Soorappa Babu: ಅಪಘಾತಕ್ಕೀಡಾದ ಸ್ಯಾಂಡಲ್​ವುಡ್​ನ ಖ್ಯಾತ ನಿರ್ಮಾಪಕ ಸೂರಪ್ಪ ಬಾಬು ಕಾರು

ಸೂರಪ್ಪ ಬಾಬು

ಸೂರಪ್ಪ ಬಾಬು

ನಿರ್ಮಾಪಕ ಸೂರಪ್ಪ ಬಾಬು ಮತ್ತು ಅವರ  ಕುಟುಂಬದವರಿಗೆ ರಸ್ತೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.  ಸೂರಪ್ಪ ಬಾಬು ಅವರು ಕುಟುಂಬದವರ ಜೊತೆ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

  • Share this:

ಸ್ಯಾಂಡಲ್​ವುಡ್​ನ (Sandalwood) ಖ್ಯಾತ ನಿರ್ಮಾಪಕರಾದ (Producer) ಸೂರಪ್ಪ ಬಾಬು (Soorappa Babu) ಅನೇಕ ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಆದರೆ ಇದೀಗ ಅವರ ಕುರಿತು ಆಘಾತಕಾರಿ ಸುದ್ದಿಯೊಂದು ಕೇಳಿಬರುತ್ತಿದೆ.  ನಿರ್ಮಾಪಕ ಸೂರಪ್ಪ ಬಾಬು ಮತ್ತು ಅವರ  ಕುಟುಂಬದವರಿಗೆ ರಸ್ತೆ ಅಪಘಾತ (Road Accident) ಸಂಭವಿಸಿದೆ ಎಂದು ತಿಳಿದುಬಂದಿದೆ.  ಸೂರಪ್ಪ ಬಾಬು ಅವರು ಕುಟುಂಬದವರ ಜೊತೆ ದೇವಸ್ಥಾನದಿಂದ ವಾಪಸ್ಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇಂದು ಬೆಳಗಿನ ಜಾವ ಈ ಅಪಘಾತ ನಡೆದಿದ್ದು, ಸದ್ಯ ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಲಾಗಿದೆ. ಅಪಘಾತವಾದ ಹಿನ್ನಲೆ ಸೂರಪ್ಪ ಬಾಬು ಹಾಗೂ ಕುಟುಂಬದವರು ಬೆಂಗಳೂರಿಗೆ ಮ,ತ್ತೆ ವಾಪಸ್ಸಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸೂರಪ್ಪ ಬಾಬು ಅವರ ಕಾಳಿಗೆ ಚಿಕ್ಕ ಪೆಟ್ಟಾಗಿದೆಯಂತೆ.


ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅಪಘಾತ:


ಹೌದು, ಸೂರಪ್ಪ ಬಾಬು ಹಾಗೂ ಕುಟುಂಬದವರು ಇಂದು ಬೆಳಗ್ಗೆ ತಮಿಳು ನಾಡಿನ ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅವಘಡದಲ್ಲಿ ಸೂರಪ್ಪ ಬಾಬು ಹಾಗೂ ಕುಟುಂಬದವರಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತರ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ ಎಂದು ತಿಳಿದುಬಂದಿದೆ.


ಅದೃಷ್ಟವಶಾತ್ ಯಾವ ತೊಂದರೆ ಸಹ ಆಗಿಲ್ಲ:


ಇನ್ನು, ತಮಿಳುನಾಡಿನ ಬ್ರಹ್ಮ ದೇವಸ್ಥಾನಕ್ಕೆ ಸೂರಪ್ಪ ಬಾಬು ಹಾಗೂ ಕುಟುಂಬಸ್ಥರು ಹೋಗಿ ವಾಪಸ್ಸಾಗುತ್ತಿದ್ದ ವೇಳೆ ಇಂದು ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ. ಬೆಳಗಿನ ಜಾವ ಸರಿ ಸುಮಾರು 3 ಗಂಟೆ ಅಪಘಾತ ಸಂಭವಿಸಿದೆ. ಹೊಸೂರು ಕ್ರಾಸ್ ಬಳಿ ಕಾರು ಅಪಘಾತಕ್ಕೆ ಒಳಗಾಗಿದೆ. ಆದರೆ ಅದೃಷ್ವಶಾತ್ ಸೂರಪ್ಪ ಬಾಬು ಜೊತೆ ಅವರ ಕುಟುಂಬಸ್ಥರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ಹೇಳಲಾಗಿದೆ. ಆದರೆ ನಿರ್ಮಾಪಕ ಸೂರಪ್ಪ ಬಾಬು ಅವರು ಮುಂದಿನ ಸೀಟ್​ ನಲ್ಲಿ ಕುಳಿತಿದ್ದರಿಂದ ಕಾಲಿಗೆ ಸಣ್ಣ ಪೆಟ್ಟಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸದ್ಯ ಸೂರಪ್ಪ ಬಾಬು ಅವರು ಆರೋಗ್ಯವಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


ಇದನ್ನೂ ಓದಿ: Ranbir Kapoor - Alia Bhatt: ರಣಬೀರ್‌ಗೆ ಆಲಿಯಾ ಫಸ್ಟ್ ವೈಫ್ ಅಲ್ವಂತೆ! ಹಾಗಿದ್ರೆ ಯಾರಪ್ಪಾ ಮೊದಲ ಹೆಂಡತಿ?


ಸಂಪೂರ್ಣ ನುಜ್ಜುಗುಜ್ಜಾದ ಕಾರು:


ಇನ್ನು, ಅಪಘಾತದ ತೀರ್ವತೆ ಎಷ್ಟಿತ್ತು ಎಂದರೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಆದರೆ ಅದೃಷ್ಟವಶಾತ್ ಯಾರಿಗೂ ಯಾವುದೇ ದೊಡ್ಡ ಪ್ರಮಾಣದ ತೊಂದರೆ ಆಗಿಲ್ಲ. ಈ ಕುಇರಿತು ಮಾತನಾಡಿರುವ ನಿರ್ಮಾಪಕ ಸೂರಪ್ಪ ಬಾಬು, ‘ಇಂದು ನಾನು ಹಾಗೂ ನನ್ನ ಕುಟುಂಬಸ್ಥರೆಲ್ಲರೂ ತಮಿಳುನಾಡಿನ ಬ್ಹ್ಮದೇವಸ್ಥಾನಕ್ಕೆ ಹೋಗುವಾಗ ರಸ್ತೆಯಲ್ಲಿ ದೊಡ್ಡ ಅಪಘಾತ ಸಂಭವಿಸಿತ್ತು. ಆದರೆ ಕುಟುಂಬಸ್ಥರು ಎಲ್ಲರೂ ಇದೀಗ ಯಾವುದೇ ತೊಂದರೆ ಇಲ್ಲದೆ ಆರಾಮಾಗಿದ್ದಾರೆ. 7 ಜನ ಪ್ರಯಾಣ ಮಾಡುತ್ತಿದ್ದೆವು. ಯಾರಿಗೂ ಏನೂ ತೊಂದರೆ ಆಗಿಲ್ಲ. ನನ್ನ ಕಾಲಿಗೆ ಸ್ವಲ್ಪ ಪೆಟ್ಟು ಬಿದ್ದಿದ್ದು ಕಾಲಿಗೆ ಬ್ಯಾಂಡೇಜ್ ಹಾಕಿಸಿಕೊಂಡಿದ್ದೇನೆ‘ ಎಂದು ಹೇಳಿದ್ದಾರೆ.


ಇದನ್ನೂ ಓದಿ: Poonam Pandey: ಅಯ್ಯಯ್ಯೋ ಹಂಗೇ ಬಂದ್ರಂತೆ ಪೂನಂ ಪಾಂಡೆ! ಸ್ವಲ್ಪ ಮರ್ಯಾದೆ ಕಾಪಾಡಿಕೊಳ್ಳಿ ಅಂತ ಕಾಲೆಳೆದ ನೆಟ್ಟಿಗರು


ಹಲವಾರು ಸಿನಿಮಾಗಳನ್ನು ನಿರ್ಮಿಸಿದ್ದ ಬಾಬು:


ಹೌದು, ಸ್ಯಾಂಡಲ್​ವುಡ್​ನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾದ ಸೂರಪ್ಪ ಬಾಬು ಈವರೆಗೆ ಅನೇಕ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕೋಟಿಗೊಬ್ಬ, ಕೋಟಿಗೊಬ್ಬ 2, ಕೋಟಿಗೊಬ್ಬ 3, ಕದಂಬ, ಸೂರಪ್ಪ, ಬಂಧುಬಳಗ, ಅರಿಶಿಣ, ದಶಮುಖ ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ಮಿಸಿರುವ ಖ್ಯಾತಿ ಅವರಿಗೆ ಸಲ್ಲುತ್ತದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು