ಲಕ್ಷಾಂತರ ರೂಪಾಯಿ ಟೋಪಿ ಹಾಕಿದ ಚಂದನವನದ ನಟ ಯಾರು ಗೊತ್ತಾ?
news18
Updated:June 22, 2018, 11:44 AM IST
news18
Updated: June 22, 2018, 11:44 AM IST
ನ್ಯೂಸ್ 18 ಕನ್ನಡ
'ಟಗರು' ಚಿತ್ರದಲ್ಲಿ ನಟನೆ ಮಾಡಿದ್ದ ನಟನೊಬ್ಬ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
'ಟಗರು' ಸೇರಿದಂತೆ ಸಹ ಕಲಾವಿದನಾಗಿ ಕಾಣಿಸಿಕೊಂಡಿದ್ದ ದೇವನಾಥ್ ಸದ್ಯ ವಂಚಿಸಿ, ತಲೆಮರೆಸಿಕೊಂಡಿರುವ ಆರೋಪಿ. ಒಂದು ನಿವೇಶನದಲ್ಲಿರುವ ಮನೆಯನ್ನು ಇಬ್ಬರಿಗೆ ಮಾರಾಟ ಮಾಡಲು ಯತ್ನಿಸಿ, 53 ಲಕ್ಷ ಹಣ ವಂಚಿಸಿದ್ದಾರೆ.
ಮನೆಯ ಮಾರಾಟ ಮಾಡುವುದಾಗಿ ಹೇಳಿ ಪ್ರಶಾಂತ್ ಎಂಬುವರ ಬಳಿ ಮುಂಗಡವಾಗಿ ದೇವನಾಥ್ ಹಣ ಪಡೆದಿದ್ದರು. ಸುಬ್ರಮಣ್ಯಪುರದ ಸಿಂಹಾದ್ರಿ ಬಡಾವಣೆಯಲ್ಲಿನ 30/40 ನಿವೇಶನದಲ್ಲಿದ್ದ ಮನೆಯನ್ನು ಮಾರಾಟ ಮಾಡುವ ನೆಪದಲ್ಲಿ ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ ದೇವನಾಥ್.ಮನೆ ಮಾರುವುದಾಗಿ ಹೇಳಿ ಪ್ರಶಾಂತ್ ಅವರ ಬಳಿ 75 ಲಕ್ಷಕ್ಕೆ ಮಾತುಕತೆ ನಡೆಸಿದ್ದ ದೇವನಾಥ್, ಮುಂಗಡ ಹಣವಾಗಿ 53 ಲಕ್ಷವನ್ನು ಪಡೆದು, ಮನೆಯ ಸೇಲ್ ಅಗ್ರಿಮೆಂಟ್ ಮಾಡಿಸಿಕೊಡುವುದಾಗಿ ಮಾತು ನೀಡಿದ್ದರಂತೆ ದೇವನಾಥ್. ಆದರೆ ಪ್ರಶಾಂತ್ಗೆ ಅವರಿಗೆ ಗೊತ್ತಾಗದ ಹಾಗೆ 1.2 ಕೋಟಿಗೆ ಬೇರೆಯವರಿಗೆ ಸೇಲ್ ಅಗ್ರಿಮೆಂಟ್ ಮಾಡಿಸಿದ್ದರು ಎನ್ನಲಾಗುತ್ತಿದೆ.
ಈ ಬಗ್ಗೆ ಅನುಮಾನ ಬಂದು ಮನೆಯ ಮೂಲ ದಾಖಲೆಗಳನ್ನು ಕೊಡುವಂತೆ ಪ್ರಶಾಂತ್ ಕೇಳಿದಾಗ, ಅಗ್ರಿಮೆಂಟ್ ಸಮಯದಲ್ಲಿ ಕೊಡುವುದಾಗಿ ದೇವನಾಥ್ ತಿಳಿಸಿದ್ದಾರೆ. ಇದರಿಂದ ಅನುಮಾನ ಮತ್ತಷ್ಟು ಹೆಚ್ಚಾಗಿ ಮನೆ ಬಳಿ ಹೋಗಿ ವಿಚಾರಿಸಿದಾಗ, ಕಿಶೋರ್ ಎಂಬಾತನಿಗೆ ಆಸ್ತಿಯನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ನಂತರ ದೇವನಾಥ್ ಅವರ ಬಳಿ ಹಣ ಕೇಳಲು ಹೋದ ಪ್ರಶಾಂತ್ ಅವರಿಗೆ ಹಣ ನೀಡುವುದಿಲ್ಲ, ಮತ್ತೆ ಬಂದರೆ ಕೈಕಾಲು ಮುರಿಸುತ್ತೇನೆ ಎಂದು ಧಮ್ಕಿ ಹಾಕಿದ್ದಾರೆ. ಇದರಿಂದ ಬೇಸತ್ತ ಪ್ರಶಾಂತ್ ಸುಬ್ರಮಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ.ದೇವನಾಥ್ ಮೈ ತುಂಬ ಚಿನ್ನಾಭರಣ ಹಾಕಿಕೊಂಡು ಫಾರ್ಚುನರ್ ಕಾರಿನಲ್ಲಿ ಓಡಾಡಿಕೊಂಡಿದ್ದು, ಸಿನಿಮಾದಲ್ಲಿ ಅಭಿನಯಿಸುವ ಹುಚ್ಚು ಬೆಳೆಸಿಕೊಂಡಿದ್ದರಂತೆ. ಇದರಿಂದಾಗಿಯೇ ಹೇಗೋ ಹಾಗೆ ಟಗರು ಚಿತ್ರ ತಂಡದೊಂದಿಗೆ ಸ್ನೇಹ ಬೆಳೆಸಿಕೊಂಡು, ಡೈಲಾಗ್ ಇಲ್ಲದೇ ಹೋದಲು ಸುಮ್ಮನೆ ಹಾಗೆ ಕಾಣಿಸಿಕೊಳ್ಳುವ ಪಾತ್ರದಲ್ಲಿ ಅಭಿನಯಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ದೇವನಾಥ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
'ಟಗರು' ಚಿತ್ರದಲ್ಲಿ ನಟನೆ ಮಾಡಿದ್ದ ನಟನೊಬ್ಬ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
'ಟಗರು' ಸೇರಿದಂತೆ ಸಹ ಕಲಾವಿದನಾಗಿ ಕಾಣಿಸಿಕೊಂಡಿದ್ದ ದೇವನಾಥ್ ಸದ್ಯ ವಂಚಿಸಿ, ತಲೆಮರೆಸಿಕೊಂಡಿರುವ ಆರೋಪಿ. ಒಂದು ನಿವೇಶನದಲ್ಲಿರುವ ಮನೆಯನ್ನು ಇಬ್ಬರಿಗೆ ಮಾರಾಟ ಮಾಡಲು ಯತ್ನಿಸಿ, 53 ಲಕ್ಷ ಹಣ ವಂಚಿಸಿದ್ದಾರೆ.
ಮನೆಯ ಮಾರಾಟ ಮಾಡುವುದಾಗಿ ಹೇಳಿ ಪ್ರಶಾಂತ್ ಎಂಬುವರ ಬಳಿ ಮುಂಗಡವಾಗಿ ದೇವನಾಥ್ ಹಣ ಪಡೆದಿದ್ದರು. ಸುಬ್ರಮಣ್ಯಪುರದ ಸಿಂಹಾದ್ರಿ ಬಡಾವಣೆಯಲ್ಲಿನ 30/40 ನಿವೇಶನದಲ್ಲಿದ್ದ ಮನೆಯನ್ನು ಮಾರಾಟ ಮಾಡುವ ನೆಪದಲ್ಲಿ ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ ದೇವನಾಥ್.ಮನೆ ಮಾರುವುದಾಗಿ ಹೇಳಿ ಪ್ರಶಾಂತ್ ಅವರ ಬಳಿ 75 ಲಕ್ಷಕ್ಕೆ ಮಾತುಕತೆ ನಡೆಸಿದ್ದ ದೇವನಾಥ್, ಮುಂಗಡ ಹಣವಾಗಿ 53 ಲಕ್ಷವನ್ನು ಪಡೆದು, ಮನೆಯ ಸೇಲ್ ಅಗ್ರಿಮೆಂಟ್ ಮಾಡಿಸಿಕೊಡುವುದಾಗಿ ಮಾತು ನೀಡಿದ್ದರಂತೆ ದೇವನಾಥ್. ಆದರೆ ಪ್ರಶಾಂತ್ಗೆ ಅವರಿಗೆ ಗೊತ್ತಾಗದ ಹಾಗೆ 1.2 ಕೋಟಿಗೆ ಬೇರೆಯವರಿಗೆ ಸೇಲ್ ಅಗ್ರಿಮೆಂಟ್ ಮಾಡಿಸಿದ್ದರು ಎನ್ನಲಾಗುತ್ತಿದೆ.
ಈ ಬಗ್ಗೆ ಅನುಮಾನ ಬಂದು ಮನೆಯ ಮೂಲ ದಾಖಲೆಗಳನ್ನು ಕೊಡುವಂತೆ ಪ್ರಶಾಂತ್ ಕೇಳಿದಾಗ, ಅಗ್ರಿಮೆಂಟ್ ಸಮಯದಲ್ಲಿ ಕೊಡುವುದಾಗಿ ದೇವನಾಥ್ ತಿಳಿಸಿದ್ದಾರೆ. ಇದರಿಂದ ಅನುಮಾನ ಮತ್ತಷ್ಟು ಹೆಚ್ಚಾಗಿ ಮನೆ ಬಳಿ ಹೋಗಿ ವಿಚಾರಿಸಿದಾಗ, ಕಿಶೋರ್ ಎಂಬಾತನಿಗೆ ಆಸ್ತಿಯನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ನಂತರ ದೇವನಾಥ್ ಅವರ ಬಳಿ ಹಣ ಕೇಳಲು ಹೋದ ಪ್ರಶಾಂತ್ ಅವರಿಗೆ ಹಣ ನೀಡುವುದಿಲ್ಲ, ಮತ್ತೆ ಬಂದರೆ ಕೈಕಾಲು ಮುರಿಸುತ್ತೇನೆ ಎಂದು ಧಮ್ಕಿ ಹಾಕಿದ್ದಾರೆ. ಇದರಿಂದ ಬೇಸತ್ತ ಪ್ರಶಾಂತ್ ಸುಬ್ರಮಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ.
Loading...
Loading...