ಬೆಂಗಳೂರು: ಹಣ ವಂಚನೆಯ ಆರೋಪದಡಿ ‘ಕಾಫಿ ಕಟ್ಟೆ‘ ಸಿನಿಮಾದ ನಾಯಕ ನಟ ಆನಂದ್ ರೆಡ್ಡಿ ಅವರನ್ನು ಪುಲಿಕೇಶಿನಗರದ ಪೊಲೀಸರು ಬಂಧಿಸಿದ್ದಾರೆ.
ಆನಂದ್ ರೆಡ್ಡಿ ಲಾಗಿ ಕ್ಯಾಶ್ ಕಂಪೆನಿಯಲ್ಲಿ ಎಟಿಎಂಗೆ ಹಣ ಡಿಸ್ಟ್ರಿಬ್ಯುಟರ್ ಆಗಿ ಕೆಲಸ ಮಾಡುತ್ತಿದ್ದರು. ಕಂಪೆನಿ ಕಡೆಯಿಂದ ಎಟಿಂಎಂಗೆ ಹಣ ತುಂಬಿಸುವ ಕೆಲಸ ಮಾಡುತ್ತಿದ್ದರು. ಆದರೆ ಕಂಪೆನಿ ಎಟಿಎಂಗೆ ತುಂಬಿಸಲು ನೀಡುತ್ತಿದ್ದ ಹಣದಲ್ಲಿ ಅರ್ಧ ಹಣವನ್ನು ತನ್ನ ಕಿಸೆಗೆ ತುಂಬಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಹಾಗಾಗಿ ವಂಚನೆ ಆರೋಪ ಆನಂದ್ ರೆಡ್ಡಿ ಮೇಲೆ ಕೇಳಿ ಬಂದಿದೆ.
ಈ ಸಂಬಂಧ ಕಂಪೆನಿಯು ಆನಂದ್ ರಾವ್ ಮೇಲೆ ದೂರು ನೀಡಿತ್ತು. ಬರೋಬ್ಬರಿ 1 ಕೋಟಿ 60 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ದೂರಿನ ಅನ್ವಯ ಪುಲಕೇಶಿ ನಗರದ ಪೋಲಿಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಆನಂದ್ ರೆಡ್ಡಿ ಸಿನಿಮಾ ಮಾಡುವ ಗೀಳಿನಿಂದ ಹೀಗೆ ಮಾಡಿದ್ದರು ಎನ್ನಲಾಗಿದೆ. ಈತನಿಂದ ಮೂರು ಕಾರು, ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: BSF ನೇಮಕಾತಿ: ಖಾಲಿ ಇರುವ 317 ಹುದ್ದೆಗಳಿಗೆ ಅರ್ಜಿ ಆಹ್ವಾನ
ಇದನ್ನೂ ಓದಿ: ಶಿವಣ್ಣನ ಸಿನಿ ಪಯಣಕ್ಕೆ 34 ವರ್ಷ: ಇಲ್ಲಿದೆ ‘ಹ್ಯಾಟ್ರಿಕ್ ಹೀರೋ‘ ಗೆಲುವಿನ ಓಟದ ಕಥೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ