news18-kannada Updated:May 26, 2020, 2:51 PM IST
ಜ್ಯೋತಿಕಾ
1993 ಡಿಸೆಂಬರ್ 23 ರಂದು ಮಲಯಾಳಂನಲ್ಲಿ ‘ಮಣಿಚಿತ್ರ ತಾರಂ‘ ಸಿನಿಮಾ ಬಿಡುಗಡೆಗೊಂಡು ದೊಡ್ಡ ಹಿಟ್ ಆಗಿತ್ತು. ಮಧು ಮತ್ತಣ್ಣ ಬರೆದ ಕಥೆ, ಫಾಝಿಲ್ ಆ್ಯಕ್ಷನ್ ಕಟ್ನಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ನಟ ಮೊಹನ್ಲಾಲ್, ನಟಿ ಶೋಭನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಾಲಿವುಡ್ನಲ್ಲಿ ಹಿಟ್ ಆಗಿದ್ದ ಈ ಸಿನಿಮಾ ಆನಂತರ ಕನ್ನಡ, ತಮಿಳು, ತೆಲುಗಿಗೂ ರಿಮೇಕ್ ಆಯಿತು.
ಕನ್ನಡದಲ್ಲಿ ‘ಆಪ್ತಮಿತ್ರ‘ ಎಂಬ ಟೈಟಲ್ನಡಿಯಲ್ಲಿ ಸಿನಿಮಾ ತೆರೆಗೆ ಬಂತು. ಡಾ ವಿಷ್ಣುವರ್ಧನ್ ನಾಯಕನಾಗಿ ನಟಿಸಿದ್ದರು. ನಟಿ ಸೌಂದರ್ಯ ಅವರು ಗಂಗಾ ಹಾಗೂ ನಾಗವಲ್ಲಿ ಪಾತ್ರದಲ್ಲಿ ಮಿಂಚಿದ್ದರು.
ನಂತರ ಈ ಸಿನಿಮಾ ತಮಿಳಿನಲ್ಲೂ ರಿಮೇಕ್ ಆಯಿತು. ‘ಚಂದ್ರಮುಖಿ‘ಟೈಟಲ್ನಲ್ಲಿ ಸಿನಿಮಾ ತೆರೆಗೆ ಬಂತು. ಸೂಪರ್ ಸ್ಟಾರ್ ರಜನಿಕಾಂತ್ ನಾಯಕಿನಾಗಿ ಕಾಣಿಸಿಕೊಂಡರೆ. ಜ್ಯೋತಿಕಾ ನಾಗವಲ್ಲಿ ಪಾತ್ರವನ್ನು ಮಾಡಿದ್ದರು.
ಇದೀಗ ಕಾಲಿವುಡ್ನಲ್ಲಿ ‘ಚಂದ್ರಮುಖಿ-2‘ ಸಿನಿಮಾವನ್ನು ತೆರೆಗೆ ಬರಲಿದೆ ಎಂಬ ಮಾತುಗಳು ಕೇಳಿಬಂದಿವೆ. ಸನ್ ಪಿಕ್ಚರ್ಸ್ನಡಿಯಲ್ಲಿ ಪಿ ವಾಸು ಅವರೇ ನಿರ್ದೇಶನವನ್ನು ಮಾಡುತ್ತಿದ್ದಾರಂತೆ. ರಾಘವ ಲಾರೆನ್ಸ್ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಚಂದ್ರಮುಖಿ- 2 ಸಿನಿಮಾದಲ್ಲಿ ಜ್ಯೋತಿಕಾ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ‘ಈಗ ಮತ್ತೆ ಗಂಗಾ ಹಾಗೂ ಚಂದ್ರಮುಖಿ ಪಾತ್ರ ಮಾಡಲಾರೆ. ನನ್ನ ಜಾಗಕ್ಕೆ ನಟಿ ಸಿಮ್ರನ್ ಸೂಕ್ತ‘ ಎಂದು ಹೇಳಿದ್ದಾರೆ.
15 ವರ್ಷಗಳ ಹಿಂದೆ ‘ಚಂದ್ರಮುಖಿ‘ ಸಿನಿಮಾಗೆ ನಟಿ ಸಿಮ್ರನ್ ಆಯ್ಕೆಯಾಗಿದ್ದರು. ಕನ್ನಡದಲ್ಲಿ ಸಿಂಹದ ಮರಿ ಸೈನಾ ಸಿನಿಮಾದಲ್ಲೂ ಕೂಡ ನಟಿಸಿದ್ದರು. ಆದರೆ ‘ಚಂದ್ರಮುಖಿ‘ ಸಿನಿಮಾ ಚಿತ್ರೀಕರಣ ವೇಳೆ ಸಿಮ್ರನ್ ಗರ್ಭಿಣಿಯಾಗಿದ್ದರಿಂದ ನಟಿಸಲು ಆಗಿರಲಿಲ್ಲ. ಇದೀಗ ಕಾಲಿವುಡ್ನಲ್ಲಿ ಕೇಳಿಬಂದಿರುವ ಮಾಹಿತಿ ಪ್ರಕಾರ ಸಿಮ್ರನ್ ಚಂದ್ರಮುಖಿ-2 ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರಂತೆ!.
ಸ್ಮಾರ್ಟ್ಫೋನ್ನಲ್ಲಿ ಜಾಹೀರಾತು ಕಿರಿಕಿರಿ ನೀಡುತ್ತಿದೆಯಾ? ತಪ್ಪಿಸಲು ಹೀಗೆ ಮಾಡಿನಿಮ್ಮ ಮಕ್ಕಳಿಗೆ ನೆನಪಿನ ಶಕ್ತಿ ಕಡಿಮೆಯೇ?; ಹಾಗಿದ್ದರೆ ಇದನ್ನು ಟ್ರೈ ಮಾಡಿ
First published:
May 26, 2020, 2:49 PM IST