2022ರ ಹೊಸ್ತಿಲಲ್ಲೇ ಬಿಗ್ ಬಜೆಟ್(Big Budget) ಸಿನಿಮಾ ಜನವರಿ 7ರಂದು ‘ಆರ್ಆರ್ಆರ್’(RRR) ರಿಲೀಸ್ ಆಗಬೇಕಿತ್ತು. ಎಲ್ಲವೂ ಅಂದುಕೊಂಡತೆ ಆಗಿದ್ದರೆ, ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ‘ಆರ್ಆರ್ಆರ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಡೆಯಬೇಕಿತ್ತು. ಇನ್ನೇನು ಕೇವಲ 4 ದಿನದ ಬಳಿಕ ‘ಆರ್ಆರ್ಆರ್’ ಸಿನಿಮಾ ವಿಶ್ವಾದಾದ್ಯಂತ ಅದ್ಧೂರಿಯಾಗಿ ತೆರೆಕಾಣಬೇಕಿತ್ತು. ಆದರೆ, ಕೊರೋನಾ(Corona) ಅಬ್ಬರಕ್ಕೆ ಇದೀಗ ಎಲ್ಲವೂ ನಿಂತಲ್ಲೇ ನಿಂತಿದೆ. ‘ಆರ್ಆರ್ಆರ್’ ರಿಲೀಸ್ ದಿನಾಂಕ ಮುಂದೂಡಿಕೆಯಾಗಿದೆ. ಒಂದೂವರೆ ತಿಂಗಳ ಹಿಂದಿನಿಂದಲೇ ಚಿತ್ರತಂಡ ಅದ್ಧೂರಿಯಗಿ ಪ್ರಚಾರ ಮಾಡಿಕೊಂಡು ಬಂದಿದೆ. ಇದೊಂದು ಪ್ಯಾನ್ ಇಂಡಿಯಾ(Pan India) ಸಿನಿಮಾ ಆಗಿರುವುದರಿಂದ ಪ್ರತಿ ರಾಜ್ಯಕ್ಕೂ ತೆರಳಿ ಪ್ರಚಾರ ಮಾಡಬೇಕು.ಅದರಂತೆ ಎಲ್ಲ ಕಾರ್ಯವೂ ನಡೆಯುತ್ತಿತ್ತು. ಆದರೆ, ಚಿತ್ರತಂಡ ಕೊಟ್ಟ ಶಾಕ್ನಿಂದ ಸಿನಿರಸಿಕರಿಗೆ ಭಾರೀ ನಿರಾಸೆಯಾಗಿದೆ. ಹೊಸ ವರ್ಷದಲ್ಲೇ ಸಂಕಷ್ಟ ಎದುರಾದರೆ ಮುಂದೆ ಹೇಗೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲ ಕಡೆ ಚಿತ್ರದ ಮುಂಗಡ ಟಿಕೆಟ್(Pre Ticket Booking) ಕೂಡ ಸೇಲ್ ಆಗಿತ್ತು. ಆದರೆ, ಈಗ ‘ಆರ್ಆರ್ಆರ್’ ರಿಲೀಸ್ ಡೇಟ್ ಅಧಿಕೃತವಾಗಿ ಮುಂದೂಡಿಕೆ(RRR Release Date Postponed)ಯಾಗಿದೆ. ಈ ವಿಚಾರ ಸಿನಿಮಾ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಇದರ ಜೊತೆಗೆ ಇದೀಗ ಪ್ರೇಕ್ಷಕರಿಗೆ ‘ಆರ್ಆರ್ಆರ್’ ಸಿನಿಮಾದ ನಿರ್ಮಾಪಕರು 10 ಕೋಟಿ ರೂಪಾಯಿಗಳನ್ನು ವಾಪಸ್ ನೀಡಬೇಕು. ಯಾಕೆ ಅಂತೀರಾ? ಮುಂದೆ ಇದೆ ನೋಡಿ...
10 ಕೋಟಿ ರೂ. ಮೊತ್ತದ ಟಿಕೆಟ್ ಬುಕ್ ಆಗಿತ್ತು!
ಜೂನಿಯರ್ ಎನ್ಟಿಆರ್, ರಾಮಚರಣ್ ಒಟ್ಟಿಗೆ ಅಭಿನಯಿಸಿರುವ ‘ಆರ್ಆರ್ಆರ್’ ಚಿತ್ರದ ಬಗ್ಗೆ ದೊಡ್ಡ ಕ್ರೇಜ್ ಸೃಷ್ಟಿ ಆಗಿದೆ. ಸಿನಿಮಾ ಮೇಲಿರುವ ನಿರೀಕ್ಷೆ ದುಪ್ಪಟ್ಟಾಗಿತ್ತು. ಚಿತ್ರ ನೋಡಲು ಸಿನಿರಸಿಕರು ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದರು. ಆದರೆ, ಈಗ ಅವರಿಗೆ ನಿರಾಸೆ ಮೂಡಿಸಿದೆ. ಜನವರಿ 7ರಂದು ಸಿನಿಮಾ ಬಿಡುಗಡೆಯಾಗಬೇಕಿತ್ತು. ಅದಕ್ಕಾಗಿ ಹಲವು ಕಡೆ ಮುಂಗಡ ಟಿಕೆಟ್ ಬುಕ್ಕಿಂಗ್ ಸಹ ಆರಂಭವಾಗಿತ್ತು. ವಿಶ್ವದಾದ್ಯಂತ ಅಂದಾಜು 10 ಕೋಟಿ ರೂಪಾಯಿ ಮೌಲ್ಯದ ಟಿಕೆಟ್ ಬುಕ್ ಆಗಿತ್ತು ಎಂದು ಹೇಳಲಾಗುತ್ತಿದೆ. ಇದೀಗ ಸಿನಿಮಾ ರಿಲೀಸ್ ದಿನಾಂಕ ಪೋಸ್ಟ್ಪೋನ್ ಆಗಿರುವುದರಿಂದ ಆ ಹಣವನ್ನು ಪ್ರೇಕ್ಷಕರಿಗೆ ವಾಪಸ್ ನೀಡಬೇಕು.
ಇದನ್ನು ಓದಿ : ಹೊಸ ವರ್ಷದಲ್ಲೇ ಸಿನಿರಸಿಕರಿಗೆ ಭಾರೀ ನಿರಾಸೆ: `ಆರ್ಆರ್ಆರ್’ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆ!
ರೈಟ್ ಟೈಂನಲ್ಲಿ ಬಿಡುಗಡೆ ಮಾಡಿ ಅಂತಿದ್ದಾರೆ ಪಂಡಿತರು!
ಈ 10 ಕೋಟಿ ರೂಪಾಯಿ ವಾಪಸ್ ನೀಡುವುದರಿಂದ ಸಿನಿಮಾದ ನಿರ್ಮಾಪಕರಿಗೆ ಯಾವುದೇ ರೀತಿಯ ಲಾಸ್ ಇಲ್ಲ. ಈ ಸಿನಿಮಾ ಮೇಲಿರುವ ಕ್ರೇಜ್ನಿಂದ ಪ್ರೇಕ್ಷಕರು. ಮುಂಗಡವಾಗಿ ಸಿನಿಮಾ ಟಿಕೆಟ್ ಬುಕ್ ಮಾಡಿದ್ದರು. ಇದೀಗ ಈ ಹಣವನ್ನು ಹಿಂದಿರುಗಿಸುವುದರಿಂದ ಸಿನಿಮಾಗೆ ಕಂಡಿತವಾಗಿಯೂ ಯಾವುದೇ ನಷ್ಟ ಇಲ್ಲ. ಆದರೆ, ಸರಿಯಾದ ಟೈಂ ನೋಡಿ ಸಿನಿಮಾ ರಿಲೀಸ್ ಮಾಡಬೇಕು. ಆಗ ಕಲೆಕ್ಷನ್ ತುಂಬಾ ಚೆನ್ನಾಗಿ ಆಗುತ್ತೆ ಅಂತ ಸಿನಿಮಾ ಪಂಡಿತರು ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಇದನ್ನು ಓದಿ : ಅಂತೆ-ಕಂತೆಗಳಿಗೆ ಫುಲ್ಸ್ಟಾಪ್ ಇಟ್ಟ `ರಾಧೆ ಶ್ಯಾಮ್’: ಹೇಳಿದ್ ಡೇಟ್ಗೆ ಸಿನಿಮಾ ರಿಲೀಸ್!
ಹೊಸ ವರ್ಷದಲ್ಲೇ ಸಿನಿರಸಿಕರಿಗೆ ಶಾಕ್!
ಆರ್ಆರ್ಆರ್ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿದ್ದು, ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಭೂಮಿಕೆಯಲ್ಲಿ ನಟಿಸಿದ್ದಾರೆ. ಆದಷ್ಟು ಬೇಗ ಈ ಚಿತ್ರವನ್ನು ನೋಡಬೇಕು ಎಂದು ಕಾಯುತ್ತಿದ್ದ ಸಿನಿಪ್ರಿಯರಿಗೆ ನಿರಾಸೆ ಆಗಿದೆ. ಟೀಸರ್, ಸಾಂಗ್ಸ್, ಟ್ರೈಲರ್ನಿಂದಲೇ ಆರ್ಆರ್ಆರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ಚಿತ್ರಮಂದಿರಗಳಲ್ಲಿ ಮತ್ತೆ ಈ ಸಿನಿಮಾ ಮೂಲಕ ಅಸಲಿ ಹಬ್ಬ ಎಂದರೇ ಏನು ಎಂದು ತೋರಿಸೋಣ ಅಂದುಕೊಂಡಿದ್ದ ಅಭಿಮಾನಿಗಳಿಗೆ ನಿಜಕ್ಕೂ ಶಾಕ್ ಆಗಿದೆ. ನಟಿ ಆಲಿಯಾ ಭಟ್ ಅವರು ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಅಜಯ್ ದೇವಗನ್ ಅವರು ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ