ ಓದಿ:  Singer KK Death: ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪಿದ ಸಂಗೀತಗಾರರಿವರು, ಸಾವಿಗೂ-ಸಂಗೀತಕ್ಕೂ ಲಿಂಕ್ ಇದ್ಯಾ?


ಕೆಲ ದಿನಗಳ ಹಿಂದೆ ಕೊಲೆಯಾಗಿದ್ದ ಪಂಜಾಬಿ ಗಾಯಕ:

top videos


    ಕೆಲ ದಿನಗಳ ಹಿಂದೆ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಾಗಿತ್ತು. ಈ ಪ್ರಕರಣದ ತನಿಖೆಗೆ ಪಂಜಾಬ್ ಪೊಲೀಸರು ಎಸ್‌ಐಟಿ ರಚಿಸಿದ್ದಾರೆ. ಪಂಜಾಬ್ ಪೊಲೀಸ್ ಡಿಜಿಪಿ ವಿಕೆ ಭನ್ವಾರಾ ಅವರು ಪಂಜಾಬ್‌ನಲ್ಲಿರುವ ಹಿರಿಯ ಅಧಿಕಾರಿಗಳನ್ನು ಎಸ್‌ಐಟಿಗೆ ಸೇರಿಸಲಾಗುವುದು ಎಂದು ಹೇಳಿದ್ದಾರೆ. ಸಿಧು ಮುಸೇವಾಲಾ ಹತ್ಯೆಗೆ 9 ಎಂಎಂ ಪಿಸ್ತೂಲ್ ಬಳಸಲಾಗಿದೆ. ಹಂತಕರು ಕೊಲೆಗೆ 3 ರೀತಿಯ ಆಯುಧಗಳನ್ನು ಬಳಸಿದ್ದಾರೆ. ಸ್ಥಳದಲ್ಲಿ 30 ಚಿಪ್ಪುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    First published: