• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಕೃಷಿ ಮಸೂದೆ ವಿರೋಧಿಸಿ ರೈತರ ಪ್ರತಿಭಟನೆ: ಅನ್ನದಾತನ ಪರನಿಂತ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು..!

ಕೃಷಿ ಮಸೂದೆ ವಿರೋಧಿಸಿ ರೈತರ ಪ್ರತಿಭಟನೆ: ಅನ್ನದಾತನ ಪರನಿಂತ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು..!

ಕೃಷಿ ಮಸೂದೆ ವಿರೋಧಿಸಿ ರೈತರ ಪ್ರತಿಭಟನೆ

ಕೃಷಿ ಮಸೂದೆ ವಿರೋಧಿಸಿ ರೈತರ ಪ್ರತಿಭಟನೆ

ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳೂ ಬೆಂಬಲ ನೀಡಿದ್ದಾರೆ. ನಟ ಹಾಗೂ ನಿರ್ದೇಶಕರೂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

  • Share this:

ಕೃಷಿ ಮಸೂದೆ ವಿರೋಧಿಸಿ ದೇಶದ ಹಲವೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕದಲ್ಲೂ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ವಿರುದ್ಧ ರೈತರು ಮತ್ತು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ನಡೆಸುತ್ತಿವೆ. ರೈತರು ನಡೆಸುತ್ತಿರುವ ಪ್ರತಿಭಟನೆಗಳು ಕೆಲವು ಕಡೆ ತೀವ್ರ ಸ್ವರೂಪ ಪಡೆದಿವೆ. ಪರಿಸ್ಥಿತಿ ಕೈ ಮೀರಿ ಹೋಗದಂತೆ ತಡೆಯಲು ಪೊಲೀಸರು ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಪ್ರತಿಭಟನಾಕಾರರನ್ನು ಅಲ್ಲಲ್ಲಿ ತಡೆದು ವಶಕ್ಕೆ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಪೊಲೀಸರು ರೈತ ಮುಖಂಡರು ಸೇರಿದಂತೆ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಅನ್ನದಾತನ ಪರವಾಗಿ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳೂ ನಿಂತಿದ್ದಾರೆ. ಅನ್ನ ನೀಡುವ ರೈತನಿಗೆ ತಮ್ಮ ಬೆಂಬಲ ಎನ್ನುತ್ತಾ ಸಾಮಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ ಸಿನಿ ತಾರೆಯರು.


ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳೂ ಬೆಂಬಲ ನೀಡಿದ್ದಾರೆ.  ನಿರ್ದೇಶಕ ಸಿಂಪಲ್ ಸುನಿ ಟ್ವೀಟ್ ಮಾಡುವ ಮೂಲಕ ರೈತರ ಪರ ನಿಂತಿದ್ದಾರೆ. ಕೃಷಿ ಮಾಡಿ ರಾಜಕೀಯಕ್ಕೆ ಬಂದವರೆಂದು ಹೇಳುವವರೆ, ದಯವಿಟ್ಟು ಕೃಷಿಯಲ್ಲಿ ರಾಜಕೀಯ ಮಾಡಬೇಡಿ ಎಂದಿದ್ದಾರೆ.



ಪೈಲ್ವಾನ್​ ಸಿನಿಮಾದ ನಿರ್ದೇಶಕ ಕೃಷ್ಣ ಸಹ ಟ್ವೀಟ್​ ಮಾಡಿದ್ದು, ರೈತರಿಗೆ ಅಗತ್ಯ ಸೌಲಭ್ಯ ನೀಡಿ. ಅದನ್ನು ಬಿಟ್ಟು ಕಾರ್ಪೊರೇಟ್​ ದಬ್ಬಾಳಿಕೆಗೆ ರೈತರನ್ನು ಬಳಿ ಕೊಡಬೇಡಿ ಎಂದಿದ್ದಾರೆ.


ರೈತರು ಬೆಳೆದ ಬೆಳೆ ಸಂರಕ್ಷಿಸಲು ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿ, ಒಳ್ಳೆ ಬೆಲೆ ಬಂದಾಗ ಮಾರುವ ವ್ಯವಸ್ಥೆ ಮಾಡಿ ಸ್ವಾಲಂಬಿಗಳಾಗಿಸಿ. ಎಪಿಎಂಸಿ ಹಾಗು ಕಾರ್ಪೊರೇಟ್ ಕಂಪನಿಗಳ ಕಾಂಪಿಟೇಷನ್ ಇದ್ರೆ ರೈತನಿಗೆ ಒಳ್ಳೆ ಬೆಲೆ. ಕಾರ್ಪೊರೇಟ್ ದಬಳಿಕೆಗೆ ರೈತರನ್ನು ಬಲಿಕೊಡಬೇಡಿ,ಎಪಿಎಂಸಿ ಕಾಯ್ದೆ ಮತು ಭೂ ತಿದ್ದುಪಡೆ ಒಂದೆ ನಾಣ್ಯದ ಎರಡೂ ಮುಖಗಳು



ಇನ್ನು, ನಟ ಹಾಗೂ ನಿರ್ದೇಶಕ ಉಪೇಂದ್ರ ಸಹ ಈ ವಿಷಯವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಜನಾಭಿಪ್ರಾಯ ಕೇಳದೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಎಂದು ಈ ಹೋರಾಟ ಹಾಗೂ ಬಂದ್​. ಜನಾಭಿಪ್ರಾಯವೇ ಅಂತಿಮ ಎನ್ನುವ ಪ್ರಣಾಳಿಕೆ ತನ್ನಿ, ನನ್ನ ಮತ ನಿಮಗೆ ಎಂದು ಚುನಾವಣೆಯ ಸಮಯದಲ್ಲಿ ಜನ ನಿರ್ಧಾರ ತೆಗೆದುಕೊಂಡರೆ ಎಲ್ಲ ಸಮಸ್ಯೆಗಳೂ ಬಂದ್​​ ಆಗುತ್ತವೆ ಅಲ್ಲವೇ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.


ಇನ್ನು ನಟ ಚೇತನ್​ ಇಂದು ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ನೇರವಾಗಿ ತಮ್ಮ ಬೆಂಬಲ ರೈತರಿಗೆ ಎಂದು ತೋರಿಸಿದ್ದಾರೆ. ಸಾಲದಕ್ಕೆ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಹಿಂದೆಯೇ ನಟ ಶ್ರೀಮುರಳಿ ರೈತರ ಪರ ಟ್ವೀಟ್​ ಮಾಡಿದ್ದರು. ಒಂದಿಲ್ಲೊಂದು ರೂಪದಲ್ಲಿ ನಾವೆಲ್ಲ ಕೃಷಿ ಹಿನ್ನೆಲೆಯಿಂದಲೇ ಬಂದವರು‌. ರಾಜಕಾರಣಿಯೋ, ಕಲಾವಿದರೋ ಅಥವಾ ಉದ್ಯಮಿಯೋ, ಅದು ಯಾರೇ ಆದರೂ ಸರಿ, ರೈತರು ತಮ್ಮ ಜಮೀನುಗಳಲ್ಲಿ ಕಷ್ಟಪಟ್ಟು ಬೆವರು ಹರಿಸಿ ಬೆಳೆ ಬೆಳೆದರೆ ಮಾತ್ರ ನಾವೆಲ್ಲ ಊಟ ಮಾಡಲು ಸಾಧ್ಯ. ಹಾಗಾಗಿ ಯಾರೇ ಆದರೂ ಸರಿ, ರೈತರ ಬಗ್ಗೆ ಅಗೌರವ ತೋರುವುದು ಸರಿಯಲ್ಲ ಎಂದಿದ್ದರು.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ನೀತಿ ವಿರುದ್ಧ ರೈತ ಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಇಂದು ಸಂಜೆ 6ರವರೆಗೆ ನಡೆಯಲಿದೆ. ದಲಿತರು, ಕಾರ್ಮಿಕರ ಸಂಘಟನೆಗಳು, ಕನ್ನಡ ಸಂಘಟನೆಗಳು ಈ ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ್ದು, ಸಾಕಷ್ಟು ಕಡೆ ಪ್ರತಿಭಟನೆ ತೀವ್ರ ರೂಪ ಪಡೆದುಕೊಂಡಿದೆ. ಸಾರ್ಕಾರ ತನ್ನ ನಿರ್ಧಾರ ಬದಲಿಸುವವರೆಗೂ ಈ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ರೈತ ಸಂಘಟನೆಗಳು ಎಚ್ಚರಿಕೆ ನೀಡುತ್ತಿವೆ.

Published by:Anitha E
First published: